• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಗುರುವಾಯನಕೆರೆಯಲ್ಲೇ ಟ್ರಾಫಿಕ್‌ ಜಾಮ್‌; ಪೊಲೀಸರ ಜತೆ ಸಂಚಾರ ನಿಯಂತ್ರಿಸಿದ ತಹಶೀಲ್ದಾರ್‌

Tulunadu News Posted On August 31, 2018


  • Share On Facebook
  • Tweet It

ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಘನ ವಾಹನ ಸಂಚಾರಕ್ಕೆ ಅವಕಾಶ ನೀಡುವ ಕುರಿತು ದ.ಕ.ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯ ಗೊಂದಲದಿಂದಾಗಿ ಗುರುವಾರ ಬೆಳಗ್ಗೆ ಗುರುವಾಯನಕೆರೆಯಲ್ಲೇ ಟ್ರಾಫಿಕ್‌ ಜಾಮ್‌ ಉಂಟಾಗಿ ಕೊನೆಗೆ ಬೆಳ್ತಂಗಡಿ ತಹಶೀಲ್ದಾರ್‌ ಮದನ್‌ಮೋಹನ್‌ ಅವರೇ ಫೀಲ್ಡಿಗಿಳಿದು ಟ್ರಾಫಿಕ್‌ ನಿಯಂತ್ರಿಸಿದ ಘಟನೆ ಸಂಭವಿಸಿದೆ.

ಟ್ರಾಫಿಕ್‌ ಜಾಮ್‌; ಜಿಲ್ಲಾಧಿಕಾರಿ ಆದೇಶದ ಮಧ್ಯೆಯೂ ಪೊಲೀಸರು ಘನ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡುತ್ತಿದ್ದಾರೆ ಎಂದು ಆರೋಪದ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಆ. 29ರಿಂದ ತರಕಾರಿ, ಅಡುಗೆ ಅನಿಲ ಸಿಲಿಂಡರ್‌ ಸಹಿತ ಆಹಾರ ಸಾಮಗ್ರಿಗಳ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲ ಲಾರಿಗಳನ್ನು ಚಾರ್ಮಾಡಿ ಘಾಟಿಯಲ್ಲಿ ತೆರಳದಂತೆ ಗುರುವಾಯನಕೆರೆಯಲ್ಲಿ ತಡೆಹಿಡಿಯಲಾಗಿತ್ತು.

ಹೀಗಾಗಿ ಎಲ್ಲ ಲಾರಿಗಳು ಗುರುವಾಯನಕೆರೆಯಲ್ಲಿ ಬಂದು ನಿಂತಿದ್ದವು. ಇದರಿಂದ ಗುರುವಾರ ಬೆಳಗ್ಗೆ ಇತರ ವಾಹನಗಳು ಹೆಚ್ಚಾಗಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಬಳಿಕ ತಹಶೀಲ್ದಾರ್‌ ಸ್ಥಳಕ್ಕೆ ಆಗಮಿಸಿ, ಪೊಲೀಸರಿಗೆ ಮನವರಿಕೆ ಮಾಡಿ 6 ಚಕ್ರಗಳ ಲಾರಿಗಳಿಗೆ ಘಾಟಿ ರಸ್ತೆಯಲ್ಲಿ ಅವಕಾಶ ನೀಡುವಂತೆ ತಿಳಿಸಿದರು.

ಸಹಜ ಸ್ಥಿತಿಗೆ; ಇದರಿಂದ ಗುರುವಾಯನಕೆರೆಯಲ್ಲಿ ನಿಂತಿದ್ದ ಎಲ್ಲ ಲಾರಿಗಳು ಏಕಕಾಲದಲ್ಲಿ ಹೊರಟ ಪರಿಣಾಮ ಬೆಳ್ತಂಗಡಿ, ಉಜಿರೆ ಭಾಗದಲ್ಲೂ ವಾಹನಗಳ ಒತ್ತಡ ಹೆಚ್ಚಾಗಿತ್ತು. ಎಲ್ಲ ಲಾರಿಗಳು ತೆರಳಿದ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು

 

  • Share On Facebook
  • Tweet It


- Advertisement -


Trending Now
ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷಾ ವರದಿ
Tulunadu News May 24, 2025
60 ಜೆಸಿಬಿ, 40 ಕ್ರೇನ್ಸ್, 3000 ಪೊಲೀಸರು, ಅಕ್ರಮ ಕಟ್ಟಡಗಳು ನೆಲಸಮ! ಎಲ್ಲಿ?
Tulunadu News May 24, 2025
Leave A Reply

  • Recent Posts

    • ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷಾ ವರದಿ
    • 60 ಜೆಸಿಬಿ, 40 ಕ್ರೇನ್ಸ್, 3000 ಪೊಲೀಸರು, ಅಕ್ರಮ ಕಟ್ಟಡಗಳು ನೆಲಸಮ! ಎಲ್ಲಿ?
    • ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಹೊಸ ನಾಯಕ ಯಾರು ಗೊತ್ತಾ?
    • ಪತ್ನಿಯ ಸೀಮಂತ ದಿನವೇ ಕುಸಿದು ಬಿದ್ದು ಪತಿ ಮೃತ್ಯು! ನಿಲ್ಲುತ್ತಿಲ್ಲ ಹಠಾತ್ ಹೃದಯಾಘಾತಗಳು!
    • ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
  • Popular Posts

    • 1
      ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷಾ ವರದಿ
    • 2
      60 ಜೆಸಿಬಿ, 40 ಕ್ರೇನ್ಸ್, 3000 ಪೊಲೀಸರು, ಅಕ್ರಮ ಕಟ್ಟಡಗಳು ನೆಲಸಮ! ಎಲ್ಲಿ?
    • 3
      ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಹೊಸ ನಾಯಕ ಯಾರು ಗೊತ್ತಾ?
    • 4
      ಪತ್ನಿಯ ಸೀಮಂತ ದಿನವೇ ಕುಸಿದು ಬಿದ್ದು ಪತಿ ಮೃತ್ಯು! ನಿಲ್ಲುತ್ತಿಲ್ಲ ಹಠಾತ್ ಹೃದಯಾಘಾತಗಳು!
    • 5
      ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search