• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಪದವರ ನೀರಿನ ಬಿಲ್ ಜಾಸ್ತಿ ಮಾಡ್ತಿರಿ, ಶ್ರೀಮಂತರ ಹೋರ್ಡಿಂಗ್ ಕಾಣಿಸಲ್ವ!!

Hanumantha Kamath Posted On October 26, 2019
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವ ಜನರ ಮೇಲೆ ಕುಡಿಯುವ ನೀರಿನ ದರವನ್ನು ಹೆಚ್ಚಳ ಮಾಡುವ ಮೂಲಕ ಕಾಂಗ್ರೆಸ್ ಪಾಲಿಕೆಗೆ ಆದಾಯ ಹೆಚ್ಚಿಸಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿರಬಹುದು. ಆದರೆ ನೆನಪಿಡಿ. ನೀರಿನ ಬಿಲ್ ವಿಷಯದಲ್ಲಿ ಈ ಬಾರಿ ಕಾಂಗ್ರೆಸ್ಸಿಗೆ ಅತೀ ದೊಡ್ಡ ಮೈನಸ್ ಆಗಲಿದೆ. ಈ ವಾಕ್ಯವನ್ನು ಓದುತ್ತಿದ್ದ ಹಾಗೆ ಕಾಂಗ್ರೆಸ್ಸಿಗರು ನನ್ನ ಮೇಲೆ ಕೋಪಗೊಳ್ಳಬಹುದು. ಹೆಚ್ಚಿಸಿದ್ದು ನಾವು ಅಧಿಕಾರದಲ್ಲಿ ಇದ್ದಾಗ ಅಲ್ಲ ಎಂದು ಹೇಳಬಹುದು. ಪಾಲಿಕೆಯಲ್ಲಿ ನಮ್ಮ ಆಡಳಿತ ಮುಗಿದ ಮೇಲೆ ಹೆಚ್ಚಳ ಆಗಿದ್ದು ಎನ್ನಬಹುದು. ಆದರೆ ಕಾಂಗ್ರೆಸ್ಸಿಗರೇ, ಪಾಲಿಕೆಯಲ್ಲಿ ಆಗ ಆಡಳಿತಾಧಿಕಾರಿ ದರ ಹೆಚ್ಚಳ ಮಾಡಿರಬಹುದು. ಆದರೆ ರಾಜ್ಯದಲ್ಲಿ ಇದ್ದ ಸರಕಾರ ಯಾರದ್ದು ನಿಮ್ಮದು ತಾನೆ. ನಗರಾಭಿವೃದ್ಧಿ ಸಚಿವರು ಕಾಂಗ್ರೆಸ್ಸಿನವರು ಇದ್ರು ತಾನೆ. ಯುಟಿ ಖಾದರ್ ನಿಮ್ಮವರೇ ತಾನೆ. ಈಗ ಹೇಳಿ, ನೀರಿನ ದರ ಹೆಚ್ಚಳ ಮಾಡಿದ್ದು ಯಾರು?
ಅಷ್ಟಕ್ಕೂ ನೀರಿನ ದರ ಹೆಚ್ಚಳ ಮಾಡುವ ಬದಲು ನಿತ್ಯ ಪೋಲಾಗುತ್ತಿರುವ ಮೂರು ಎಂಜಿಡಿಯಷ್ಟು ನೀರನ್ನು ಉಳಿಸುವುದು ಹೇಗೆ ಎಂದು ಯೋಚಿಸಿದ್ದೀರಾ? ಇಲ್ಲ. ನಿತ್ಯ ತುಂಬೆಯಲ್ಲಿ 21 ಎಂಜಿಡಿ ನೀರು ಪಂಪ್ ಆಗುತ್ತದೆ. ಅದರಲ್ಲಿ ಇಡೀ ಮಂಗಳೂರಿಗೆ ಹೆಚ್ಚೆಂದರೆ 18 ಎಂಜಿಡಿ ಸಾಕು. ಇವರು ಕಳುಹಿಸುವ ನೀರು ನಮ್ಮ ಮನೆಗಳಿಗೆ ಮಾತ್ರವಲ್ಲ, ವ್ಯವಹಾರಿಕ ಕಟ್ಟಡಗಳಿಗೆ, ವ್ಯಾಪಾರಿ ಉದ್ದೇಶಕ್ಕೆ, ಕೈಗಾರಿಕಾ ಪ್ರದೇಶಕ್ಕೆ, ಎಂಸಿಎಫ್, ಎಂಆರ್ ಪಿಎಲ್, ಎನ್ ಎಂಪಿಟಿ ಗೂ ಹೋಗುತ್ತದೆ.
ಈಗ ಎಪ್ರಿಲ್ ನಿಂದ ನೀವು ಹೆಚ್ಚು ಮಾಡಿರುವ ನೀರಿನ ದರ ಹೇಗೆ ಜನಸಾಮಾನ್ಯರ ಕುತ್ತಿಗೆಗೆ ಬಂದಿದೆ ಎಂದು ವಿವರಿಸುತ್ತೇನೆ, ಕೇಳಿ. ಒಬ್ಬ ವ್ಯಕ್ತಿಗೆ ದಿನಕ್ಕೆ ಸರಾಸರಿ 120 ಲೀಟರ್ ನೀರು ಅವಶ್ಯಕತೆ ಇರುತ್ತದೆ. ಒಂದು ಮನೆಯಲ್ಲಿ 5-6 ಜನ ಇದ್ದರೆ ದಿನಕ್ಕೆ 500 ಲೀಟರ್ ನಂತೆ ತಿಂಗಳಿಗೆ 15000 ಲೀಟರ್ ನೀರು ಬೇಕಾಗುತ್ತದೆ. ಒಂದು ತಿಂಗಳಿಗೆ 24000 ತನಕ ನೀರು ಖರ್ಚು ಮಾಡಿದರೆ ನಮಗೆ ಬರುತ್ತಿದ್ದದ್ದು 65 ರೂಪಾಯಿ. ಈಗ ಇವರು ಬೇರೆ ಲೆಕ್ಕಾಚಾರ ಹಾಕಿ 8000 ಲೀಟರ್ ತನಕ 56 ರೂಪಾಯಿ ನಿಗದಿಗೊಳಿಸಿದ್ದಾರೆ. ಅದರ ನಂತರ 8000 ದಿಂದ 17000 ತನಕ ಸಾವಿರ ಲೀಟರ್ ಗೆ 9 ರೂಪಾಯಿಯಂತೆ,  17000 ರಿಂದ 25000 ತನಕ ಸಾವಿರ ಲೀಟರ್ ಗೆ 11 ರೂಪಾಯಿ, 25000 ಲೀಟರ್ ಮೇಲೆ 13 ರೂಪಾಯಿ ದರ ನಿಗದಿಗೊಳಿಸಿದ್ದಾರೆ.
ಈಗ ವಿಷಯ ಎಂದರೆ ಎಪ್ರಿಲ್ ನಲ್ಲಿ ನೀರಿನ ರೇಟ್ ಹೆಚ್ಚಳ ಮಾಡಿದ್ದರೂ ಮೂರು ತಿಂಗಳ ತನಕ ಪಾಲಿಕೆ ಕಡೆಯಿಂದ ಬಿಲ್ ಕೊಡಲಿಕ್ಕೆ ಯಾರು ಬರಲೇ ಇಲ್ಲ. ಈಗ ಸಡನ್ನಾಗಿ ಬಂದಿದ್ದಾರೆ. ಇದರಿಂದ ಇಲ್ಲಿಯ ತನಕ 300 ರೂಪಾಯಿ ಬರುತ್ತಿದ್ದ ಕಡೆ 3000 ರೂಪಾಯಿ ಬಂದಿದೆ. ಈಗ ಒಮ್ಮೆಲ್ಲೆ ಹೀಗಾದರೆ ಜನಸಾಮಾನ್ಯರು ಎಲ್ಲಿಗೆ ಹೋಗುವುದು. ನಿಮಗೆ ಜನಸಾಮಾನ್ಯರ ಮೇಲೆ ಅಷ್ಟು ಕನಿಕರ ಇದ್ದಲ್ಲಿ ನೀವು ನೀರಿನ ದರ ಹೆಚ್ಚಿಸುವ ಬದಲು ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಅಷ್ಟೂ ಹೋರ್ಡಿಂಗ್ ಗಳ ಮೇಲಿನ ಶುಲ್ಕವನ್ನು ಹೆಚ್ಚಿಸುತ್ತಿದ್ದಿರಿ. ಆದರೆ ನೀವು ಹೆಚ್ಚಿಸಿಲ್ಲ. ಹೋರ್ಡಿಂಗ್ ನವರು ವರ್ಷಕ್ಕೆ ಪಾಲಿಕೆಗೆ 20 ಸಾವಿರ ಕೊಡುವವರು ಅದೇ ವರ್ಷಕ್ಕೆ 2 ಲಕ್ಷ ನಿವ್ವಳ ದುಡಿಯುತ್ತಾರೆ. ನೀವು ಅಂತವರ ಮೇಲೆ ಶುಲ್ಕ ಹೆಚ್ಚಿಸಿಲ್ಲ. ಅದೇ ಜನರು ತಮ್ಮ ಮನೆಗೆ ಬಳಸುವ ನೀರು ನಿಮ್ಮ ಕಣ್ಣಿಗೆ ಬಿತ್ತಲ್ಲ ಕಾಂಗ್ರೆಸ್ಸಿಗರೇ!
0
Shares
  • Share On Facebook
  • Tweet It




Trending Now
ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
Hanumantha Kamath January 16, 2026
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
Hanumantha Kamath January 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
  • Popular Posts

    • 1
      ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • 2
      ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!

  • Privacy Policy
  • Contact
© Tulunadu Infomedia.

Press enter/return to begin your search