• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಜನ್ಮಾಷ್ಟಮಿಯ ವೇಳೆ ವೇಷ ಧರಿಸುವ ಈ ವ್ಯಕ್ತಿ ಬಡಮಕ್ಕಳ ಪಾಲಿನ ಆಶಾಕಿರಣ

Tulunadu News Posted On September 4, 2018
0


0
Shares
  • Share On Facebook
  • Tweet It

ಉಡುಪಿ: ಜಿಲ್ಲೆಯ ಅದೆಷ್ಟೋ ಬಡ ಕುಟುಂಬಗಳ ಪಾಲಿಗೆ ಈತ ದೇವರ ಸಮ. ಈತನಿಂದ ಬದುಕುಳಿದ ಜೀವಗಳು ಇವರ ಒಳ್ಳೆಯದಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಉಡುಪಿ ಸೇರಿದಂತೆ ಕರಾವಳಿಯ ಭಾಗದ ಜನರಿಗೆ ರವಿ ಕಟಪಾಡಿ ಎಂಬ ಹೆಸರು ಕೇಳುವಾಗ ನೆನಪಿಗೆ ಬರುವುದು ಬಡವರ ಬಂಧು, ಆಪದ್ಬಾಂಧವ. ಈ ಬಾರಿ ಉಡುಪಿಯ ಬಡವರ ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಬಡ ಮಕ್ಕಳ ಪಾಲಿಗೆ ಆಶಾಕಿರಣ ಮೂಡಿಸುವ ಸಲುವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ಮತ್ತು ಫ್ರೆಂಡ್ಸ್‌ ಕಟಪಾಡಿ ಈ ಬಾರಿ ಅಷ್ಟಮಿಯ ಸೆ. 2 ಮತ್ತು ಸೆ.3ರಂದು ಅಮೇಜಿಂಗ್‌ ಮಾನ್‌ಸ್ಟರ್‌ ವೇಷ ಧರಿಸಿ ದೇಣಿಗೆ ಸಂಗ್ರಹ ಮಾಡಲಿದ್ದಾರೆ.

ವಾರಂಬಳ್ಳಿಯ ಉಪ್ಪಿನಕೋಟೆ ರಿಕ್ಷಾ ಚಾಲಕ ಉಮೇಶ್‌ ಕುಂದರ್‌ ಮಗಳಾದ ನಾಲ್ಕು ವರ್ಷ ಪ್ರಾಯದ ಬ್ಲಡ್‌ ಕ್ಯಾನ್ಸರ್‌ ನಿಂದ ಬಳಲುತ್ತಿರುವ ದೀಕ್ಷಾ ಕುಂದರ್‌, ಕುಂದಾಪುರ ಕೋಡಿಯ ಹಂಝ ಅವರ ಪುತ್ರ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ 13 ವರ್ಷದ ಝುಲ್ಫಿನ್‌, ಉಡುಪಿಯ ಜಗದೀಶ್‌ ಎಂಬವರ ತಲಸೀಮಿಯದಿಂದ ಬಳಲುತ್ತಿರುವ ಪನ್ವಿಕಾ ಎಂಬ 2 ವರ್ಷ 8 ತಿಂಗಳ ಬಾಲೆ… ಕುಂದಾಪುರ ತಾಲೂಕಿನ ಆನಗಳ್ಳಿಯ ರವಿರಾಜ್‌ ಮಗ ಎರಡೂ ಕಾಲಿನ ಬಲ ಸ್ವಾಧೀನ ಕಳಕೊಂಡಿರುವ 10 ವರ್ಷದ ರಜತ್‌ ಇಂತಹ 4 ಬಡಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶವನ್ನು ತಂಡ ಹೊಂದಿದೆ.

ತಾನು ವೇಷ ಧರಿಸಿ ಸಂಗ್ರಹವಾದ ಮೊತ್ತವನ್ನು ಸೆ.9ರಂದು ಮಲ್ಪೆ ಕೊಳದ ಹನುಮಾನ್‌ ವಿಠೋಭ ಭಜನ ಮಂದಿರದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಎಸ್‌.ಪಿ. ಲಕ್ಷ್ಮಣ ನಿಂಬರಗಿ, ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಸಮಕ್ಷಮದಲ್ಲಿ ಬಡಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ರವಿ ಕಟಪಾಡಿ ಹೇಳಿದ್ದಾರೆ.

ಪ್ರತಿ ವರ್ಷ ಅಷ್ಟಮಿಯಂದು ವೈವಿಧ್ಯಮಯವಾದ ವೇಷವನ್ನು ಧರಿಸುವ ರವಿ, ಒಂದೊಂದು ಬಾರಿಯೂ ಒಂದೊಂದು ಯೋಜನೆಗಳನ್ನು ಇಟ್ಟುಕೊಂಡಿರುತ್ತಾರೆ. ಕಳೆದ ಬಾರಿ ಕೂಡ ಬಡ ಮಕ್ಕಳ ಪಾಲಿಗೆ ರವಿ ದೇವರಾಗಿದ್ದಾರೆ. ತನ್ನ ವೇಷದ ಮೂಲಕ ಜನರಿಗೆ ಮನರಂಜನೆ ನೀಡುವ ರವಿ ಕಟಪಾಡಿ, ಸಾಮಾಜಿಕವಾಗಿ ಜನರಿಗೆ ಸಹಾಯ ಮಾಡುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Tulunadu News February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!

  • Privacy Policy
  • Contact
© Tulunadu Infomedia.

Press enter/return to begin your search