• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸೈನ್ಯದ ಬಗ್ಗೆ ಹಗುರವಾಗಿ ಮಾತನಾಡುವವರೇ ನೆನಪಿಡಿ, ಇಂಥವರಿಂದಲೇ ನಾವು ಮನೆಯಲ್ಲಿ ಬೆಚ್ಚಗೆ ಮಲಗೋದು!

TNN Correspondent Posted On June 17, 2018
0


0
Shares
  • Share On Facebook
  • Tweet It

ಸೈನಿಕನಾಗಿ ಜಮ್ಮು-ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುವುದು ಎಂದರೆ ಅದು ಸಾವಿನ ಜತೆಯೇ ಸರಸ ಆಡಿದಂತೆ. ಇದೇ ಕಾರಣಕ್ಕಾಗಿ ದಿನಬೆಳಗಾದರೆ ಅಷ್ಟು ಯೋಧರು ಹುತಾತ್ಮರಾದರು, ಇಷ್ಟು ಯೋಧರು ದೇಶಕ್ಕಾಗಿ ಮಡಿದರು ಎಂಬ ಸುದ್ದಿ ಓದುತ್ತೇವೆ ಹಾಗೂ ನಮ್ಮ ಮನದಲ್ಲೇ ಅವರಿಗೊಂದು ಪುಟ್ಟ ಸೆಲ್ಯೂಟ್ ಹೊಡೆದು ಸುಮ್ಮನಾಗುತ್ತೇವೆ.

ಆದರೂಇತ್ತೀಚೆಗೆ ಕೆಲವು ಎಡಬಿಡಂಗಿಗಳು, ರಾಜಕಾರಣಿಗಳು ಸೇನೆಯ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಬರೀ ಹೊಟ್ಟೆಪಾಡಿಗಾಗಿ ಜನ ಯೋಧರಾಗುತ್ತಾರೆ ಎಂದು ಕೃತಘ್ನರಾಗಿ ಮಾತನಾಡುತ್ತಾರೆ. ನಾವು ಮನೆಯಲ್ಲಿ ಬೆಚ್ಚಗೆ ಮಲಗುವ ಹಿಂದೆ, ನಮ್ಮ ಉತ್ತಮ ನಾಳೆಗಳಿಗಾಗಿ ಯೋಧರು ತಮ್ಮ ಇಂದಿನ ನೆಮ್ಮದಿ ಅಡವಿಡುತ್ತಾರೆ ಎಂಬುದನ್ನು ಮರೆತುಬಿಡುತ್ತಾರೆ.

ಆದರೇನಂತೆ ನಮ್ಮ ಸೈನಿಕರು ಎಂದಿಗೂ ದೇಶಕ್ಕಾಗಿ ಹೋರಾಡುವುದನ್ನು ಮಾತ್ರ ಬಿಟ್ಟಿಲ್ಲ. ಇದಕ್ಕೆ ನಿದರ್ಶನವಾಗಿ ಮೊನ್ನೆ ಕಾಶ್ಮೀರದಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿ, ಹತ್ಯೆಗೀಡಾದ ಔರಂಗಜೇಬ್ ಅವರು ಹುತಾತ್ಮರಾದ ವಿಷಯ ಹಾಗೂ ಅದರ ನಂತರದ ಬೆಳವಣಿಗೆಗಳು ಮನ ಮಿಡಿಯುವಂತಿವೆ.

ಯಾವುದೇ ಕುಟುಂಬವಾಗಲಿ, ಯಾವುದೇ ಅಪ್ಪನಾಗಲಿ, ಅಣ್ಣನಾಗಲಿ, ತಮ್ಮ ಸಂಬಂಧಿ ಸೇನೆ ಸೇರಿ ಹುತಾತ್ಮರಾದರೆ ಹೆಮ್ಮೆಯ ಜತೆಗೆ ಸಾಗರದಷ್ಟು ದುಃಖ ಆವರಿಸುತ್ತದೆ. ಆದರೆ, ಆ ದುಃಖ ಎಲ್ಲವನ್ನೂ ಮರೆತ ಔರಂಗಜೇಬ್ ಅಪ್ಪ ಮೊಹಮ್ಮದ್ ಹನೀಫ್ ಮಾತ್ರ ನನ್ನ ಮಗ ಹುತಾತ್ಮನಾಗಿರಬಹುದು, ಹಾಗಂತ ಬೇರೆಯವರು ತಮ್ಮ ಮಕ್ಕಳನ್ನು ಸೇನೆಗೆ ಕಳುಹಿಸದೇ ಇರದಿರಿ. ನನ್ನ ಮಗನ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

ಇನ್ನು ಔರಂಗಜೇಬ್ ಅವರ ಸಹೋದರನದ್ದೂ ಇದೇ ಮಾತು. ಮೊಹಮ್ಮದ್ ಖಾಸಿಂ ಸಹ ಸೈನಿಕನಾಗಿದ್ದು, ನಮ್ಮದು ಯೋಧರ ಕುಟುಂಬ. ನನ್ನ ತಮ್ಮನ ಜೀವ ತೆಗೆದ ನೂರು ಉಗ್ರರ ಚೆಂಡಾಡುತ್ತೇನೆ ಎನ್ನುವ ಮೂಲಕ ಎಲ್ಲರೂ ಹೆಮ್ಮೆಪಡುವ ಮಾತುಗಳನ್ನಾಡಿದ್ದಾರೆ. ಹೇಳಿ ಇಂತಹ ವೀರ ಗಂಡುಮಕ್ಕಳ ತ್ಯಾಗದಿಂದಲೇ ನಾವು ಮನೆಯಲ್ಲಿ ಬೆಚ್ಚಗೆ ಮಲಗುತ್ತೇವೆ ಅಲ್ಲವೇ? ಇಂತಹ ಹೆಮ್ಮೆಯ ಪುತ್ರರ ಬಗ್ಗೆ ನಾವೂ ಹಗುರವಾಗಿ ಮಾತನಾಡಬಾರದಲ್ಲವೇ? ಯೋಚಿಸಿ ನೋಡಿ.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ

  • Privacy Policy
  • Contact
© Tulunadu Infomedia.

Press enter/return to begin your search