• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೇಲಿನಿಂದ ಕೆಳಗಿನ ತನಕ ಬಿಜೆಪಿ, ಇದು ಅವಕಾಶ ಮತ್ತು ರಿಸ್ಕ್ ಎರಡೂ ಕೂಡ!!

Hanumantha Kamath Posted On November 14, 2019


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಗೆದ್ದಿರುವ ಸದಸ್ಯರಲ್ಲಿ ಹೆಚ್ಚಿನವರು ಹೊಸ ಮುಖಗಳು. ಅದರಲ್ಲಿಯೂ ಗೆದ್ದರಿರುವ ಮಹಿಳೆಯರಲ್ಲಿ ಬೆರಳೆಣಿಕೆಯವರನ್ನು ಬಿಟ್ಟರೆ ಅನೇಕರು ಪಾಲಿಕೆಯನ್ನು ಹೊರಗಿನಿಂದ ಮಾತ್ರ ನೋಡಿರುವುದು. ಆಲ್ ಮೋಸ್ಟ್ ಟಿಕೆಟ್ ಸಿಕ್ಕಿ ಗೆದ್ದಿರುವ ಮಹಿಳೆಯರಲ್ಲಿ ಅವರ ಪತಿ, ಸಹೋದರ ಪಕ್ಷಕ್ಕಾಗಿ ಮಾಡಿರುವ ಕೆಲಸವನ್ನು ನೋಡಿ ಟಿಕೆಟ್ ಕೊಡಲಾಗಿತ್ತು ವಿನ: ಬೇರೆ ಏನೂ ಇಲ್ಲ. ಅನೇಕ ಮಹಿಳಾ ಅಭ್ಯರ್ಥಿಗಳಲ್ಲಿ ಹೆಚ್ಚಿನವರನ್ನು ಮತದಾರರು ನೋಡಿದ್ದೇ ಮೊನ್ನೆ ಚುನಾವಣಾ ಪ್ರಚಾರಕ್ಕೆ ಅವರು ಮತ ಕೇಳಿ ಬಂದಾಗ. ಆದರೂ ಜನ ಈ ಪರಿ ಬಿಜೆಪಿಯನ್ನು ಎತ್ತಿ ಮುದ್ದಾಡಿಸಿದ್ದಾರೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್ಸಿನ ಕಳೆದ ಅವಧಿಯ ವಿಫಲ ಆಡಳಿತ ಮತ್ತು ದಿವ್ಯ ನಿರ್ಲಕ್ಷ್ಯ.

ಕಳೆದ ಬಾರಿ ಮಳೆ ಜಾಸ್ತಿ ಬಂದು ನೆರೆಯ ಪರಿಸ್ಥಿತಿ ಉಂಟಾದಾಗಲೂ ಕಾಂಗ್ರೆಸ್ ನಾಯಕರು ಜನರ ಹತ್ತಿರಕ್ಕೆ ಹೋದದ್ದು ಅಷ್ಟಕಷ್ಟೆ. ಅದರ ನಂತರ ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಕಾಂಗ್ರೆಸ್ ನಾಯಕರು ತಮ್ಮ ಬಳಿ ಅಧಿಕಾರ ಇಲ್ಲ ಎಂದೋ ಅಥವಾ ಬಿಜೆಪಿ ಶಾಸಕರೇ ನೋಡಿಕೊಳ್ಳಲಿ ಎಂದೋ ಮೌನವಾಗಿ ಮನೆಯಲ್ಲಿ ಮಲಗಿದ್ದರು. ಅದೆಲ್ಲಾ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಹಾಗೆ ಆ ಎರಡೂ ಸಂದರ್ಭಗಳಲ್ಲಿ ರಾತ್ರಿ-ಹಗಲು ದುಡಿದ ಇಬ್ಬರೂ ಯುವ ಶಾಸಕರಿಗೆ ಮತದಾರ ಜೈ ಎಂದಿದ್ದಾನೆ. ಬಿಜೆಪಿಯ ಇಬ್ಬರೂ ಶಾಸಕರ ಪ್ಲಸ್ ಎಂದರೆ ಅವರು ಜನರ ಕೈಗೆ ಸುಲಭವಾಗಿ ಸಿಗುತ್ತಾರೆ. ಕೆಲಸ ಮಾಡಿ ತೋರಿಸಬೇಕೆಂಬ ಉತ್ಸಾಹ ಇದೆ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ನಾಲ್ಕು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಾಗ ಇಬ್ಬರೂ ಶಾಸಕರು ಹೋಗಿ ಸಿಎಂ ಬಳಿ ವಿಶೇಷ ಅನುದಾನವನ್ನು ಕೂಡ ತೆಗೆದುಕೊಂಡು ಬಂದು ಜನರಿಂದ ವಿಶ್ವಾಸವನ್ನು ಗೆದ್ದುಕೊಂಡಿದ್ದಾರೆ.

ಇನ್ನು ಕೆಲವು ಕಡೆ ವಿಶೇಷವಾಗಿ ಮಾಜಿ ಮೇಯರ್ ಹರಿನಾಥ್, ದೀಪಕ್ ಪೂಜಾರಿ, ಡಿಕೆ ಅಶೋಕ್ ಅವರು ಸೋತಿರುವುದು ಜನ ಹಿಂದಿನ ಪಾಲಿಕೆ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಒಳ್ಳೆಯ ಕೆಲಸಗಳನ್ನು ಮಾಡಿಯೂ ಕೊಡಿಯಾಲ್ ಬೈಲ್ ವಾರ್ಡಿನ ಪ್ರಕಾಶ್ ಸಾಲ್ಯಾನ್ ಬಿಜೆಪಿಯ ಅನುಭವಿ ಕಾರ್ಪೋರೇಟರ್ ಸುಧೀರ್ ಶೆಟ್ಟಿ ಕಣ್ಣೂರು ವಿರುದ್ಧ ಸೋತಿರುವುದು ಬಿಜೆಪಿಯ ಅಲೆ ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಬೀಸಿರುವುದು ಸ್ಪಷ್ಟವಾಗಿದೆ. ಈ ಪ್ರಮಾಣದಲ್ಲಿ ಜನ ಬಿಜೆಪಿಯ ಶಾಸಕರ ಕೈ ಹಿಡಿದಿರುವುದು ಸಹಜವಾಗಿ ಅವರ ಮೇಲಿನ ಭರವಸೆ ಮತ್ತು ಒತ್ತಡ ಹೆಚ್ಚುವಂತೆ ಮಾಡಿದೆ. ಅದನ್ನು ಈಡೇರಿಸುವ ಜವಾಬ್ದಾರಿ ಅವರ ಮೇಲಿದೆ. ಅದಕ್ಕೆ ಮೂರು ವರ್ಷಗಳನ್ನು ಕಾಯಲು ಮತದಾರ ಸಿದ್ಧನಿದ್ದಾನೆ. ಮುಂದಿನ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತದಾರ ಒಂದು ವಿಷಯವನ್ನು ಸರಿಯಾಗಿ ತೂಗಿ ನೋಡಲಿದ್ದಾನೆ. ಕೆಲಸ ಎಷ್ಟು ಆಗಿದೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search