• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಎಷ್ಟು ಇಂಚಿನ ಪೈಪ್ ಹಾಕಬೇಕು ಎಂದು ಗೊತ್ತಿಲ್ಲದವರಿಗೆ ಎಷ್ಟು ಕೋಟಿ ಬಂದರೆಷ್ಟು?

Hanumantha Kamath Posted On February 16, 2019
0


0
Shares
  • Share On Facebook
  • Tweet It

ಈ ಬಾರಿ ಮತ್ತೆ ಏಶಿಯನ್ ಡೆವಲಪಮೆಂಟ್ ಬ್ಯಾಂಕ್ ನಿಂದ ಎರಡನೇ ಕಂತಿನಲ್ಲಿ ಸಾಲ ಬಂದಿದೆ. ಬಂದಿರುವ ಹಣ ಸುಮಾರು 360 ಕೋಟಿ. ಈ ಹಣದಿಂದ ಮಂಗಳೂರು ನಗರ ಪಾಲಿಕೆಯ ಅರವತ್ತು ವಾರ್ಡಿನಲ್ಲಿ ದಿನದ 24 ಗಂಟೆ, ವಾರದ ಏಳು ದಿನಗಳಲ್ಲಿಯೂ ಕುಡಿಯುವ ನೀರು ಪೂರೈಸಲು ಸಾಧ್ಯ ಎಂದು ಮೇಯರ್ ಭಾಸ್ಕರ್ ಮೊಯಿಲಿ ಅವರು ತಮ್ಮ ನಿರ್ಗಮನ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ನಾನು ಅವರು ಸುದ್ದಿಗೋಷ್ಟಿಯಲ್ಲಿ ಮಾಡಿದ ವರದಿ ವಾಚನದ ಮುಂದುವರೆದ ಭಾಗವನ್ನು ಹೇಳುತ್ತಿದ್ದೇನೆ.

ಅದರ ಮೊದಲ ಭಾಗವನ್ನು ನನ್ನ ಹಿಂದಿನ ಜಾಗೃತ ಅಂಕಣದಲ್ಲಿ ನೀವು ಓದಬಹುದು. ಎಡಿಬಿಯಿಂದ ಹಣ ನಮಗೆ ಬಂದಿರುವುದೇ ಒಳಚರಂಡಿ ಮತ್ತು ಕುಡಿಯುವ ನೀರಿನ ಪೂರೈಕೆ ಸರಿಯಾಗಿ ಮಾಡಬೇಕು ಎನ್ನುವ ಕಾರಣಕ್ಕೆ. ಈಗ ಎರಡನೇ ಕಂತು 360 ಕೋಟಿ ಬಂದಾಗಲೂ ನಮ್ಮ ಪಾಲಿಕೆಯಲ್ಲಿ ಈ ಹಣದಿಂದ ಒಳಚರಂಡಿ ಮತ್ತು 24*7 ಕುಡಿಯುವ ನೀರು ಪೂರೈಸಲಾಗುವುದು, ಎಲ್ಲವನ್ನು ಸರಿ ಮಾಡಲಾಗುವುದು ಎಂದು ಮೇಯರ್ ಹೇಳುತ್ತಿದ್ದಾರೆ. ಹಾಗಾದರೆ ಹಿಂದೆ ಬಂದ ಇಷ್ಟೇ ಕೋಟಿ ಹಣದಿಂದ ನೀವು ಮಾಡಿರುವುದು ಏನು ಮೇಯರ್ ಅವರೇ. ಕೇಳಿದರೆ ಈಗ ಎಡಿಬಿ-2 ನಲ್ಲಿ ಒಳಚರಂಡಿಯ ಮಿಸ್ಸಿಂಗ್ ಲಿಂಕ್ ಜೋಡಿಸುವ ಕೆಲಸ ಶುರು ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಎಷ್ಟು ಮಿಸ್ಸಿಂಗ್ ಲಿಂಕ್ ಜೋಡಿಸುವ ಕೆಲಸವನ್ನು ಮೇಯರ್ ಅವರು ಹೋಗಿ ನೋಡಿದ್ದಾರೆ. ಪೈಪ್ ಎಷ್ಟು ದೊಡ್ಡದಿದೆ ಎನ್ನುವುದು ಇವರಿಗೆ ಗೊತ್ತಿದೆಯಾ? ಒಳಚರಂಡಿಯಲ್ಲಿ ಈ ಮ್ಯಾನ್ ಹೋಲ್ ಗಳ ಕೆಲಸ ಏನು ಎನ್ನುವುದು ನಿಮಗೆ ಗೊತ್ತಿರಬಹುದು. ಉದಾಹರಣೆಗೆ ನೀವು ಫ್ಲಾಟಿನಲ್ಲಿ ವಾಸಿಸುತ್ತಾ ಇದ್ದೀರಿ ಎಂದು ಅಂದುಕೊಳ್ಳೋಣ. ಅಲ್ಲಿಂದ ತ್ಯಾಜ್ಯದ ಪೈಪನ್ನು ಮ್ಯಾನ್ ಹೋಲ್ ಗೆ ಜೋಡಿಸುತ್ತಾರೆ. ಒಂದು ಮ್ಯಾನ್ ಹೋಲ್ ನಿಂದ ಮತ್ತೊಂದು ಮ್ಯಾನ್ ಹೋಲ್ ಗೆ ಇವರು ಹೊಸ ಪೈಪನ್ನು ಅಳವಡಿಸಬೆಕಾಗಿದೆ. ಪಾಲಿಕೆಯವರು ಈಗ ಹಲವು ಕಡೆ ಹತ್ತು ಇಂಚು ದಪ್ಪದ ಪೈಪನ್ನು ಹಾಕುತ್ತಿದ್ದಾರೆ. ಅದು ಮುಂದಿನ ಇಪ್ಪತ್ತು ವರ್ಷವನ್ನು ಗಮನವಿಟ್ಟು ಅವರು ಮಾಡುತ್ತಿರುವ ಯೋಜನೆ. ಅದೇ ಈಗಿನ ಏರುತ್ತಿರುವ ಜನಸಂಖ್ಯೆಯನ್ನು ನೋಡಿದರೆ ಅದು ಕೂಡ ಸಾಕಾಗುವಂತಹ ಯಾವುದೇ ಲಕ್ಷಣ ಇಲ್ಲ. ಆದರೆ ಇಲ್ಲಿ ಆಶ್ಚರ್ಯ ಎಂದರೆ ಎಡಿಬಿ-2 ರಲ್ಲಿ ಬಂದಿರುವ ಅನುದಾನದಲ್ಲಿ ನಮ್ಮ ಇಂಜಿನಿಯರ್ಸ್ ಎಂಟು ಇಂಚಿನ ಹೊಸ ಪೈಪನ್ನು ಹಾಕುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯವರೇ ಮಂಗಳೂರು ನಗರದ ಮುಂದಿನ ಬೆಳವಣಿಗೆಯನ್ನು ಗಮನವಿಟ್ಟು ಕನಿಷ್ಟ 10 ಇಂಚಿನ ಪೈಪಾದರೂ ಬೇಕು ಎನ್ನುವ ನಿರ್ಧಾರಕ್ಕೆ ಬಂದಿರುವಾಗ ಎಡಿಬಿ-2 ನೋಡುತ್ತಿರುವ ಅಧಿಕಾರಿಗಳು ಹೇಗೆ ಎಂಟು ಇಂಚು ಅಳವಡಿಸುತ್ತಿದ್ದಾರೆ. ಇಷ್ಟಾದರೂ ಅವರಿಗೆ ಹೇಳುವವರು ಯಾರೂ ಇಲ್ಲವೇ? ನಾವು ತುಂಬಾ ಕಲಿತು ಹಿಂದೆ ಹೋಗುತ್ತಿದ್ದೇವಾ ಎಂದು ಅನಿಸುತ್ತದೆ.

ಇನ್ನು ಎರಡು ವರ್ಷ ಮೊದಲು ನಗರಾಭಿವೃದ್ಧಿ ಸಚಿವರಾಗಿದ್ದ ರೋಶನ್ ಬೇಗ್ ಅವರು ಮಂಗಳೂರಿಗೆ ಭೇಟಿ ಕೊಟ್ಟಾಗ ಪಾಲಿಕೆಯಲ್ಲಿ ಎಲ್ಲ ಬಿಲ್, ತೆರಿಗೆಯನ್ನು ಒನ್ ಲೈನ್ ನಲ್ಲಿ ಸಲ್ಲಿಸುವ ವ್ಯವಸ್ಥೆ ಮಾಡುತ್ತೇನೆ ಎಂದಿದ್ದರು. ಆದರೆ ಇಲ್ಲಿಯ ತನಕ ಎಷ್ಟು ಬಿಲ್, ತೆರಿಗೆಯನ್ನು ಒನ್ ಲೈನ್ ನಲ್ಲಿ ಕಟ್ಟುವ ಪ್ರಕ್ರಿಯೆ ಶುರುವಾಗಿದೆ ಎನ್ನುವುದನ್ನು ಮೇಯರ್ ಅವರು ಹೇಳಬೇಕು? ಇನ್ನೂ ಸಾಕಷ್ಟು ವಿಷಯ ಇದೆ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search