• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹಿಂದೂ ಮುಖಂಡನ ಮೇಲೆ ಠಾಣೆಯಲ್ಲಿ ಹಲ್ಲೆಯತ್ನ, ಪೊಲೀಸರಿಂದ ಶಾಸಕರಿಗೆ ಅವಮಾನ: ಶಾಸಕರಿಂದ ಚಾರ್ಜ್!

Tulunadu News Posted On September 13, 2018
0


0
Shares
  • Share On Facebook
  • Tweet It

ಮಂಗಳೂರು; ಇಂಟಕ್ ಮುಖಂಡನಿಗೆ ಕರೆ ಮಾಡಿದ ಹಿಂದೂ ಸಂಘಟನೆ ಮುಖಂಡನನನ್ನು ಠಾಣೆಗೆ ಕರೆಯಿಸಿ ಕದ್ರಿ ಪೊಲೀಸರು ಎಡವಟ್ಟು ಮಾಡಿದ್ದಾರೆ. ಮುಖಂಡನನ್ನು ಕರೆಸಿ ಹಲ್ಲೆ ಯತ್ನ ನಡೆಸಿದ ಕುರಿತು ಶಾಸಕ ವೇದವ್ಯಾಸ ಕಾಮತ್ ಅವರು ಪೊಲೀಸ್  ಪೇದೆಯನ್ನು ಖಾರವಾದ ಮಾತಿನಲ್ಲಿ ಬಿಸಿ ಮುಟ್ಟಿಸಿದ್ದಾರೆ. ಕಾಂಗ್ರೆಸಿಗರು ಕರೆ ನೀಡಿದ ಭಾರತ ಬಂದ್ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಮುಖಂಡ ಕೆ.ಆರ್.ಶೆಟ್ಟಿ  ಅಡ್ಯಾರ್ ಅವರು, ಇಂಟಕ್ ಅಧ್ಯಕ್ಷ ಪುನೀತ್ ಶೆಟ್ಟಿಗೆ ಕರೆ ಮಾಡಿದ್ದರು. ಸಚಿವ ಯು.ಟಿ.ಖಾದರ್ ಅವರು ಹಿಂದೆ ಬಂದ್ ಮಾಡಿದವರಿಗೆ ಚಪ್ಪಲಿ ಏಟು ಹೊಡೆಯುವಂತೆ ಹೇಳಿದ್ದಾರೆ.
ಈಗ ನೀವು ಬಲಾತ್ಕಾರವಾಗಿ ಬಂದ್ ಮಾಡುವ ವೇಳೆ ಒಬ್ಬನ ತಲೆ ಒಡೆದಿದ್ದೀರಿ. ಈಗ ನಾವು ಕೆಎಸ್ಸಾರ್ಟಿಸಿಯಲ್ಲಿದ್ದೇವೆ. ನೀವು ಬನ್ನಿ ನಿಮಗೆ ಚಪ್ಪಲಿಯಲ್ಲಿ ಹೊಡೆಯುತ್ತೇವ ಎಂದು ಹೇಳಿದ್ದರು.  ಕದ್ರಿ ಠಾಣೆಗೆ ಬಾ ಎಂದು ಪುನೀತ್ ಉತ್ತರಿಸಿ ಬಳಿಕ ನಾನೇ ಬರುವುದಾಗಿ ತಿಳಿಸಿದ್ದರು. ಬಳಿಕ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಮಂಗಳವಾರ ಎಫ್‍ಐಆರ್ ದಾಖಲಿಸಲಾಗಿತ್ತು. ಇದಕ್ಕಾಗಿ ಕೆ.ಆರ್.ಶೆಟ್ಟಿ ಅವರನ್ನು ಪೊಲೀಸರು ಕರೆ ಮಾಡಿ ಠಾಣೆಗೆ ಬರುವಂತೆ ಸೂಚಿಸಿದರು. ಎಸ್‍ಐ ಮಾರುತಿ ಅವರು ವಿಚಾರಣೆ ನಡೆಸಿ ಠಾಣೆಯಲ್ಲಿಯೇ ಜಾಮೀನು ನೀಡಬಹುದಾದ ಪ್ರಕರಣವಾದ್ದರಿಂದ ಇನ್‍ಸ್ಪೆಕ್ಟರ್ ಸೂಚನೆಯಂತೆ ತಕ್ಷಣ ಬಿಡುಗಡೆಗೆ ಸಿದ್ಧತೆ ನಡೆಸಿದ್ದರು.
ಅಷ್ಟರಲ್ಲಿ ಅವರಿಗೆ ತುರ್ತು ಕರ್ತವ್ಯದ ಕರೆ ಬಂದ ಕಾರಣ ಸರ್ಕಿಟ್ ಹೌಸ್‍ಗೆ ತೆರಳಿದವರು ವಾಪಸ್ ಬರುವಾಗ ವಿಳಂಬವಾಗಿತ್ತು. ಕೆ.ಆರ್.ಶೆಟ್ಟಿ ಮಧ್ಯಾಹ್ನ 12 ಗಂಟೆಗೆ ಹೋಗಿದ್ದು, ಸಂಜೆ 3 ಗಂಟೆಯಾದರೂ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಹಿಂದೂ ಜಾಗರಣೆ ವೇದಿಕೆಯ ಶರತ್ ಪದವಿನಂಗಡಿ ಮತ್ತಿತರರು ಠಾಣೆಗೆ ಆಗಮಿಸಿದರು. ಈ ಸಂದರ್ಭ ಆರ್.ಕೆ. ಶೆಟ್ಟಿ ಮಾತನಾಡುತ್ತಿದ್ದ ವೇಳೆ ಒಬ್ಬ ಪೊಲೀಸ್ ಎಳೆದಾಡಿ ಹಲ್ಲೆಗೆ ಮುಂದಾದರು. ಈ ಸಂದರ್ಭ ಹಿಂದೂ ಮುಖಂಡ ಶರತ್ ಪದವಿನಂಗಡಿ ಶಾಸಕ ವೇದವ್ಯಾಸ ಕಾಮತ್ ಗೆ ಕರೆ ಮಾಡಿ ವಿಷಯ ತಿಳಿಸಿದರು.
ಬಿಸಿ ಮುಟ್ಟಿಸಿದ ಶಾಸಕ; ಈ ಸಂದರ್ಭ ತನ್ನ ಕರೆಯನ್ನು ಪೊಲೀಸ್ ಪೇದೆಗೆ ನೀಡುವಂತೆ ಶಾಸಕರು ಸೂಚಿಸಿದರು. ಆಗ ಪೊಲೀಸ್ ಉಢಾಪೆಯಿಂದ “ ಶಾಸಕ ನಿನಗೆ ಆಗಿರಬಹುದು, ನನಗಲ”್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶಾಸಕರು ಕದ್ರಿ ಪೊಲೀಸ್ ಠಾಣೆ ದೂರವಾಣಿಗೆ ಕರೆ ಮಾಡಿದರೂ ಸ್ಪಂದಿಸಲಿಲ್ಲ.  ತಕ್ಷಣ ಪೊಲೀಸ್ ಠಾಣೆಗೆ ಆಗಮಿಸಿದ ವೇದವ್ಯಾಸ ಕಾಮತ್ ಅರ್ಧ ಗಂಟೆ ಕಾಲ ಪೊಲೀಸರಿಗೆ ಚಾರ್ಜ್ ಮಾಡಿದ್ದಾರೆ. ಸಬ್ ಇನ್‍ಸ್ಪೆಕ್ಟರ್ ಸಮಾಧಾನಕ್ಕೆ ಮುಂದಾದರು. ಇನ್ನೂ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಹೇಳಿದರು. ಅತಿರೇಕವಾಗಿ ವರ್ತಿಸಿದ ಪೊಲೀಸ್‍ಗೆ ಇನ್‍ಸ್ಪೆಕ್ಟರ್ ಸಹಿತ ಮೇಲಧಿಕಾರಿಗಳೂ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆಕ್ರೋಶ; ಬಂದ್ ಮಾಡುವ ಸಂಘಪರಿವಾರದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಸಚಿವ ಯು.ಟಿ. ಖಾದರ್ ಹೇಳಿದರೆ ಸನ್ಮಾನ, ಅದೇ ಸಂಘಪರಿವಾರದ ಯವಕ ಕಾಂಗ್ರೆಸಿಗರಿಗೆ ಹೇಳಿದರೆ ಅವಮಾನ  ಹೇಗಾಗುತ್ತದೆ ಎಂದು ಎಂದು ಹಿಂಜಾವೇ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
0
Shares
  • Share On Facebook
  • Tweet It




Trending Now
ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
Tulunadu News March 11, 2026
ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
Tulunadu News March 11, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
  • Popular Posts

    • 1
      ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • 2
      ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • 3
      ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!

  • Privacy Policy
  • Contact
© Tulunadu Infomedia.

Press enter/return to begin your search