• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಫ್ಲೆಕ್ಸ್, ಪ್ಲಾಸ್ಟಿಕ್ ಬ್ಯಾನರ್ಸ್, ಬಟ್ಟಿಂಗ್ಸ್ ಹಾಕುವವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ತೋರಿಸಲಿ!

Hanumantha Kamath Posted On August 9, 2019


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಅವರು ಹೊಸ ಸೂಚನೆಯೊಂದನ್ನು ಹೊರಡಿಸಿದ್ದಾರೆ. ಈ ಬಾರಿಯ ಜಾತ್ರೆ, ಉತ್ಸವದ ಸಂದರ್ಭದಲ್ಲಿ ಯಾವುದೇ ಫ್ಲೆಕ್ಸ್, ಪ್ಲಾಸ್ಟಿಕ್ ಬ್ಯಾನರ್ಸ್, ಬಂಟಿಂಗ್ಸ್ ಅನ್ನು ಮಂಗಳೂರಿನಲ್ಲಿ ಅಳವಡಿಸುವುದನ್ನು ನಿಷೇಧಿಸಿ ಅವರು ಆದೇಶ ಹೊರಡಿಸಿದ್ದಾರೆ. ಅದನ್ನು ಮೀರಿಯೂ ಯಾರಾದರೂ ಮಂಗಳೂರಿನಲ್ಲಿ ಅಲ್ಲಲ್ಲಿ ಅಳವಡಿಸಿದರೆ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದಾಗಿ ಹೇಳಿದ್ದಾರೆ. ಬಹಳ ಉತ್ತಮ ನಿರ್ಧಾರ. ಆದರೆ ಇದು ಅನುಷ್ಟಾನಕ್ಕೆ ಬರುತ್ತದೆಯಾ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಹೀಗೆ ಹೇಳಿಕೆಯನ್ನು ನೀಡಿ ಮಂಗಳೂರಿನ ಸೌಂದರ್ಯವನ್ನು ಉಳಿಸುವಲ್ಲಿ ಪಾಲಿಕೆ ಕಡೆಯಿಂದ ಪ್ರಯತ್ನ ಆಗುತ್ತಿದೆ ಎಂದು ತೋರಿಸುವ ಉದ್ದೇಶ ಕಮೀಷನರ್ ಅವರಿಗೆ ಇರಬಹುದು. ಆದರೆ ಇವರು ನಿಜಕ್ಕೂ ಫ್ಲೆಕ್ಸ್, ಪ್ಲಾಸ್ಟಿಕ್ ಬ್ಯಾನರ್ಸ್, ಬಟ್ಟಿಂಗ್, ಕಟೌಟ್ ಹಾಕುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತಾರಾ ಎನ್ನುವ ಪ್ರಶ್ನೆ ನನ್ನಲ್ಲಿ ಉದ್ಭವಿಸುತ್ತದೆ. ಇದು ಕೇವಲ ಪೇಪರ್ ಹೇಳಿಕೆ ಆಗಿ ಉಳಿಯಬಾರದು ಎಂದಾದರೆ ನಿಜಕ್ಕೂ ಪಾಲಿಕೆ ಕಮೀಷನರ್ ಧೈರ್ಯ ತೋರಿಸಬೇಕು. ನನಗೆ ಗೊತ್ತಿರುವ ಪ್ರಕಾರ ಹಿಂದೊಮ್ಮೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ನಾಯಕರೊಬ್ಬರು ಮಂಗಳೂರಿಗೆ ಬರುವ ದಿನ ಇಡೀ ಮಂಗಳೂರು ನಗರವನ್ನು ಕೇಸರಿ ಬಟ್ಟಿಂಗ್ಸ್ ಗಳಿಂದ ತುಂಬಿಸಲಾಗಿತ್ತು. ಆವತ್ತು ಪಾಲಿಕೆ ಕಮೀಷನರ್ ಅದನ್ನು ತೆಗೆಸಲು ಸೂಚನೆ ನೀಡಿದ್ದರು. ಆ ದಿನ ಬಿಜೆಪಿ ಕಾರ್ಯಕರ್ತರ ಮತ್ತು ಆಡಳಿತದ ನಡುವೆ ಬಿಸಿಬಿಸಿ ಮಾತುಕತೆ ಆಗಿತ್ತು. ಆಗ ಕಾಂಗ್ರೆಸ್ ಸರಕಾರ ಇತ್ತು. ನಾನು ಹೇಳುವುದು ಯಾವುದೇ ಸರಕಾರ ಇರಲಿ, ಯಾವ ಪಕ್ಷದವರು ಕೂಡ ತಮ್ಮ ನಾಯಕರ ಆಗಮನ ಎದ್ದು ಕಾಣಿಸಲು ಫ್ಲೆಕ್ಸ್, ಬ್ಯಾನರ್ಸ್, ಹೋರ್ಡಿಂಗ್ಸ್ ಹಾಕುವುದು ಅಕ್ಷರಶ: ತಪ್ಪು. ಅದಲ್ಲದೆ ಯಾವುದೇ ಧರ್ಮದವರ ಹಬ್ಬ, ಉತ್ಸವ, ಜಾತ್ರೆ ಇರಲಿ ಶುಭ ಕೋರುವ ನೆಪದಲ್ಲಿ ಪ್ರಚಾರಕ್ಕೆ ಇಳಿಯುವ ಪ್ರಚಾರ ಪ್ರಿಯರು ತಮ್ಮ ಹೆಸರು ಮೇಲೆ ಹೋಗುವ ಖುಷಿಯಲ್ಲಿ ಮಂಗಳೂರಿನ ಸೌಂದರ್ಯವನ್ನು ಕಡೆಗಣಿಸುತ್ತಾರೆ. ಅಷ್ಟೇ ಅಲ್ಲ, ಕೆಲವು ಸಿನೆಮಾದವರು ಮಂಗಳೂರಿನಲ್ಲಿ ಎಷ್ಟು ಫ್ಲೆಕ್ಸ್ ಹಾಕಿಸುತ್ತಾರೆ ಎಂದರೆ ಅಷ್ಟು ದಿನ ಅವರ ಸಿನೆಮಾ ಥಿಯೇಟರಿನಲ್ಲಿ ಓಡುವುದಿಲ್ಲ. ಅವರಿಗೂ ಬಿಸಿ ಮುಟ್ಟಿಸುವ ಕೆಲಸ ನಡೆಯಬೇಕಿದೆ.

ಇದು ಕೇವಲ ಫ್ಲೆಕ್ಸ್, ಬಟ್ಟಿಂಗ್ಸ್, ಪ್ಲಾಸ್ಟಿಕ್ ಬ್ಯಾನರ್ಸ್ ವಿಷಯಕ್ಕೆ ಮಾತ್ರ ಅನ್ವಯ ಮಾಡಬಾರದು. ಹೋರ್ಡಿಂಗ್ ವಿಷಯದಲ್ಲಿಯೂ ಪಾಲಿಕೆ ಇಷ್ಟೇ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಅದಕ್ಕಾಗಿ ತುಂಬಾ ದಿನ ಕಾಯಬೇಕಾಗಿಲ್ಲ. ಪಾಲಿಕೆ ಕಟ್ಟಡದ ಹೊರಗೆನೆ ಸುಮಾರು 25 ಹೋರ್ಡಿಂಗ್ಸ್ ಇವೆ. ಅದಕ್ಕೆ ನಿಷೇಧಿತ ಪ್ಲಾಸ್ಟಿಕ್ ಗಳನ್ನು ಬಳಸಲಾಗಿದೆ. ಅವರಿಗೂ ಪಾಲಿಕೆ ಕಮೀಷನರ್ ಅವರು ನೋಟಿಸ್ ನೀಡಬೇಕು. ಒಂದು ತಿಂಗಳೊಳಗೆ ತೆಗೆಸುವ ಸೂಚನೆ ನೀಡಬೇಕು. ತೆಗೆಸದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಆದರೆ ಪಾಲಿಕೆಯವರು ಹಾಗೆ ಮಾಡುವುದಿಲ್ಲ. ಯಾಕೆಂದರೆ ಜಾಹೀರಾತು ಏಜೆನ್ಸಿಗಳೆಲ್ಲವೂ ದೊಡ್ಡ ದೊಡ್ಡ ಕುಳಗಳ ಕೈಯಲ್ಲಿವೆ. ಕೆಲವರಿಗೆ ಮಾಜಿ ಶಾಸಕರ ಆಶ್ರಯವೂ ಇದೆ. ಆದ್ದರಿಂದ ಅವುಗಳಿಗೆ ಏನೂ ಆಗುವುದಿಲ್ಲ. ಇವರದ್ದೇನಿದ್ದರೂ ತಮಗೆ ಮನಸ್ಸು ಬಂದಾಗ ಒಂದು ಲಾರಿ, ನಾಲ್ಕು ಜನ ಕೂಲಿಯವರನ್ನು ಕರೆದುಕೊಂಡು ಹೋಗಿ ಮಂಗಳೂರಿನ ಆಯಕಟ್ಟಿನ ಜಾಗಗಳಲ್ಲಿ ಹಾಕಿರುವ ಫ್ಲೆಕ್ಸ್ ಗಳನ್ನು ತೆಗೆಸುವುದು ಮತ್ತು ಅದಕ್ಕೆ ಲಕ್ಷಗಟ್ಟಲೆ ಬಿಲ್ ಮಾಡಿಸುವುದು ಮತ್ತು ಅದರಲ್ಲಿ ತಮ್ಮ ಪಾಲನ್ನು ಜೇಬಿಗೆ ಇಳಿಸುವುದು. ಅದರ ಬದಲಿಗೆ ಯಾರು ನಿಷೇಧಿತ ಪ್ಲಾಸ್ಟಿಕ್ ಬಳಸಿ ಏನು ಫ್ಲೆಕ್ಸ್, ಬ್ಯಾನರ್ಸ್, ಹೋರ್ಡಿಂಗ್ಸ್, ಬಟ್ಟಿಂಗ್ಸ್ ಮಾಡುತ್ತಾರೋ ಅವರಿಂದಲೇ ಅದನ್ನು ತೆಗೆದು ಅಥವಾ ತೆಗೆಸಿದ ಖರ್ಚಿನ ಬಿಲ್ ಅವರಿಗೆ ಕಳುಹಿಸಿ ಮಂಗಳೂರು ಸ್ವಚ್ಚ ಮಾಡಿಸಲಿ!

  • Share On Facebook
  • Tweet It


- Advertisement -


Trending Now
ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
Hanumantha Kamath July 4, 2022
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
Hanumantha Kamath July 2, 2022
Leave A Reply

  • Recent Posts

    • ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
  • Popular Posts

    • 1
      ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • 2
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 3
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 4
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 5
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search