• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ದೆಹಲಿಗೆ ಹೋಗಿ ಮನವಿಗೆ ಕೊಟ್ಟಾಯ್ತು, ಭರವಸೆ ಸಿಕ್ಕಿದೆ!!

Hanumantha Kamath Posted On July 18, 2019
0


0
Shares
  • Share On Facebook
  • Tweet It

ದೆಹಲಿಗೆ ಹೋಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ರೈಲ್ವೆ ರಾಜ್ಯ ಸಹಾಯಕ ಸಚಿವ ಸುರೇಶ್ ಅಂಗಡಿಯವರನ್ನು ಭೇಟಿಯಾದೆ. ಸುರೇಶ್ ಅಂಗಡಿಯವರು ನಮ್ಮದೇ ರಾಜ್ಯದವರು. ಅವರಿಗೆ ಮನವರಿಕೆ ಮಾಡುವುದು ಸುಲಭ. ಅಪಾಯಿಟ್ ಮೆಂಟ್ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಬೇರೆ ಕೆಲಸದ ಒತ್ತಡದಲ್ಲಿ ಗೋಯಲ್ ಇದ್ದ ಕಾರಣ ಅವರ ಮನವಿಯಂತೆ ಸುರೇಶ್ ಅಂಗಡಿಯವರನ್ನು ಭೇಟಿಯಾದೆವು. ನಾವು ಹೇಳಿದ ವಿಷಯವನ್ನು ಸಾವಧಾನವಾಗಿ ಕೇಳಿದ ಸುರೇಶ್ ಅಂಗಡಿಯವರು ಈ ಕೆಲಸವನ್ನು ಶೀಘ್ರದಲ್ಲಿ ಮಾಡಿಕೊಡುವ ಭರವಸೆ ನೀಡಿದರು. ಅಲ್ಲಿಗೆ ಇಲ್ಲಿ ತನಕ ಮಂಗಳೂರಿನ ಮೇಲೆ ಆಗುತ್ತಿದ್ದ ಮಲತಾಯಿ ಧೋರಣೆ ನಿಂತು ಹೋಗಲಿದೆ ಎನ್ನುವ ವಿಶ್ವಾಸ ಒಬ್ಬ ರೈಲ್ವೆ ಹೋರಾಟಗಾರನಾಗಿ ನನ್ನಲ್ಲಿ ಮೂಡಿದೆ. ಅಷ್ಟಕ್ಕೂ ನಾವು ಕೊಟ್ಟ ಮನವಿ ಏನು? ಅದನ್ನು ವಿವರಿಸುತ್ತೇನೆ

ಈ ವಿಷಯವನ್ನು ನಾನು ಈ ಹಿಂದೆ ಒಮ್ಮೆ ಬರೆದಿದ್ದೆ. ಡಿ ವಿ ಸದಾನಂದ ಗೌಡ ರೈಲ್ವೆ ಸಚಿವರಾಗಿದ್ದಾಗಲೇ ಮನಸ್ಸು ಮಾಡಿದ್ದರೆ ಆಗಲೇ ನಮ್ಮ ಮೇಲೆ ಆಗುತ್ತಿರುವ ಅನ್ಯಾಯ ಕೊನೆಗಾಣುತ್ತಿತ್ತು. ಆದರೆ ಹಾಗೆ ಆಗಲಿಲ್ಲ. ಈಗಲಾದರೂ ಆಗಬಹುದು ಎನ್ನುವ ಧೈರ್ಯ ಬಂದಿರುವುದು ಸುರೇಶ್ ಅಂಗಡಿಯವರು ತಮಗೆ ಈ ವಿಷಯ ಈಗಾಗಲೇ ಅರಿವಿಗೆ ಬಂದಿದೆ. ಸರಿ ಮಾಡಿ ಕೊಡುತ್ತೇವೆ ಎಂದು ಹೇಳಿದ ಕಾರಣ. ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನಿತೀಶ್ ಕುಮಾರ್ ರೈಲ್ವೆ ಸಚಿವರಾಗಿದ್ದರು. ಆಗ ರೈಲ್ವೆ ಇಲಾಖೆಯಿಂದ ರೈಲ್ವೆ ಬೋರ್ಡಿಗೆ ಒಂದು ಲಿಖಿತ ಮನವಿ ಹೋಗುತ್ತದೆ. ಅದೇನೆಂದರೆ ನೇತ್ರಾವತಿ ಸೇತುವೆ ಅಂದರೆ ಉಳ್ಳಾಲ ಸೇತುವೆಯಿಂದ ತೋಕೂರುವರೆಗಿನ ಪ್ರದೇಶವನ್ನು ಫಾಲ್ಗಾಟ್ ನಿಂದ ಅಂದರೆ ಸೌತರ್ನ್ ರೈಲ್ವೆಯಿಂದ ನೈರುತ್ಯ ರೈಲ್ವೆಗೆ ಶೀಫ್ಟ್ ಮಾಡಬೇಕು. ಯಾಕೆಂದರೆ ಈ ಪ್ರದೇಶ ರೈಲ್ವೆ ಇಲಾಖೆಯ ಪಾಲಿಗೆ ಅಪ್ಪಟ ಚಿನ್ನದ ಮೊಟ್ಟೆ ಇಡುವ ಕೋಳಿ. ತಿಂಗಳಿಗೆ ಅಂದಾಜು ನಾಲ್ಕು ಕೋಟಿ ರೂಪಾಯಿ ಲಾಭ ತರುವ ಪ್ರದೇಶವಿದು. ಎನ್ ಎಂಪಿಟಿ, ಎಂಸಿಎಫ್, ಎಂಆರ್ ಪಿಎಲ್ ಸಹಿತ ಅನೇಕ ಕೈಗಾರಿಕೆಗಳಿಂದ ಉತ್ತಮ ಫಸಲು ಇರುವ ಸ್ಥಳ ಫಾಲ್ಗಾಟ್ ಡಿವಿಜನ್ ಗೆ ಹೋಗಿರುವುದರಿಂದ ಅವರು ಚೆನ್ನಾಗಿದ್ದಾರೆ. ಆದರೆ ಲಾಭ ಇಲ್ಲಿಂದ ಬಂದರೂ ನಮ್ಮ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯ ವಿಚಾರ ಬಂದಾಗ ಅಪ್ಪಟ ಕಣ್ಣಿಗೆ ಬಟ್ಟೆ ಕಟ್ಟಿದ್ದಂತೆ ದಕ್ಷಿಣ ರೈಲ್ವೆ ವರ್ತಿಸುತ್ತದೆ. ಅಷ್ಟೇ ಅಲ್ಲ, ದೇಶದ ಪ್ರಮುಖ ನಗರಗಳಿಗೆ ಮಂಗಳೂರು ಸೆಂಟ್ರಲ್ ನಿಂದ ರೈಲು ಓಡಿಸಿ ಎಂದರೆ ಇಲ್ಲಿ ಫ್ಲಾಟ್ ಫಾರಂ ಕೊರತೆ ಇದೆ ಎನ್ನುತ್ತಾರೆ. ನಂತರ ಕೆಲವು ದಿನ ಮಂಗಳೂರು ಜಂಕ್ಷನ್ ನಿಂದ ಓಡಿಸಿ ನಂತರ ಅಲ್ಲಿ ಪ್ರಯಾಣಿಕರಿಲ್ಲದೆ ಆ ರೈಲು ನಷ್ಟದಲ್ಲಿದೆ ಎಂದು ಸಬೂಬು ಹೇಳಿ ಆ ರೈಲನ್ನು ಕೇರಳದ ಯಾವುದಾದರೂ ನಗರಕ್ಕೆ ಇವರು ವಿಸ್ತರಿಸುತ್ತಾರೆ. ಅಲ್ಲಿಗೆ ಕೇರಳದ ಲಾಬಿ ನಮ್ಮ ರೈಲು ನಿಲ್ದಾಣಗಳಲ್ಲಿ ತಮಗೆ ಬೇಕಾದ ಹಾಗೆ ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತಾಗುತ್ತದೆ. ಅಷ್ಟಕ್ಕೂ ರೈಲ್ವೆ ಬೋರ್ಡಿನಲ್ಲಿ ಇರುವ ಅರವತ್ತು ಶೇಕಡಾ ಅಧಿಕಾರಿಗಳು ಕೇರಳದವರು. ಅವರು ತಮ್ಮ ರಾಜ್ಯಕ್ಕೆ ಯಾವ ಲಾಬಿ ಮಾಡಲು ಕೂಡ ತಯಾರು. 2004 ಮತ್ತು 2014 ರಲ್ಲಿ ಮಂಗಳೂರನ್ನು ದಕ್ಷಿಣ ರೈಲ್ವೆಯಿಂದ ನೈರುತ್ಯ ರೈಲ್ವೆಗೆ ಸೇರಿಸುವ ಪ್ರಕ್ರಿಯೆ ಮುಗಿಯಬೇಕಿದ್ದರೂ ಆ ಕೇರಳದ ಲಾಬಿಯಿಂದ ನಡೆಯಲಿಲ್ಲ. ಆದ್ದರಿಂದ ಈಗಲಾದರೂ ಈ ಪ್ರಕ್ರಿಯೆ ಮುಗಿಸಿ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದೇನೆ. ಆಗುತ್ತೆ ಎನ್ನುವ ವಿಶ್ವಾಸವಿದೆ. ಉಳಿದ ವಿಷಯವನ್ನು ನಾಳೆ ಬರೆಯುತ್ತೇನೆ.

0
Shares
  • Share On Facebook
  • Tweet It




Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Hanumantha Kamath January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Hanumantha Kamath January 28, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search