• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಣೆಗೆ ತಿಲಕ ಇಟ್ಟುಕೊಂಡಿದ್ದೇ ಈ ಮುಸ್ಲಿಂ ಬಾಲಕಿಯ ತಪ್ಪಾಯಿತೇ?

TNN Correspondent Posted On July 8, 2018


  • Share On Facebook
  • Tweet It

ತಿರುವನಂತಪುರ: ದೇಶದಲ್ಲಿ ಮದರಸಾಗಳು ಎಂದರೆ ಧಾರ್ಮಿಕ ಶಿಕ್ಷಣ ಸಂಸ್ಥೆ, ಧರ್ಮ ಬೋಧನೆಗಾಗಿ ನಿರ್ಮಿಸಿರುವ ಸಂಸ್ಥೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದು ಸಂವಿಧಾನ ಬದ್ಧವಾಗಿದ್ದರೆ ಕಾನೂನೇ ನೋಂದಣಿ ಮಾಡಿಸಿಕೊಳ್ಳುತ್ತದೆ ಎಂಬುದು ಜಾತ್ಯತೀತ ದೇಶದ ಹೆಗ್ಗಳಿಕೆಯೇ ಸರಿ. ಆದರೆ ಇಂಥ ಮದರಸಾದ ಮೂಲಕ ಇತ್ತೀಚೆಗೆ ಉಗ್ರ ಸಂಘಟನೆಗಳಿಗೆ ವ್ಯಕ್ತಿಗಳನ್ನು ಕಳುಹಿಸಲಾಗುತ್ತಿದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.

ಏನೋ ಕೆಲವು ಮದರಸಾಗಳು ಸಗಣಿ ತಿನ್ನುವ ಕೆಲಸ ಮಾಡಿದವು ಎಂದು ಸುಮ್ಮನಾಗಿಬಿಡಬಹುದು. ಉಳಿದ ಮದರಸಾಗಳು ಚೆನ್ನಾಗಿವೆ ಎಂದು ಸಮಾಧಾನಪಡಬಹುದು. ಆದರೆ ಈ ಕೆಲವು ಮದರಸಾಗಳು ನಮ್ಮನ್ನು ಸುಮ್ಮನಿರಲು ಬಿಡಲ್ಲ. ಉಪಟಳ, ಉದ್ಧಟತನದ ಮೂಲಕ ಎಲ್ಲರ ಹೊಟ್ಟೆ ಉರಿಸುತ್ತವೆ.

ಇದಕ್ಕೆ ನಿದರ್ಶನವಾಗುವಂತಹ ಘಟನೆಯೊಂದು ಕೇರಳದಲ್ಲಿ ನಡೆದಿದ್ದು, ಐದು ವರ್ಷದ ಪುಟ್ಟ ಬಾಲಕಿಯೊಬ್ಬಳು ಹಣೆಗೆ ಗಂಧದ ಬೊಟ್ಟು ಇಟ್ಟುಕೊಂಡಳು ಎಂದು ಮದರಸಾದಿಂದಲೇ ವಜಾಗೊಳಿಸುವ ಮೂಲಕ ಧಾರ್ಮಿಕ ಅಸಹಿಷ್ಣುತೆ ಮೆರೆಯಲಾಗಿದೆ.

ಹೌದು, ಕೇರಳದ ಮದರಸಾವೊಂದರಲ್ಲಿ ಐದನೇ ತರಗತಿ ಓದುತ್ತಿದ್ದ ಹೆನ್ನಾ ಮಲಾಯಿಲ್ ಎಂಬ ಮುಸ್ಲಿಂ ಬಾಲಕಿ ಇತ್ತೀಚೆಗೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಣೆಗೆ ಗಂಧದ ಬೊಟ್ಟು ಇಟ್ಟುಕೊಂಡು ನಟನೆ ಮಾಡಿದ್ದಳು. ಆದರೆ ಇದಕ್ಕೆ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದ್ದು, ಇಸ್ಲಾಂ ಧರ್ಮವನ್ನು ಬೇರೆ ರೀತಿಯಲ್ಲಿ ತೋರಿಸಲಾಗಿದೆ ಎಂದು ಬಾಲಕಿಯನ್ನು ಶಾಲೆಯಿಂದ ಹೊರಹಾಕಲಾಗಿದೆ.

ಬಾಲಕಿಯ ತಂದೆ-ತಾಯಿ ಬಡವರಾಗಿದ್ದು, ಈಗ ಬಾಲಕಿಯ ಭವಿಷ್ಯ ಏನು ಎಂಬ ಕುರಿತು ಚಿಂತೆ ಮಾಡುವ ಹಾಗಾಗಿದೆ. ಹೇಳಿ ಐದು ವರ್ಷದ ಪುಟ್ಟ ಕಂದಮ್ಮಳಿಗೆ ಧರ್ಮದ ಯಾವ ನಿಯಮ ಅರ್ಥವಾಗುತ್ತದೆ? ಧಾರ್ಮಿಕ ವಿಧಿವಿಧಾನ ಹೇಗೆ ಅರ್ಥವಾಗುತ್ತವೇ? ಅಷ್ಟಕ್ಕೂ ಹಣೆಗೆ ಬೊಟ್ಟುಇಟ್ಟುಕೊಂಡರೆ ಯಾವ ಅಪರಾಧ? ಬಾಲಕಿಯ ಮುಗ್ಧತೆಯನ್ನೇ ಅರಿಯದಷ್ಟು ಕುರುಡಾದರೆ ಈ ಧರ್ಮಪಾಲಕರು?

  • Share On Facebook
  • Tweet It


- Advertisement -


Trending Now
ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
Tulunadu News July 4, 2022
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
Tulunadu News July 2, 2022
Leave A Reply

  • Recent Posts

    • ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
  • Popular Posts

    • 1
      ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • 2
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 3
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 4
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 5
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search