• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಸರ್ಜಿಕಲ್ ಸ್ಟ್ರೈಕ್ ಸಾಕ್ಷ್ಯ ಕೇಳಿದ ಅರವಿಂದ ಕೇಜ್ರಿವಾಲ್ ಎಲ್ಲಿ ಅಡಗಿ ಕುಳಿತಿದ್ದಾರೆ? ಏನೆನ್ನುತ್ತಾರೆ?

ವಿಶಾಲ್ ಗೌಡ ಕುಶಾಲನಗರ Posted On June 28, 2018
0


0
Shares
  • Share On Facebook
  • Tweet It

ಪ್ರಧಾನಿ ನರೇಂದ್ರ ಮೋದಿ, ಎನ್ಡಿಎ ಸರ್ಕಾರ ಹಾಗೂ ಭಾರತೀಯ ಸೈನ್ಯ ಎಂದರೆ ಈ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮುಲಾಯಂ ಸಿಂಗ್ ಯಾದವ್, ಲಾಲೂ ಪ್ರಸಾದ್ ಯಾದವ್, ಅಖಿಲೇಶ್ ಯಾದವ್, ಸಿದ್ದರಾಮಯ್ಯ, ದೇವೇಗೌಡ, ಪಿಣರಾಯಿ ವಿಜಯನ್… ಒಬ್ಬರಲ್ಲ ಇಬ್ಬರಲ್ಲ, ಇವರೆಲ್ಲರಿಗೂ ಏನೋ ಒಂದು ಅಸಡ್ಡೆ. ಹಾಗಾಗಿ ಇವರು ಈ ಮೇಲಿನ ಎಲ್ಲ ಅಂಶಗಳ ಕುರಿತು ವಿರೋಧ ವ್ಯಕ್ತಪಡಿಸುತ್ತಾರೆ. ಕೊಂಕು ನುಡಿಯುತ್ತಾರೆ.

2016ರಲ್ಲಿ ನರೇಂದ್ರ ಮೋದಿ ಅವರು ನೋಟು ನಿಷೇಧ ನಿರ್ಧಾರ ಕೈಗೊಂಡಾಗ ಇಡೀ ದೇಶದ ಜನ ನಿರ್ಧಾರ ಕೈಗೊಂಡು ಬ್ಯಾಂಕ್ ಎದುರು ನಿಂತಿದ್ದರೆ. ಈ ಸೋ ಕಾಲ್ಡ್ ಮುಖಂಡರು ಮಾತ್ರ ನಿರ್ಧಾರ ವಿರೋಧಿಸಿದರು. ದೇಶಾದ್ಯಂತ 17 ತೆರಿಗೆ ಇದ್ದವು. ದಲ್ಲಾಳಿಗಳ ಉಪಟಳ ಇತ್ತು. ಇದನ್ನು ತಡೆಯಲು ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿತು. ಇದಕ್ಕೂ ವಿರೋಧಿಸಿದರು ಈ ಮುಖಂಡರು. ಆದರೆ ಪ್ರಸ್ತುತ ಈ ನಿರ್ಧಾರಗಳಿಂದಲೇ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿದೆ.

ಇನ್ನು ಸೈನ್ಯದ ಬಗ್ಗೆಯೂ ಇವರು ಮಾತನಾಡುತ್ತಾರೆ. ಭಾರತೀಯ ಸೈನಿಕರು ಅತ್ಯಾಚಾರಿಗಳು ಎನ್ನುತ್ತಾರೆ. ಮನೆಯ ಬಡತನ ಸಹಿಸದೆ, ನೌಕರಿಗಾಗಿ ಮಾತ್ರ ಸೇನೆ ಸೇರುತ್ತಾರೆ ಅಂತಾರೆ. ಭಾರತೀಯ ಸೈನಿಕರ ನಿಷ್ಠೆಯನ್ನೇ ಪ್ರಶ್ನಿಸುವವರಿದ್ದಾರೆ.

ಇದೇ ರೀತಿ 2016ರಲ್ಲಿ ಭಾರತೀಯ ಸೈನ್ಯ ಸರ್ಜಿಕಲ್ ಸ್ಟ್ರೈಕ್ ಕೈಗೊಂಡಿತು. ನರೇಂದ್ರ ಮೋದಿ ಅವರು ಇಂಥದ್ದೊಂದು ನಿರ್ಧಾರದ ಹಿಂದೆ ಇದ್ದರು. ಇಡೀ ರಾತ್ರಿ ನರೇಂದ್ರ ಮೋದಿ ನಿದ್ದೆ ಮಾಡದೆ, ಸರ್ಜಿಕಲ್ ಸ್ಟ್ರೈಕ್ ಯಶಸ್ವಿಯಾಯಿತು ಎಂದಾಗಲೇ ಮೋದಿ ಮಲಗಿದ್ದರು ಎಂಬುದು ಬಳಿಕ ತಿಳಿಯಿತು. ಅಂದು ಭಾರತೀಯ ಯೋಧರು ಬರೋಬ್ಬರಿ 38 ಉಗ್ರರನ್ನು ಹತ್ಯೆ ಮಾಡಿ ಬಂದಿದ್ದರು. ಇಡೀ ವಿಶ್ವ ಮೋದಿ ಅವರನ್ನು ಶ್ಲಾಘಿಸಿದ ದಿನ,

ಹೀಗೆ ಒಂದೇ ಒಂದು ಸರ್ಜಿಕಲ್ ಸ್ಟ್ರೈಕ್ ನಿರ್ಧಾರದಿಂದ ಭಾರತೀಯ ಸೈನ್ಯ, ಎನ್ಡಿಎ ಹಾಗೂ ನರೇಂದ್ರ ಮೋದಿ ಅವರಿಗೆ ಖ್ಯಾತಿ ತಂದುಕೊಟ್ಟಿತು. ಆದರೆ ಈ ಮೇಲಿನ ಸೋ ಕಾಲ್ಡ್ ಮುಖಂಡರು ಮಾತ್ರ ಈ ನಿರ್ಧಾರದಿಂದ ಹೊಟ್ಟೆ ಉರಿದುಕೊಂಡರು. ಕುದ್ದು ಹೋದರು, ಹೊಟ್ಟೆ ಕಿಚ್ಚು ಪಟ್ಟರು.

ಇವರಲ್ಲೇ ಅರವಿಂದ ಕೇಜ್ರಿವಾಲ್ ಒಂದು ಹೆಜ್ಜೆ ಮುಂದೆ ಹೋಗಿ, ಸರ್ಜಿಕಲ್ ಸ್ಟ್ರೈಕ್ ನಡೆದೇ ಇಲ್ಲ, ಹಾಗೊಂದು ವೇಳೆ ನಡೆದಿದ್ದರೆ ಕೇಂದ್ರ ಸರ್ಕಾರ ವೀಡಿಯೋ ತೋರಿಸಲಿ ಎಂದು ಬೊಬ್ಬೆ ಹಾಕಿದರು. ಭಾರತೀಯ ಶೌರ್ಯವನ್ನೇ ಪ್ರಶ್ನಿಸಿದರು.

ಆದರೆ ಈಗ ಅಂದು ಭಾರತೀಯ ಸೈನ್ಯ ಮಾಡಿದ ಸರ್ಜಿಕಲ್ ಸ್ಟ್ರೈಕ್ ವೀಡಿಯೋ ಬಹಿರಂಗವಾಗಿದೆ. ಸೇನೆಯ ಪ್ರಮುಖ ಯೋಧರೆ ಇದು ಸರ್ಜಿಕಲ್ ಸ್ಟ್ರೈಕ್ ವೀಡಿಯೋ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅಂದು ಬಾಯಿಬಿಟ್ಟಿದ್ದ ಅರವಿಂದ ಕೇಜ್ರಿವಾಲ್ ಈಗ ಮಗುಮ್ಮಾಗಿದ್ದಾರೆ. ಒಂದೇ ಒಂದು ಮಾತಾಡಿಲ್ಲ. ಹೇಳಿ ಇಂಥವರ ಇಬ್ಬಂದಿತನಕ್ಕೆ ಏನು ಹೇಳೋದು?

0
Shares
  • Share On Facebook
  • Tweet It




Trending Now
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
ವಿಶಾಲ್ ಗೌಡ ಕುಶಾಲನಗರ July 30, 2025
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
ವಿಶಾಲ್ ಗೌಡ ಕುಶಾಲನಗರ July 29, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
  • Popular Posts

    • 1
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 2
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 3
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 4
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 5
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

  • Privacy Policy
  • Contact
© Tulunadu Infomedia.

Press enter/return to begin your search