• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಫ್ಲಾಕ್ಸ್, ಬ್ಯಾನರ್ ಹಾಕಬಹುದು, ನೇತ್ರಾವತಿಯ ಮೇಲೆ ಪ್ರೀತಿ ತರಿಸುವುದು ಹೇಗೆ?

Hanumantha Kamath Posted On May 17, 2019
0


0
Shares
  • Share On Facebook
  • Tweet It

ಎರಡು ದಿನಗಳಿಂದ ಅಲ್ಲಲ್ಲಿ ಕೆಲವು ಬ್ಯಾನರ್ ಗಳನ್ನು ನೀವು ಗಮನಿಸುತ್ತಿರಬಹುದು. ಒಂದು ಬ್ಯಾನರ್ ನಲ್ಲಿ ಬಿಜೆಪಿ ಮುಖಂಡ ಸದಾನಂದ ಗೌಡ ಮತ್ತು ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ಅವರ ಫೋಟೋ ಹಾಗೂ ಇನ್ನೊಂದು ಬ್ಯಾನರ್ ನಲ್ಲಿ ಜಿಲ್ಲೆಯ ಎಂಟು ಜನ ಶಾಸಕರು (ಅದರಲ್ಲಿ ಒಬ್ಬರು ಸಚಿವರು) ಫೋಟೋ ಹಾಕಲಾಗಿದೆ. ಈ ಬಗ್ಗೆ ಹೋರಾಟ ಆಗಬೇಕಾಗಿರುವುದು ನಿಜ. ಆದರೆ ಹೋರಾಟ ಮಾಡಿದರೆ ಎಷ್ಟು ಜನ ಸೇರುತ್ತಾರೆ ಎನ್ನುವುದು ಕೂಡ ನಿಜ. ಈಗ ಒಂದು ವೇಳೆ ನಮ್ಮ ಏಳು ಜನ ಶಾಸಕರು ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಸದನದಲ್ಲಿ ಪ್ರತಿಭಟನೆ ಮಾಡಿದರು ಎಂದೇ ಇಟ್ಟುಕೊಳ್ಳೋಣ. ಅಲ್ಲಿ ಏನಾಗುತ್ತೆ, ಸ್ಪೀಕರ್ ರಮೇಶ್ ಅವರು ಏನು ಹೇಳಬಹುದು ಎಂದರೆ ನೀವು ಇಲ್ಲಿ ಪ್ರತಿಭಟನೆ ಮಾಡುತ್ತೀರಿ. ಆದರೆ ನಿಮ್ಮ ಜನ ಅಲ್ಲಿ ಮಾತನಾಡುವುದಿಲ್ಲವಲ್ಲ ಎಂದು ಹೇಳಿದರೆ ನಮ್ಮ ಶಾಸಕರು ಏನು ತಾನೆ ಹೇಳಿಯಾರು? ನಮ್ಮ ಜಿಲ್ಲೆಯಲ್ಲಿ ನೇತ್ರಾವತಿ ತಿರುವಿನ ಬಗ್ಗೆ ಎಷ್ಟು ಪ್ರತಿಭಟನೆ ಆಗಿದೆ. ಅದರಲ್ಲಿ ಎಷ್ಟು ಜನ ಭಾಗವಹಿಸಿದ್ದಾರೆ. ಹಾಗಾದರೆ ಭಾಗವಹಿಸಿದ ಕೆಲವರಿಗೆ ಮಾತ್ರ ನೇತ್ರಾವತಿಯ ನೀರು ಬೇಕಿತ್ತಾ? ಉಳಿದ ಯಾರಿಗೂ ಏನೂ ಬಿದ್ದು ಹೋಗಿಲ್ವಾ? ಈಗ ಹೋರಾಟ ಮಾಡಲು ಸಾಧ್ಯವಿಲ್ಲ, ಏನಿದ್ದರೂ ಚುನಾವಣಾ ನೀತಿ ಸಂಹಿತೆ ಮುಗಿದ ನಂತರವೇ, ಆವಾಗ ಪ್ರತಿಭಟನೆ ಮಾಡಬಹುದು. ಆದರೆ ನಮ್ಮಲ್ಲಿ ಎಷ್ಟು ಜನ ಈ ಹೋರಾಟದಲ್ಲಿ ಧುಮುಕಬಹುದು. ಬಿಜೆಪಿಯ ಶಾಸಕರು ಬೃಹತ್ ಸಭೆ ಕರೆದರು ಎಂದೇ ಇಟ್ಟುಕೊಳ್ಳೋಣ, ಎಷ್ಟು ಜನ ಸೇರುತ್ತಾರೆ. ಒಂದು ಹೋರಾಟ ಯಶಸ್ವಿಯಾಗಿ ಅದು ಸರಕಾರದ ಕಣ್ಣು ತೆರೆಯಬೇಕಾದರೆ ಅದು ಸರಕಾರವನ್ನೇ ಅಲುಗಾಡಿಸುವಂತಿರಬೇಕು. ಆದರೆ ನಮ್ಮಲ್ಲಿ ಹಾಗೆ ಆಗುವುದಿಲ್ಲ. ಮೋದಿ ನೆಹರೂ ಮೈದಾನದಲ್ಲಿ ಬರುತ್ತಾರೆ ಎನ್ನುವಾಗ ಸೇರಿದ್ದ ಜನರಷ್ಟೇ ನೇತ್ರಾವತಿಯ ತಿರುವು ವಿರುದ್ಧ ಬನ್ನಿ ಎಂದರೆ ಸೇರುತ್ತಾರಾ? ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇರುವುದರಿಂದ ಕಾಂಗ್ರೆಸ್, ಜೆಡಿಎಸ್ ನವರು ಕೈಜೋಡಿಸಲಿಕ್ಕಿಲ್ಲ. ಹಾಗಾದರೆ ಅವರಿಗೆ ನೀರು ಬೇಡ್ವಾ? ಡಿಸಿ ಆಫೀಸ್ ಹೊರಗೆ ನಡೆಯುವ ಹೋರಾಟಗಳಲ್ಲಿ ಎಷ್ಟು ಜನ ಸೇರುತ್ತಾರೆ ಎನ್ನುವುದು ನನಗೆ ಗೊತ್ತಿದೆ. ನೀರಿನ ಹೋರಾಟ ಎಂದ ಕೂಡಲೇ ಅದು ದಿನೇಶ್ ಹೊಳ್ಳ, ಶಶಿಧರ್ ಶೆಟ್ಟಿ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿಯವರಿಗೆ ಮಾತ್ರ ಎನ್ನುವಂತಹ ಪರಿಸ್ಥಿತಿ ಇದೆ. ಯಾಕೆ ಮಂಗಳೂರಿನ ಪ್ರಖ್ಯಾತ ವೈದ್ಯರು ನೀರು ಕುಡಿಯಲ್ವಾ? ಇಂಜಿನಿಯರ್ಸ್ ನೀರು ಕುಡಿಯಲ್ವಾ? ಪ್ರಮುಖ ದೇವಸ್ಥಾನ, ಚರ್ಚ್, ಮಸೀದಿಗಳ ಮುಖ್ಯಸ್ಥರು ನೀರು ಕುಡಿಯಲ್ವಾ? ಅವರೆಲ್ಲ ಜನರನ್ನು ಒಗ್ಗೂಡಿಸಿ ಹೋರಾಟಕ್ಕೆ ಯಾಕೆ ಬರಬಾರದು? ಯಾಕೆ ಬರಲ್ಲ ಎಂದರೆ ಯಾರೂ ಕೂಡ ಕೆಟ್ಟವರಾಗಲು ಇಷ್ಟ ಪಡುವುದಿಲ್ಲ.

ಯಾಕೆಂದರೆ ನಗರಗಳಲ್ಲಿ ವಾಸಿಸುವವರಿಗೆ ತಮಗೆ ನೀರಿನ ಸಮಸ್ಯೆಯಾದರೆ ಅದನ್ನು ಸರಿಪಡಿಸಬೇಕಾದವರು ಸ್ಥಳೀಯ ಕಾರ್ಪೋರೇಟರ್ ಎನ್ನುವ ಅನಿಸಿಕೆ. ನೀರಿನ ತೊಂದರೆಯಾದರೆ ನೇತ್ರಾವತಿಯ ಬಗ್ಗೆ ಯಾರೂ ಇಲ್ಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾರ್ಪೋರೇಟರ್ ಕೂಡ ನೀರು ಇಲ್ಲ ಎಂದು ದೊಡ್ಡ ದೊಡ್ಡ ವಸತಿ ಸಮುಚ್ಚಯಗಳಿಂದ ಫೋನ್ ಬಂದ ಕೂಡಲೇ ಧಾವಿಸಿ ಟ್ಯಾಂಕರ್ ತರಿಸಿ ಫ್ಲಾಟ್ ಗಳ ಟಾಂಕಿ ತುಂಬಿಸುತ್ತಾರೆ. ಆದರೆ ತೊಂದರೆಯಲ್ಲಿ ಸಿಲುಕಿ ಬೀಳುವವರು ವಠಾರಗಳಲ್ಲಿ ಗುಂಪು ಗುಂಪುಗಳಾಗಿ ವಾಸಿಸುವವರು. ಅವರಿಗೆ ಒಮ್ಮೆ ಟ್ಯಾಂಕರ್ ಬಂದರೆ ಹೆಚ್ಚೆಂದರೆ ಆ ದಿನದ್ದು ಮಾತ್ರ ತುಂಬಿಸಬಹುದು. ನಾಳೆ ಮತ್ತೆ ಆಕಾಶ ನೋಡಬೇಕು. ಸದ್ಯ ಎರಡು ದಿನಗಳಿಗೊಮ್ಮೆ ನೀರು ಬರುತ್ತಿದೆ. ವಾರದೊಳಗೆ ಮಳೆ ಬರದಿದ್ದರೆ ಅದು ಮೂರು ದಿನಗಳಿಗೊಮ್ಮೆ ಆಗಬಹುದು. ಎರಡು ವಾರ ಮಳೆ ಬರದಿದ್ದರೆ ನಾಲ್ಕು ದಿನಗಳಿಗೊಮ್ಮೆ ನೀರು ಎಂಬ ಸೂಚನೆ ಬರಬಹುದು. ಆದರೆ ವಾರಕ್ಕೊಮ್ಮೆ ಎಂಬ ಪರಿಸ್ಥಿತಿ ಬಂದರೂ ಯಾರೂ ಮನೆ ಬಿಟ್ಟು ಬೀದಿಗೆ ಇಳಿಯಲ್ಲ, ಯಾಕೆಂದರೆ ನೇತ್ರಾವತಿ ಯಾರಿಗೂ ಸಂಬಂಧಿಯಲ್ಲ!

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Hanumantha Kamath December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Hanumantha Kamath December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • 2
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 3
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 4
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 5
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ

  • Privacy Policy
  • Contact
© Tulunadu Infomedia.

Press enter/return to begin your search