• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರನ್ನು ಮಾಹಿತಿ, ತಂತ್ರಜ್ಞಾನದ ಪರ್ಯಾಯ ನೆಲೆಯನ್ನಾಗಿ ಮಾಡಲು ನಳಿನ್ ಮನವಿ.

TNN Correspondent Posted On July 27, 2017
0


0
Shares
  • Share On Facebook
  • Tweet It

ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲು ಅವರು ಭಾರತದ ಸನ್ಮಾನ್ಯ ಕಾನೂನು ರಾಜ್ಯ ಸಚಿವ ಪಿ ಪಿ ಚೌಧರಿಯವರನ್ನು ಭೇಟಿಯಾಗಿ ಮಂಗಳೂರನ್ನು ಮಾಹಿತಿ ತಂತ್ರಜ್ಞಾನದ ಹಬ್ ಆಗಿ ಮಾಡಲು ಮನವಿ ಸಲ್ಲಿಸಿದರು. ಕೇಂದ್ರ ಸಚಿವರಿಗೆ ಮಂಗಳೂರಿನ ಬಗ್ಗೆ ಸಮಗ್ರ ಮಾಹಿತಿ, ಇಲ್ಲಿನ ಭೌಗೋಳಿಕ ಪ್ರದೇಶದ ಬಗ್ಗೆ ವಿವರ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನದ ಶಿಕ್ಷಣ ಸಂಸ್ಥೆಯನ್ನು ಮಂಗಳೂರಿನಲ್ಲಿ ಪ್ರಾರಂಭಿಸಿಲು ಒತ್ತಾಯಿಸಿದರು.

ಈಗಾಗಲೇ ಅನೇಕ ಮಾಹಿತಿ ಮತ್ತು ತಂತ್ರಜ್ಞಾನದ ದಿಗ್ಗಜ ಸಂಸ್ಥೆಗಳು ಬೆಂಗಳೂರಿನಲ್ಲಿ ಬೇರು ಬಿಟ್ಟಿದ್ದು ಇದರಿಂದ ಮಂಗಳೂರು ಸೇರಿ ಕರಾವಳಿ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಯುವಕ, ಯುವತಿಯರು ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ರಾಜಧಾನಿಯಲ್ಲಿ ಸಹಜವಾಗಿ ಒತ್ತಡ ಬಿದ್ದಿದೆ. ಇದರ ಬದಲಾಗಿ ರಾಜ್ಯದಲ್ಲಿ ವಿಮಾನ, ರೈಲು, ರಾಷ್ಟ್ರೀಯ ಹೆದ್ದಾರಿ, ಬಂದರನ್ನು ಒಳಗೊಂಡ ಏಕೈಕ ನಗರವಾಗಿರುವ ಮಂಗಳೂರನ್ನು ಮಾಹಿತಿ, ತಂತ್ರಜ್ಞಾನದ ಪರ್ಯಾಯ ಕೇಂದ್ರವನ್ನಾಗಿ ಮಾಡಿದರೆ ಇಲ್ಲಿನ ಪ್ರತಿಭಾವಂತರಿಗೆ ಊರಿನಲ್ಲಿಯೇ ಸೇವೆ ಸಲ್ಲಿಸುವ ಅವಕಾಶ ಸಿಗುತ್ತದೆ. ಇಷ್ಟೇ ಇಲ್ಲದೆ ಮಂಗಳೂರು ಕೇಂದ್ರ ಸರಕಾರದ ಮಹೋನ್ನತ ಯೋಜನೆಯಾದ ಸ್ಮಾರ್ಟ್ ಸಿಟಿಯ ಪಟ್ಟಿಯಲ್ಲಿ ಕೂಡ ಗುರುತಿಸಿಕೊಂಡಿರುವುದರಿಂದ ಇಲ್ಲಿ ತಂತ್ರಜ್ಞಾನ ಸಂಬಂಧಿತ ಸಂಸ್ಥೆಗಳು ನೆಲೆ ಕಾಣಲು ಪೂರಕ ವ್ಯವಸ್ಥೆಗಳನ್ನು ರಾಜ್ಯ ಮತ್ತು ಕೇಂದ್ರದ ಸಹಭಾಗಿತ್ವದಲ್ಲಿ ಮಾಡಲು ಸಾಧ್ಯವಿದೆ. ನಮ್ಮ ಕೇಂದ್ರದ ಯೋಜನೆಯಾದ ಸ್ಟಾರ್ಟ್ ಅಪ್ ಯೋಜನೆ ಉತ್ತಮ ಗತಿಯಲ್ಲಿ ಸಾಗುತ್ತಿದ್ದು ಅದಕ್ಕೆ ಮಂಗಳೂರಿನಲ್ಲಿ ಆಶಾದಾಯಕ ಪ್ರಗತಿ ಕಾಣಿಸುತ್ತಿದೆ. ಅಷ್ಟೇ ಅಲ್ಲದೆ ಇಂತಹ ತಂತ್ರಜ್ಞಾನ ಸಂಬಂಧಿತ ಕೈಗಾರಿಕೆಗಳು ಬಂದರೆ ಅದರಿಂದ ಪರಿಸರ ನಾಶ ಕೂಡ ಆಗುವುದಿಲ್ಲ ಮತ್ತು ಇಲ್ಲಿನ ಪರಿಸರ ಸೂಕ್ಷ್ಮ ಪ್ರಭೇದಗಳಿಗೂ ಹಾನಿಯಾಗುವುದಿಲ್ಲ ಎಂದು ಕಟೀಲ್ ಅವರು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈಗಾಗಲೇ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರು ವಿಶ್ವಮಟ್ಟದಲ್ಲಿ ತನ್ನ ಸ್ಥಾನವನ್ನು ಗುರುತಿಸಿಕೊಂಡಿದೆ. ಅದಕ್ಕೆ ಕಾರಣ ಇಲ್ಲಿನ ಜನರ ದೂರದೃಷ್ಟಿ ಮತ್ತು ಅಗಾಧ ಪರಿಶ್ರಮ. ಹಾಗಿರುವಾಗ ಇನ್ನು ಮುಂದಿನ ಜನಾಂಗ ಮಾಹಿತಿ, ತಂತ್ರಜ್ಞಾನದಲ್ಲಿ ಭವಿಷ್ಯ ಹುಡುಕುವ ಕೆಲಸಕ್ಕೆ ಮುಂದಾಗುವಾಗ ಕೇಂದ್ರ ಸರಕಾರದ ಇದರ ಅಗತ್ಯತೆಯನ್ನು ಮನಗಂಡು ಸಕಲ ಸೌಲಭ್ಯವನ್ನು ಮಂಗಳೂರಿಗೆ ನೀಡುವ ಕೆಲಸ ನಡೆಯಬೇಕಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ವಿವರವಾಗಿ ಕೇಂದ್ರ ಸಚಿವರಿಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಬೆಂಗಳೂರಿನ ಮೇಲೆನೆ ತಂತ್ರಜ್ಞಾನ ದಿಗ್ಗಜರು ಒತ್ತಡ ಹಾಕುವುದಕ್ಕಿಂತ ಟೈಯರ್-2 ಸಿಟಿಯಾಗಿರುವ ಮಂಗಳೂರನ್ನು ಪರಿಗಣಿಸಬೇಕು. ಅದಕ್ಕೆ ತಳಹದಿಯಾಗಿ ನ್ಯಾಶನಲ್ ಇನ್ಸಟಿಟ್ಯೂಟ್ ಫಾರ್ ಇಲೆಕ್ಟ್ರಾನಿಕ್ ಎಂಡ್ ಐಟಿ ಅನ್ನು ಆದಷ್ಟು ಶೀಘ್ರವಾಗಿ ಸ್ಥಾಪಿಸಲು ಮುಂದಾಗಬೇಕು ಎಂದು ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು.

ನಳಿನ್ ಕುಮಾರ್ ಕಟೀಲ್ ಅವರ ಈ ಪ್ರಯತ್ನ ಶೀಘ್ರದಲ್ಲಿ ಫಲ ಕಂಡರೆ ಭವಿಷ್ಯದಲ್ಲಿ ಮಂಗಳೂರು ಮಾಹಿತಿ, ತಂತ್ರಜ್ಞಾನದ ಪರ್ಯಾಯ ಕೇಂದ್ರವಾಗಿ ಬೆಳೆದು ಬೆಂಗಳೂರಿಗೆ ಸ್ಪರ್ಧೆ ಕೊಡುವುದರಲ್ಲಿ ಆಶ್ಚರ್ಯವಿಲ್ಲ. ಹಾಗೇ ಆಗಲಿ ಎನ್ನುವುದು ಅಸಂಖ್ಯಾತ ಪ್ರತಿಭಾವಂತರ ಆಶಯ

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Tulunadu News December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search