• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಲಿಕೆಗೆ ಹಣ ವಸೂಲಿ ಮಾಡುವ ಧೈರ್ಯ ಇರುವುದು ಗೂಡಂಗಡಿಯವರದ್ದು ಮಾತ್ರ!!

Hanumantha Kamath Posted On November 4, 2019
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಧಿಕಾರವನ್ನು ಮುಗಿಸಿ ಇಳಿದು ಹೋಗುವಾಗ ಗುತ್ತಿಗೆದಾರರಿಗೆ ಕೊಡಬೇಕಾಗಿದ್ದ ಸುಮಾರು 70 ಕೋಟಿ ರೂಪಾಯಿಗಳಷ್ಟು ಹಣವನ್ನು ಕೊಡದೇ ಹಾಗೆ ಬಾಕಿ ಇರಿಸಿ ಹೋಗಿದೆ. ಇನ್ನು ಕಟ್ಟಡ ತೆರಿಗೆ ಸುಮಾರು 29 ಕೋಟಿಯಷ್ಟು ವಸೂಲಾಗಬೇಕಿದೆ. ಅದನ್ನು ಪಾಲಿಕೆ ವಸೂಲಿ ಮಾಡಿಲ್ಲ. ಹಾಗೆ ಬಿಟ್ಟಿದೆ. ಇನ್ನು ಹೋರ್ಡಿಂಗ್ ನವರಿಂದ ಸುಮಾರು ಒಂದೂವರೆ ಕೋಟಿ ರೂಪಾಯಿ ಬರಬೇಕಿದೆ. ಅದು ಕೂಡ ಹಾಗೆ ಇದೆ. ಪಾರ್ಕಿಂಗ್ ಜಾಗವನ್ನು ಗುತ್ತಿಗೆ ತೆಗೆದುಕೊಂಡವರು ಕೂಡ ಬಾಕಿ ಇರಿಸಿದ್ದಾರೆ. ರಸ್ತೆಯ ಕೆಳಗೆ ಟೆಲಿಕಾಂ ಕಂಪೆನಿಗಳ ಕೇಬಲ್ ಗೆ ನೆಲದ ಬಾಡಿಗೆ ವಸೂಲಿ ಮಾಡುವ ಕ್ರಮವೇ ಇಲ್ಲ. ಈ ಎಲ್ಲಾ ಬಾಕಿ ಇರಿಸಿಕೊಂಡ ಮಂಗಳೂರು ಮಹಾನಗರ ಪಾಲಿಕೆ ಯಾರಿಂದ ಒಂದು ಚೂರು ಬಿಡದೆ ವಸೂಲಿ ಮಾಡುವುದು ಗೊತ್ತಾ. ಅದೇ ರಸ್ತೆ ಬದಿ ಚಿಕ್ಕ ಗೂಡಂಗಡಿ ಇಟ್ಟುಕೊಂಡು ಹೊಟ್ಟೆಪಾಡಿಗೆ ವ್ಯಾಪಾರ ಮಾಡುತ್ತಾರಲ್ಲ, ವಿಕಲಚೇತನರು. ಅವರಿಂದ ತಪ್ಪದೆ ಬಾಡಿಗೆ ವಸೂಲಿಯಾಗುತ್ತದೆ.
ಅಷ್ಟಕ್ಕೂ ಹೋರ್ಡಿಂಗ್ ನವರು ಸಮಾಜಸೇವೆಗಾಗಿ ಹೋರ್ಡಿಂಗ್ ನಿಲ್ಲಿಸಿರುವುದಿಲ್ಲ. ಅವರು ಅದರಿಂದ ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಾರೆ. ಆದರೆ ಅವರು ಹಣ ಬಾಕಿ ಇಟ್ಟರೆ ಪಾಲಿಕೆ ಆಡಳಿತ ಕೇಳುವುದಿಲ್ಲ. ಅಷ್ಟಕ್ಕೂ ಹೋರ್ಡಿಂಗ್ ನವರು ಸರಕಾರಿ ಜಾಗವನ್ನು ಬಳಸಿ ಹೋರ್ಡಿಂಗ್ ನಿಲ್ಲಿಸಿರುತ್ತಾರೆ. ಆದರೆ ಅವರು ಹಣ ಬಾಕಿ ಇಟ್ಟರೆ ಅದೊಂದು ವಿಷಯವೇ ಅಲ್ಲದಂತೆ ಪಾಲಿಕೆ ಆಡಳಿತ ವರ್ತಿಸುತ್ತದೆ. ಅವರಿಗೆ ಶುಲ್ಕ ಹೆಚ್ಚಿಸುವುದೂ ಇಲ್ಲ. ಆದರೆ ನಮ್ಮದೇ ಜಾಗದಲ್ಲಿ ನಾವು ಮನೆ ಕಟ್ಟಿದರೆ ಪಾಲಿಕೆಯವರು ಮನೆ ತೆರಿಗೆ ಕಟ್ಟುವುದು ತಡ ಮಾಡಿದರೆ ದಂಡ ವಸೂಲಿ ಮಾಡುತ್ತಾರೆ. ಅದೇ ಹೋರ್ಡಿಂಗ್ ನವರು ಎಷ್ಟೇ ತಡ ಮಾಡಿದರೂ ದಂಡ ಬಿಡಿ ಅವರ ವಿರುದ್ಧ ಒಂದು ಸಣ್ಣ ಕೆಮ್ಮು ಕೂಡ ತೆಗೆಯುವುದಿಲ್ಲ. ಅದೇ ಮನೆ ತೆರಿಗೆ ಕಟ್ಟುವುದು ತಡವಾದರೆ ಪಾಲಿಕೆ ಏನು ಮಾಡುತ್ತದೆ, ಗೊತ್ತಾ?
ಮನೆ ತೆರಿಗೆ ಕಟ್ಟದವರ ಒಂದು ಲಿಸ್ಟ್ ಮಾಡಿ ಪ್ರತಿ ಜೂನ್ ನಲ್ಲಿ ಒಂದು ರಿಕ್ಷಾದಲ್ಲಿ ಸ್ಪೀಕರ್ ಕಟ್ಟಿ ಅನೌನ್ಸ್ ಮಾಡುತ್ತಾ ಹೋಗುವ ವ್ಯವಸ್ಥೆ ಮಾಡುತ್ತಾರೆ. ಆದಷ್ಟು ಬೇಗ ಮನೆ ತೆರಿಗೆ ಕಟ್ಟದಿದ್ದರೆ ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದು ಪರೋಕ್ಷ ಬೆದರಿಕೆ ಹಾಕುತ್ತಾರೆ. ಹೋರ್ಡಿಂಗ್ ನವರು ಹಣ ಕಟ್ಟದಿದ್ದರೆ ನೋಟಿಸು ಕೂಡ ಪಾಲಿಕೆ ಅದೇ ಮನೆ ತೆರಿಗೆ ಕಟ್ಟದಿದ್ದರೆ ಹೆದರಿಸುವ ರೀತಿಯಲ್ಲಿಯೇ ಗೊತ್ತಾಗುತ್ತದೆ. ಪಾಲಿಕೆ ಕಳೆದ ಅವಧಿಯಲ್ಲಿ ಯಾರ ಪರವಾಗಿ ಇತ್ತು ಅಂತ!
0
Shares
  • Share On Facebook
  • Tweet It




Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Hanumantha Kamath November 11, 2025
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Hanumantha Kamath November 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
  • Popular Posts

    • 1
      ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!

  • Privacy Policy
  • Contact
© Tulunadu Infomedia.

Press enter/return to begin your search