• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೋರ್ಟ್ ವಾರ್ಡಿಗೆ ಕೆಲಸ ಮಾಡಬಲ್ಲ ಯುವಕ ಕಾರ್ಫೋರೇಟರ್ ಆಗಬೇಕಿದೆ!

Hanumantha Kamath Posted On November 11, 2019


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಗೆ ಮಂಗಳವಾರ ಮತದಾನ ನಡೆಯಲಿದೆ. ಅರವತ್ತು ವಾರ್ಡ್ ಗಳಿಗೆ ಕಾರ್ಪೋರೇಟರ್ ಗಳು ಯಾರಾಗಬೇಕು ಎನ್ನುವುದನ್ನು ನಾಳೆ ಜನ ನಿರ್ಧರಿಸಲಿದ್ದಾರೆ. ನನ್ನ ಪ್ರಕಾರ ಅರವತ್ತು ವಾರ್ಡ್ ಗಳಲ್ಲಿ ಇರುವ ಪ್ರಮುಖ ಬೆರಳೆಣಿಕೆಯ ವಾರ್ಡುಗಳಲ್ಲಿ ಕೋರ್ಟ್ ವಾರ್ಡ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಮಂಗಳೂರಿನ ಅಕ್ಷರಶ: ಹೃದಯಭಾಗಗಳಾದ ಸಿಟಿ ಸೆಂಟರ್, ಕೋರ್ಟ್, ರೈಲ್ವೆ ಸ್ಟೇಶನ್, ವೆನ್ ಲಾಕ್ ಆಸ್ಪತ್ರೆ, ಮಿಲಾಗ್ರಿಸ್ ಚರ್ಚ್ ಸಹಿತ ಆಸುಪಾಸಿನ ಏರಿಯಾಗಳನ್ನು ಒಳಗೊಂಡಿರುವ ಕೋರ್ಟ್ ವಾರ್ಡ್ ಹೇಗಿದೆ ಎನ್ನುವುದನ್ನು ನಾನು ಪೋಸ್ಟ್ ಮಾಡಿರುವ ಕೆಲವು ಫೋಟೋಗಳೇ ಸಾಕ್ಷಿ ನುಡಿಯುತ್ತವೆ.

ಮಂಗಳೂರಿನವರಿಗೆ ಇದು ಹೇಗೂ ಪ್ರಮುಖ ವಾರ್ಡ್ ಆಗಿದ್ದರೂ ಹೊರಗಿನಿಂದ ಬರುವ ಪ್ರವಾಸಿಗರಿಗೆ ಮಂಗಳೂರಿಗೆ ಬರುವಾಗ ಮೊದಲು ಎದುರುಗೊಳ್ಳುವುದೇ ಕೋರ್ಟ್ ವಾರ್ಡ್. ಇದು ಒಂದು ಮಾದರಿ ವಾರ್ಡ್ ಆಗಿದ್ದಲ್ಲಿ ಮಂಗಳೂರಿನ ಲುಕ್ ಬದಲಾಗುತ್ತಿತ್ತು. ಆದರೆ ಇಲ್ಲಿಂದ ಗೆದ್ದ ಹೋದವರು ಈ ಬಗ್ಗೆ ಅಂತಹ ಆಸಕ್ತಿಯನ್ನು ತೋರಿಸದೇ ಇದ್ದ ಕಾರಣ ಇದು ಇವತ್ತಿಗೂ ಕಳಪೆ ಫುಟ್ ಪಾತ್, ಕಸ ಕಡ್ಡಿಗಳ ರಾಶಿಯಿಂದಾಗಿ ಕಂಗೊಳಿಸುತ್ತಿದೆ. ಬೇಕಾದರೆ ಈ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಪಿವಿಎಸ್ ಬಿಲ್ಡಿಂಗ್ ನಿಂದ ಕುದ್ಮುಲ್ ರಂಗರಾವ್ ಹೆಣ್ಣುಮಕ್ಕಳ ಹಾಸ್ಟೆಲ್ ಗೆ ಹೋಗುವ ಫುಟ್ ಪಾತ್ ನೋಡಿ. ಆ ಫುಟ್ ಪಾತ್ ನಲ್ಲಿ ನಡೆಯುವುದೆಂದರೆ ಯಾವಾಗ ಚರಂಡಿಗೆ ಬೀಳುತ್ತೇವೆ ಎಂದು ಆತಂಕದಿಂದ ಕಾಲಿಡಬೇಕಾದ ಪರಿಸ್ಥಿತಿ. ಕೆನರಾ, ಶಾರದಾ ವಿದ್ಯಾಲಯಕ್ಕೆ ಹೋಗುವ ನೂರಾರು ಮಕ್ಕಳು ನಿತ್ಯ ಆ ಫುಟ್ ಪಾತ್ ಮೇಲೆ ಹೋಗಬೇಕಾಗುತ್ತದೆ. ಆದರೆ ಆ ಫುಟ್ ಪಾತ್ ಹೇಗಿದೆ ಎನ್ನುವುದನ್ನು ಅಕ್ಷರಗಳಿಗಿಂತ ಫೋಟೋಗಳೇ ಉತ್ತರ ಕೊಡುತ್ತವೆ. ಕಳೆದ 15 ವರ್ಷಗಳಿಂದ ಕೋರ್ಟ್ ವಾರ್ಡ್ ಕೇಳುವವರು ಗತಿಯಿಲ್ಲದೆ ಒದ್ದಾಡುತ್ತಿದೆ.

ಇಲ್ಲಿ ಕಳೆದ ಅವಧಿಗಿಂತ ಮೊದಲು ಕಾರ್ಪೋರೇಟರ್ ಆಗಿದ್ದವರು ಬಿಜೆಪಿಯ ರಂಗನಾಥ ಕಿಣಿ. ಅವರು ಏನು ಕೆಲಸ ಮಾಡಿದ್ದಾರೆ ಎನ್ನುವುದು ವಾರ್ಡಿನವರಿಗೆ ಗೊತ್ತು. ಅದರ ನಂತರ ಬಂದವರು ಕಾಂಗ್ರೆಸ್ಸಿನ ಎಸಿ ವಿನಯರಾಜ್. ಅವರು ಫ್ಲೆಕ್ಸ್ ಹಾಕಿ, ಮಾಜಿ ಶಾಸಕರ ಜೊತೆ ಓಡಾಡಿದ್ದು ನೀವು ನೋಡಿದ್ದಿರಿ. ಅವರು ಏನು ಮಾಡಿದ್ದಾರೆ ಎನ್ನುವುದು ಕೂಡ ನಿಮಗೆ ಗೊತ್ತು. ಈಗ ಅವರಿಬ್ಬರು ಮತ್ತೆ ಕಣದಲ್ಲಿದ್ದಾರೆ. ಅವರೊಂದಿಗೆ ಮತ್ತೊಬ್ಬ ವ್ಯಕ್ತಿ ಸ್ಪರ್ಧೆಯಲ್ಲಿದ್ದಾರೆ. ಅವರು ಸುನೀಲ್ ಕುಮಾರ್ ಬಜಾಲ್. ಮಂಗಳೂರಿನ ನಾಗರಿಕರಿಗೆ ಸಂಬಂಧಪಟ್ಟ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದವರು. ರಿಕ್ಷಾ, ಬಸ್ಸು, ಬೀಡಿ, ನೀರು, ಉದ್ಯೋಗ ಯಾವುದೇ ಹೋರಾಟದಲ್ಲಿ ಎದುರಿಗೆ ನಿಂತು ಜನಪ್ರತಿನಿಧಿಗಳ ವಿರುದ್ಧ ಮಾತನಾಡಿದವರು. ಅವರು ಹೆಚ್ಚಿನ ಜನಸಾಮಾನ್ಯರಿಗೆ ಮತ್ತು ನಾಗರಿಕರಿಗೆ ಚಿರಪರಿಚಿತರು. ಅವಕಾಶ ಕೊಟ್ಟರೆ ಏನಾದರೂ ಮಾಡಿ ತೋರಿಸಬಲ್ಲ ಯುವಕ.
ಯಾರು ಗೆದ್ದರೂ ಈ ಪ್ರಮುಖ ವಾರ್ಡಿನಲ್ಲಿ ಅನೇಕ ಆಗಬೇಕಾದ ಕೆಲಸಗಳಿವೆ. ಅರ್ಧ ಗಂಟೆ ಮಳೆ ಬಂದರೆ ರೈಲ್ವೆ ಸ್ಟೇಶನ್ ಹೊರಗೆ ಕೃತಕ ಕೆರೆ ನಿರ್ಮಾಣವಾಗುತ್ತದೆ. ಕೆಎಎಸ್ ರಾವ್ ರಸ್ತೆಯಿಂದ ಕೋರ್ಟಿಗೆ ಹೋಗುವ ರಸ್ತೆಯ ಅವ್ಯವಸ್ಥೆ ಸಹಿತ ಅನೇಕ ಅಭಿವೃದ್ಧಿ ಹೊಸ ಕಾರ್ಪೋರೇಟರ್ ಮುಂದಿವೆ. ಅಲ್ಲಿನ ಮತದಾರರು ಬುದ್ಧಿವಂತರು. ಕೆಲಸ ಮಾಡುವ ವ್ಯಕ್ತಿಗೆ ಮತ ಹಾಕಬಹುದು ಎನ್ನುವ ನಿರೀಕ್ಷೆ ಇದೆ.

  • Share On Facebook
  • Tweet It


- Advertisement -


Trending Now
ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
Hanumantha Kamath September 29, 2023
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
Hanumantha Kamath September 29, 2023
Leave A Reply

  • Recent Posts

    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
  • Popular Posts

    • 1
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • 2
      ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • 3
      ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • 4
      ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • 5
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search