• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಅಟಲ್ ಜಿ ಮಂಗಳೂರಿಗೆ ಕೊಟ್ಟ ಗಿಫ್ಟ್  ತೆಗೆದುಕೊಂಡು ಬರುವ ಜವಾಬ್ದಾರಿ ಇದೆ!!

Hanumantha Kamath Posted On June 5, 2019
0


0
Shares
  • Share On Facebook
  • Tweet It

ನಿನ್ನೆ ಬರೆದದ್ದನ್ನು ಇವತ್ತು ಮುಂದುವರೆಸುತ್ತಿದ್ದೇನೆ. ಸದಾನಂದ ಗೌಡರ ಬಗ್ಗೆ ಇವತ್ತು ಬರೆಯಲ್ಲ. ಅವರು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾಗಿ, ಪುತ್ತೂರಿನ ಶಾಸಕರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ, ಬೆಂಗಳೂರು ಉತ್ತರದಿಂದ ಎರಡನೇ ಬಾರಿ ಸಂಸದರಾಗಿ ಮಾಡಿದ್ದು ಸಾಧನೆ ನೇತ್ರಾವತಿಯನ್ನು ತಿರುಗಿಸಲು ತಮ್ಮ ತಲೆ ಉಪಯೋಗಿಸಿದ್ದು ಮಾತ್ರವೇ ವಿನ: ಬೇರೆ ಏನೂ ಇಲ್ಲ.
ಆದರೆ ಅದೃಷ್ಟ ಚೆನ್ನಾಗಿದೆ. ಎರಡನೇ ಬಾರಿ ಕೇಂದ್ರದಲ್ಲಿ ಸಚಿವರಾಗಿ ರಸಗೊಬ್ಬರ ತಿನ್ನುವ ಅವಕಾಶ ಸಿಕ್ಕಿದೆ. ಆದರೆ ರೈಲ್ವೆ ಖಾತೆಯಂತಹ ಮಹತ್ವದ ಖಾತೆ ಸಿಕ್ಕಿದರೂ ತಮ್ಮ ಜಿಲ್ಲೆಗೆ ಏನೂ ಮಾಡಲಾಗದ ಸದಾನಂದ ಗೌಡರು ಒಂದು ಸಹಿ ಹಾಕಿದರೆ ನಮ್ಮ ಮಂಗಳೂರು ನೈರುತ್ಯ ರೈಲ್ವೆ ವಿಭಾಗಕ್ಕೆ ಸೇರುತ್ತಿತ್ತು. ಅದರಿಂದ ಮಂಗಳೂರಿನಿಂದ ಬೆಂಗಳೂರು ನಡುವೆ ಸಂಚರಿಸುವ ರೈಲುಗಳನ್ನು ನಮ್ಮ ಜಿಲ್ಲೆಯ ನಾಗರಿಕರ ಅನುಕೂಲತೆಯ ಸಮಯಕ್ಕೆ ತಕ್ಕಂತೆ ಹೊಂದಿಸಬಹುದಾಗಿತ್ತು. ಅದರಿಂದ ಕಡಿಮೆ ದರದಲ್ಲಿ ಜನಸಾಮಾನ್ಯರು ಬೆಂಗಳೂರಿಗೆ ಹೋಗುವ ಅವಕಾಶ ಸಿಗುತ್ತಿತ್ತು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಮಗೆ ಬೇಕಾದ ಹಾಗೆ ನಮ್ಮವರ ಅವಶ್ಯಕತೆಗೆ ತಕ್ಕಂತೆ ಸಮಯ ಹೊಂದಿಸಬಹುದಿತ್ತು. ಅದೇ ರೀತಿಯ ವ್ಯವಸ್ಥೆಯನ್ನು ಮಂಗಳೂರಿನಿಂದ ಮುಂಬೈ ನಡುವೆ ಚಲಿಸುವ ರೈಲ್ವೆ  ಯಾತ್ರಿಕರಿಗೂ ಮಾಡಬಹುದಿತ್ತು. ಅಷ್ಟೇ ಅಲ್ಲ, ಗೋವಾ ಟು ಮಂಗಳೂರು ನಡುವೆ ಇರುವ ಪ್ರಯಾಣಿಕರನ್ನು ದೃಷ್ಟಿಯಲ್ಲಿಟ್ಟು  ಕೂಡ ಸಮಯವನ್ನು ಹೊಂದಿಸಬಹುದಿತ್ತು. ಆದರೆ ಇದ್ಯಾವುದೂ ಮಾಡಲು ನಮಗೆ ಅವಕಾಶ ಕೊಡದ ಮಹಾನುಭವ ಡಿವಿಯವರ ಬಗ್ಗೆ ಇವತ್ತು ಬರೆಯುವುದಿಲ್ಲ.
ನಾನು ಹೇಳುವುದು ಡಿವಿ ನಮ್ಮ ಜಿಲ್ಲೆಗೆ ಪ್ರಯೋಜನಕ್ಕಿಲ್ಲದ ಉಪ್ಪಿನಕಾಯಿ ಎಂದೇ ಇಟ್ಟುಕೊಳ್ಳೋಣ. ಹಾಗಂತ ಅಟಲ್ ಜಿ ನಮ್ಮ ಜಿಲ್ಲೆಗೆ ಕೊಟ್ಟ ಗಿಫ್ಟ್  ದೆಹಲಿಯಿಂದ ಮಂಗಳೂರಿಗೆ ತರಲೇಬೇಕಾಗಿದೆ. ತರುವುದು ಯಾರು, ಇನ್ಯಾರು, ದಕ್ಷಿಣ ಕನ್ನಡ ಮತ್ತು ಉಡುಪಿ ಸಂಸದರು. ನಳಿನ್ ಹಾಗೂ ಶೋಭಾ ಮೇಲೆ ಈಗ ಅಟಲ್ ಕೊಟ್ಟ ವರ ಒಂದು ರೀತಿಯಲ್ಲಿ ಭಗಿರಥ ಪ್ರಯತ್ನ ಆದರೂ ಚಿಂತೆ ಇಲ್ಲ. ತಂದೆ ತರುತ್ತೇವೆ ಎಂದು ಇವರಿಬ್ಬರೂ ಪ್ರತಿಜ್ಞೆ ಮಾಡಲಿ. ಬೇಕಾದರೆ ವಿವಿಧ ರೈಲ್ವೆ ಹೋರಾಟಗಾರರನ್ನು ಸೇರಿಸಿ ಅಭಿಪ್ರಾಯ ಪಡೆಯಲಿ. ಒಬ್ಬಿಬ್ಬರನ್ನು ಕರೆದು ನಂತರ ಅದರ ಕ್ರೆಡಿಟ್ ಅವರಿಗೆ ಹೋಯಿತು ಎಂದು ಉಳಿದವರು ಟೆನ್ಷನ್ ಮಾಡಿಕೊಳ್ಳುವುದು ಬೇಡಾ. ಅದಕ್ಕೆ ನಳಿನ್ ಎಲ್ಲಾ ರೈಲ್ವೆ ಹೋರಾಟಗಾರರನ್ನು ಕರೆಯಲಿ. ಸರ್ಕೂಟ್ ಹೌಸ್ ನಲ್ಲಿ ಕುಳಿತು ಮಾತನಾಡೋಣ. ನಂತರ ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗುವ ಕೆಲಸವಾಗಲಿ. ಅದಕ್ಕೆ ಈ ಭಾಗದ ಹನ್ನೆರಡು ಬಿಜೆಪಿ ಶಾಸಕರಲ್ಲಿ ಒಬ್ಬೊಬ್ಬರು ಒಂದೊಂದು ಹೋರಾಟಗಾರರ ಖರ್ಚು ಬರಿಸಲಿ. ಯಾಕೆಂದರೆ ನಾಳೆ ಮಂಗಳೂರು ನೈರುತ್ಯ ವಿಭಾಗಕ್ಕೆ ಸೇರಿ ಅದರಿಂದ ಮಂಗಳೂರು, ಉಡುಪಿಯವರಿಗೆ  ಅನುಕೂಲವಾದರೆ ಫ್ಲೆಕ್ಸ್, ಪತ್ರಿಕಾ ಜಾಹೀರಾತು ನೀಡಿ ಪ್ರಚಾರ ಸಿಗುವುದು ಶಾಸಕರಿಗೆ, ಸಂಸದರಿಗೆ.  ಬೇಕಾದರೆ ಇಲ್ಲಿಂದ ಹೋಗುವ ನಿಯೋಗವನ್ನು ರೈಲ್ವೆ ಸಚಿವರೊಂದಿಗೆ ಮಾತನಾಡಿಸುವ ಕೆಲಸವನ್ನು ಡಿ ವಿ ಸದಾನಂದ ಗೌಡರೇ ವಹಿಸಲಿ. ” ಗೋಯಲ್ ಜಿ, ಯೇ ಕಾಮ್ ಮುಝೇ ಕರ್ನಾತಾ. ಮೇ ಸೋಗಯಾ ಥಾ. ಇಸಿಲಿಯೇ ಆಪ್ ಕೆ ಪಾಸ್ ಆಯಾ ಹೂಂ” ಎಂದು ಹೇಳಿ ಕೆಲಸ ಮಾಡಿಸಿಕೊಡಲಿ. ಈ. ಮೂಲಕ ಇಷ್ಟು ವರ್ಷ ಮಾಡಿದ ಅನ್ಯಾಯವನ್ನು ಪರಿಹರಿಸಲಿ. ನಾವು ಕರಾವಳಿಯವರು ಒಳ್ಳೆಯವರು. ಮಾತು ತಪ್ಪಿದ ಮೊಯಿಲಿಗೆ ಮಾಡಿದ ಹಾಗೆ ಮಾಡಲ್ಲ. ಉಳಿದ್ದದ್ದು ನಿಮಗೂ, ನಳಿನ್ ಅವರಿಗೂ, ಶೋಭಾ ಅವರಿಗೂ ಬಿಟ್ಟಿದ್ದು!!!
0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Hanumantha Kamath December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Hanumantha Kamath December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • 2
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!

  • Privacy Policy
  • Contact
© Tulunadu Infomedia.

Press enter/return to begin your search