• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಈ ಮಹಿಳೆಯ ಹಠ, ಬದುಕುತ್ತಿರುವ ರೀತಿಯ ಕತೆ ಕೇಳಿದರೆ ನಮ್ಮ ಸೋಮಾರಿತನವೂ ಓಡಿಹೋಗುತ್ತದೆ!

TNN Correspondent Posted On July 7, 2018


  • Share On Facebook
  • Tweet It

ಕೋಲ್ಕತ್ತಾ: ನಮ್ಮಲ್ಲಿ ಬಹುತೇಕರು ಇರುವುದೇ ಹೀಗೆ. ಅವರಿಗೆ ದಿನಕ್ಕೆ ಎಂಟು ತಾಸು ಕೆಲಸ ಮಾಡುವುದೇ ಸಾಧನೆ ಹಾಗೂ ಬೇಜಾರು. ಸಣ್ಣ ತಲೆನೋವು ಆವರಿಸಿದರೂ, ಜ್ವರ ಬಂದರೂ ಮೂರು ದಿನ ಕೆಲಸಕ್ಕೆ ರಜೆ ಹಾಕುವ ಕುರಿತು ಯೋಚಿಸುವವರೇ ತುಂಬ ದಿನ. ಅದರಲ್ಲೂ ಇಂದಿನ ಸ್ಮಾರ್ಟ್(ಫೋನ್) ಯುಗದಲ್ಲಿ ಹೊಟೇಲ್ ಹೋಗಿ ಊಟ ಮಾಡಲು ಸಹ ಸೋಮಾರಿತನ ಮಾಡುವವರೂ ಇದ್ದಾರೆ.

ಆದರೆ ಕೋಲ್ಕತ್ತಾದ ಸೋನಾಲಿ ಘೋಷ್ ಎಂಬ 28 ವರ್ಷದ ಮಹಿಳೆ ಮಾತ್ರ, ಸಹಜ ಸೋಮಾರಿತನವನ್ನೂ ಮರೆತು, ಪುರುಷರಿಗೇ ಸವಾಲಾಗುವ           ಮೂರು ಗಾಲಿಯ ಸೈಕಲ್ ಮೇಲೆ ಪ್ರಯಾಣಿಕರನ್ನು ಕೂರಿಸಿಕೊಂಡು, ಅವರು ಹೇಳಿದ ಜಾಗಕ್ಕೆ ತಲುಪಿಸುವ ಮೂಲಕ ಸ್ವಾವಲಂಬಿ ಹಾಗೂ ದಿಟ್ಟ ಜೀವನ ಸಾಗಿಸುತ್ತಿದ್ದಾರೆ.

ಇಷ್ಟೇ ಅಲ್ಲ, 2013ರಿಂದ ಮೂರು ಚಕ್ರದ ಸೈಕಲ್ ಓಡಿಸುತ್ತಿರುವ ಸೋನಾಲಿ ಪಶ್ಚಿಮ ಬಂಗಾಳದಲ್ಲಿ ಮೂರು ಚಕ್ರದ ಸೈಕಲ್ ತುಳಿಯುವ ಮೊದಲ ಮಹಿಳೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಅಂದಹಾಗೆ, ಪುರುಷರಿಗೇ ಸವಾಲಾಗುವ ಈ ಕೆಲಸವನ್ನು ಚಾಚೂತಪ್ಪದೆ ನಿತ್ಯ ಮಾಡುತ್ತಿರುವುದು ಸೋನಾಲಿ ವೈಶಿಷ್ಟ್ಯ.

ಸೋನಾಲಿ ಘೋಷ್ ಅವರಿಗೆ ಎಲ್ಲರಂತೆಯೇ ಉತ್ತಮ ಬಾಲ್ಯವಿತ್ತು. ಮನೆಯಲ್ಲಿ ನಗುವಿತ್ತು. ಸೋನಾಲಿ 23 ವರ್ಷದವಳಿದ್ದಾಗ ಮದುವೆ ಆಸೆಗಳು ಸಹ ಚಿಗುರೊಡೆದಿದ್ದವು. ಆದರೆ 2013ರಲ್ಲಿ ಅಪ್ಪ ತೀರಿಕೊಂಡ ಬಳಿಕ ಇಡೀ ಕುಟುಂಬವೇ ಬೀದಿಗೆ ಬರುವ ಪರಿಸ್ಥಿತಿ ಎದುರಾಗಿತ್ತು. ಆಗ ಸೋನಾಲಿ ಮೂರು ಗಾಲಿಯ ಸೈಕಲ್ ಓಡಿಸಲು ತೀರ್ಮಾನಿಸಿದ್ದು ಹಾಗೂ ಪ್ರಸ್ತುತ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

23ನೇ ವರ್ಷದಿಂದ ಮೂರು ಚಕ್ರದ ಸೈಕಲ್ ಓಡಿಸಲು ಆರಂಭಿಸಿದೆ. ಅಪ್ಪ ನಮಗೆ ಶಿಕ್ಷಣ ಕೊಡಿಸುವ ಸ್ಥಿತಿಯಲ್ಲಿ ಇರದ ಕಾರಣ ಓದಲಿಲ್ಲ. ಹಾಗಾಗಿ ಶಿಕ್ಷಣ ಬೇಕಾಗದ ಸೈಕಲ್ ತುಳಿಯುವ ಕೆಲಸಕ್ಕೆ ಮುಂದಾದೆ. ಆರಂಭದಲ್ಲಿ ಕಷ್ಟವಾದರೂ ಈಗ ಹೊಂದಿಕೊಂಡಿದ್ದೇನೆ. ನಿತ್ಯ ನೂರಾರು ರೂಪಾಯಿ ದುಡಿಯುತ್ತೇನೆ ಎನ್ನುತ್ತಾರೆ ಸೋನಾಲಿ. ಅದೇನೇ ಇರಲಿ ಮದುವೆಯಾಗಿ, ಸ್ಥಿತಿವಂತ ಗಂಡನ ಮನೆ ಸೇರಬೇಕು ಎನ್ನುವ ಹೆಣ್ಣುಮಕ್ಕಳಿರುವ ಈ ಕಾಲದಲ್ಲಿ ಸೋನಾಲಿ ಕುಟುಂಬಕ್ಕೋಸ್ಕರ ದುಡಿಯುತ್ತಿರುವುದು ಶ್ಲಾಘನೀಯ.

  • Share On Facebook
  • Tweet It


- Advertisement -


Trending Now
ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
Tulunadu News January 31, 2023
ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
Tulunadu News January 30, 2023
Leave A Reply

  • Recent Posts

    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
  • Popular Posts

    • 1
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 2
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • 3
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 4
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 5
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search