• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವಿನಯ್ ಗುರೂಜಿಗೆ ಬುದ್ಧಿ ಕೊಡು ಭಗವಂತ!!

Hanumantha Kamath Posted On June 9, 2019
0


0
Shares
  • Share On Facebook
  • Tweet It

ಹಿಂದೂ ಧರ್ಮದ ವಿರುದ್ಧ ಮಾತನಾಡಿದರೆ ಸುಲಭದಲ್ಲಿ ಪ್ರಚಾರಕ್ಕೆ ಬರಬಹುದು ಎನ್ನುವುದನ್ನು ಇತ್ತೀಚಿನ ವರ್ಷಗಳಲ್ಲಿ ತೋರಿಸಿಕೊಟ್ಟದ್ದು ಭಗವಾನ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಅಂತವರು ಹಿಂದೂ ವಿರೋಧಿ ಪಲ್ಲಂಕಿಗೆ ಹೆಗಲುಕೊಟ್ಟರು. ಅನಂತರ ಒಂದಿಷ್ಟು ಕೇಸರಿ ತೊಟ್ಟವರು ಕೂಡ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿ ಖರ್ಚಿಲ್ಲದೆ ಲೈಮ್ ಲೈಟ್ ನಲ್ಲಿ ಕಾಣಿಸಿಕೊಂಡರು. ಅದಕ್ಕೆ ಈಗ ತಾಜಾ ಉದಾಹರಣೆ ವಿನಯ ಗುರೂಜಿ.

ಮೂಲತ: ಶಿವಮೊಗ್ಗದವರಾದ ವಿನಯ್ ಒಂದು ಹೇಳಿಕೆ ಕೊಡುವ ಮೂಲಕ ತಾವೂ ಕೂಡ ಮಾಧ್ಯಮಗಳಲ್ಲಿ ಮಿಂಚುವ ಕೆಲಸ ಮಾಡಿದ್ದಾರೆ. ದೈವಾರಾಧನೆ, ನಾಗಾರಾಧನೆ, ಬೂತಕೋಲ ಎನ್ನುವಂತಹ ಕೆಲವು ಸಂಪ್ರದಾಯಗಳು ನಮ್ಮ ಹಿಂದೂ ಧರ್ಮದಲ್ಲಿವೆ. ಅದನ್ನು ನಾವು ಅನಾದಿಕಾಲದಿಂದಲೂ ಅನುಸರಿಸಿಕೊಂಡು ಬಂದಿದ್ದೇವೆ. ನಾಗನ ಬಗ್ಗೆ ತುಳುನಾಡಿನವರು ಎಷ್ಟು ಶ್ರದ್ಧೆ ಹೊಂದಿದ್ದಾರೆ ಎಂದರೆ ನಾಗಾನಿಗೆ ದೇವರ ಸ್ಥಾನ ಸಿಕ್ಕಿದೆ. ಇನ್ನೂ ದೈವಗಳ ಬಗ್ಗೆ ತುಳುಮಣ್ಣಿನಲ್ಲಿ ಪೌರಾಣಿಕ ಕಥೆಗಳಿವೆ. ಬೂತಕೋಲದ ಬಗ್ಗೆ ನಾವು ಯಾವತ್ತೂ ನಿಂದನಾತ್ಮಕವಾಗಿ ಮಾತನಾಡುವುದಿಲ್ಲ. ಆದರೆ ವಿನಯ್ ಗುರೂಜಿ ಇದನ್ನೆಲ್ಲ ಅಪ್ಪಟ ವೇಸ್ಟ್ ಎನ್ನುತ್ತಿದ್ದಾರೆ. ಬಹುಶ: ಇದರ ಪರವಾಗಿ ಮಾತನಾಡಿದರೆ ತಮ್ಮನ್ನು ಯಾರೂ ಗುರುತಿಸುವುದು ಇಲ್ಲ ಎಂದು ಅಂದುಕೊಂಡಿರುವುದರಿಂದ ಅದರ ವಿರುದ್ಧ ಮಾತನಾಡಿ ಎಡಪಂಥಿಯರ ಪ್ರೀತಿಗೆ ಪಾತ್ರರಾಗೋಣ ಎಂದು ಅಂದುಕೊಂಡಿದ್ದಾರೆ. ಒಬ್ಬ ಹಿಂದೂ ಆಗಿದ್ದು ಹಿಂದೂ ಧರ್ಮದ ವಿರುದ್ಧ ಮಾತನಾಡುವುದಾದರೆ ವಿನಯ್ ಅವರಿಗೆ ಗುರೂಜಿ ಎನ್ನುವ ಹಿಂದೂ ಬಿರುದು ಯಾಕೆ? ಅವರು ಯಾವುದಾದರೂ ಬೇರೆ ಧರ್ಮದ ಗುರುವಿನ ಸ್ಥಾನ ಅಲಂಕರಿಸಬಹುದಲ್ಲ. ಅವರಿಗೆ ಹಿಂದೂ ಧರ್ಮದ ಪೀಠ ಯಾಕೆ? ಆ ಪೀಠದ ಮೇಲೆ ಕುಳಿತು ಅದರ ತುದಿಯಲ್ಲಿ ಟಿಪ್ಪು ಸುಲ್ತಾನನ ಮುಖವನ್ನು ಇಟ್ಟುಕೊಳ್ಳುವ ಇವರ ಉದ್ದೇಶ ಏನು? ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲಾ ಒಂದೇ ಎನ್ನುವ ವಿನಯ ಗುರೂಜಿ(!) ಜಾತ್ಯಾತೀತ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಇರುವ ವಿನಯ್ ಅವರಿಗೆ ಆಯಾ ಧರ್ಮದಲ್ಲಿ ಇರುವ ಆಚರಣೆಗಳು ಆಯಾ ಧರ್ಮದ, ನಂಬಿಕೆಯ ತಳಹದಿಯ ಮೇಲೆ ಆ ಧರ್ಮದ ನಾಗರಿಕರು ಒಪ್ಪಿಕೊಂಡು ಬಂದದ್ದು ಎನ್ನುವುದು ಯಾಕೆ ಅರ್ಥವಾಗುವುದಿಲ್ಲ.
ದೈವಾರಾಧನೆ ಮಾಡುವುದರಿಂದ ಮಾಡಿದ ಕುಟುಂಬಗಳಿಗೆ ಒಳ್ಳೆಯದಾಗಿದೆ ಎನ್ನುವುದಾದರೆ ಅವರು ಮಾಡಲಿ ಬಿಡಿ, ನಾಗಾರಾಧನೆ ಮಾಡುವುದರಿಂದ ನಮಗೆ ಸಮಾಧಾನ ಸಿಕ್ಕಿದೆ ಎಂದು ಅನಿಸಿದರೆ ಅದನ್ನು ವಿರೋಧಿಸುವುದಕ್ಕೆ ವಿನಯ್ ಯಾರು? ಬೂತಕೋಲ ಮಾಡಿರುವುದರಿಂದ ವಿನಯ್ ಎನು ಕಳೆದುಕೊಂಡಿದ್ದಾರೆ? ಯಾರಾದರೂ ಹಿಂದೂಗಳು ಸರದಿಸಾಲಿನಲ್ಲಿ ಬಂದು ವಿನಯ್ ಅವರಿಂದ ಬೂತಕೋಲ, ದೈವಾರಾಧನೆ, ನಾಗಾರಾಧನೆಗೆ ಹಣ ತೆಗೆದುಕೊಂಡು ಹೋಗಿದ್ದಾರೆಯಾ? ಅಥವಾ ಇವರಿಂದ ವಂತಿಗೆ ತೆಗೆದುಕೊಂಡು ಮಾಡಿದ್ದಾರೆಯಾ?

ಮುಸ್ಲಿಮರು ಎಲ್ಲಿ ಬೇಕಾದರೂ ಒಂದು ಚಿಕ್ಕ ಚಾಪೆ ಸಿಕ್ಕಿದರೂ ಅದರ ಮೇಲೆ ಕುಳಿತು ಪ್ರಾರ್ಥನೆ ಮಾಡುತ್ತಾರೆ. ಕ್ರೈಸ್ತರಿಗೆ ಒಂದು ಶಿಲುಬೆಯ ಎದುರು ಪ್ರಾರ್ಥನೆ ಸಲ್ಲಿಸಿದರೆ ಮನಸ್ಸಿಗೆ ಸಮಾಧಾನ ಸಿಗುತ್ತದೆ. ಆದರೆ ಹಿಂದೂಗಳಿಗೆ ಮುಕ್ಕೋಟಿ ದೇವರುಗಳಿವೆ. ನಮ್ಮದೇ ರೀತಿಯಲ್ಲಿ ಆರಾಧನಾ ಪದ್ಧತಿಗಳಿವೆ. ಹೋಮ, ಹವನ, ಪೂಜಾ ವಿಧಾನಗಳಿವೆ. ಅದನ್ನು ವೇಸ್ಟ್ ಎಂದು ಹೇಳಿದರೆ ಅರ್ಥ ಇದೆಯಾ?

ಒಂದು ವೇಳೆ ದೊಡ್ಡ ರೀತಿಯಲ್ಲಿ ಸಂಪ್ರದಾಯ ಅನುಷ್ಟಾನ ಮಾಡಲಾಗದಿದ್ದರೆ ಅವರವರ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಡುವವರಿದ್ದಾರೆ. ಹಾಗಂತ ಅವರ ಮನದಲ್ಲಿ ಹುಳಿ ಹಿಂಡುವ ಕೆಲಸ ಯಾರೂ ಮಾಡಬಾರದು. ಜಾಕೀರ್ ನೈಕ್ ಎನ್ನುವ ವ್ಯಕ್ತಿ ಮಾಡಿರುವ ಕಂದರವನ್ನು ಮುಚ್ಚುವಲ್ಲಿಯೇ ನಮಗೆ ಸಾಕಾಗಿದೆ. ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುವವರಿಗೆ ತಮಗೆ ಬಹುಸಂಖ್ಯಾತರು ವಿರೋಧ ಮಾಡಿಯೇ ಮಾಡುತ್ತಾರೆ ಎನ್ನುವುದು ಗೊತ್ತಿದೆ. ಅದರಿಂದ ತಾವು ಪ್ರವರ್ಧಮಾನಕ್ಕೆ ಬರಬಹುದು ಎಂದು ಅಂದುಕೊಂಡಿದ್ದಾರೆ. ಯಾವಾಗ ಹಿಂದೂಗಳು ತಕ್ಕ ಉತ್ತರ ಕೊಡುತ್ತಾರೋ ಆಗ ಬುದ್ಧಿ ಬರುತ್ತದೆ. ಬರದಿದ್ದರೆ ದೇವರೇ ಬುದ್ಧಿ ಕೊಡುತ್ತಾನೆ!!!

0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
Hanumantha Kamath January 10, 2026
ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
Hanumantha Kamath January 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
  • Popular Posts

    • 1
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • 2
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 3
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 4
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?

  • Privacy Policy
  • Contact
© Tulunadu Infomedia.

Press enter/return to begin your search