• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಜಾತಿ ಕಾರ್ಡ್ ಎದುರಿಗಿಟ್ಟು ಸದ್ಯ ಭೈರಪ್ಪ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ!

Ganesh Raj Posted On August 4, 2018
0


0
Shares
  • Share On Facebook
  • Tweet It

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಭೈರಪ್ಪ ಮತ್ತು ಅವರ ತಂಡದ ಭ್ರಷ್ಟಾಚಾರದ ವಿವಿಧ ಮಜಲುಗಳನ್ನು ರಾಷ್ಟ್ರೀಯ ವಾಹಿನಿ ನ್ಯೂಸ್ 18 ಮತ್ತು ದಿಗ್ವಿಜಯ ನ್ಯೂಸ್ ನಲ್ಲಿ ನೋಡಿದ ಜನರಿಗೆ ವಿವಿಯ ವಾಸ್ತವ ಗೊತ್ತಾಗಿತ್ತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಕರ್ನಾಟಕದ ರಾಜ್ಯಪಾಲರಿಗೆ ದೂರು ಹೋಯಿತು. ಮಂಗಳೂರು ವಿವಿಯ ಭ್ರಷ್ಟಾಚಾರದ ತನಿಖೆ ಮಾಡುವ ಸಾಧ್ಯತೆ ದಟ್ಟವಾಯಿತು. ವಿವಿಗೆ ನೋಟಿಸ್ ಜಾರಿಗೊಳಿಸಲಾಯಿತು. ಇನ್ನು ಭೈರಪ್ಪನವರನ್ನು ಉಳಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದಾಗ ಭೈರಪ್ಪನವರು ಕೊನೆಯದಾಗಿ ಮಾಡಿದ್ದು ಏನು ಗೊತ್ತಾ? ಸೀದಾ ಬೆಂಗಳೂರಿಗೆ ಹೋಗುತ್ತಾರೆ. ಅಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗುತ್ತಾರೆ. ಅವರು “ಏನ್ ಭೈರಪ್ಪನವರೇ, ನಿಮ್ಮ ವಿವಿ ಭ್ರಷ್ಟಾಚಾರದ ಪ್ರಕರಣ ಸಿಕ್ಕಾಪಟ್ಟೆ ಜಾಸ್ತಿಯಾಗಿದೆಯಂತಲ್ಲ, ಎಲ್ಲಾ ಕಡೆ ಅದೇ ಚರ್ಚೆಯಾಗುತ್ತಿದೆ, ಮಾಧ್ಯಮಗಳಲ್ಲಿಯೂ ತುಂಬಾ ಭರ್ತಾ ಇದೆಯಂತೆ, ಮೊನ್ನೆ ವಿಧಾನಪರಿಷತ್ತಿನಲ್ಲಿ ಕೂಡ ಸಾಕಷ್ಟು ಚರ್ಚೆಯಾಗಿದೆ. ಏನು ಕಥೆ?” ಎಂದು ಕೇಳಿದ್ದಾರೆ. ಅದಕ್ಕೆ ಭೈರಪ್ಪ ಅಂತಿಮವಾಗಿ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದಾಗ ಜಾತಿ ರಾಜಕೀಯದ ದಾಳವನ್ನು ಉರುಳಿಸಿದ್ದಾರೆ. “ಸರ್, ಅದು ನಾನು ಒಕ್ಕಲಿಗ. ನನ್ನ ಬಗ್ಗೆ ಎಲ್ಲಾ ಮಾಹಿತಿಗಳನ್ನು ಮಾಧ್ಯಮಗಳಿಗೆ ಕೊಟ್ಟಿರುವುದು ವಿವಿಯ ರಿಜಿಸ್ಟ್ರಾರ್. ಅವರು ಜಾತಿಯಲ್ಲಿ ಲಿಂಗಾಯತರು. ಅವರಿಗೆ ನಮ್ಮಂತಹ ಒಕ್ಕಲಿಗರು ದೊಡ್ಡ ದೊಡ್ಡ ಸ್ಥಾನದಲ್ಲಿರುವುದು ಹೊಟ್ಟೆಯುರಿ. ನಿಮಗೆ ಗೊತ್ತಿದೆಯಲ್ಲ ಸರ್, ಲಿಂಗಾಯತರು ನಮ್ಮನ್ನು ಮೇಲೆ ಬರಲು ಬಿಡುತ್ತಾರಾ?” ಈ ಸಮಜಾಯಿಷಿಕೆಯಿಂದ ಕುಮಾರಸ್ವಾಮಿಯವರಿಗೆ ಎಷ್ಟು ತೃಪ್ತಿಯಾಯಿತೋ ಗೊತ್ತಿಲ್ಲ. ಆದರೆ ಭೈರಪ್ಪನವರು ಯಾರು ಸಿಕ್ಕಿದರೂ ತಮ್ಮ ಹಗರಣವನ್ನು ಮುಚ್ಚಿಡಲು ಹೇಳುತ್ತಿರುವುದು ಒಂದೇ ಕಥೆ. ತಾವು ಒಕ್ಕಲಿಗರಾಗಿರುವುದರಿಂದ ಲಿಂಗಾಯತರು ತಮ್ಮನ್ನು ತುಳಿಯಲು ನೋಡುತ್ತಿದ್ದಾರೆ.

ಭೈರಪ್ಪನವರ ಸೂಚನೆಯಂತೆ ಕಡತಗಳಿಗೆ ಟಿಪ್ಪಣಿ…

ಇನ್ನು ಭೈರಪ್ಪನವರು ಮೊನ್ನೆ ತಾನೆ ನಿವೃತ್ತರಾಗಿದ್ದಾರೆ. ಸದ್ಯ ಮೈಸೂರಿನಲ್ಲಿದ್ದಾರೆ. ಆದರೆ ಮಂಗಳೂರು ವಿವಿಯ ಆಡಳಿತವನ್ನು ಅಲ್ಲಿಂದಲೇ ನಿರ್ವಹಿಸುತ್ತಿದ್ದಾರೆ ಎನ್ನುವುದರ ಬಗ್ಗೆ ಬಲವಾದ ಅನುಮಾನಗಳು ಹಲವರಿಗೆ ಇದೆ. ಹೇಗೆ ಎಂದರೆ ಭೈರಪ್ಪನವರು ಕುಲಪತಿಯಾಗಿದ್ದಾಗ ಅವರು ಕಡತಗಳಿಗೆ ಟಿಪ್ಪಣಿ ಬರೆಯುವ ಕ್ರಮ ಇತ್ತು. ಪ್ರತಿಯೊಬ್ಬರು ಬರೆಯುವ ಶೈಲಿ ಎನ್ನುವುದು ಬೇರೆ ಬೇರೆಯಾಗಿರುತ್ತದೆ. ಒಬ್ಬ ವ್ಯಕ್ತಿಯ ಬರೆಯುವ ಶೈಲಿ ಒಂದಿಷ್ಟು ವರ್ಷ ಸೂಕ್ಷ್ಮವಾಗಿ ಗಮನಿಸಿದರೆ ನಂತರ ಹೆಸರು ಹಾಕದಿದ್ದರೂ ಆ ವ್ಯಕ್ತಿ ಇಲ್ಲದಿದ್ದರೂ ಇದೇ ವ್ಯಕ್ತಿ ಬರೆದದ್ದು ಎಂದು ಯಾರು ಬೇಕಾದರೂ ಹೇಳಬಹುದು. ಹಾಗೆ ಅನೇಕ ವರ್ಷಗಳಿಂದ ಮಂಗಳೂರು ವಿವಿಯಲ್ಲಿ ಇರುವವರಿಗೆ ಭೈರಪ್ಪನವರ ಟಿಪ್ಪಣೆ ಬರೆಯುವ ಶೈಲಿ ಗೊತ್ತಿದೆ. ಈಗ ಅವರು ನಿವೃತ್ತರಾಗಿದ್ದರೂ, ಇಲ್ಲಿ ಇಲ್ಲದಿದ್ದರೂ ಕಡತಗಳಲ್ಲಿ ಇರುವ ಟಿಪ್ಪಣಿ ಶೈಲಿ ಅದೇ ತೆರನಾಗಿದೆ. ಅಂದರೆ ಇಲ್ಲಿಂದ ಪ್ರತಿನಿತ್ಯ ಭೈರಪ್ಪನವರಿಗೆ ಏನೇನೂ ಆಗುತ್ತದೆ ಎಂದು ಹೇಳಿಕೊಡುವವರು ಇದ್ದಾರೆ. ಭೈರಪ್ಪನವರ ಬಳಿ ಕೇಳಿ ಇಲ್ಲಿ ಟಿಪ್ಪಣಿ ಬರೆಯುವವರು ಇದ್ದಾರೆ. ಭೈರಪ್ಪನವರ ಬಳಿ ಎಲ್ಲವನ್ನು ಕೇಳಿ ಮುಂದುವರೆಯುವವರು ಇದ್ದಾರೆ. ಅದೆಲ್ಲ ಮಾಡುವವರು ಬೇರೆ ಯಾರೂ ಅಲ್ಲ. ಭೈರಪ್ಪನವರ ಆಪ್ತ ಪ್ರಶಾಂತ್. ಭೈರಪ್ಪನವರಿಗೆ ಕರೆ ಮಾಡಿ ಪ್ರಶಾಂತ್ ಟಿಪ್ಪಣಿ ಬಟ್ಟಿ ಇಳಿಸುತ್ತಾರೆ. ಸದ್ಯ ಮಂಗಳೂರು ವಿವಿಯ ಹಂಗಾಮಿ ಕುಲಪತಿಯಾಗಿರುವವರು ಕಿಶೋರ್ ಕುಮಾರ್. ಅವರನ್ನು ನೇಮಿಸಿದ್ದು ಇದೇ ಭೈರಪ್ಪ. ಕಿಶೋರ್ ಕುಮಾರ್ ಎಷ್ಟೆಂದರೂ ನಾಮಕಾವಸ್ತೆ ಹಂಗಾಮಿ ಕುಲಪತಿ. ಆಡಳಿತ ಮೈಸೂರಿನಲ್ಲಿರುವ ಭೈರಪ್ಪನವರಿಂದಲೇ ನಿಯಂತ್ರಿಸಲ್ಪಡುತ್ತಿದೆ. ಅದರೊಂದಿಗೆ ರಿಜಿಸ್ಟ್ರಾರ್ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿಸಿ ಭೈರಪ್ಪ ನಿಟ್ಟುಸಿರುಬಿಡಲಿದ್ದಾರೆ. ಏಕೆಂದರೆ ಅವರ ಹಗರಣದ ಸಮಸ್ತ ಮಾಹಿತಿ ರಿಜಿಸ್ಟ್ರಾರ್ ಬಳಿ ಇದೆ. ಒಟ್ಟಿನಲ್ಲಿ ಭೈರಪ್ಪನವರ ಭ್ರಷ್ಟಾಚಾರ ಮಣ್ಣು ಪಾಲಾಗುತ್ತಾ? ಅಥವಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವವರೆಗೆ ಹೋಗುತ್ತಾ? ಉತ್ತರ ಸದ್ಯಕ್ಕೆ ಇಲ್ಲ ಎಂದು ಅನಿಸುತ್ತದೆ!

0
Shares
  • Share On Facebook
  • Tweet It


Mangaluru VV


Trending Now
ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
Ganesh Raj July 8, 2025
ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
Ganesh Raj July 8, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
  • Popular Posts

    • 1
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 2
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • 3
      ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • 4
      ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • 5
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!

  • Privacy Policy
  • Contact
© Tulunadu Infomedia.

Press enter/return to begin your search