• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಟ್ರಾಯಿಂಗ್ ವಾಹನಗಳು ಮಂಗಳೂರಿಗೆ ಕಾಲಿಟ್ಟಿವೆ, ದಾರಿ ಬಿಡಿ!!

Hanumantha Kamath Posted On March 9, 2019


  • Share On Facebook
  • Tweet It

ಮಂಗಳೂರಿಗೆ ಕೊನೆಗೂ ಟ್ರೋಯಿಂಗ್ ಗಾಡಿ ಬಂದಿದೆ. ಯಾವತ್ತೋ ಬರಬೇಕಿತ್ತು. ಈಗಲಾದರೂ ಬಂದಿದೆ. ಬೆಂಗಳೂರು, ಮೈಸೂರು ನಂತರ ಅತೀ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಅತೀ ಹೆಚ್ಚು. ಅದಕ್ಕೆ ಮುಖ್ಯ ಕಾರಣ ಅಡ್ಡಾದಿಡ್ಡಿ ಪಾರ್ಕಿಂಗ್. ಯಾವ ಮಳಿಗೆಗೂ ಸರಿಯಾದ ಪಾರ್ಕಿಂಗ್ ಇಲ್ಲ. ಪಾರ್ಕಿಂಗ್ ಇರುವ ಜಾಗದಲ್ಲಿ ಅನಧಿಕೃತ ಅಂಗಡಿಗಳನ್ನು ಕಟ್ಟಿ ಬಾಡಿಗೆಗೆ ಕೊಟ್ಟು ಅದರ ಮಾಲೀಕರೇ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಒಳಗೆ ಹೋಗುತ್ತಾರೆ. ಅಲ್ಲಿ ಬರುವ ಗಿರಾಕಿಗಳು ಕೂಡ ವಾಹನವನ್ನು ಅಲ್ಲಲ್ಲಿ ನಿಲ್ಲಿಸಿ ಐದು ನಿಮಿಷದಲ್ಲಿ ಬಂದು ಬಿಡುತ್ತೇವೆ ಎಂದು ಅಂದುಕೊಂಡು ಒಳಗೆ ಹೋಗುತ್ತಾರೆ. ಒಂದು ಅಂಗಡಿಗೆ ಬಂದ ನಾಲ್ಕು ಜನರಲ್ಲಿ ಮೂರು ಜನರು ಕಾರಿನಲ್ಲಿ ಬಂದಿದ್ದರೆ ಆ ರಸ್ತೆ ಅರ್ಧ ಬ್ಲಾಕ್ ಆಗುತ್ತದೆ. ಇದನ್ನೆಲ್ಲಾ ನಿಲ್ಲಿಸಬೇಕು ಎಂದರೆ ಏನು ಮಾಡಬೇಕು ಎಂದು ಯೋಚಿಸಿ, ಅನಧಿಕೃತ ಅಂಗಡಿಗಳನ್ನು ಕೆಡವಲು ನಮಗೆ ಧೈರ್ಯ ಇಲ್ಲ, ಅದರ ಬದಲಿಗೆ ಒಂದು ಟ್ರೋಯಿಂಗ್ ವೆಹಿಕಲ್ ತಂದು ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ವಾಹನಗಳನ್ನೇ ತೆಗೆದುಕೊಂಡು ಹೋಗೋಣ ಎಂದು ರಾಜ್ಯ ಸರಕಾರ ಅಂದುಕೊಂಡಿತ್ತು. ಅನಧಿಕೃತ ಕಟ್ಟಡಗಳನ್ನು ಕೆಡವುದಕ್ಕಿಂತ ಇದೇ ಸುಲಭ ಎಂದುಕೊಂಡ ರಾಜ್ಯ ಸರಕಾರದ ಅಧಿಕಾರಿಗಳು ದೊಡ್ಡ ಮನಸ್ಸು ಮಾಡಿ ಒಂದು ಟ್ರಾಯಿಂಗ್ ವೆಹಿಕಲ್ ಅನ್ನು ಕಳುಹಿಸಿಕೊಟ್ಟಿದ್ದಾರೆ.

ದಂಡಂ ದಶಗುಣಂ….

ಆದರೆ ಇದು ಮಂಗಳೂರಿಗೆ ಸಾಕಾಗುವುದಿಲ್ಲ. ಈಗ ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜಿಲ್ಲಾಧಿಕಾರಿಯವರ ಆಡಳಿತ. ಅವರು ಮನಸ್ಸು ಮಾಡಿದರೆ ಪಾಲಿಕೆಯ ರಸ್ತೆ ಸುರಕ್ಷತಾ ನಿಧಿಯ ಮೂಲಕ ಇನ್ನೊಂದೆರಡು ವಾಹನಗಳನ್ನು ಖರೀದಿಸಬಹುದು. ಒಂದೊಂದು ವಾಹನಕ್ಕೆ ಅಂದಾಜು ಮೂವತ್ತು ಲಕ್ಷ ರೂಪಾಯಿಗಳು ಆಗುತ್ತವೆ. ಹಿಂದೆ ಮೇಯರ್ ಆಡಳಿತ ಇದ್ದಾಗ ಇದೇ ಫಂಡಿನಲ್ಲಿ ಬಂದ ಹಣದಲ್ಲಿ ನಮ್ಮ ಪಾಲಿಕೆ ಜೀಭ್ರಾ ಕ್ರಾಸ್, ನೋಪಾರ್ಕಿಂಗ್ ಬೋರ್ಡ್ ಎಂದು ಹಣವನ್ನು ವೇಸ್ಟ್ ಮಾಡಿದ್ದು ಬಿಟ್ಟರೆ ಒಂದು ಶಾಶ್ವತ ಉಳಿಯುವ ಕೆಲಸ ಮಾಡಿಲ್ಲ. ಅದರ ಬದಲಿಗೆ ಟ್ರಾಯಿಂಗ್ ವೆಹಿಕಲ್ ಗೆ ಹಣ ಹೂಡಿದ್ರೆ ಚೆನ್ನಾಗಿತ್ತು. ಏಕೆಂದರೆ ನಾವು ಪುಸ್ತಕಗಳಲ್ಲಿ ಮಾತ್ರ ಬುದ್ಧಿವಂತ ಜನ. ನಾವು ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಹೋಗುವುದು ನೋಡಿದರೆ ಬುದ್ಧಿ’ವಂತೆ’ ಎಂದು ಹೇಳುವವರು ಇದ್ದಾರೆ. ಅದಕ್ಕಾಗಿ ನಮ್ಮ ಊರಿಗೆ ಇಂತಹ ಮೂರ್ನಾಕು ಟ್ರಾಯಿಂಗ್ ವೆಹಿಕಲ್ ಬೇಕು. ಏಕೆಂದರೆ ದಂಡಂ ದಶಗುಣಂ ಎನ್ನುವುದನ್ನು ಜಾರಿಗೆ ತಂದರೆ ಮಾತ್ರ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಹೋಗುವವರಿಗೆ ಒಂದಿಷ್ಟು ಬುದ್ಧಿ ಬರುತ್ತದೆ.

ಹಣ, ಶ್ರಮ, ಸಮಯ ಉಳಿಯಬೇಕಾ…

ಸದ್ಯ ಟ್ರಾಯಿಂಗ್ ವಾಹನಗಳು ಎತ್ತಾಕಿಕೊಂಡು ಹೋಗುವ ವೆಹಿಕಲ್ ಗಳಿಗೆ ದ್ವಿಚಕ್ರ ವಾಹನಗಳಿಗೆ 750 ರೂಪಾಯಿ, ಹಾಗೆ ನಾಲ್ಕು ಚಕ್ರಗಳ ವಾಹನಗಳಿಗೆ 1350 ರೂಪಾಯಿ ದಂಡ ವಿಧಿಸಲಾಗುತ್ತದೆ. ನಿಮ್ಮ ವಾಹನಗಳನ್ನು ಎತ್ತಿಕೊಂಡು ಟ್ರಾಯಿಂಗ್ ವಾಹನಗಳು ಹೋಗಿ ಅದನ್ನು ಸದ್ಯ ಪುರಭವನದ ಆವರಣದಲ್ಲಿ ಇಡುತ್ತವೆ. ನೀವು ಬಳಿಕ ಯಾವ ಪೊಲೀಸ್ ಠಾಣೆಯವರು ಅದನ್ನು ಟ್ರಾಯ್ ಮಾಡಿದ್ದು ಎಂದು ನೋಡಿ ಆ ಠಾಣೆಗೆ ಹೋಗಿ ನಂತರ ಅಲ್ಲಿ ದಂಡ ಕಟ್ಟಿ ಆ ಬಳಿಕ ಪುರಭವನದ ಆವರಣದಲ್ಲಿ ಇಟ್ಟಿರುವ ವಾಹನಗಳ ಮಧ್ಯೆ ನಿಮ್ಮ ವಾಹನವನ್ನು ಹುಡುಕಿ ನಂತರ ಅದನ್ನು ತೆಗೆದು ಮನೆಗೆ ಹೋಗಬೇಕಾಗುತ್ತದೆ. ಇದರಿಂದ ನಿಮ್ಮ ಸಮಯ, ಹಣ ಮತ್ತು ಶ್ರಮ ವ್ಯರ್ಥ. ಇದರ ಬದಲಿಗೆ ಚೆಂದ ಮಾಡಿ ವಾಹನವನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿಯೇ ನಿಲ್ಲಿಸಿ ಹೋಗುವುದು ಒಳ್ಳೆಯದು. ತಪ್ಪಿದ್ರಾ. ಟ್ರೋಯಿಂಗ್ ಗತಿ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search