• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಇಂಗ್ಲಿಶ್ ಬರವಣಿಗೆ ನಂಬಿದ್ರೆ ನಂಬಿ ಸುದ್ದಿ 

ಮಂಗಳೂರು: ಸೆಲ್ ಫೋನ್ ಗೆ ಪರ್ಯಾಯವಾಗಿ ಲೈ – ಫೋನ್ ಆವಿಷ್ಕಾರ!

Tulunadu News Posted On July 23, 2018
0


0
Shares
  • Share On Facebook
  • Tweet It

ಮಂಗಳೂರು: ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಸೆಲ್ ಫೋನ್ ಗಳಿಗೆ ಎಷ್ಟು ಅಡಿಕ್ಟ್ ಅಥವಾ ದಾಸರಾಗಿದ್ದೇವೆ ಎಂದರೆ ಸೆಲ್ ಫೋನ್ ಗಳಿಲ್ಲದೇ ಜೀವನವೇ ಇಲ್ಲ ಎನ್ನುವ ಮಟ್ಟಕ್ಕೆ ತಲುಪಿದ್ದೇವೆ . ಸೆಲ್ ಫೋನ್ ಮೂಲಕವೇ ನಮ್ಮ ದಿನ ಆರಂಭವಾದರೆ ಸೆಲ್ ಫೋನ್ ಗಳ ಬಟನ್ ಗಳನ್ನು ಒತ್ತುತ್ತಾ , ಜಾಲತಾಣಗಳಲ್ಲಿ ಸರ್ಚ್ ಮಾಡುತ್ತಾ ದಿನ ಕೊನೆಗೊಳ್ಳುತ್ತದೆ.

ಸೆಲ್ ಫೋನ್ ಕಿವಿಗೆ ಅಂಟಿಕೊಂಡೆ ಇರುತ್ತದೆ. ಈ ರೀತಿಯ ವರ್ತನೆ ತೋರದವರನ್ನು ಅನ್ಯಗ್ರಹ ಜೀವಿಗಳಂತೆ ಕಾಣಲಾಗುತ್ತದೆ. ಇದು ಇಂದಿನ ಹಕೀಕತ್ತು. ಆದರೆ ಈ ಸೆಲ್ ಫೋನ್ ಗಳು ಹೊರ ಸೂಸುವ ರೇಡಿಯೋ ತರಂಗಾಂತರಗಳಿಂದಾಗಿ ನಮ್ಮ ದೇಹದ ಮೇಲಾಗುತ್ತಿರುವ ಅದರಲ್ಲೂ ಮೆದುಳಿನ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ನಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆ ಯೋಚಿಸಲು ಪುರುಸೊತ್ತಿಲ್ಲ. ಈ ರೇಡಿಯೋ ತರಂಗಾಂತರಗಳ ಅಪಾಯದ ಕುರಿತು ಗಮನಹರಿಸಿದ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೆಲ್ ಫೋನ್ ಗೆ ಪರ್ಯಾಯವಾಗಿ ಲೈ- ಫೋನ್ ಎಂಬ ಆರೋಗ್ಯ ಸ್ನೇಹಿ ಫೋನ್ ಗಳನ್ನುಆವಿಷ್ಕರಿಸಿದ್ದಾರೆ.

 
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಸಹ್ಯಾದ್ರಿ ಇನೊವೇಶನ್ ಹಬ್ ಪ್ರಾಯೋಜಿತ ತಂತ್ರಜ್ಞಾನ ತಂತ್ರಾಂಶ ಸಂಶೋಧನಾ ಸಂಸ್ಥೆ ಆರ್ ಡಿ ಎಲ್ ಟೆಕ್ನಾಲಜೀಸ್ ಈ ಲೈ – ಫೋನ್ ಗಳನ್ನು ಆವಿಷ್ಕರಿಸಿದೆ. ಲೈ-ಫೋನ್ ಅತ್ಯಾಧುನಿಕ ತಂತ್ರಜ್ಞಾನದ ಅತ್ಯಂತ ಸರಳ ಫೋನ್ ಎಂದು ಹೇಳಲಾಗಿದೆ. ಸೆಲ್ ಫೋನ್ ಗಳಲ್ಲಿ ಬಳಕೆಯಾಗುವುದು ಆರ್ ಎಫ್ ಅಥವಾ ರೇಡಿಯೋ ಫ್ರಿಕ್ವೆನ್ಸಿ ತರಂಗಗಳು. ಆದರೆ ಲೈ-ಫೋನ್ ಗಳಲ್ಲಿ ಬಳಸುವುದು ಎಲ್ ಇ ಡಿ ಬಲ್ಪ್ ಬೆಳಕನ್ನು. ಇದು ವಿಶ್ವ ಮಟ್ಟದ ಅಪೂರ್ವ ಅವಿಷ್ಕಾರ ಎಂದು ಆರ್ ಡಿ ಎಲ್ ಟೆಕ್ನಾಲಜೀಸ್ ಮುಖ್ಯಸ್ಥ ರಾಘವ ಶೆಟ್ಟಿ ತಿಳಿಸಿದ್ದಾರೆ.

ಸೆಲ್ ಫೋನ್ ಗಳಲ್ಲಿ ಉಪಯೋಗವಾಗುವ ರೇಡಿಯೋ ಫ್ರಿಕ್ವೆನ್ಸಿಗಳು ಧ್ವನಿ, ಚಿತ್ರ ಅಥವಾ ಪಠ್ಯಗಳನ್ನು ವಿದ್ಯುತ್ ಆಥವಾ ಕಾಂತೀಯ ಸಂಕೇತಗಳನ್ನಾಗಿ ಪರಿವರ್ತಿಸಿ ಪ್ರವರ್ತಿಸುತ್ತದೆ. ಈ ಸಂಕೇತಗಳನ್ನು ಇನ್ನೊಂದು ಸೆಲ್ ಫೋನ್ ಸ್ವೀಕರಿಸಿ ಕೇಳುಗನಿಗೆ ತಲುಪಿಸುತ್ತದೆ. ಇಲ್ಲಿ ಸಂವಹನದ ಮಾಧ್ಯಮ ರೇಡಿಯೋ ತರಂಗಗಳು.ಆದರೆ ಲೈ- ಫೋನ್ ಗೆ ಬೇಕಿರುವುದು ಎಲ್ ಇ ಡಿ ಬೆಳಕು. ಈ ಬೆಳಕಿನಡಿ ಕುಳಿತು ಈ ಫೋನ್ ಬಳಸಬಹುದು. ಮೊಬೈಲ್ ಸಿಮ್ಮನ್ನು ಸೆಲ್ಯುಲರ್ ನ ಗೇಟ್ ವೇಗೆ ಜೋಡಿಸಿದರೆ ಸೆಲ್ ಫೋನ್ ನ ಕರೆಗಳು , ಮೆಸೇಜ್ ಗಳು ಲೈ-ಫೋನ್ ತೆರೆಯಲ್ಲಿಮೂಡುತ್ತದೆ. ಬಳಿಕ ಸೆಲ್ ಫೋನ್ ನ ಎಲ್ಲಾ ಕೆಲಸಗಳನ್ನು ನಡೆಸಬಹುದಾಗಿದೆ.

ಲೈ- ಫೋನ್ ನಲ್ಲಿ ಆರ್ ಎಫ್ ತರಂಗಾಂತರಗಳು ಇಲ್ಲ. ಆರ್ ಡಿ ಎಲ್ ನ ವಿಶೇಷ ತರಂಗಾಂತರ ಸಂಸ್ಕರಣೆಯಿಂದ ಆರ್ ಎಫ್ ತರಂಗಾಂತರಗಳು ಬೆಳಕಿನ ದತ್ತಾಂಶಗಳಾಗಿ ಪರಿವರ್ತನೆ ಗೊಂಡು ಲೈ -ಫೋನ್ ತಲುಪುತ್ತದೆ. ಸೆಲ್ ಫೋನ್ ಗಳ ವಿಕಿರಣಗಳ ಯಾವ ದುಷ್ಪರಿಣಾಮಗಳು ಇಲ್ಲಿ ಇರುವುದಿಲ್ಲೆಂದು ಹೇಳಲಾಗಿದೆ.

0
Shares
  • Share On Facebook
  • Tweet It




Trending Now
2008 ಮಾಲೆಗಾಂ ಬಾಂಬ್ ಬ್ಲಾಸ್ಟ್ ಪ್ರಕರಣ: ಪ್ರಗ್ಯಾ ಸಿಂಗ್, ಕರ್ನಲ್ ಪುರೋಹಿತ್ ಸೇರಿ 7 ಜನ ದೋಷಮುಕ್ತ!
Tulunadu News July 31, 2025
ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
Tulunadu News July 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 2008 ಮಾಲೆಗಾಂ ಬಾಂಬ್ ಬ್ಲಾಸ್ಟ್ ಪ್ರಕರಣ: ಪ್ರಗ್ಯಾ ಸಿಂಗ್, ಕರ್ನಲ್ ಪುರೋಹಿತ್ ಸೇರಿ 7 ಜನ ದೋಷಮುಕ್ತ!
    • ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
  • Popular Posts

    • 1
      2008 ಮಾಲೆಗಾಂ ಬಾಂಬ್ ಬ್ಲಾಸ್ಟ್ ಪ್ರಕರಣ: ಪ್ರಗ್ಯಾ ಸಿಂಗ್, ಕರ್ನಲ್ ಪುರೋಹಿತ್ ಸೇರಿ 7 ಜನ ದೋಷಮುಕ್ತ!
    • 2
      ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
    • 3
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 4
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 5
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್

  • Privacy Policy
  • Contact
© Tulunadu Infomedia.

Press enter/return to begin your search