• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸ್ಮಾರ್ಟ್ ಸಿಟಿ ರಸ್ತೆಗಳಿಗೆ ಬಂಗಾರ ಮತ್ತು ಬೆಳ್ಳಿಯ ಹೊದಿಕೆ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ!!

Hanumantha Kamath Posted On December 11, 2019
0


0
Shares
  • Share On Facebook
  • Tweet It

ನಿನ್ನೆಯ ಜಾಗೃತ ಅಂಕಣವನ್ನು ಎಲ್ಲಿ ನಿಲ್ಲಿಸಿದ್ದೇನೋ ಅಲ್ಲಿಂದಲೇ ಪ್ರಾರಂಭಿಸುತ್ತೇನೆ. ಮೊನ್ನೆ ಸೋಮವಾರ ನಡೆದ ಸ್ಮಾರ್ಟ್ ಸಿಟಿಯ ಮೀಟಿಂಗ್ ನ ಮುಂದುವರೆದ ಭಾಗದಲ್ಲಿ ನನಗೆ ಮಾತನಾಡಲು ಅವಕಾಶ ಸಿಕ್ಕಿದಾಗ ನಾನು ಕೇಳಿದ ಪ್ರಶ್ನೆ ಏನೆಂದರೆ ಸ್ಮಾರ್ಟ್ ಸಿಟಿಯ ಅನುದಾನದಲ್ಲಿ ಕಾಂಕ್ರೀಟಿಕರಣ ಆಗುವ ರಸ್ತೆಗಳಿಗೆ ಬಂಗಾರದ ಮತ್ತು ಬೆಳ್ಳಿಯ ಕೋಟಿಂಗ್ ಏನಾದರೂ ಮಾಡುತ್ತಿರಾ ಎಂದು ಕೇಳಿದೆ. ಸಭೆಯಲ್ಲಿ ಶಾಸಕ ಡಿ ವೇದವ್ಯಾಸ ಕಾಮತ್, ಸ್ಮಾರ್ಟ್ ಸಿಟಿ ನಿರ್ದೇಶಕ ಮೊಹಮ್ಮದ್ ನಜೀರ್, ಪಾಲಿಕೆಯ ತಾಂತ್ರಿಕ ಸಲಹೆಗಾರ ಧರ್ಮರಾಜ್ ಮತ್ತು ಕೆಲವು ಅಧಿಕಾರಿಗಳು ಮತ್ತು ನಾಗರಿಕರು ಇದ್ದರು. ನಾನು ಕೇಳಿದ್ದ ಪ್ರಶ್ನೆಯಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ಬೇಕಾದರೆ ನಿಮಗೆ ಅಂಕಿಅಂಶ ಕೊಡುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕಳೆದ ಬಾರಿ ಸಿಎಂ ಆಗಿದ್ದಾಗ ನಮ್ಮ ಪಾಲಿಕೆಗೆ ಪ್ರತಿ ವರ್ಷ ನೂರು ಕೋಟಿಯಂತೆ ಎರಡು ಬಾರಿ ಒಟ್ಟು ಇನ್ನೂರು ಕೋಟಿ ಕೊಟ್ಟಿದ್ದರು. ಆ 200 ಕೋಟಿಗೆ 25 ಕೋಟಿ ಸೇರಿಸಿ ಒಟ್ಟು 225 ಕೋಟಿಯಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 105 ಕಿ.ಮೀ ರಸ್ತೆಗೆ ಕಾಂಕ್ರೀಟಿಕರಣ ಮಾಡಲಾಗಿದೆ. ಹಾಗಾದರೆ ಸ್ಮಾರ್ಟ್ ಸಿಟಿಯಲ್ಲಿ ಬಂದಿರುವ 205 ಕೋಟಿಯಲ್ಲಿ ಇವರು ಎಷ್ಟು ರಸ್ತೆಗೆ ಕಾಂಕ್ರೀಟಿಕರಣ ಮಾಡಬಹುದು ಎಂದು ನೀವೆ ಲೆಕ್ಕ ಹಾಕಿ. ಕಡಿಮೆ ಎಂದರೂ 80 ರಿಂದ 90 ಕಿ.ಮೀ ರಸ್ತೆಗೆ ಕಾಂಕ್ರೀಟಿಕರಣ ಮಾಡಬಹುದಾ? ಆದರೆ ಸ್ಮಾರ್ಟ್ ಸಿಟಿಯಲ್ಲಿ 205 ಕೋಟಿಯಲ್ಲಿ ಕಾಂಕ್ರೀಟಿಕರಣ ಆಗಲಿರುವುದು 12ಮುಕ್ಕಾಲು ಕಿ.ಮೀ ಮಾತ್ರ. ಅದಕ್ಕೆ ನಾನು ಕೇಳಿದ್ದು ಆ 12ಮುಕ್ಕಾಲು ಕಿ.ಮೀಗೆ ಏನಾದರೂ ಬಂಗಾರ ಮತ್ತು ಬೆಳ್ಳಿಯ ಹೊದಿಕೆ ಮಾಡುವ ಪ್ಲಾನ್ ಇದೆಯಾ? ಇಲ್ಲದಿದ್ದರೆ ಭ್ರಷ್ಟಾಚಾರಕ್ಕೆ ಆಸ್ಪದವೇ ಇಲ್ಲದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿಯೇ ಹೀಗಾದರೆ ಹೇಗೆ? ಒಂದು ವೇಳೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರ ಆಗುತ್ತಿದ್ರೆ ಆ ಭ್ರಷ್ಟಾಚಾರವನ್ನು ನೋಡಿಯೂ ಯಾರಾದರೂ ಕಮಲ ಪಕ್ಷದ ಜನಪ್ರತಿನಿಧಿಗಳು ಸುಮ್ಮನಿದ್ದರೆ ಅದು ಮೋದಿಗೆ ಮಾಡುವ ದ್ರೋಹ.

ಯಾಕೆಂದರೆ ಆ ಪುಣ್ಯಾತ್ಮ ಕೇಂದ್ರದಲ್ಲಿ ಕುಳಿತು ದೇಶದ ಅಭಿವೃದ್ಧಿಯ ಕನಸು ಕಾಣುತ್ತಿರುವ ಕಾರಣದಿಂದ ಬಿಜೆಪಿಗೆ ಜನ ಈ ಪರಿ ಬೆಂಬಲ ಕೊಡುತ್ತಿರುವುದು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರ ಆಗಬಾರದು ಎನ್ನುವ ಕಾರಣಕ್ಕೆ ಮೋದಿ ಆ ಕಮಿಟಿಗಳಲ್ಲಿ ಅಧಿಕಾರಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಟ್ಟು ಜನಪ್ರತಿನಿಧಿಗಳಾದ ಶಾಸಕರನ್ನು, ಸಂಸದರನ್ನು ಅದರಿಂದ ಹೊರಗೆ ಇಟ್ಟಿರುವುದು. ಈಗ ನಾವೇ ರಾಜರು ಎಂದು ಅಧಿಕಾರಿಗಳು ಮೇಯಲು ಶುರು ಮಾಡಿದರೆ ಅದು ಶಾಸಕರ, ಸಂಸದರ ಗಮನಕ್ಕೆ ಬಂದ ಕೂಡಲೇ ಅಂತಹ ಅಧಿಕಾರಿಗಳಿಗೆ ಎಲ್ಲಿ ದಾರಿ ತೋರಿಸಬೇಕೋ ಅಲ್ಲಿ ದಾರಿ ತೋರಿಸಿಬಿಡಬೇಕು. ಇಲ್ಲದಿದ್ದರೆ ಅಂತವರು ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆ. ಅದು ಶಾಸಕರನ್ನು, ಸಂಸದರನ್ನು ಯಾವಾಗ ಬೇಕಾದರೂ ಸುಟ್ಟುಬಿಡಬಹುದು. ಶಾಸಕರು, ಸಂಸದರು ಅವರ ಜಾಗ್ರತೆಯಲ್ಲಿ ಇದ್ದರೆ ಒಳ್ಳೆಯದು.

ಬೇಕಾದರೆ ಇನ್ನೊಂದು ಉದಾಹರಣೆ ನೋಡಿ. ಸ್ಮಾರ್ಟ್ ಸಿಟಿ ಬಸ್ ಸ್ಟಾಪ್ ಗಳ ನಿರ್ಮಾಣವಾಗುತ್ತಿದೆ. ಸಣಕಲು ಬಸ್ ಸ್ಟಾಪ್ ಗಳಿಗೆ ಇವರು ಹನ್ನೆರಡುವರೆ ಲಕ್ಷ ವೆಚ್ಚ ತೋರಿಸುತ್ತಿದ್ದಾರೆ. ಕುರುಡ ಕೂಡ ಮುಟ್ಟಿ ನೋಡಿದರೆ ಅದಕ್ಕೆ ಅಷ್ಟು ಖರ್ಚಾಗಲ್ಲ ಎಂದು ಹೇಳಬಲ್ಲ. ಇನ್ನು ಸ್ಮಾರ್ಟ್ ಸಿಟಿ ಯೋಜನೆಯನ್ನು ಅದ್ಯಾವ ಬುದ್ಧಿವಂತರು ಕೂತು ಅನುಷ್ಟಾನ ಮಾಡುತ್ತಾರೋ ಆ ದೇವರಿಗೆ ಗೊತ್ತು. ಪದವು ಮತ್ತು ಪಣಂಬೂರನ್ನೇ ನೋಡಿ. ಅಲ್ಲಿ ಈ ಮೊದಲೇ ಎರಡು ಬಸ್ ಸ್ಟಾಪ್ ಗಳಿವೆ. ಅದರ ನಂತರ ಸ್ಮಾರ್ಟ್ ಸಿಟಿಯವರು ಇನ್ನೊಂದು ಕಟ್ಟಿಸಿದ್ದಾರೆ. ಅದರಲ್ಲಿ ದಿನಕ್ಕೆ ಒಬ್ಬ ವ್ಯಕ್ತಿ ಬಂದು ಕೂತರೂ ಅದು ದೊಡ್ಡ ವಿಷಯ. ಯಾಕೆಂದರೆ ಉಳಿದ ಎರಡು ಬಸ್ ಸ್ಟಾಪ್ ಚೆನ್ನಾಗಿವೆ ಮತ್ತು ಎಲ್ಲಿ ಕಟ್ಟಲ್ಪಡಬೇಕೋ ಅಲ್ಲಿಯೇ ಕಟ್ಟಲ್ಪಟ್ಟಿವೆ. ಹಾಗಾದರೆ ಮೂರನೇ ಬಸ್ ಸ್ಟಾಪ್ ಭರ್ತಿಗಾ? ಇನ್ನು ನೆರೆ ಪೀಡಿತರು ಮನೆಗಳನ್ನು ಕಳೆದುಕೊಂಡಿದ್ದರೆ ಅವರಿಗೆ 5 ಲಕ್ಷ ಕೊಟ್ಟು ಮನೆ ಕಟ್ಟಲು ನೆರವಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ. 5 ಲಕ್ಷದಲ್ಲಿ ಮನೆ ಆಗುವುದಾದರೆ ಬಸ್ ಸ್ಟಾಪ್ ಆಗಲ್ವಾ. ಅದಕ್ಕೆ 12 ಲಕ್ಷ ಬೇಕಾ. ಸ್ಮಾರ್ಟ್ ಸಿಟಿ ಅಧಿಕಾರಿಗಳೇ ಯಾರ ಕಿವಿಗೆ ಹೂ ಇಡಲು ಹೊರಟಿದ್ದೀರಿ!

0
Shares
  • Share On Facebook
  • Tweet It




Trending Now
ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
Hanumantha Kamath July 14, 2025
ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
Hanumantha Kamath July 14, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
  • Popular Posts

    • 1
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 2
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 3
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • 4
      ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • 5
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!

  • Privacy Policy
  • Contact
© Tulunadu Infomedia.

Press enter/return to begin your search