• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕರಾವಳಿಯಲ್ಲಿ ಬಹಳ ದಿನಗಳವರೆಗೆ ಮೀನುಗಳು ಕೆಡದಂತೆ ಕೆಮಿಕಲ್ ಲೇಪಿಸಿ ಮಾರುಕಟ್ಟೆಗಳಲ್ಲಿ ಮಾರಾಟ ಆರೋಪ!

Tulunadu News Posted On June 25, 2018


  • Share On Facebook
  • Tweet It

ಮಂಗಳೂರು : ಹಣ್ಣುಗಳು ಕೆಡದಂತೆ, ತರಕಾರಿಗಳು ತಾಜಾ ಕಾಣುವಂತೆ ಮಾಡಲು ಕೆಮಿಕಲ್ ಲೇಪನ ಮಾಡಿ ಮಾರಾಟ ಮಾಡುವ ಘಟನೆಗಳು ಈಗಾಗಲೇ ಬಯಲಾಗಿವೆ. ಈಗ ಮೀನಿನ ಸರದಿ. ಹೌದು ಇಂತಹದೊಂದು ಆರೋಪ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಬಹಳ ದಿನಗಳವರೆಗೆ ಮೀನುಗಳು ಕೆಡದಂತೆ ಕೆಮಿಕಲ್ ಲೇಪಿಸಿ ತಂದು ಮಾರುಕಟ್ಟೆಗಳಲ್ಲಿ ಮಾರಟ ಮಾಡಲಾಗುತ್ತಿದೆ ಎಂಬ ಆರೋಪ ಕರಾವಳಿಯಲ್ಲಿ ಕೇಳಿಬರುತ್ತಿದೆ. ಇದು ಮೀನು ಪ್ರಿಯರಲ್ಲಿ ಆತಂಕ ಮೂಡಿಸಿದೆ. ಈ ಕುರಿತ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಿಂಗಳುಗಟ್ಟಲೆ ಹಾಳಾಗದಂತೆ ಹಣ್ಣುಗಳಿಗೆ ಕೆಮಿಕಲ್ ಹಾಕಿ ಮಾರಾಟ ಮಾಡುವಂತೆ ಈಗ ಮೀನಿಗೂ ವಿಷಕಾರಿ ಅಮೋನಿಯಾ ಬೆರೆಸಿ ವಾರಗಟ್ಟಲೆ ಮಾರಾಟವಾಗುವಂತೆ ನೋಡಿಕೊಳ್ಳುವ ದಂಧೆ ಕರಾವಳಿಯ ಎಲ್ಲೆಡೆ ಆರಂಭವಾಗಿದೆ ಎಂದು ಆರೋಪಿಸಲಾಗಿದೆ. ವಾರಗಟ್ಟಲೆ ಐಸ್ ನಲ್ಲಿಟ್ಟ ಮೀನುಗಳನ್ನು ಗಿರಾಕಿಗಳಿಗೆ ಫ್ರೆಶ್ ಎಂದು ತೋರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ. ಕೆಮಿಕಲ್ ಲೇಪನದ ಕುರಿತು ಗ್ರಾಹಕ ಹಾಗೂ ಮೀನು ಚಿಲ್ಲರೆ ಮಾರಾಟಗಾರನ ನಡುವೆ ನಡೆದ ವಾಗ್ವಾದ ಈ ವಿಡಿಯೋದಲ್ಲಿದೆ. ಅದರ ಪ್ರಕಾರ “ಈ ಕೆಮಿಕಲ್ ನಾವು ಹಾಕುವುದಿಲ್ಲ ಬೇರೆ ಯಾರೋ ಹಾಕುತ್ತಾರೆ ” ಎಂದು ಮೀನು ಮಾರಾಟಗಾರ ಸಮಜಾಯಿಸಿ ನೀಡುತ್ತಾನೆ. ಆದರೆ ಕೆಮಿಕಲ್ ಹಾಕುವವರು ಯಾರು ಎಂಬುದನ್ನು ಮೀನು ಮಾರಾಟಗಾರ ಹೇಳಲು ಹಿಂದೇಟು ಹಾಕುವ ಪ್ರಸಂಗ ಈ ವಿಡಿಯೋದಲ್ಲಿದೆ.

ಮೀನಿಗೆ ಅಮೋನಿಯ ಹಾಕುವುದರಿಂದ ಅದು ಬೇಗ ಹಾಳಾಗುವುದಿಲ್ಲ. ಮೀನು ಸ್ವಲ್ಪ ಹಳದಿ ಬಣ್ಣ ಅಥವಾ ಬಿಳಿಚಿದಂತೆ ಕಾಣುವುದು. ತಾಜಾ ಮೀನಿನಲ್ಲಿ ಕಣ್ಣು ಹಾಗೂ ಕಿವಿರಿನ ಬಳಿ ಸ್ವಲ್ಪ ರಕ್ತ ಇರುತ್ತದೆ. ಅಮೋನಿಯಾ ಹಾಕಿದ ಮೀನಿನಲ್ಲಿ ಇದು ಕಾಣುವುದಿಲ್ಲ ಹಾಗೂ ಈ ಭಾಗಗಳು ಬಿಳಿಯಾಗಿರುತ್ತವೆ. ಅದರಲ್ಲೂ ಮುಖ್ಯವಾಗಿ ಅಮೋನಿಯ ಹಾಕಿದ ಮೀನಿಗೆ ನೊಣ ಕುಳಿತುಕೊಳ್ಳುವುದಿಲ್ಲ. ಆದರೆ ಇಂತಹ ಅಮೋನಿಯಾ ಬೆರೆಸಿ ಮಾರುವ ಮೀನಿನ ಸೇವನೆಯಿಂದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೂಡ ಕೇಳಿಬರುತ್ತಿದೆ.

  • Share On Facebook
  • Tweet It


- Advertisement -


Trending Now
ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
Tulunadu News June 2, 2023
ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
Tulunadu News June 1, 2023
Leave A Reply

  • Recent Posts

    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
  • Popular Posts

    • 1
      ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • 2
      ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • 3
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 4
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 5
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search