• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಕಂಕನಾಡಿಯಲ್ಲಿ ಲಿಫ್ಟ್ ನಲ್ಲಿ ಸಿಲುಕಿ ಸಾವನ್ನಪ್ಪಿದ 7 ವರ್ಷದ ಬಾಲಕ

Tulunadu News Posted On August 24, 2018
0


0
Shares
  • Share On Facebook
  • Tweet It

ಮಂಗಳೂರು: ಮಕ್ಕಳಿಗೆ ಲಿಫ್ಟ್ ನಲ್ಲಿ ಆಟವಾಡುವುದೆಂದರೆ ಎಲ್ಲಿಲ್ಲದ ಖುಷಿ. ಲಿಫ್ಟ್ ನಲ್ಲಿ ಒಂದು ಫ್ಲೋರ್ ನಿಂದ ಮತ್ತೊಂದು ಫ್ಲೋರ್ ಗೆ ಹೋಗಿ ವಾಪಾಸ್ ಬರುವುದು. ಲಿಫ್ಟ್ ಆಪರೇಟರ್ ಇಲ್ಲದಾಗ ತಾವೇ ಲಿಫ್ಟ್ ಚಲಾಯಿಸುವುದು ಇವೆಲ್ಲ ಮಕ್ಕಳಿಗೆ ಇನ್ನಿಲ್ಲದ ಖುಷಿ ಕೊಡುತ್ತವೆ.

ಆದರೆ ಮಕ್ಕಳ ಈ ಆಟ ಕೆಲವೊಮ್ಮೆ ಜೀವಕ್ಕೆ ಎರವಾಗುತ್ತವೆ. ಇಂತಹುದೇ ದುರಂತ ಮಂಗಳೂರಿನ ಕಂಕನಾಡಿ ಪರಿಸರದಲ್ಲಿ ನಡೆದಿದೆ. ಕಂಕನಾಡಿಯ ವಾಸ್ ಲೇನ್ ನಲ್ಲಿರುವ 25 ವರ್ಷ ಹಳೆಯ ಶಮಾ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ಸಂಭವಿಸಿದೆ. ಬಾಲಕ ಮಹಮ್ಮದ್ ಸಿನಾನ್ (7) ಘಟನೆಯಲ್ಲಿ ಮೃತಪಟ್ಟ ದುರ್ದೈವಿ.

ನಿನ್ನೆ ಗುರುವಾರ ತಾಯಿ ಜೊತೆಗೆ ಮೂರು ಮಕ್ಕಳು ಶಾಪಿಂಗ್ ಗೆ ತೆರಳಲು ಸಿದ್ಧರಾಗಿ ನಿಂತಿದ್ದರು. ವಾಸವಿದ್ದ ಫ್ಲಾಟ್ ಗೆ ತಾಯಿ ಬೀಗ ಹಾಕುತ್ತಿದ್ದ ಸಂದರ್ಭ 7 ವರ್ಷದ ಸಿನಾನ್ ಏಕಾಏಕಿ ಲಿಫ್ಟ್ ನೊಳಗೆ ಹೋಗಿದ್ದಾನೆ. ಹಳೆ ಮಾದರಿಯ ಈ ಲಿಫ್ಟ್ ನೊಳಗೆ ಹೋಗಿ ಸರಿಯಾಗಿ ಬಾಗಿಲು ಭದ್ರಗೊಳಿಸದೇ ಲಿಫ್ಟ್ ನ ಕೆಳಹೋಗುವ ಬಟನ್ ಒತ್ತಿದ್ದಾನೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಬಾಲಕನ ತಲೆ ಲಿಫ್ಟ್ ನ ಸಂದಿಯಲ್ಲಿ ಸಿಲುಕಿದೆ.

ಬಾಲಕನ ಕಿರುಚಾಟ ಕೇಳಿ ತಾಯಿ ಓಡಿ ಬಂದಿದ್ದಾರೆ. ಇತರರ ಸಹಕಾರ ಪಡೆದು ಲಿಫ್ಟ್ ನ ಬಾಗಿಲು ಒಡೆದು ಬಾಲಕ ಸಿನನ್ ನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು . ಆದರೆ ಅದಾಗಲೇ ಬಾಲಕ ಸಿನಾನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೃತ ಸಿನಾನ್ ಅಹಮ್ಮದ್ ಬಾಸಿಂ ಎಂಬುವವರ ಪುತ್ರನಾಗಿದ್ದು, ಈ ಘಟನೆಯ ಬಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

0
Shares
  • Share On Facebook
  • Tweet It




Trending Now
ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
Tulunadu News June 30, 2025
ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
Tulunadu News June 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
  • Popular Posts

    • 1
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 2
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 3
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • 4
      ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • 5
      PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...

  • Privacy Policy
  • Contact
© Tulunadu Infomedia.

Press enter/return to begin your search