ಮಗನಿಗೆ ಕಡಿದು ಮರ್ಮಾಂಗ, ಕುತ್ತಿಗೆ ಸೀಳಿಕೊಂಡು ತಾನೂ ಆತ್ಮಹತ್ಯೆ!
Posted On September 13, 2018

ಮಂಗಳೂರು: ಮಗನಿಗೆ ಕತ್ತಿಯಿಂದ ಕಡಿದು ಬಳಿಕ ತನ್ನ ಕುತ್ತಿಗೆ ಹಾಗೂ ಮರ್ಮಾಂಗವನ್ನು ಚಾಕುವಿನಿಂದ ಸೀಳಿಕೊಂಡು ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಆಲಂಕಾರು ಎಂಬಲ್ಲಿ ನಡೆದಿದೆ.
ಈ ಘಟನೆ ಇಂದು ನಡೆದಿದ್ದು, ಗ್ರಾಮದ ಪಟ್ಟೆಮಜಲು ನಿವಾಸಿಯಾಗಿರೋ ರಾಜೀವ್ ಪೂಜಾರಿ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ರಾಜೀವ್, ಪುತ್ರ ರತನ್ ಗೆ ಕುತ್ತಿಗೆಗೆ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಬಳಿಕ ತನ್ನ ಮರ್ಮಾಂಗ ಹಾಗೂ ಕುತ್ತಿಗೆಯನ್ನು ಚಾಕುವಿನಿಂದ ಸೀಳಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆಯಿಂದ ಗಂಭೀರ ಗಾಯಗೊಂಡಿರುವ ಮಗ ರತನ್ ನನ್ನು ಕೂಡಲೇ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Trending Now
ಎಷ್ಟು ಇಂಚಿನ ಪೈಪ್ ಹಾಕಬೇಕು ಎಂದು ಗೊತ್ತಿಲ್ಲದವರಿಗೆ ಎಷ್ಟು ಕೋಟಿ ಬಂದರೆಷ್ಟು?
February 16, 2019
ಮೇಯರ್ ಕೊನೆಯ ಸುದ್ದಿಗೋಷ್ಟಿಯಲ್ಲಿ ಹೇಳದೇ ಇದ್ದ ಕಾಮಗಾರಿಗಳ ಪಟ್ಟಿ ನನ್ನ ಬಳಿ ಇದೆ!!
February 15, 2019
Leave A Reply