• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಪದವರ ನೀರಿನ ಬಿಲ್ ಜಾಸ್ತಿ ಮಾಡ್ತಿರಿ, ಶ್ರೀಮಂತರ ಹೋರ್ಡಿಂಗ್ ಕಾಣಿಸಲ್ವ!!

Hanumantha Kamath Posted On October 26, 2019


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವ ಜನರ ಮೇಲೆ ಕುಡಿಯುವ ನೀರಿನ ದರವನ್ನು ಹೆಚ್ಚಳ ಮಾಡುವ ಮೂಲಕ ಕಾಂಗ್ರೆಸ್ ಪಾಲಿಕೆಗೆ ಆದಾಯ ಹೆಚ್ಚಿಸಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿರಬಹುದು. ಆದರೆ ನೆನಪಿಡಿ. ನೀರಿನ ಬಿಲ್ ವಿಷಯದಲ್ಲಿ ಈ ಬಾರಿ ಕಾಂಗ್ರೆಸ್ಸಿಗೆ ಅತೀ ದೊಡ್ಡ ಮೈನಸ್ ಆಗಲಿದೆ. ಈ ವಾಕ್ಯವನ್ನು ಓದುತ್ತಿದ್ದ ಹಾಗೆ ಕಾಂಗ್ರೆಸ್ಸಿಗರು ನನ್ನ ಮೇಲೆ ಕೋಪಗೊಳ್ಳಬಹುದು. ಹೆಚ್ಚಿಸಿದ್ದು ನಾವು ಅಧಿಕಾರದಲ್ಲಿ ಇದ್ದಾಗ ಅಲ್ಲ ಎಂದು ಹೇಳಬಹುದು. ಪಾಲಿಕೆಯಲ್ಲಿ ನಮ್ಮ ಆಡಳಿತ ಮುಗಿದ ಮೇಲೆ ಹೆಚ್ಚಳ ಆಗಿದ್ದು ಎನ್ನಬಹುದು. ಆದರೆ ಕಾಂಗ್ರೆಸ್ಸಿಗರೇ, ಪಾಲಿಕೆಯಲ್ಲಿ ಆಗ ಆಡಳಿತಾಧಿಕಾರಿ ದರ ಹೆಚ್ಚಳ ಮಾಡಿರಬಹುದು. ಆದರೆ ರಾಜ್ಯದಲ್ಲಿ ಇದ್ದ ಸರಕಾರ ಯಾರದ್ದು ನಿಮ್ಮದು ತಾನೆ. ನಗರಾಭಿವೃದ್ಧಿ ಸಚಿವರು ಕಾಂಗ್ರೆಸ್ಸಿನವರು ಇದ್ರು ತಾನೆ. ಯುಟಿ ಖಾದರ್ ನಿಮ್ಮವರೇ ತಾನೆ. ಈಗ ಹೇಳಿ, ನೀರಿನ ದರ ಹೆಚ್ಚಳ ಮಾಡಿದ್ದು ಯಾರು?
ಅಷ್ಟಕ್ಕೂ ನೀರಿನ ದರ ಹೆಚ್ಚಳ ಮಾಡುವ ಬದಲು ನಿತ್ಯ ಪೋಲಾಗುತ್ತಿರುವ ಮೂರು ಎಂಜಿಡಿಯಷ್ಟು ನೀರನ್ನು ಉಳಿಸುವುದು ಹೇಗೆ ಎಂದು ಯೋಚಿಸಿದ್ದೀರಾ? ಇಲ್ಲ. ನಿತ್ಯ ತುಂಬೆಯಲ್ಲಿ 21 ಎಂಜಿಡಿ ನೀರು ಪಂಪ್ ಆಗುತ್ತದೆ. ಅದರಲ್ಲಿ ಇಡೀ ಮಂಗಳೂರಿಗೆ ಹೆಚ್ಚೆಂದರೆ 18 ಎಂಜಿಡಿ ಸಾಕು. ಇವರು ಕಳುಹಿಸುವ ನೀರು ನಮ್ಮ ಮನೆಗಳಿಗೆ ಮಾತ್ರವಲ್ಲ, ವ್ಯವಹಾರಿಕ ಕಟ್ಟಡಗಳಿಗೆ, ವ್ಯಾಪಾರಿ ಉದ್ದೇಶಕ್ಕೆ, ಕೈಗಾರಿಕಾ ಪ್ರದೇಶಕ್ಕೆ, ಎಂಸಿಎಫ್, ಎಂಆರ್ ಪಿಎಲ್, ಎನ್ ಎಂಪಿಟಿ ಗೂ ಹೋಗುತ್ತದೆ.
ಈಗ ಎಪ್ರಿಲ್ ನಿಂದ ನೀವು ಹೆಚ್ಚು ಮಾಡಿರುವ ನೀರಿನ ದರ ಹೇಗೆ ಜನಸಾಮಾನ್ಯರ ಕುತ್ತಿಗೆಗೆ ಬಂದಿದೆ ಎಂದು ವಿವರಿಸುತ್ತೇನೆ, ಕೇಳಿ. ಒಬ್ಬ ವ್ಯಕ್ತಿಗೆ ದಿನಕ್ಕೆ ಸರಾಸರಿ 120 ಲೀಟರ್ ನೀರು ಅವಶ್ಯಕತೆ ಇರುತ್ತದೆ. ಒಂದು ಮನೆಯಲ್ಲಿ 5-6 ಜನ ಇದ್ದರೆ ದಿನಕ್ಕೆ 500 ಲೀಟರ್ ನಂತೆ ತಿಂಗಳಿಗೆ 15000 ಲೀಟರ್ ನೀರು ಬೇಕಾಗುತ್ತದೆ. ಒಂದು ತಿಂಗಳಿಗೆ 24000 ತನಕ ನೀರು ಖರ್ಚು ಮಾಡಿದರೆ ನಮಗೆ ಬರುತ್ತಿದ್ದದ್ದು 65 ರೂಪಾಯಿ. ಈಗ ಇವರು ಬೇರೆ ಲೆಕ್ಕಾಚಾರ ಹಾಕಿ 8000 ಲೀಟರ್ ತನಕ 56 ರೂಪಾಯಿ ನಿಗದಿಗೊಳಿಸಿದ್ದಾರೆ. ಅದರ ನಂತರ 8000 ದಿಂದ 17000 ತನಕ ಸಾವಿರ ಲೀಟರ್ ಗೆ 9 ರೂಪಾಯಿಯಂತೆ,  17000 ರಿಂದ 25000 ತನಕ ಸಾವಿರ ಲೀಟರ್ ಗೆ 11 ರೂಪಾಯಿ, 25000 ಲೀಟರ್ ಮೇಲೆ 13 ರೂಪಾಯಿ ದರ ನಿಗದಿಗೊಳಿಸಿದ್ದಾರೆ.
ಈಗ ವಿಷಯ ಎಂದರೆ ಎಪ್ರಿಲ್ ನಲ್ಲಿ ನೀರಿನ ರೇಟ್ ಹೆಚ್ಚಳ ಮಾಡಿದ್ದರೂ ಮೂರು ತಿಂಗಳ ತನಕ ಪಾಲಿಕೆ ಕಡೆಯಿಂದ ಬಿಲ್ ಕೊಡಲಿಕ್ಕೆ ಯಾರು ಬರಲೇ ಇಲ್ಲ. ಈಗ ಸಡನ್ನಾಗಿ ಬಂದಿದ್ದಾರೆ. ಇದರಿಂದ ಇಲ್ಲಿಯ ತನಕ 300 ರೂಪಾಯಿ ಬರುತ್ತಿದ್ದ ಕಡೆ 3000 ರೂಪಾಯಿ ಬಂದಿದೆ. ಈಗ ಒಮ್ಮೆಲ್ಲೆ ಹೀಗಾದರೆ ಜನಸಾಮಾನ್ಯರು ಎಲ್ಲಿಗೆ ಹೋಗುವುದು. ನಿಮಗೆ ಜನಸಾಮಾನ್ಯರ ಮೇಲೆ ಅಷ್ಟು ಕನಿಕರ ಇದ್ದಲ್ಲಿ ನೀವು ನೀರಿನ ದರ ಹೆಚ್ಚಿಸುವ ಬದಲು ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಅಷ್ಟೂ ಹೋರ್ಡಿಂಗ್ ಗಳ ಮೇಲಿನ ಶುಲ್ಕವನ್ನು ಹೆಚ್ಚಿಸುತ್ತಿದ್ದಿರಿ. ಆದರೆ ನೀವು ಹೆಚ್ಚಿಸಿಲ್ಲ. ಹೋರ್ಡಿಂಗ್ ನವರು ವರ್ಷಕ್ಕೆ ಪಾಲಿಕೆಗೆ 20 ಸಾವಿರ ಕೊಡುವವರು ಅದೇ ವರ್ಷಕ್ಕೆ 2 ಲಕ್ಷ ನಿವ್ವಳ ದುಡಿಯುತ್ತಾರೆ. ನೀವು ಅಂತವರ ಮೇಲೆ ಶುಲ್ಕ ಹೆಚ್ಚಿಸಿಲ್ಲ. ಅದೇ ಜನರು ತಮ್ಮ ಮನೆಗೆ ಬಳಸುವ ನೀರು ನಿಮ್ಮ ಕಣ್ಣಿಗೆ ಬಿತ್ತಲ್ಲ ಕಾಂಗ್ರೆಸ್ಸಿಗರೇ!
  • Share On Facebook
  • Tweet It


- Advertisement -


Trending Now
ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
Hanumantha Kamath May 24, 2025
ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
Hanumantha Kamath May 23, 2025
Leave A Reply

  • Recent Posts

    • ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!
    • ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
  • Popular Posts

    • 1
      ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • 2
      ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • 3
      ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • 4
      ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • 5
      ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search