• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರು ಕರ್ನಾಟಕದಲ್ಲಿ ಇಲ್ವಾ ಯಡಿಯೂರಪ್ಪನವರೇ?

Hanumantha Kamath Posted On October 2, 2019
0


0
Shares
  • Share On Facebook
  • Tweet It

ಒಂದು ವಾರದ ಒಳಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಗಳೂರನ್ನು ಕಡ್ಡಾಯ ಪ್ರಾಪರ್ಟಿ ಕಾರ್ಡ್ ಪರಿಧಿಯಿಂದ ಹೊರಗೆ ಇಟ್ಟರೆ ಅವರಿಗೆ ಎರಡು ಸೀಟ್ ಹೆಚ್ಚಿಗೆ ಗೆಲ್ಲಿಸಿಕೊಟ್ಟ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರದ ಬಗ್ಗೆ ಅವರಿಗೆ ಕಾಳಜಿ ಇದೆ ಎಂದು ಅಂದುಕೊಳ್ಳುತ್ತೇನೆ. ಒಂದು ವೇಳೆ ಏನೂ ಮಾಡದೇ ಸುಮ್ಮನೆ ಕುಳಿತರೆ ಯಡ್ಯೂರಪ್ಪನವರದ್ದು ಟೈಂಪಾಸ್ ಆಡಳಿತ ಎನ್ನುವುದು ಗ್ಯಾರಂಟಿಯಾಗುತ್ತದೆ. ಅಷ್ಟಕ್ಕೂ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಎನ್ನುವುದು ಏಕಾಏಕಿ ಸಡಿಲಿಕೆ ಮಾಡಲಾಗುತ್ತದೆಯಾ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುವುದಕ್ಕೆ ಸಾಕು. ಶಿವಮೊಗ್ಗದಲ್ಲಿ ಇದನ್ನು ಇದೇ ಸಿಎಂ ಮಾಡಿ ತೋರಿಸಿದ್ದಾರೆ. ಅಲ್ಲಿ ಆಗುವುದಾದರೆ ಇಲ್ಯಾಕೆ ಆಗಬಾರದು ಎನ್ನುವುದು ನನ್ನ ಪ್ರಶ್ನೆ. ಶಿವಮೊಗ್ಗ ಯಡಿಯೂರಪ್ಪನವರದ್ದು ಕರ್ಮಭೂಮಿ ಇರಬಹುದು, ಅದಕ್ಕೆ ಅಲ್ಲಿ ಪ್ರೀತಿ ಹೆಚ್ಚು ಇದ್ದಿರಲಿಕ್ಕೂ ಸಾಕು. ಹಾಗಂತ ಮಂಗಳೂರಿನವರು ಏನೂ ಅಪಘಾನಿಸ್ತಾನದಿಂದ ಬಂದದ್ದಲ್ಲ.
ಇವತ್ತು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಇರುವ ಜನರಿಗೆ ಪ್ರಾಪರ್ಟಿ ಕಾರ್ಡ್ ಎನ್ನುವುದು ಅಮ್ರತಾಂಜನ್ ಆಗಿ ಹೋಗಿದೆ. ಹಚ್ಚಿದರೆ ಉರಿ, ಹಚ್ಚದಿದ್ದರೆ ತಲೆನೋವು ಹೋಗುವುದಿಲ್ಲ. ಆದ್ದರಿಂದ ಜನ ನೋವು ನುಂಗಿ ಪ್ರಾಪರ್ಟಿ ಕಾರ್ಡ್ ಕಚೇರಿಗೆ ಅಲೆಯುತ್ತಿದ್ದಾರೆ. ಹಾಗಂತ ಎಲ್ಲರೂ ಅಲ್ಲಿ ಹೋಗಿ ಕಷ್ಟಪಡಬೇಕಾಗಿಲ್ಲ. ಹೇಗೆ ಸುಖ ಪ್ರಯಾಣಕ್ಕೆ ವಿಮಾನ ಮತ್ತು ಪಾಪದವರಿಗೆ ರೈಲು ಇದೆಯೋ ಹಾಗೆ ನೀವು ಹಣ ಬಿಚ್ಚಿದರೆ 48 ಗಂಟೆಯೊಳಗೆ ನಿಮಗೆ ಕಾರ್ಡ್ ರೆಡಿ. ಅದೇ ನೀವು ನ್ಯಾಯ ಮಾರ್ಗದಲ್ಲಿ ಹೋಗುತ್ತೀರಿ ಎಂದಾದರೆ ರೈಲಿನ ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಪ್ರಯಾಣಿಸಿದ ರೀತಿಯಲ್ಲಿ ಹೋಗಿ ಮಾಡಿಸಿಕೊಂಡು ಬರಬೇಕು.

ಈಗಾಗಲೇ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಶಾಸಕರು ಪ್ರತಿಭಟನೆ ಮಾಡಿ ಆಗಿದೆ. ಆಗ ಬಿಜೆಪಿ ಸರಕಾರ ಇರಲಿಲ್ಲ. ಬಿಜೆಪಿ ಸರಕಾರ ಬಂದ ಬಳಿಕ ಒಮ್ಮೆ ಶಾಸಕ ವೇದವ್ಯಾಸ ಕಾಮತ್ ಅವರು ಧೀಡಿರ್ ಭೇಟಿ ಎಂದು ಹೋಗಿ ಬಂದರು. ಹೊರಗೆ ಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ನಮ್ಮ ಸರಕಾರ ಬಂದಿದೆಯಷ್ಟೇ, ಇನ್ನು ಕಂದಾಯ ಸಚಿವರು, ಉಸ್ತುವಾರಿ ಸಚಿವರು ಎಲ್ಲಾ ಆಗಬೇಕು. ಆದ್ದರಿಂದ ಅದೆಲ್ಲಾ ಆದ ನಂತರ ಇದನ್ನು ಪರಿಹರಿಸುತ್ತೇವೆ ಎಂದು ಹೇಳಿ ಹೋದರು. ಈಗ ಎಲ್ಲ ಆಗಿದೆ. ರಾಜ್ಯ ಸರಕಾರ ನಿಧಾನವಾಗಿ ರನ್ ವೇ ಬಿಟ್ಟು ಮೇಲಕ್ಕೆ ಹಾರುವ ಸಮಯ. ಈಗ ನಮ್ಮ ಶಾಸಕರು ಮುಖ್ಯಮಂತ್ರಿಯವರ ಕೈ ಕಾಲು ಹಿಡಿದು ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮುಂದೂಡಿದರೆ ಜನರಿಗೂ ನೆಮ್ಮದಿಯಾದಿತು. ಇಲ್ಲದಿದ್ದರೆ ಇನ್ನೆರಡೂ ಧೀಡಿರ್ ಭೇಟಿ, ಪರಿಹಾರಕ್ಕೆ ಪ್ರಯತ್ನದ ಡೈಲಾಗ್ ಜನರಿಗೆ ಬೋರ್ ಆಗುತ್ತದೆ.

ಅಷ್ಟಕ್ಕೂ ಶಿವಮೊಗ್ಗದಲ್ಲಿ ಕಡ್ಡಾಯದಿಂದ ವಿನಾಯಿತಿ ಕೊಡುವ ಅವಶ್ಯಕತೆ ಇರಲಿಲ್ಲ. ಏಕೆಂದರೆ ಅಲ್ಲಿ 80% ಜನ ಪ್ರಾಪರ್ಟಿ ಕಾರ್ಡ್ ಮಾಡಿಸಿಯಾಗಿದೆ. ಅಲ್ಲಿನ ಭೌಗೋಳಿಕ ಹಿನ್ನಲೆ ಇಲ್ಲಿಯಷ್ಟು ಸಂಕೀರ್ಣವಾಗಿಲ್ಲ. ಆದರೆ ಮಂಗಳೂರಿನಲ್ಲಿ 70% ಜನರದ್ದು ಪ್ರಾಪರ್ಟಿ ಕಾರ್ಡ್ ಇನ್ನೂ ಆಗಿಲ್ಲ. ಆದರೆ ಅಲ್ಲಿ ಕಡ್ಡಾಯ ವಿನಾಯಿತಿ ಆಗಿದೆ. ಇಲ್ಲಿ ನಾವು ಆಕಾಶ ನೋಡುತ್ತಿದ್ದೇವೆ!

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search