• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಟ್ರಾಯಿಂಗ್ ವಾಹನಗಳು ಮಂಗಳೂರಿಗೆ ಕಾಲಿಟ್ಟಿವೆ, ದಾರಿ ಬಿಡಿ!!

Hanumantha Kamath Posted On March 9, 2019
0


0
Shares
  • Share On Facebook
  • Tweet It

ಮಂಗಳೂರಿಗೆ ಕೊನೆಗೂ ಟ್ರೋಯಿಂಗ್ ಗಾಡಿ ಬಂದಿದೆ. ಯಾವತ್ತೋ ಬರಬೇಕಿತ್ತು. ಈಗಲಾದರೂ ಬಂದಿದೆ. ಬೆಂಗಳೂರು, ಮೈಸೂರು ನಂತರ ಅತೀ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಅತೀ ಹೆಚ್ಚು. ಅದಕ್ಕೆ ಮುಖ್ಯ ಕಾರಣ ಅಡ್ಡಾದಿಡ್ಡಿ ಪಾರ್ಕಿಂಗ್. ಯಾವ ಮಳಿಗೆಗೂ ಸರಿಯಾದ ಪಾರ್ಕಿಂಗ್ ಇಲ್ಲ. ಪಾರ್ಕಿಂಗ್ ಇರುವ ಜಾಗದಲ್ಲಿ ಅನಧಿಕೃತ ಅಂಗಡಿಗಳನ್ನು ಕಟ್ಟಿ ಬಾಡಿಗೆಗೆ ಕೊಟ್ಟು ಅದರ ಮಾಲೀಕರೇ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಒಳಗೆ ಹೋಗುತ್ತಾರೆ. ಅಲ್ಲಿ ಬರುವ ಗಿರಾಕಿಗಳು ಕೂಡ ವಾಹನವನ್ನು ಅಲ್ಲಲ್ಲಿ ನಿಲ್ಲಿಸಿ ಐದು ನಿಮಿಷದಲ್ಲಿ ಬಂದು ಬಿಡುತ್ತೇವೆ ಎಂದು ಅಂದುಕೊಂಡು ಒಳಗೆ ಹೋಗುತ್ತಾರೆ. ಒಂದು ಅಂಗಡಿಗೆ ಬಂದ ನಾಲ್ಕು ಜನರಲ್ಲಿ ಮೂರು ಜನರು ಕಾರಿನಲ್ಲಿ ಬಂದಿದ್ದರೆ ಆ ರಸ್ತೆ ಅರ್ಧ ಬ್ಲಾಕ್ ಆಗುತ್ತದೆ. ಇದನ್ನೆಲ್ಲಾ ನಿಲ್ಲಿಸಬೇಕು ಎಂದರೆ ಏನು ಮಾಡಬೇಕು ಎಂದು ಯೋಚಿಸಿ, ಅನಧಿಕೃತ ಅಂಗಡಿಗಳನ್ನು ಕೆಡವಲು ನಮಗೆ ಧೈರ್ಯ ಇಲ್ಲ, ಅದರ ಬದಲಿಗೆ ಒಂದು ಟ್ರೋಯಿಂಗ್ ವೆಹಿಕಲ್ ತಂದು ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ವಾಹನಗಳನ್ನೇ ತೆಗೆದುಕೊಂಡು ಹೋಗೋಣ ಎಂದು ರಾಜ್ಯ ಸರಕಾರ ಅಂದುಕೊಂಡಿತ್ತು. ಅನಧಿಕೃತ ಕಟ್ಟಡಗಳನ್ನು ಕೆಡವುದಕ್ಕಿಂತ ಇದೇ ಸುಲಭ ಎಂದುಕೊಂಡ ರಾಜ್ಯ ಸರಕಾರದ ಅಧಿಕಾರಿಗಳು ದೊಡ್ಡ ಮನಸ್ಸು ಮಾಡಿ ಒಂದು ಟ್ರಾಯಿಂಗ್ ವೆಹಿಕಲ್ ಅನ್ನು ಕಳುಹಿಸಿಕೊಟ್ಟಿದ್ದಾರೆ.

ದಂಡಂ ದಶಗುಣಂ….

ಆದರೆ ಇದು ಮಂಗಳೂರಿಗೆ ಸಾಕಾಗುವುದಿಲ್ಲ. ಈಗ ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜಿಲ್ಲಾಧಿಕಾರಿಯವರ ಆಡಳಿತ. ಅವರು ಮನಸ್ಸು ಮಾಡಿದರೆ ಪಾಲಿಕೆಯ ರಸ್ತೆ ಸುರಕ್ಷತಾ ನಿಧಿಯ ಮೂಲಕ ಇನ್ನೊಂದೆರಡು ವಾಹನಗಳನ್ನು ಖರೀದಿಸಬಹುದು. ಒಂದೊಂದು ವಾಹನಕ್ಕೆ ಅಂದಾಜು ಮೂವತ್ತು ಲಕ್ಷ ರೂಪಾಯಿಗಳು ಆಗುತ್ತವೆ. ಹಿಂದೆ ಮೇಯರ್ ಆಡಳಿತ ಇದ್ದಾಗ ಇದೇ ಫಂಡಿನಲ್ಲಿ ಬಂದ ಹಣದಲ್ಲಿ ನಮ್ಮ ಪಾಲಿಕೆ ಜೀಭ್ರಾ ಕ್ರಾಸ್, ನೋಪಾರ್ಕಿಂಗ್ ಬೋರ್ಡ್ ಎಂದು ಹಣವನ್ನು ವೇಸ್ಟ್ ಮಾಡಿದ್ದು ಬಿಟ್ಟರೆ ಒಂದು ಶಾಶ್ವತ ಉಳಿಯುವ ಕೆಲಸ ಮಾಡಿಲ್ಲ. ಅದರ ಬದಲಿಗೆ ಟ್ರಾಯಿಂಗ್ ವೆಹಿಕಲ್ ಗೆ ಹಣ ಹೂಡಿದ್ರೆ ಚೆನ್ನಾಗಿತ್ತು. ಏಕೆಂದರೆ ನಾವು ಪುಸ್ತಕಗಳಲ್ಲಿ ಮಾತ್ರ ಬುದ್ಧಿವಂತ ಜನ. ನಾವು ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಹೋಗುವುದು ನೋಡಿದರೆ ಬುದ್ಧಿ’ವಂತೆ’ ಎಂದು ಹೇಳುವವರು ಇದ್ದಾರೆ. ಅದಕ್ಕಾಗಿ ನಮ್ಮ ಊರಿಗೆ ಇಂತಹ ಮೂರ್ನಾಕು ಟ್ರಾಯಿಂಗ್ ವೆಹಿಕಲ್ ಬೇಕು. ಏಕೆಂದರೆ ದಂಡಂ ದಶಗುಣಂ ಎನ್ನುವುದನ್ನು ಜಾರಿಗೆ ತಂದರೆ ಮಾತ್ರ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಹೋಗುವವರಿಗೆ ಒಂದಿಷ್ಟು ಬುದ್ಧಿ ಬರುತ್ತದೆ.

ಹಣ, ಶ್ರಮ, ಸಮಯ ಉಳಿಯಬೇಕಾ…

ಸದ್ಯ ಟ್ರಾಯಿಂಗ್ ವಾಹನಗಳು ಎತ್ತಾಕಿಕೊಂಡು ಹೋಗುವ ವೆಹಿಕಲ್ ಗಳಿಗೆ ದ್ವಿಚಕ್ರ ವಾಹನಗಳಿಗೆ 750 ರೂಪಾಯಿ, ಹಾಗೆ ನಾಲ್ಕು ಚಕ್ರಗಳ ವಾಹನಗಳಿಗೆ 1350 ರೂಪಾಯಿ ದಂಡ ವಿಧಿಸಲಾಗುತ್ತದೆ. ನಿಮ್ಮ ವಾಹನಗಳನ್ನು ಎತ್ತಿಕೊಂಡು ಟ್ರಾಯಿಂಗ್ ವಾಹನಗಳು ಹೋಗಿ ಅದನ್ನು ಸದ್ಯ ಪುರಭವನದ ಆವರಣದಲ್ಲಿ ಇಡುತ್ತವೆ. ನೀವು ಬಳಿಕ ಯಾವ ಪೊಲೀಸ್ ಠಾಣೆಯವರು ಅದನ್ನು ಟ್ರಾಯ್ ಮಾಡಿದ್ದು ಎಂದು ನೋಡಿ ಆ ಠಾಣೆಗೆ ಹೋಗಿ ನಂತರ ಅಲ್ಲಿ ದಂಡ ಕಟ್ಟಿ ಆ ಬಳಿಕ ಪುರಭವನದ ಆವರಣದಲ್ಲಿ ಇಟ್ಟಿರುವ ವಾಹನಗಳ ಮಧ್ಯೆ ನಿಮ್ಮ ವಾಹನವನ್ನು ಹುಡುಕಿ ನಂತರ ಅದನ್ನು ತೆಗೆದು ಮನೆಗೆ ಹೋಗಬೇಕಾಗುತ್ತದೆ. ಇದರಿಂದ ನಿಮ್ಮ ಸಮಯ, ಹಣ ಮತ್ತು ಶ್ರಮ ವ್ಯರ್ಥ. ಇದರ ಬದಲಿಗೆ ಚೆಂದ ಮಾಡಿ ವಾಹನವನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿಯೇ ನಿಲ್ಲಿಸಿ ಹೋಗುವುದು ಒಳ್ಳೆಯದು. ತಪ್ಪಿದ್ರಾ. ಟ್ರೋಯಿಂಗ್ ಗತಿ!!

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Hanumantha Kamath September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Hanumantha Kamath September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search