• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಇಂಗ್ಲಿಶ್ ಬರವಣಿಗೆ ನಂಬಿದ್ರೆ ನಂಬಿ ಸುದ್ದಿ 

ಮಂಗಳೂರು: ಸೆಲ್ ಫೋನ್ ಗೆ ಪರ್ಯಾಯವಾಗಿ ಲೈ – ಫೋನ್ ಆವಿಷ್ಕಾರ!

Tulunadu News Posted On July 23, 2018
0


0
Shares
  • Share On Facebook
  • Tweet It

ಮಂಗಳೂರು: ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಸೆಲ್ ಫೋನ್ ಗಳಿಗೆ ಎಷ್ಟು ಅಡಿಕ್ಟ್ ಅಥವಾ ದಾಸರಾಗಿದ್ದೇವೆ ಎಂದರೆ ಸೆಲ್ ಫೋನ್ ಗಳಿಲ್ಲದೇ ಜೀವನವೇ ಇಲ್ಲ ಎನ್ನುವ ಮಟ್ಟಕ್ಕೆ ತಲುಪಿದ್ದೇವೆ . ಸೆಲ್ ಫೋನ್ ಮೂಲಕವೇ ನಮ್ಮ ದಿನ ಆರಂಭವಾದರೆ ಸೆಲ್ ಫೋನ್ ಗಳ ಬಟನ್ ಗಳನ್ನು ಒತ್ತುತ್ತಾ , ಜಾಲತಾಣಗಳಲ್ಲಿ ಸರ್ಚ್ ಮಾಡುತ್ತಾ ದಿನ ಕೊನೆಗೊಳ್ಳುತ್ತದೆ.

ಸೆಲ್ ಫೋನ್ ಕಿವಿಗೆ ಅಂಟಿಕೊಂಡೆ ಇರುತ್ತದೆ. ಈ ರೀತಿಯ ವರ್ತನೆ ತೋರದವರನ್ನು ಅನ್ಯಗ್ರಹ ಜೀವಿಗಳಂತೆ ಕಾಣಲಾಗುತ್ತದೆ. ಇದು ಇಂದಿನ ಹಕೀಕತ್ತು. ಆದರೆ ಈ ಸೆಲ್ ಫೋನ್ ಗಳು ಹೊರ ಸೂಸುವ ರೇಡಿಯೋ ತರಂಗಾಂತರಗಳಿಂದಾಗಿ ನಮ್ಮ ದೇಹದ ಮೇಲಾಗುತ್ತಿರುವ ಅದರಲ್ಲೂ ಮೆದುಳಿನ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ನಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆ ಯೋಚಿಸಲು ಪುರುಸೊತ್ತಿಲ್ಲ. ಈ ರೇಡಿಯೋ ತರಂಗಾಂತರಗಳ ಅಪಾಯದ ಕುರಿತು ಗಮನಹರಿಸಿದ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೆಲ್ ಫೋನ್ ಗೆ ಪರ್ಯಾಯವಾಗಿ ಲೈ- ಫೋನ್ ಎಂಬ ಆರೋಗ್ಯ ಸ್ನೇಹಿ ಫೋನ್ ಗಳನ್ನುಆವಿಷ್ಕರಿಸಿದ್ದಾರೆ.

 
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಸಹ್ಯಾದ್ರಿ ಇನೊವೇಶನ್ ಹಬ್ ಪ್ರಾಯೋಜಿತ ತಂತ್ರಜ್ಞಾನ ತಂತ್ರಾಂಶ ಸಂಶೋಧನಾ ಸಂಸ್ಥೆ ಆರ್ ಡಿ ಎಲ್ ಟೆಕ್ನಾಲಜೀಸ್ ಈ ಲೈ – ಫೋನ್ ಗಳನ್ನು ಆವಿಷ್ಕರಿಸಿದೆ. ಲೈ-ಫೋನ್ ಅತ್ಯಾಧುನಿಕ ತಂತ್ರಜ್ಞಾನದ ಅತ್ಯಂತ ಸರಳ ಫೋನ್ ಎಂದು ಹೇಳಲಾಗಿದೆ. ಸೆಲ್ ಫೋನ್ ಗಳಲ್ಲಿ ಬಳಕೆಯಾಗುವುದು ಆರ್ ಎಫ್ ಅಥವಾ ರೇಡಿಯೋ ಫ್ರಿಕ್ವೆನ್ಸಿ ತರಂಗಗಳು. ಆದರೆ ಲೈ-ಫೋನ್ ಗಳಲ್ಲಿ ಬಳಸುವುದು ಎಲ್ ಇ ಡಿ ಬಲ್ಪ್ ಬೆಳಕನ್ನು. ಇದು ವಿಶ್ವ ಮಟ್ಟದ ಅಪೂರ್ವ ಅವಿಷ್ಕಾರ ಎಂದು ಆರ್ ಡಿ ಎಲ್ ಟೆಕ್ನಾಲಜೀಸ್ ಮುಖ್ಯಸ್ಥ ರಾಘವ ಶೆಟ್ಟಿ ತಿಳಿಸಿದ್ದಾರೆ.

ಸೆಲ್ ಫೋನ್ ಗಳಲ್ಲಿ ಉಪಯೋಗವಾಗುವ ರೇಡಿಯೋ ಫ್ರಿಕ್ವೆನ್ಸಿಗಳು ಧ್ವನಿ, ಚಿತ್ರ ಅಥವಾ ಪಠ್ಯಗಳನ್ನು ವಿದ್ಯುತ್ ಆಥವಾ ಕಾಂತೀಯ ಸಂಕೇತಗಳನ್ನಾಗಿ ಪರಿವರ್ತಿಸಿ ಪ್ರವರ್ತಿಸುತ್ತದೆ. ಈ ಸಂಕೇತಗಳನ್ನು ಇನ್ನೊಂದು ಸೆಲ್ ಫೋನ್ ಸ್ವೀಕರಿಸಿ ಕೇಳುಗನಿಗೆ ತಲುಪಿಸುತ್ತದೆ. ಇಲ್ಲಿ ಸಂವಹನದ ಮಾಧ್ಯಮ ರೇಡಿಯೋ ತರಂಗಗಳು.ಆದರೆ ಲೈ- ಫೋನ್ ಗೆ ಬೇಕಿರುವುದು ಎಲ್ ಇ ಡಿ ಬೆಳಕು. ಈ ಬೆಳಕಿನಡಿ ಕುಳಿತು ಈ ಫೋನ್ ಬಳಸಬಹುದು. ಮೊಬೈಲ್ ಸಿಮ್ಮನ್ನು ಸೆಲ್ಯುಲರ್ ನ ಗೇಟ್ ವೇಗೆ ಜೋಡಿಸಿದರೆ ಸೆಲ್ ಫೋನ್ ನ ಕರೆಗಳು , ಮೆಸೇಜ್ ಗಳು ಲೈ-ಫೋನ್ ತೆರೆಯಲ್ಲಿಮೂಡುತ್ತದೆ. ಬಳಿಕ ಸೆಲ್ ಫೋನ್ ನ ಎಲ್ಲಾ ಕೆಲಸಗಳನ್ನು ನಡೆಸಬಹುದಾಗಿದೆ.

ಲೈ- ಫೋನ್ ನಲ್ಲಿ ಆರ್ ಎಫ್ ತರಂಗಾಂತರಗಳು ಇಲ್ಲ. ಆರ್ ಡಿ ಎಲ್ ನ ವಿಶೇಷ ತರಂಗಾಂತರ ಸಂಸ್ಕರಣೆಯಿಂದ ಆರ್ ಎಫ್ ತರಂಗಾಂತರಗಳು ಬೆಳಕಿನ ದತ್ತಾಂಶಗಳಾಗಿ ಪರಿವರ್ತನೆ ಗೊಂಡು ಲೈ -ಫೋನ್ ತಲುಪುತ್ತದೆ. ಸೆಲ್ ಫೋನ್ ಗಳ ವಿಕಿರಣಗಳ ಯಾವ ದುಷ್ಪರಿಣಾಮಗಳು ಇಲ್ಲಿ ಇರುವುದಿಲ್ಲೆಂದು ಹೇಳಲಾಗಿದೆ.

0
Shares
  • Share On Facebook
  • Tweet It




Trending Now
ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
Tulunadu News January 7, 2026
ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
Tulunadu News January 6, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
  • Popular Posts

    • 1
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 2
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 3
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • 4
      ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • 5
      ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ

  • Privacy Policy
  • Contact
© Tulunadu Infomedia.

Press enter/return to begin your search