• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೇಲಿನಿಂದ ಕೆಳಗಿನ ತನಕ ಬಿಜೆಪಿ, ಇದು ಅವಕಾಶ ಮತ್ತು ರಿಸ್ಕ್ ಎರಡೂ ಕೂಡ!!

Hanumantha Kamath Posted On November 14, 2019
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಗೆದ್ದಿರುವ ಸದಸ್ಯರಲ್ಲಿ ಹೆಚ್ಚಿನವರು ಹೊಸ ಮುಖಗಳು. ಅದರಲ್ಲಿಯೂ ಗೆದ್ದರಿರುವ ಮಹಿಳೆಯರಲ್ಲಿ ಬೆರಳೆಣಿಕೆಯವರನ್ನು ಬಿಟ್ಟರೆ ಅನೇಕರು ಪಾಲಿಕೆಯನ್ನು ಹೊರಗಿನಿಂದ ಮಾತ್ರ ನೋಡಿರುವುದು. ಆಲ್ ಮೋಸ್ಟ್ ಟಿಕೆಟ್ ಸಿಕ್ಕಿ ಗೆದ್ದಿರುವ ಮಹಿಳೆಯರಲ್ಲಿ ಅವರ ಪತಿ, ಸಹೋದರ ಪಕ್ಷಕ್ಕಾಗಿ ಮಾಡಿರುವ ಕೆಲಸವನ್ನು ನೋಡಿ ಟಿಕೆಟ್ ಕೊಡಲಾಗಿತ್ತು ವಿನ: ಬೇರೆ ಏನೂ ಇಲ್ಲ. ಅನೇಕ ಮಹಿಳಾ ಅಭ್ಯರ್ಥಿಗಳಲ್ಲಿ ಹೆಚ್ಚಿನವರನ್ನು ಮತದಾರರು ನೋಡಿದ್ದೇ ಮೊನ್ನೆ ಚುನಾವಣಾ ಪ್ರಚಾರಕ್ಕೆ ಅವರು ಮತ ಕೇಳಿ ಬಂದಾಗ. ಆದರೂ ಜನ ಈ ಪರಿ ಬಿಜೆಪಿಯನ್ನು ಎತ್ತಿ ಮುದ್ದಾಡಿಸಿದ್ದಾರೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್ಸಿನ ಕಳೆದ ಅವಧಿಯ ವಿಫಲ ಆಡಳಿತ ಮತ್ತು ದಿವ್ಯ ನಿರ್ಲಕ್ಷ್ಯ.

ಕಳೆದ ಬಾರಿ ಮಳೆ ಜಾಸ್ತಿ ಬಂದು ನೆರೆಯ ಪರಿಸ್ಥಿತಿ ಉಂಟಾದಾಗಲೂ ಕಾಂಗ್ರೆಸ್ ನಾಯಕರು ಜನರ ಹತ್ತಿರಕ್ಕೆ ಹೋದದ್ದು ಅಷ್ಟಕಷ್ಟೆ. ಅದರ ನಂತರ ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಕಾಂಗ್ರೆಸ್ ನಾಯಕರು ತಮ್ಮ ಬಳಿ ಅಧಿಕಾರ ಇಲ್ಲ ಎಂದೋ ಅಥವಾ ಬಿಜೆಪಿ ಶಾಸಕರೇ ನೋಡಿಕೊಳ್ಳಲಿ ಎಂದೋ ಮೌನವಾಗಿ ಮನೆಯಲ್ಲಿ ಮಲಗಿದ್ದರು. ಅದೆಲ್ಲಾ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಹಾಗೆ ಆ ಎರಡೂ ಸಂದರ್ಭಗಳಲ್ಲಿ ರಾತ್ರಿ-ಹಗಲು ದುಡಿದ ಇಬ್ಬರೂ ಯುವ ಶಾಸಕರಿಗೆ ಮತದಾರ ಜೈ ಎಂದಿದ್ದಾನೆ. ಬಿಜೆಪಿಯ ಇಬ್ಬರೂ ಶಾಸಕರ ಪ್ಲಸ್ ಎಂದರೆ ಅವರು ಜನರ ಕೈಗೆ ಸುಲಭವಾಗಿ ಸಿಗುತ್ತಾರೆ. ಕೆಲಸ ಮಾಡಿ ತೋರಿಸಬೇಕೆಂಬ ಉತ್ಸಾಹ ಇದೆ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ನಾಲ್ಕು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಾಗ ಇಬ್ಬರೂ ಶಾಸಕರು ಹೋಗಿ ಸಿಎಂ ಬಳಿ ವಿಶೇಷ ಅನುದಾನವನ್ನು ಕೂಡ ತೆಗೆದುಕೊಂಡು ಬಂದು ಜನರಿಂದ ವಿಶ್ವಾಸವನ್ನು ಗೆದ್ದುಕೊಂಡಿದ್ದಾರೆ.

ಇನ್ನು ಕೆಲವು ಕಡೆ ವಿಶೇಷವಾಗಿ ಮಾಜಿ ಮೇಯರ್ ಹರಿನಾಥ್, ದೀಪಕ್ ಪೂಜಾರಿ, ಡಿಕೆ ಅಶೋಕ್ ಅವರು ಸೋತಿರುವುದು ಜನ ಹಿಂದಿನ ಪಾಲಿಕೆ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಒಳ್ಳೆಯ ಕೆಲಸಗಳನ್ನು ಮಾಡಿಯೂ ಕೊಡಿಯಾಲ್ ಬೈಲ್ ವಾರ್ಡಿನ ಪ್ರಕಾಶ್ ಸಾಲ್ಯಾನ್ ಬಿಜೆಪಿಯ ಅನುಭವಿ ಕಾರ್ಪೋರೇಟರ್ ಸುಧೀರ್ ಶೆಟ್ಟಿ ಕಣ್ಣೂರು ವಿರುದ್ಧ ಸೋತಿರುವುದು ಬಿಜೆಪಿಯ ಅಲೆ ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಬೀಸಿರುವುದು ಸ್ಪಷ್ಟವಾಗಿದೆ. ಈ ಪ್ರಮಾಣದಲ್ಲಿ ಜನ ಬಿಜೆಪಿಯ ಶಾಸಕರ ಕೈ ಹಿಡಿದಿರುವುದು ಸಹಜವಾಗಿ ಅವರ ಮೇಲಿನ ಭರವಸೆ ಮತ್ತು ಒತ್ತಡ ಹೆಚ್ಚುವಂತೆ ಮಾಡಿದೆ. ಅದನ್ನು ಈಡೇರಿಸುವ ಜವಾಬ್ದಾರಿ ಅವರ ಮೇಲಿದೆ. ಅದಕ್ಕೆ ಮೂರು ವರ್ಷಗಳನ್ನು ಕಾಯಲು ಮತದಾರ ಸಿದ್ಧನಿದ್ದಾನೆ. ಮುಂದಿನ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತದಾರ ಒಂದು ವಿಷಯವನ್ನು ಸರಿಯಾಗಿ ತೂಗಿ ನೋಡಲಿದ್ದಾನೆ. ಕೆಲಸ ಎಷ್ಟು ಆಗಿದೆ!

0
Shares
  • Share On Facebook
  • Tweet It




Trending Now
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
Hanumantha Kamath January 12, 2026
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
Hanumantha Kamath January 10, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
  • Popular Posts

    • 1
      ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • 2
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • 3
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 4
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 5
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?

  • Privacy Policy
  • Contact
© Tulunadu Infomedia.

Press enter/return to begin your search