• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಮನೋರಂಜನೆ ಸುದ್ದಿ 

ಅರ್ಜಿಯಲ್ಲಿ ಚೆಂದದ ಹುಡುಗಿಯ ಫೋಟೋ ಇದ್ದರೆ ಅವಳಿಗೆ ಕರೆ ಹೋಯಿತು ಎಂದೇ ಲೆಕ್ಕ!!

Ganeshraj Posted On August 3, 2018
0


0
Shares
  • Share On Facebook
  • Tweet It

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭ್ರಷ್ಟಾಚಾರದ ಒಂದು ಕೋರ್ಸ್ ಪ್ರಾರಂಭ ಮಾಡಿದ್ರೆ ಅದನ್ನು ಕಲಿಸಲು ಅಲ್ಲಿ ಭ್ರಷ್ಟಾಚಾರದಲ್ಲಿ ಪಿಎಚ್ ಡಿ ಮಾಡಿರುವ ವ್ಯಕ್ತಿಗಳದ್ದೇ ಒಂದು ತಂಡ ಇದೆ. ಒಂದಕ್ಕಿಂತ ಒಂದು ಹಗರಣ ಮಾಡಿರುವವರೇ ಅಲ್ಲಿ ಇರುವುದರಿಂದ ಇವರ ಮೇಲೆನೆ ಒಂದು ಥಿಸಿಸ್ ಬರೆಯಬಹುದು. ವಿಷಯ: ಭ್ರಷ್ಟಾಚಾರದಲ್ಲಿ ಹೇಗೆ ಪರಿಣಿತಿ ಪಡೆಯುವುದು. ಇದಕ್ಕೆ ಮಾರ್ಗದರ್ಶನ ಅಲ್ಲಿನವರೇ ಮಾಡುವಷ್ಟು ಸಮರ್ಥಿದ್ದಾರೆ. ಅವರಲ್ಲಿ ಒಬ್ಬರು ಪ್ರಶಾಂತ್. ಈ ಮನುಷ್ಯ ಕುಲಪತಿಗಳ ಆಪ್ತ ಸಹಾಯಕ ಹುದ್ದೆಯಲ್ಲಿದ್ದಾರೆ. ಭೈರಪ್ಪನವರ ಸ್ವಜಾತಿ ಭಾಂದವ. ಆದ್ದರಿಂದ ಇವರು ವಿವಿ ಕ್ಯಾಂಪಸ್ ನಲ್ಲಿ ಸ್ವಯಂ ಘೋಷಿತ ಕುಲಪತಿಗಳಂತೆ ವರ್ತಿಸುತ್ತಾರೆ. ತಮ್ಮದೇ ಜಾತಿಯವರು ಕುಲಪತಿಯಾಗಿರುವುದರಿಂದ ತಾವು ಏನು ಮಾಡಿದರೂ ಏನು ಆಗುವುದಿಲ್ಲ, ಯಾರೂ ಏನು ಮಾಡಲು ಸಾಧ್ಯವಿಲ್ಲ ಎನ್ನುವ ಧೈರ್ಯ ಇವರಿಗೆ ಇದೆ. ಈ ಪ್ರಶಾಂತ ಕಂಪ್ಯೂಟರ್ ನಲ್ಲಿ ಭಯಂಕರ ಪಳಗಿದ ವ್ಯಕ್ತಿ. ಇನ್ನು ಯಾರಿಗಾದರೂ ಮಸ್ಕಾ ಹಾಕಬೇಕೆಂದರೆ ಇವರಷ್ಟು ನಯಸ್ಸಾಗಿ ಮಾತನಾಡುವವರು ಭೈರಪ್ಪನವರಿಗೆ ಸಿಗಲಿಕ್ಕಿಲ್ಲ.

ಎಲ್ಲಾ ಪೂರೈಸುವುದು ಇದೇ ಪ್ರಶಾಂತ..

ಮಂಗಳೂರು ವಿವಿಗೆ ಬರುವ ಅತಿಥಿಗಳು ಉಳಿದುಕೊಳ್ಳುವುದಾದರೆ ಅವರಿಗೆ ವಿವಿಯ ಗೆಸ್ಟ್ ಹೌಸಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಬೇಕು. ಆದರೆ ಭೈರಪ್ಪನವರ ಸೂಚನೆ ಮೇರೆಗೆ ಅತಿಥಿಗಳನ್ನು ಮಂಗಳೂರು ಕ್ಲಬ್ ಸಹಿತ ನಗರದ ಪ್ರತಿಷ್ಟಿತ ಹೋಟೇಲ್ ಗಳಲ್ಲಿ ಉಳಿಸಲಾಗುತ್ತದೆ. ಇದರ ಉದ್ದೇಶ ಏನೆಂದರೆ ಭವಿಷ್ಯದಲ್ಲಿ ಭೈರಪ್ಪನವರ ಭ್ರಷ್ಟಾಚಾರದ ಹಗರಣಗಳು ಬಯಲಿಗೆ ಬಂದರೆ ಅಥವಾ ಭೈರಪ್ಪನವರ ಸ್ವ “ಅಭಿವೃದ್ಧಿಗೆ” ಯಾವುದಾದರೂ ಅನುಕೂಲ ಆಗಬೇಕಾದರೆ ಆಗ ಈ ಅತಿಥಿಗಳು ಸಹಾಯಕ್ಕೆ ಬರಲಿ ಎನ್ನುವ ನಿರೀಕ್ಷೆ. ಆದರೆ ಅದಕ್ಕೆ ಭೈರಪ್ಪ ವ್ಯಯಿಸುತ್ತಿರುವುದು ನಮ್ಮ ನಿಮ್ಮ ತೆರಿಗೆ ಹಣ. ಉದಾಹರಣೆಗೆ ಗೆಸ್ಟ್ ಗಳಿಗೆ ಊಟ ಕೊಡುವ ಅವಶ್ಯಕತೆ ಇರುತ್ತದೆ. ಅದನ್ನು ಮಂಗಳೂರು ವಿವಿ ಭರಿಸುತ್ತದೆ. ಆದರೆ ಪ್ರಶಾಂತ್ ಅವರು ಅತಿಥಿಗಳನ್ನು ಖುಷಿ ಮಾಡುವುದಕ್ಕಾಗಿ ಅವರಿಗೆ ಬೇಕಾದಷ್ಟು ಮದ್ಯವನ್ನು ಕೂಡ ಒದಗಿಸುತ್ತಾರೆ. ಆ ಮದ್ಯದ ಬಿಲ್ ಅನ್ನು ಊಟದ ಬಿಲ್ ಎಂದು ಮಾಡಿ ಅದನ್ನು ಮಂಗಳೂರು ವಿವಿಯಿಂದ ತೆಗೆದುಕೊಳ್ಳಲಾಗುತ್ತದೆ. ಇನ್ನು ಇವರು ಊಟದ ಬಿಲ್ಲಿನಲ್ಲಿ ಮಾಡುವ ಮೋಸ ಎಷ್ಟು ನಿಕೃಷ್ಟ ಎಂದರೆ ಬಹುಶ: ಭಗವಂತ ಇವರನ್ನು ಯಾವತ್ತೂ ಕ್ಷಮಿಸಲಾರರು.

ಅರ್ಜಿಯಲ್ಲಿ ಫೋನ್ ನಂಬ್ರ ಮತ್ತು ಚೆಂದದ ಹುಡುಗಿ..

ಪ್ರಶಾಂತ್ ಮಾಡುವ ಕರ್ಮಕಾಂಡ ಇಷ್ಟೇ ಇಲ್ಲ. ಈ ವ್ಯಕ್ತಿ ಮಂಗಳೂರು ವಿವಿಯ ವಿದ್ಯಾರ್ಥಿನಿಯರನ್ನು ಕೂಡ ಹೇಗೆ ತನ್ನ ಚಪಲಕ್ಕೆ ಬಳಸಿಕೊಳ್ಳುತ್ತಾನೆ ಎನ್ನುವುದರ ಬಗ್ಗೆ ರಸವತ್ತಾದ ಕಥೆಗಳಿವೆ. ಎನ್ ಇಟಿ/ ಎಸ್ ಎಲ್ ಇಟಿಯಂತಹ ಪರೀಕ್ಷೆಗಳ ಅರ್ಜಿಗಳನ್ನು ಸ್ಕ್ರೂಟಿನಿ ಮಾಡುವುದು ಇದೇ ಪ್ರಶಾಂತ್. ಎಪ್ಲಿಕೇಶನ್ ಪ್ರಶಾಂತ್ ಕೈಗೆ ಬಂದಾಗ ಇವರು ಏನು ಮಾಡುತ್ತಾರೆ ಎಂದರೆ ಯುವತಿ ಚೆಂದ ಇದ್ದರೆ ಅವಳ ಫೋನ್ ನಂಬ್ರವನ್ನು ತಾವು ನೋಟ್ ಮಾಡಿಟ್ಟುಕೊಳ್ಳುತ್ತಾರೆ. ಹೇಗೂ ಎಪ್ಲಿಕೇಶನ್ ನಲ್ಲಿ ಫೋನ್ ನಂಬ್ರ ಬರೆಯಲೇಬೇಕಾಗಿರುವುದರಿಂದ ಯಾವ ಚೆಂದದ ಹುಡುಗಿ ಕೂಡ ತನಗೆ ಗೊತ್ತಿಲ್ಲದೆ ತನ್ನ ಮೊಬೈಲ್ ನಂಬ್ರವನ್ನು ಪ್ರಶಾಂತ್ ಕೈಗೆ ಕೊಟ್ಟುಬಿಟ್ಟಿರುತ್ತಾಳೆ. ಬಳಿಕ ಅವಳನ್ನು ಕರೆಸಿ ಪುಸಲಾಯಿಸಿ ಅವಳನ್ನು ಮರಳು ಮಾಡುವ ಪ್ರಯತ್ನ ಕೂಡ ಪ್ರಶಾಂತ್ ಮಾಡುತ್ತಾರೆ. ಅನೇಕ ಯುವತಿಯರಿಗೆ ಪ್ರಶಾಂತ್ ಅಸಹ್ಯ ಬೇಡಿಕೆಯನ್ನು ಇಟ್ಟಿದ್ದಾರೆ.
ಇತ್ತೀಚೆಗೆ ನ್ಯೂಸ್ 18 ರಲ್ಲಿ ಸರ್ಜಿಕಲ್ ಸ್ರ್ಟೈಕ್ ಎನ್ನುವ ಕಾರ್ಯಕ್ರಮ ಬಂದಿತ್ತಲ್ಲ. ಅದರ ನಿರೂಪಕಿಯಾಗಿರುವ ವಿಜಯಲಕ್ಷ್ಮಿ ಶಿಬರೂರು ಅವರು ವಿವಿಯ ರಿಜಿಸ್ಟ್ರಾರ್ ಕೊಠಡಿಯಲ್ಲಿ ಕುಳಿತು ರಿಜಿಸ್ಟ್ರಾರ್ ಅವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಈ ಪ್ರಶಾಂತ್ ಏನು ಮಾಡಿದ್ದಾರೆ ಎಂದರೆ ವಿಜಯಲಕ್ಷ್ಮಿ ಮತ್ತು ರಿಜಿಸ್ಟ್ರಾರ್ ಮಾತನಾಡುತ್ತಿರುವ ಫೋಟೋ ಕ್ಲಿಕ್ಕಿಸಿದ್ದಾರೆ. ಅದನ್ನು ನೇರವಾಗಿ ಭೈರಪ್ಪನವರಿಗೆ ತಲುಪಿಸಿದ್ದಾರೆ. ಇನ್ನು ಭೈರಪ್ಪನವರ ಸಮಸ್ತ ಭ್ರಷ್ಟಾಚಾರದ ವಿಷಯವನ್ನು ನ್ಯೂಸ್ 18 ಗೆ ನೀಡಿದ್ದು ರಿಜಿಸ್ಟ್ರಾರ್ ಎಂದು ಸುಳ್ಳು ಸುದ್ದಿಯನ್ನು ಭೈರಪ್ಪನವರಿಗೆ ತಿಳಿಸಿದ್ದಾರೆ. ಯಾವಾಗ ಪ್ರಪಂಚದ ಮೂಲೆ ಮೂಲೆಯಲ್ಲಿ ಇರುವವರಿಗೂ ನ್ಯೂಸ್ 18 ಅವರ ಸರ್ಜಿಕಲ್ ಸ್ಟ್ರೈಕ್ ಕಾರ್ಯಕ್ರಮದ ಮೂಲಕ ಭೈರಪ್ಪ ಮತ್ತು ತಂಡ ಅಸಲಿ ಮುಖ ಗೊತ್ತಾಯಿತೋ, ತನಿಖೆಯಾದರೆ ತನ್ನ ಅಷ್ಟೂ ಹಗರಣ ಹೊರಗೆ ಬರುತ್ತದೆ ಎಂದರೆ ಹೆದರಿದ ಭೈರಪ್ಪ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮುಂದೆ ಹೇಳಿದ್ದು ಏನು ಗೊತ್ತೆ? ಅದನ್ನು ನಾಳೆ ತಿಳಿಯೋಣ!

0
Shares
  • Share On Facebook
  • Tweet It


- Advertisement -


Trending Now
ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
Ganeshraj June 25, 2025
ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
Ganeshraj June 25, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
    • ನಮ್ಮ ಸರಕಾರವಿದ್ದೇ ಒಂದು ಚರಂಡಿ ಮಾಡಲು ಆಗಿಲ್ಲ - ಕಾಂಗ್ರೆಸ್ ಶಾಸಕ ಬಹಿರಂಗ ಬೇಸರ!
    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
  • Popular Posts

    • 1
      ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • 2
      ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
    • 3
      ನಮ್ಮ ಸರಕಾರವಿದ್ದೇ ಒಂದು ಚರಂಡಿ ಮಾಡಲು ಆಗಿಲ್ಲ - ಕಾಂಗ್ರೆಸ್ ಶಾಸಕ ಬಹಿರಂಗ ಬೇಸರ!
    • 4
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search