• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸಿಸಿಟಿವಿ ಹಾಕಿಸಿ ಗೋಕಳ್ಳರನ್ನು ಹಿಡಿಯಿರಿ- ಪೊಲೀಸರ ಸಲಹೆ!!

Hanumantha Kamath Posted On June 20, 2019
0


0
Shares
  • Share On Facebook
  • Tweet It

ಕೃಷ್ಣಾಪುರದಲ್ಲಿ ಕಳೆದ ಕೆಲವು ಸಮಯದಿಂದ ಹತ್ತಕ್ಕೂ ಹೆಚ್ಚು ಗೋವುಗಳನ್ನು ಕಳೆದುಕೊಂಡಿರುವ ಮನೆಗೆ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರು ಬಂದು ಮನೆಯ ಗೇಟಿಗೆ ಬೀಗ ಹಾಕಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಎಂದು ಸಲಹೆ ನೀಡಿ ಹೋಗಿದ್ದಾರೆ. ನನ್ನ ಪ್ರಕಾರ ಇದು ಅನ್ ಪ್ರಾಕ್ಟಿಕಲ್ ಸಂಗತಿ. ಸಿಸಿಟಿವಿ ಹಾಕಿಸುವಷ್ಟು ಶ್ರೀಮಂತರು ಈಗ ದನಗಳನ್ನು ಸಾಕುತ್ತಿಲ್ಲ. ಇನ್ನು ಪಾಪದವರು ಸಿಸಿಟಿವಿ ಹಾಕಿಸಿ ದನಗಳನ್ನು ಸಾಕುವಷ್ಟು ಆರ್ಥಿಕ ಲಾಭವನ್ನು ಹೈನುಗಾರಿಕೆಯಿಂದ ಮಾಡುತ್ತಿಲ್ಲ. ಇನ್ನು ಸಿಸಿಟಿವಿ ಹಾಕಿದರೆ ಅದನ್ನೇ ಒಡೆದು ದನವನ್ನು ಕೊಂಡೊಯ್ಯುವಂತಹ ಸಮಾಜಘಾತುಕರು ನಮ್ಮ ಮಧ್ಯೆ ಇರುವಾಗ ಅವರು ಸಿಸಿಟಿವಿ ಕ್ಯಾಮೆರಾಗಳಿಗೆ ಬಗ್ಗುತ್ತಾರೆ ಎಂದು ನಾನು ಅಂದುಕೊಂಡಿಲ್ಲ. ಮೂಡಬಿದ್ರೆಯ ಬಸದಿಯಲ್ಲಿ ಸಿಸಿಟಿವಿ ಇದೆ ಎಂದು ಗೊತ್ತಿದ್ದ ಬಳಿಕವೂ ಅಲ್ಲಿ ದೇವರ ವಿಗ್ರಹಗಳನ್ನು ಕದ್ದೊಯ್ದಿರುವಾಗ ಸಿಸಿಟಿವಿ ಕ್ಯಾಮೆರಾಗಳು ನಮ್ಮ ಮೂಕದನಗಳನ್ನು ರಕ್ಷಿಸುತ್ತವೆ ಎನ್ನುವುದು ಶುದ್ಧ ಭ್ರಮೆ. ಅದಕ್ಕಿಂತ ಹೆಚ್ಚಾಗಿ ಪೊಲೀಸರಿಗೆ ತಮ್ಮ ಏರಿಯಾದಲ್ಲಿ ದನಕಳ್ಳರು ಯಾರು? ಎಲ್ಲಿಂದ ಕದಿಯುತ್ತಾರೆ, ಯಾವಾಗ ಕದಿಯುತ್ತಾರೆ? ಯಾವ ವಾಹನದಲ್ಲಿ ಬಂದು ಕದಿಯುತ್ತಾರೆ? ಕದ್ದು ಯಾವ ದಾರಿಯಲ್ಲಿ ಹೋಗುತ್ತಾರೆ? ಆ ಕದ್ದ ಗೋವುಗಳು ಎಲ್ಲಿ ಅಕ್ರಮ ಕಸಾಯಿ ಖಾನೆಗಳಲ್ಲಿ ಮಾಂಸವಾಗುತ್ತವೆ ಎನ್ನುವ ಪಿನ್ ಟು ಪಿನ್ ಮಾಹಿತಿ ಇರುತ್ತದೆ. ಅಷ್ಟಿದ್ದ ಬಳಿಕವೂ ಗೋಕಳ್ಳರು ಸಿಗುವುದಿಲ್ಲ ಎಂದಾದರೆ ಸಿಸಿಟಿವಿ ಕ್ಯಾಮೆರಾಗಳು ತಾನೇ ಏನು ಮಾಡಿಯಾವು?
ಒಂದು ವೇಳೆ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿ, ಅದರ ನಂತರವೂ ಕಳವು ಆದರೆ ಆಗ ಆ ಫೂಟೇಜ್ ಗಳನ್ನು ನೋಡಿಯಾದರೂ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಾರೆ ಎನ್ನುವ ಗ್ಯಾರಂಟಿ ಪೊಲೀಸ್ ಕಮೀಷನರ್ ಅವರು ಆ ಮನೆಯವರಿಗೆ ನೀಡುತ್ತಾರಾ? ಬಹುಶ: ಸಂದೀಪ್ ಪಾಟೀಲ್ ಅವರಿಗೆ ಸುರತ್ಕಲ್ ಪರಿಸರದ ಗೋಕಳ್ಳರ ಸಾಮರ್ತ್ಯ ಗೊತ್ತಿಲ್ಲ ಎಂದು ಕಾಣಿಸುತ್ತದೆ. ಅದಕ್ಕೆ ಅವರು ಸಿಸಿಟಿವಿ ಐಡಿಯಾ ಕೊಟ್ಟಿರಬೇಕು. ಇಲ್ಲಿಯ ಗೋಕಳ್ಳರು ತಲವಾರು ತೋರಿಸಿಯೇ ದನಗಳನ್ನು ಕದ್ದುಕೊಂಡು ಹೋಗುತ್ತಾರೆ, ಹಾಗಿರುವಾಗ ಜುಜುಬಿ ಸಿಸಿಟಿವಿ ಅವರ ಏನು ತಾನೆ ಕಿತ್ತುಕೊಳ್ಳಲು ಸಾಧ್ಯ? ಇನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದರೆ ಆಯಿತು, ಹುಡುಕುತ್ತೇವೆ, ಸಿಕ್ಕಿದರೆ ಫೋನ್ ಮಾಡುತ್ತೇವೆ ಎಂದು ಪೊಲೀಸರು ಹೇಳುತ್ತಾರೆ. ಇವರು ಹುಡುಕಲು ಹೋಗುವಾಗಲೇ ಆ ಅಮಾಯಕ ದನ ಯಾರದ್ದೋ ಹೊಟ್ಟೆಯಲ್ಲಿ ಕರಗಿ ವಿಷವಾಗಿರುತ್ತದೆ. ಆದ್ದರಿಂದ ಹಟ್ಟಿಯಲ್ಲಿ ಕಟ್ಟಿದ ದನ ಕಾಣೆಯಾದರೆ ಅದು ಮತ್ತೆ ಬರುತ್ತದೆ ಎನ್ನುವ ಭ್ರಮೆ ಯಾರಿಗೂ ಇರುವುದು ಬೇಡಾ. ಹಾಗಾದರೆ ಸಿಸಿಟಿವಿ ಐಡಿಯಾ ಫುಲ್ ವೇಸ್ಟ್ ಎಂದು ನಾನು ಹೇಳುವುದಿಲ್ಲ. ಬೇಕಾದರೆ ಪಾಲಿಕೆ ಕಡೆಯಿಂದ ಆಯಕಟ್ಟಿನ ಜಾಗದಲ್ಲಿ ಅಳವಡಿಸಲಿ. ಆ ಮೂಲಕ ದನ ಕದ್ದು ಹೋಗುವ ವಾಹನಗಳ ಗುರುತು ಪತ್ತೆ ಹಚ್ಚಲು ಅದು ಸುಲಭವಾಗುತ್ತದೆ.
ಇನ್ನು ಈ ವಿಷಯದಲ್ಲಿ ಕಾನೂನುಗಳು ಗಟ್ಟಿಯಾಗಬೇಕು. ಗಂಧದ ಕಳ್ಳಸಾಗಾಣಿಕೆಯ ಸಂದರ್ಭದಲ್ಲಿ ಪೊಲೀಸರು ಹಿಡಿದರೆ ಯಾವ ರೀತಿಯಲ್ಲಿ ವಾಹನಗಳು ಸಿಝ್ ಆಗಿ ಗೆದ್ದಲು ಹಿಡಿಯುವ ತನಕ ಪೊಲೀಸ್ ಠಾಣೆಯ ಆವರಣದಲ್ಲಿ ಕೊಳೆಯುತ್ತವೆಯೋ ಹಾಗೇ ದನಕಳ್ಳತನದ ಪ್ರಕರಣಗಳಲ್ಲಿ ವಾಹನಗಳು ಸೀಝ್ ಆದರೆ ಅವು ಸುಲಭವಾಗಿ ರಸ್ತೆಗೆ ಇಳಿಯುವಂತೆ ಆಗಬಾರದು. ಅದು ಆದರೆ ಆಗ ಒಂದಷ್ಟರ ಮಟ್ಟಿಗೆ ಹೆದರಿಕೆ ಗೋಕಳ್ಳರಿಗೆ ಉಂಟಾಗುತ್ತದೆ.
ಇನ್ನು ಇತ್ತೀಚೆಗೆ ಒಂದು ಒಳ್ಳೆಯ ಬೆಳವಣಿಗೆ ನಡೆದಿದೆ. ಕೆಲವು ಮುಸ್ಲಿಂ ಯುವಕರು ಸೇರಿ ಸಂಘಟನೆಯ ಮೂಲಕ ಅಕ್ರಮ ದನಸಾಗಾಟ, ಗೋಕಳ್ಳತನದ ವಿರುದ್ಧ ತಾವು ಕೂಡ ಪೊಲೀಸ್ ಇಲಾಖೆಗೆ, ಹಿಂದೂ ಸಂಘಟನೆಯೊಂದಿಗೆ ಕೈಜೋಡಿಸುವುದಾಗಿ ಹೇಳಿದ್ದಾರೆ. ಒಳ್ಳೆಯ ಬೆಳವಣಿಗೆ. ಇನ್ನು 1964 ರ ಗೋಹತ್ಯಾ ನಿಷೇಧ ಕಾನೂನು ನಿಜಕ್ಕೂ ಕಠಿಣವಾಗಬೇಕು. ಅದಕ್ಕೆ ಹಿಂದೂತ್ವದ ಆಧಾರದ ಮೇಲೆ ಗೆದ್ದಿರುವ ಕರಾವಳಿಯ ಹದಿನೈದು ಶಾಸಕರು ಒಟ್ಟಾಗಬೇಕು. ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಬೇಕು. ಒಂದಿಷ್ಟು ದಿನ ಇರದಿದ್ದ ಈ ಗೋಕಳ್ಳತನ ಈಗ ಮತ್ತೆ ಶುರುವಾಗಿದೆ. ಕಳ್ಳರು ಬಾಲ ಬಿಚ್ಚಿದ್ದಾರೆ. ಅಪರೂಪಕ್ಕೆ ನಾಲ್ಕು ಜನರನ್ನು ಬಂಧಿಸಿರುವ ಫೋಟೋ ಮಾಧ್ಯಮಗಳಲ್ಲಿ ಬರುತ್ತದೆ. ಮತ್ತೆ ಯಥಾಪ್ರಕಾರ ಅವರು ರಿಲೀಸ್ ಆಗುತ್ತಾರೆ. ಅವರೇ ಕಳ್ಳತನಕ್ಕೆ ಇಳಿಯುತ್ತಾರೆ. ಇತ್ತ ಪೊಲೀಸರು ಸಿಸಿಟಿವಿ ಹಾಕಿಸಿ ಎನ್ನುತ್ತಾರೆ. ಎಲ್ಲಿಯ ತನಕ ಪಿಕ್ ಪಾಕೆಟ್ ಕಳ್ಳನಿಗೆ ಇರುವ ಶಿಕ್ಷೆ ಗೋಕಳ್ಳರಿಗೆ ಸಾಕಾಗುವುದಿಲ್ಲ ಎಂದು ಸರಕಾರಕ್ಕೆ ಅರ್ಥವಾಗುವುದಿಲ್ಲವೋ ಅಲ್ಲಿಯವರೆಗೆ ಇದು ನಡೆಯುತ್ತಲೇ ಇರುತ್ತದೆ!!
0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Hanumantha Kamath February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Hanumantha Kamath January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • 2
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

  • Privacy Policy
  • Contact
© Tulunadu Infomedia.

Press enter/return to begin your search