• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ದೆಹಲಿಗೆ ಹೋಗಿ ಮನವಿಗೆ ಕೊಟ್ಟಾಯ್ತು, ಭರವಸೆ ಸಿಕ್ಕಿದೆ!!

Hanumantha Kamath Posted On July 18, 2019
0


0
Shares
  • Share On Facebook
  • Tweet It

ದೆಹಲಿಗೆ ಹೋಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ರೈಲ್ವೆ ರಾಜ್ಯ ಸಹಾಯಕ ಸಚಿವ ಸುರೇಶ್ ಅಂಗಡಿಯವರನ್ನು ಭೇಟಿಯಾದೆ. ಸುರೇಶ್ ಅಂಗಡಿಯವರು ನಮ್ಮದೇ ರಾಜ್ಯದವರು. ಅವರಿಗೆ ಮನವರಿಕೆ ಮಾಡುವುದು ಸುಲಭ. ಅಪಾಯಿಟ್ ಮೆಂಟ್ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಬೇರೆ ಕೆಲಸದ ಒತ್ತಡದಲ್ಲಿ ಗೋಯಲ್ ಇದ್ದ ಕಾರಣ ಅವರ ಮನವಿಯಂತೆ ಸುರೇಶ್ ಅಂಗಡಿಯವರನ್ನು ಭೇಟಿಯಾದೆವು. ನಾವು ಹೇಳಿದ ವಿಷಯವನ್ನು ಸಾವಧಾನವಾಗಿ ಕೇಳಿದ ಸುರೇಶ್ ಅಂಗಡಿಯವರು ಈ ಕೆಲಸವನ್ನು ಶೀಘ್ರದಲ್ಲಿ ಮಾಡಿಕೊಡುವ ಭರವಸೆ ನೀಡಿದರು. ಅಲ್ಲಿಗೆ ಇಲ್ಲಿ ತನಕ ಮಂಗಳೂರಿನ ಮೇಲೆ ಆಗುತ್ತಿದ್ದ ಮಲತಾಯಿ ಧೋರಣೆ ನಿಂತು ಹೋಗಲಿದೆ ಎನ್ನುವ ವಿಶ್ವಾಸ ಒಬ್ಬ ರೈಲ್ವೆ ಹೋರಾಟಗಾರನಾಗಿ ನನ್ನಲ್ಲಿ ಮೂಡಿದೆ. ಅಷ್ಟಕ್ಕೂ ನಾವು ಕೊಟ್ಟ ಮನವಿ ಏನು? ಅದನ್ನು ವಿವರಿಸುತ್ತೇನೆ

ಈ ವಿಷಯವನ್ನು ನಾನು ಈ ಹಿಂದೆ ಒಮ್ಮೆ ಬರೆದಿದ್ದೆ. ಡಿ ವಿ ಸದಾನಂದ ಗೌಡ ರೈಲ್ವೆ ಸಚಿವರಾಗಿದ್ದಾಗಲೇ ಮನಸ್ಸು ಮಾಡಿದ್ದರೆ ಆಗಲೇ ನಮ್ಮ ಮೇಲೆ ಆಗುತ್ತಿರುವ ಅನ್ಯಾಯ ಕೊನೆಗಾಣುತ್ತಿತ್ತು. ಆದರೆ ಹಾಗೆ ಆಗಲಿಲ್ಲ. ಈಗಲಾದರೂ ಆಗಬಹುದು ಎನ್ನುವ ಧೈರ್ಯ ಬಂದಿರುವುದು ಸುರೇಶ್ ಅಂಗಡಿಯವರು ತಮಗೆ ಈ ವಿಷಯ ಈಗಾಗಲೇ ಅರಿವಿಗೆ ಬಂದಿದೆ. ಸರಿ ಮಾಡಿ ಕೊಡುತ್ತೇವೆ ಎಂದು ಹೇಳಿದ ಕಾರಣ. ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನಿತೀಶ್ ಕುಮಾರ್ ರೈಲ್ವೆ ಸಚಿವರಾಗಿದ್ದರು. ಆಗ ರೈಲ್ವೆ ಇಲಾಖೆಯಿಂದ ರೈಲ್ವೆ ಬೋರ್ಡಿಗೆ ಒಂದು ಲಿಖಿತ ಮನವಿ ಹೋಗುತ್ತದೆ. ಅದೇನೆಂದರೆ ನೇತ್ರಾವತಿ ಸೇತುವೆ ಅಂದರೆ ಉಳ್ಳಾಲ ಸೇತುವೆಯಿಂದ ತೋಕೂರುವರೆಗಿನ ಪ್ರದೇಶವನ್ನು ಫಾಲ್ಗಾಟ್ ನಿಂದ ಅಂದರೆ ಸೌತರ್ನ್ ರೈಲ್ವೆಯಿಂದ ನೈರುತ್ಯ ರೈಲ್ವೆಗೆ ಶೀಫ್ಟ್ ಮಾಡಬೇಕು. ಯಾಕೆಂದರೆ ಈ ಪ್ರದೇಶ ರೈಲ್ವೆ ಇಲಾಖೆಯ ಪಾಲಿಗೆ ಅಪ್ಪಟ ಚಿನ್ನದ ಮೊಟ್ಟೆ ಇಡುವ ಕೋಳಿ. ತಿಂಗಳಿಗೆ ಅಂದಾಜು ನಾಲ್ಕು ಕೋಟಿ ರೂಪಾಯಿ ಲಾಭ ತರುವ ಪ್ರದೇಶವಿದು. ಎನ್ ಎಂಪಿಟಿ, ಎಂಸಿಎಫ್, ಎಂಆರ್ ಪಿಎಲ್ ಸಹಿತ ಅನೇಕ ಕೈಗಾರಿಕೆಗಳಿಂದ ಉತ್ತಮ ಫಸಲು ಇರುವ ಸ್ಥಳ ಫಾಲ್ಗಾಟ್ ಡಿವಿಜನ್ ಗೆ ಹೋಗಿರುವುದರಿಂದ ಅವರು ಚೆನ್ನಾಗಿದ್ದಾರೆ. ಆದರೆ ಲಾಭ ಇಲ್ಲಿಂದ ಬಂದರೂ ನಮ್ಮ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯ ವಿಚಾರ ಬಂದಾಗ ಅಪ್ಪಟ ಕಣ್ಣಿಗೆ ಬಟ್ಟೆ ಕಟ್ಟಿದ್ದಂತೆ ದಕ್ಷಿಣ ರೈಲ್ವೆ ವರ್ತಿಸುತ್ತದೆ. ಅಷ್ಟೇ ಅಲ್ಲ, ದೇಶದ ಪ್ರಮುಖ ನಗರಗಳಿಗೆ ಮಂಗಳೂರು ಸೆಂಟ್ರಲ್ ನಿಂದ ರೈಲು ಓಡಿಸಿ ಎಂದರೆ ಇಲ್ಲಿ ಫ್ಲಾಟ್ ಫಾರಂ ಕೊರತೆ ಇದೆ ಎನ್ನುತ್ತಾರೆ. ನಂತರ ಕೆಲವು ದಿನ ಮಂಗಳೂರು ಜಂಕ್ಷನ್ ನಿಂದ ಓಡಿಸಿ ನಂತರ ಅಲ್ಲಿ ಪ್ರಯಾಣಿಕರಿಲ್ಲದೆ ಆ ರೈಲು ನಷ್ಟದಲ್ಲಿದೆ ಎಂದು ಸಬೂಬು ಹೇಳಿ ಆ ರೈಲನ್ನು ಕೇರಳದ ಯಾವುದಾದರೂ ನಗರಕ್ಕೆ ಇವರು ವಿಸ್ತರಿಸುತ್ತಾರೆ. ಅಲ್ಲಿಗೆ ಕೇರಳದ ಲಾಬಿ ನಮ್ಮ ರೈಲು ನಿಲ್ದಾಣಗಳಲ್ಲಿ ತಮಗೆ ಬೇಕಾದ ಹಾಗೆ ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತಾಗುತ್ತದೆ. ಅಷ್ಟಕ್ಕೂ ರೈಲ್ವೆ ಬೋರ್ಡಿನಲ್ಲಿ ಇರುವ ಅರವತ್ತು ಶೇಕಡಾ ಅಧಿಕಾರಿಗಳು ಕೇರಳದವರು. ಅವರು ತಮ್ಮ ರಾಜ್ಯಕ್ಕೆ ಯಾವ ಲಾಬಿ ಮಾಡಲು ಕೂಡ ತಯಾರು. 2004 ಮತ್ತು 2014 ರಲ್ಲಿ ಮಂಗಳೂರನ್ನು ದಕ್ಷಿಣ ರೈಲ್ವೆಯಿಂದ ನೈರುತ್ಯ ರೈಲ್ವೆಗೆ ಸೇರಿಸುವ ಪ್ರಕ್ರಿಯೆ ಮುಗಿಯಬೇಕಿದ್ದರೂ ಆ ಕೇರಳದ ಲಾಬಿಯಿಂದ ನಡೆಯಲಿಲ್ಲ. ಆದ್ದರಿಂದ ಈಗಲಾದರೂ ಈ ಪ್ರಕ್ರಿಯೆ ಮುಗಿಸಿ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದೇನೆ. ಆಗುತ್ತೆ ಎನ್ನುವ ವಿಶ್ವಾಸವಿದೆ. ಉಳಿದ ವಿಷಯವನ್ನು ನಾಳೆ ಬರೆಯುತ್ತೇನೆ.

0
Shares
  • Share On Facebook
  • Tweet It




Trending Now
ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
Hanumantha Kamath June 30, 2025
ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
Hanumantha Kamath June 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
  • Popular Posts

    • 1
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 2
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 3
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • 4
      ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • 5
      PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...

  • Privacy Policy
  • Contact
© Tulunadu Infomedia.

Press enter/return to begin your search