• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಈ ಮಹಿಳೆಯ ಹಠ, ಬದುಕುತ್ತಿರುವ ರೀತಿಯ ಕತೆ ಕೇಳಿದರೆ ನಮ್ಮ ಸೋಮಾರಿತನವೂ ಓಡಿಹೋಗುತ್ತದೆ!

TNN Correspondent Posted On July 7, 2018


  • Share On Facebook
  • Tweet It

ಕೋಲ್ಕತ್ತಾ: ನಮ್ಮಲ್ಲಿ ಬಹುತೇಕರು ಇರುವುದೇ ಹೀಗೆ. ಅವರಿಗೆ ದಿನಕ್ಕೆ ಎಂಟು ತಾಸು ಕೆಲಸ ಮಾಡುವುದೇ ಸಾಧನೆ ಹಾಗೂ ಬೇಜಾರು. ಸಣ್ಣ ತಲೆನೋವು ಆವರಿಸಿದರೂ, ಜ್ವರ ಬಂದರೂ ಮೂರು ದಿನ ಕೆಲಸಕ್ಕೆ ರಜೆ ಹಾಕುವ ಕುರಿತು ಯೋಚಿಸುವವರೇ ತುಂಬ ದಿನ. ಅದರಲ್ಲೂ ಇಂದಿನ ಸ್ಮಾರ್ಟ್(ಫೋನ್) ಯುಗದಲ್ಲಿ ಹೊಟೇಲ್ ಹೋಗಿ ಊಟ ಮಾಡಲು ಸಹ ಸೋಮಾರಿತನ ಮಾಡುವವರೂ ಇದ್ದಾರೆ.

ಆದರೆ ಕೋಲ್ಕತ್ತಾದ ಸೋನಾಲಿ ಘೋಷ್ ಎಂಬ 28 ವರ್ಷದ ಮಹಿಳೆ ಮಾತ್ರ, ಸಹಜ ಸೋಮಾರಿತನವನ್ನೂ ಮರೆತು, ಪುರುಷರಿಗೇ ಸವಾಲಾಗುವ           ಮೂರು ಗಾಲಿಯ ಸೈಕಲ್ ಮೇಲೆ ಪ್ರಯಾಣಿಕರನ್ನು ಕೂರಿಸಿಕೊಂಡು, ಅವರು ಹೇಳಿದ ಜಾಗಕ್ಕೆ ತಲುಪಿಸುವ ಮೂಲಕ ಸ್ವಾವಲಂಬಿ ಹಾಗೂ ದಿಟ್ಟ ಜೀವನ ಸಾಗಿಸುತ್ತಿದ್ದಾರೆ.

ಇಷ್ಟೇ ಅಲ್ಲ, 2013ರಿಂದ ಮೂರು ಚಕ್ರದ ಸೈಕಲ್ ಓಡಿಸುತ್ತಿರುವ ಸೋನಾಲಿ ಪಶ್ಚಿಮ ಬಂಗಾಳದಲ್ಲಿ ಮೂರು ಚಕ್ರದ ಸೈಕಲ್ ತುಳಿಯುವ ಮೊದಲ ಮಹಿಳೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಅಂದಹಾಗೆ, ಪುರುಷರಿಗೇ ಸವಾಲಾಗುವ ಈ ಕೆಲಸವನ್ನು ಚಾಚೂತಪ್ಪದೆ ನಿತ್ಯ ಮಾಡುತ್ತಿರುವುದು ಸೋನಾಲಿ ವೈಶಿಷ್ಟ್ಯ.

ಸೋನಾಲಿ ಘೋಷ್ ಅವರಿಗೆ ಎಲ್ಲರಂತೆಯೇ ಉತ್ತಮ ಬಾಲ್ಯವಿತ್ತು. ಮನೆಯಲ್ಲಿ ನಗುವಿತ್ತು. ಸೋನಾಲಿ 23 ವರ್ಷದವಳಿದ್ದಾಗ ಮದುವೆ ಆಸೆಗಳು ಸಹ ಚಿಗುರೊಡೆದಿದ್ದವು. ಆದರೆ 2013ರಲ್ಲಿ ಅಪ್ಪ ತೀರಿಕೊಂಡ ಬಳಿಕ ಇಡೀ ಕುಟುಂಬವೇ ಬೀದಿಗೆ ಬರುವ ಪರಿಸ್ಥಿತಿ ಎದುರಾಗಿತ್ತು. ಆಗ ಸೋನಾಲಿ ಮೂರು ಗಾಲಿಯ ಸೈಕಲ್ ಓಡಿಸಲು ತೀರ್ಮಾನಿಸಿದ್ದು ಹಾಗೂ ಪ್ರಸ್ತುತ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

23ನೇ ವರ್ಷದಿಂದ ಮೂರು ಚಕ್ರದ ಸೈಕಲ್ ಓಡಿಸಲು ಆರಂಭಿಸಿದೆ. ಅಪ್ಪ ನಮಗೆ ಶಿಕ್ಷಣ ಕೊಡಿಸುವ ಸ್ಥಿತಿಯಲ್ಲಿ ಇರದ ಕಾರಣ ಓದಲಿಲ್ಲ. ಹಾಗಾಗಿ ಶಿಕ್ಷಣ ಬೇಕಾಗದ ಸೈಕಲ್ ತುಳಿಯುವ ಕೆಲಸಕ್ಕೆ ಮುಂದಾದೆ. ಆರಂಭದಲ್ಲಿ ಕಷ್ಟವಾದರೂ ಈಗ ಹೊಂದಿಕೊಂಡಿದ್ದೇನೆ. ನಿತ್ಯ ನೂರಾರು ರೂಪಾಯಿ ದುಡಿಯುತ್ತೇನೆ ಎನ್ನುತ್ತಾರೆ ಸೋನಾಲಿ. ಅದೇನೇ ಇರಲಿ ಮದುವೆಯಾಗಿ, ಸ್ಥಿತಿವಂತ ಗಂಡನ ಮನೆ ಸೇರಬೇಕು ಎನ್ನುವ ಹೆಣ್ಣುಮಕ್ಕಳಿರುವ ಈ ಕಾಲದಲ್ಲಿ ಸೋನಾಲಿ ಕುಟುಂಬಕ್ಕೋಸ್ಕರ ದುಡಿಯುತ್ತಿರುವುದು ಶ್ಲಾಘನೀಯ.

  • Share On Facebook
  • Tweet It


- Advertisement -


Trending Now
ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
Tulunadu News May 31, 2023
ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
Tulunadu News May 30, 2023
Leave A Reply

  • Recent Posts

    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
  • Popular Posts

    • 1
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 2
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 3
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 4
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 5
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search