• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸ್ವಲ್ಪ ಕಾದರೆ ಮಂಗಳೂರು- ಬೆಂಗಳೂರು ರಾತ್ರಿ ರೈಲು ನಮಗೆ ಬೇಕಾದ ಹಾಗೆ ಓಡಲಿದೆ!

Hanumantha Kamath Posted On February 21, 2019
0


0
Shares
  • Share On Facebook
  • Tweet It

ಮಂಗಳೂರು ಮತ್ತು ಬೆಂಗಳೂರು ನಡುವೆ ಹೊಸ ರೈಲೊಂದು ಇವತ್ತಿನಿಂದ ಸಂಚಾರವನ್ನು ಪ್ರಾರಂಭಿಸಿದೆ. ಅದಕ್ಕೆ ಇವತ್ತು ಬೆಳಿಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದರು.

ಬಹಳ ಒಳ್ಳೆಯ ಸಂಗತಿ. ಕೆಲವರು ಇದನ್ನು ಹಗಲು ರೈಲು, ಏನು ಉಪಯೋಗ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮೊದಲಿಗೆ ಆ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸುತ್ತೇನೆ. ಇದು ಖಂಡಿತವಾಗಿಯೂ ರಾತ್ರಿ ರೈಲು ಮತ್ತು ಇದರಿಂದ ಉಭಯ ಜಿಲ್ಲೆಯ ನಾಗರಿಕರಿಗೆ ಖಂಡಿತ ಉಪಯೋಗವಾಗಲಿದೆ. ಆದರೆ ಒಂದಿಷ್ಟು ಸಮಯದ ಬದಲಾವಣೆ ಮಾಡಿದರೆ ಮತ್ತು ವಾರಕ್ಕೆ ಮೂರು ದಿನ ಇಲ್ಲಿಂದ ಅಲ್ಲಿ ಮತ್ತು ಉಳಿದ ಮೂರು ದಿನ ಅಲ್ಲಿಂದ ಇಲ್ಲಿ ಹೋಗಿ ಬರುವುದರಿಂದ ಅದನ್ನು ಕೂಡ ಒಂದಷ್ಟು ಬದಲಾವಣೆ ಮಾಡಿದರೆ ಈ ರೈಲು ನಿಜಕ್ಕೂ ಭವಿಷ್ಯದಲ್ಲಿ ತುಂಬಾ ಉಪಯೋಗವಾಗಲಿದೆ. ಈ ಮೂಲಕ ಬಸ್ಸುಗಳ ಮೇಲೆ ನಮ್ಮ ನಾಗರಿಕರ ಅವಲಂಬನೆ ಸಾಕಷ್ಟು ಇಳಿಯಲಿದೆ. ಈ ಬಗ್ಗೆ ನಾವು ಡಿಆರ್ ಎಂ ಅವರ ಬಳಿ ಇವತ್ತು ಮಾತನಾಡಿದ್ದೇನೆ. ನಾಗರಿಕರ ಪರವಾಗಿ ನನ್ನ ಬೇಡಿಕೆ ಇದ್ದದ್ದು ಈ ರೈಲನ್ನು ರಾತ್ರಿ ಒಂಭತ್ತು ಗಂಟೆಯಿಂದ ಹತ್ತು ಗಂಟೆಯ ಒಳಗೆ ಹೊರಡುವಂತಹ ವ್ಯವಸ್ಥೆ ಮಾಡಬೇಕು. ಅದು ಮಂಗಳೂರು ಸೆಂಟ್ರಲ್ ಇರಲಿ ಅಥವಾ ಯಶವಂತಪುರ ಇರಲಿ. ಅದಕ್ಕಿಂತ ಮೊದಲು ಹೊರಟರೆ ಜನರಿಗೆ ಸಮಸ್ಯೆಯಾಗುತ್ತದೆ. ರಾತ್ರಿ 9 ಗಂಟೆಯ ನಂತರ ಆದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಎಲ್ಲರೂ ತಮ್ಮ ಕೆಲಸ ಮುಗಿಸಿ ರೈಲು ನಿಲ್ದಾಣಕ್ಕೆ ಬಂದು ರೈಲಿನಲ್ಲಿ ಪ್ರಯಾಣಿಸಲು ಸುಲಭವಾಗುತ್ತದೆ. ಬೇಕಾದರೆ ಅರ್ಧ ಗಂಟೆ ತಡವಾಗಿ ಸಮಯ ನಿಗದಿಪಡಿಸಿಕೊಂಡರೂ ಸಮಸ್ಯೆ ಇಲ್ಲ. ಬೇಗ ಎಂಟು ಗಂಟೆಯ ಮೊದಲು ಇಟ್ಟರೆ ಅದು ಕಿರಿಕಿರಿಯಾಗುತ್ತದೆ. ಹಾಗೇ ರೈಲನ್ನು ಬೆಳಿಗ್ಗೆ ಏಳು ಗಂಟೆಗೆಲ್ಲ ನಿಶ್ಚಿತ ಸ್ಥಾನಕ್ಕೆ ತಲುಪಿಸುವ ಕೆಲಸ ಕೂಡ ಆಗಬೇಕು. ಯಶವಂತಪುರದಿಂದ ರಾತ್ರಿ 9 ಗಂಟೆಗೆ ಹೊರಟು ಬೆಳಿಗ್ಗೆ ಏಳು ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪಿದರೆ ಹಾಗೆ ಇಲ್ಲಿಂದ ರಾತ್ರಿ 9 ಗಂಟೆಗೆಲ್ಲ ಬಿಟ್ಟು ಬೆಳಿಗ್ಗೆ 7 ಗಂಟೆಗೆ ಯಶವಂತಪುರ ತಲುಪಿದರೆ ಜನರಿಗೆ ಅನುಕೂಲ ಎಂದಿದ್ದೇನೆ.

ಕುಂಭ ಮೇಳ ಆಗಲಿ ಎಂದಿದ್ದಾರೆ…

ಇನ್ನೊಂದು ಈ ರೈಲು ಸದ್ಯ ಗುರುವಾರ ರಾತ್ರಿ ಬೆಂಗಳೂರು ಬಿಟ್ಟು ಶುಕ್ರವಾರ ಮಂಗಳೂರು ತಲುಪಲಿದೆ. ಆದರೆ ಇಲ್ಲೊಂದು ಸಮಸ್ಯೆ ಇದೆ. ಕರಾವಳಿಯ ಅಸಂಖ್ಯಾತ ಯುವಕ-ಯುವತಿಯರು ಬೆಂಗಳೂರಿನಲ್ಲಿ ಐಟಿ, ಬಿಟಿ ಸಹಿತ ವಿವಿಧ ಉದ್ಯೋಗಗಳಲ್ಲಿ ಇದ್ದಾರೆ. ಅವರಿಗೆ ಶನಿವಾರ, ಆದಿತ್ಯವಾರ ರಜೆ ಇರುವುದರಿಂದ ಅವರು ಶುಕ್ರವಾರ ರಾತ್ರಿ ಊರಿಗೆ ಹೊರಡುತ್ತಾರೆ. ಅವರು ಇಲ್ಲಿಯ ತನಕ ಬಸ್ಸಿನಲ್ಲಿ ಹೋಗಿ ಬರುತ್ತಿದ್ದಾರೆ. ಅಂತಹ ನಾಗರಿಕರು ಈ ರೈಲಿನಲ್ಲಿ ಬಂದು ರೈಲ್ವೆ ಇಲಾಖೆಗೂ ಆದಾಯ ಹೆಚ್ಚಾಗಬೇಕೆಂದರೆ ಇದನ್ನು ಗುರುವಾರ ರಾತ್ರಿ ಯಶವಂತಪುರದಿಂದ ಬಿಡುವ ಬದಲು ಶುಕ್ರವಾರ ರಾತ್ರಿ ಬಿಟ್ಟರೆ ತುಂಬಾ ಅನುಕೂಲವಾಗುತ್ತದೆ. ಸಾಧ್ಯವಾದರೆ ಈ ರೈಲು ವಾರದ ಎಲ್ಲಾ ದಿನ ಮಾಡಿದರೆ ಅದರಿಂದ ಇನ್ನೂ ಅನುಕೂಲವಾಗಲಿದೆ ಎಂದಿದ್ದೇನೆ. ನನ್ನ ಮಾತನ್ನು ಕೇಳಿರುವ ಡಿ ಆರ್ ಎಂ ಅವರು ಖಂಡಿತವಾಗಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅವರ ಪ್ರಕಾರ ಈ ರೈಲಿನಲ್ಲಿ ಜನ ಜಾಸ್ತಿ ಪ್ರಯಾಣಿಸಬೇಕಾದರೆ ಒಂದಿಷ್ಟು ಬದಲಾವಣೆ ಮಾಡುವ ಅಗತ್ಯ ಬಂದರೆ ಖಂಡಿತ ಮಾಡೋಣ. ಆದರೆ ಈಗಲೇ ಅದು ಇಲ್ಲ, ಇದು ಸರಿಯಿಲ್ಲ ಎಂದರೆ ಆಗುವುದಿಲ್ಲ. ಏಕೆಂದರೆ ಉತ್ತರಪ್ರದೇಶದಲ್ಲಿ ಕುಂಭಮೇಳ ಇರುವ ಕಾರಣ ಭಾರತದ ಅತೀ ಹೆಚ್ಚು ರೈಲುಗಳು ಅಲ್ಲಿಗೆ ಹಾಕಲಾಗಿದೆ. ಅದರಿಂದ ಹೊಸ ರೈಲುಗಳಿಗೆ ರೈಲ್ವೇ ಬೋಗಿಗಳ ಕೊರತೆ ಕೂಡ ಇದೆ. ಇನ್ನು ರೈಲ್ವೆ ಟ್ರಾಫಿಕ್ ಕೂಡ ನೋಡಬೇಕಾಗುತ್ತದೆ. ಆದ್ದರಿಂದ ಸದ್ಯ ಈಗ ಸಿಕ್ಕಿರುವ ವ್ಯವಸ್ಥೆಯಲ್ಲಿಯೇ ಮಂಗಳೂರು ಸೆಂಟ್ರಲ್ – ಯಶವಂತಪುರ ರೈಲನ್ನು ಓಡಿಸಲಾಗುವುದು. ಅದರ ನಂತರ ಚುನಾವಣೆ ಹತ್ತಿರ ಬರುತ್ತದೆ. ಆಗ ಬದಲಾವಣೆ ಮಾಡುವುದು ಕಷ್ಟ. ಆದ್ದರಿಂದ ಕುಂಭಮೇಳ ಮತ್ತು ಚುನಾವಣೆ ಮುಗಿದ ನಂತರ ಇಲ್ಲಿನ ಜನರಿಗೆ ಹೇಗೆ ಅನುಕೂಲವಾಗುತ್ತೋ ಹಾಗೆ ಮಾಡೋಣ ಎಂದು ತಿಳಿಸಿದ್ದಾರೆ.

ತುಂಬಾ ಜನರ ಸಹಕಾರವಿದೆ..

ಇನ್ನು ನಾನು ರೈಲ್ವೇ ಹಿರಿಯ ಅಧಿಕಾರಿ ಅಪರ್ಣ ಗಗರ್್ ಅವರಲ್ಲಿ ಕೂಡ ಈ ಬಗ್ಗೆ ಮಾತನಾಡಿದ್ದೇನೆ. ಅವರು ಯಶವಂತಪುರ ನೈರುತ್ಯ ರೈಲ್ವೆಗೆ ಬರುವುದರಿಂದ ಸಮಯ ಮತ್ತು ಇತರ ವ್ಯತ್ಯಾಸ ಮಾಡಬೇಕಾದರೆ ಅವರೊಂದಿಗೂ ಚರ್ಚಿಸಬೇಕಾಗುತ್ತದೆ. ಯಶವಂತಪುರದಲ್ಲಿ ಫ್ಲಾಟ್ ಫಾರಂ ಮತ್ತು ನಿಲ್ಲಿಸುವ ವ್ಯವಸ್ಥೆ ಬಗ್ಗೆ ನೈರುತ್ಯ ರೈಲ್ವೆ ವಿಭಾಗದವರು ಕೂಡ ಪರಿಶೀಲಿಸುತ್ತಾರೆ. ನೀವು ನಮಗೆ ಲಿಖಿತ ಮನವಿ ಮಾಡಿಕೊಡಿ. ನಾವು ಆ ವಿಭಾಗದ ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿ ಈ ಬಗ್ಗೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಮುಗಿದ ನಂತರ ನಾವು ರೈಲ್ವೇ ಹೋರಾಟಗಾರರು ಮತ್ತೊಮ್ಮೆ ಈ ಬಗ್ಗೆ ಮಾನ್ಯ ಸಂಸದರ ನೇತೃತ್ವದಲ್ಲಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ.

https://www.facebook.com/TulunaduNews/videos/258676348373882/

ಇನ್ನು ಇವತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನಲ್ಲಿ ರೈಲ್ವೆ ಹೋರಾಟಗಾರರ ಸಹಕಾರವನ್ನು ನೆನಪಿಸಿ ನನ್ನ ಹೆಸರನ್ನು ಎತ್ತಿ ಪ್ರಶಂಸಿಸಿದ್ದಾರೆ. ಅದು ಅವರ ದೊಡ್ಡಗುಣ. ತುಂಬಾ ಜನಪ್ರತಿನಿಧಿಗಳು ಹೋರಾಟಗಾರರನ್ನು ಬಳಸಿ ಕೆಲಸ ಆದ ನಂತರ ಬಿಸಾಡುತ್ತಾರೆ. ನಳಿನ್ ಆ ನಿಟ್ಟಿನಲ್ಲಿ ವಿಭಿನ್ನವಾಗಿ ನಿಂತಿದ್ದಾರೆ. ಅವರು ಹೊಗಳಿದ್ದಾರೆ ಎಂದ ಕಾರಣಕ್ಕೆ ನನ್ನಿಂದಲೇ ಎಲ್ಲ ಆಯಿತು ಎನ್ನುವ ಭ್ರಮೆ ನನಗಿಲ್ಲ. ನನ್ನೊಂದಿಗೆ ಪಶ್ಚಿಮ ರೈಲ್ವೆ ಯಾತ್ರಿಕರ ಅಭಿವೃದ್ಧಿ ಸಂಘದ ಪ್ರತಿಯೊಬ್ಬರ ಪಾತ್ರ ಇದೆ. ಎಲ್ಲವನ್ನು ಒಬ್ಬ ಹನುಮಂತ ಕಾಮತ್ ಮಾಡಲಾಗುವುದಿಲ್ಲ. ನನಗೆ ಸಲಹೆ, ಸಹಕಾರ ನಮ್ಮ ಅನೇಕ ಸನ್ಮಿತ್ರರು ಮಾಡಿದ್ದಾರೆ. ಅದರಂತೆ ನಾನು ಎಲ್ಲರ ಅಭಿಪ್ರಾಯ ಪಡೆದು ಮತ್ತು ನನ್ನ ಅನುಭವ, ಬುದ್ಧಿಮತ್ತೆ ಬಳಸಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಕಾಲಕಾಲಕ್ಕೆ ರೈಲ್ವೆಯಲ್ಲಿ ಮಂಗಳೂರಿಗೆ ಏನೆಲ್ಲ ಕೆಲಸ ಆಗಬೇಕು ಎನ್ನುವ ಬಗ್ಗೆ ಜಾಗೃತಿ ಮೂಡಿಸುತ್ತಾ ಇದ್ದೆ. ಅವರು ಆ ಬಗ್ಗೆ ಕೆಲಸ ಮಾಡಿದ್ದಾರೆ, ಅದರಿಂದ ಮಂಗಳೂರಿಗೆ ಅನುಕೂಲವಾಗಿರಬಹುದು. ನಳಿನ್ ಮುಂದೆಯೂ ಹೀಗೆ ಎಲ್ಲರ ಸಲಹೆ ಪಡೆಯುತ್ತಾ ನಡೆಯಲಿ, ನಮಗೆ ಅದು ಬಿಟ್ಟು ಅವರಿಂದ ಬೇರೆ ಏನೂ ನಿರೀಕ್ಷೆ ಇಲ್ಲ!

https://www.facebook.com/TulunaduNews/videos/358243528110705/

0
Shares
  • Share On Facebook
  • Tweet It




Trending Now
ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
Hanumantha Kamath July 9, 2025
ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
Hanumantha Kamath July 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
  • Popular Posts

    • 1
      ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • 2
      ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • 3
      ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • 4
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 5
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!

  • Privacy Policy
  • Contact
© Tulunadu Infomedia.

Press enter/return to begin your search