• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜನಾರ್ಧನ ಪೂಜಾರಿಯವರು ಡಿಕೆಶಿ ಬೆಂಬಲಕ್ಕೆ ನಿಂತ ಉದ್ದೇಶ ಏನು?

TNN Correspondent Posted On August 3, 2017
0


0
Shares
  • Share On Facebook
  • Tweet It

ರಾಜ್ಯದ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮನೆ, ಕಚೇರಿ, ಆಪ್ತರ ಮನೆಯಲ್ಲಿ ಆದಾಯ ಇಲಾಖೆಯ ಅಧಿಕಾರಿಗಳಿಂದ ಶೋಧ ನಡೆದಾಗ ಮೊದಲು ಎದ್ದವರು ಬಿ ಜನಾರ್ಧನ ಪೂಜಾರಿ. ಫೇಸ್ ಬುಕ್ ಸ್ಟೇಟಸ್ ನಲ್ಲಿ ಯಾರಾದರೂ ಈ ಶೋಧದ ಕುರಿತು ತಮ್ಮ +ಅಭಿಪ್ರಾಯ ಬರೆಯುವ ಮೊದಲೇ ಒಂದು ಸುದ್ದಿಗೋಷ್ಟಿಯನ್ನು ತಾವು ಇದ್ದಲ್ಲಿಗೆ ಕರೆಸುವ ವೇಗ ಮತ್ತು “ಪವರ್” ಇರುವುದು ಬಹುಶ: ಅವರಿಗೆ ಮಾತ್ರವೇನೋ? ಬೇರೆ ನಾಯಕರು ಈ ಬಗ್ಗೆ ಏನೂ ಕಮೆಂಟ್ ಮಾಡುವುದು ಎಂದು ತಲೆಕೆರೆದುಕೊಳ್ಳುತ್ತಿರುವಾಗಲೇ ರಾಜ್ಯಮಟ್ಟದ ವಾಹಿನಿಗಳ ವರದಿಗಾರರನ್ನು ತಮ್ಮಲ್ಲಿಗೆ ಕರೆಸಿ ಏಕಾಂಗಿಯಾಗಿ ಕುಳಿತು ಈ ಘಟನೆಯ ಬಗ್ಗೆ ತಮ್ಮ ವಾಗ್ಝರಿಯನ್ನು ಹರಿಸುವ ಕಲೆ ಮತ್ತು ಸಾಮರ್ಥ್ಯ ಪೂಜಾರಿಯವರಿಗೆ ಮಾತ್ರ ಸಿದ್ಧಿಸಿದೆ. ಅವರು ಅದನ್ನು ಈ ಬಾರಿಯೂ ಮಾಡಿದ್ದಾರೆ ಮತ್ತು ತಮ್ಮ ಆಪ್ತಬಳಗದಲ್ಲಿ ಒಬ್ಬರಾಗಿರುವ ಡಿಕೆಶಿವಕುಮಾರ್ ಅವರ ಮನೆ, ಕಚೇರಿಯಲ್ಲಿ ಐಟಿ ಶೋಧ ಎಂದ ಕೂಡಲೇ ಬಹಳ ಫಾಸ್ಟ್ ಆಗಿ ಮಾಡಿದ್ದಾರೆ. ರಾಜ್ಯಸಭಾ ಸ್ಥಾನದಿಂದ ಕೆಳಗೆ ಇಳಿದು ದಶಕವಾಗುತ್ತಾ ಬಂದರೂ ಇನ್ನೂ ಕೂಡ ತನ್ನ ಪಕ್ಷಕ್ಕೆ ಏನಾದರೂ ತೊಂದರೆಯಾದಾಗ ಅದಕ್ಕೆ ಮೊದಲು ಜಿಲ್ಲೆಯಿಂದ ಧ್ವನಿ ಮೊಳಗಿಸುವವರು ಇದೇ ಪೂಜಾರಿ.

ಬಹುಶ: ಇದೇ ರೀತಿಯ ಐಟಿ ಶೋಧ ಸಿದ್ಧರಾಮಯ್ಯನವರ ಮೇಲೆ ನಡೆದಿದ್ದರೆ ಪೂಜಾರಿ ಹೀಗೆ ಸುದ್ದಿಗೋಷ್ಟಿ ಮಾಡಿ ಕೇಂದ್ರ ಸರಕಾರವನ್ನು ಟೀಕಿಸುತ್ತಿರಲಿಲ್ಲ ಎನ್ನುವವರು ಕಾಂಗ್ರೆಸ್ ನಲ್ಲಿ ಇದ್ದಾರೆ. ಅದು ನಿಜ ಕೂಡ. ಎಸ್ ಎಂ ಕೃಷ್ಣ, ಡಿಕೆಶಿ ಇವರ ಮೇಲೆ ಏನೂ ಆರೋಪ ಬಂದರೂ ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವವರು ಪೂಜಾರಿ. ಈ ಬಾರಿಯೂ ಅದನ್ನು ಮಾಡಿದ್ದಾರೆ. ಡಿಕೆಶಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕೆ ಮಾಡಿದ್ದಕ್ಕೆ ಈ ರೇಡ್ ಆಯಿತು ಎಂದು ಪೂಜಾರಿ ಹೇಳಿದ್ದಾರೆ. ಕಾಂಗ್ರೆಸ್ ಈಗ ರಾಷ್ಟ್ರದಲ್ಲಿ ವಿಪಕ್ಷ(?)ದಲ್ಲಿ ಇದೆ. ಆದ್ದರಿಂದ ಅಧಿಕಾರದಲ್ಲಿರುವ ಪಕ್ಷದ ವಿರುದ್ಧ ಆರೋಗ್ಯಕರ ಟೀಕೆ ಮಾಡುವುದು ತಪ್ಪಲ್ಲ. ಹಾಗಿರುವಾಗ ಟೀಕಿಸಿದ ಪ್ರತಿಯೊಬ್ಬರ ಮೇಲೆ ಕೂಡ ಐಟಿ ದಾಳಿ ಮಾಡಲು ಆಗುತ್ತಾ? ಅಷ್ಟೇ ಯಾಕೆ, ನೀವು ಎಷ್ಟು ಸಲ ಮೋದಿಯವರನ್ನು ಟೀಕಿಸಿಲ್ಲ, ನಿಮ್ಮ ಮೇಲೆ ಎಂದಾದರೂ ದಾಳಿ ಆಗಿದೆಯಾ? ನಿಮ್ಮ ಪಕ್ಷದಲ್ಲಿ ಎಷ್ಟೋ ಮಂದಿ ಟೀಕಿಸಿದ್ದಾರೆ, ಮುಂದೆನೂ ಟೀಕಿಸುತ್ತಾರೆ, ಅವರ ಮೇಲೆ ದಾಳಿ ಮಾಡುತ್ತಾ ಕೂರಲು ಆಗುತ್ತದೆಯಾ? ಇನ್ನು ನೀವು ಐಟಿಯನ್ನು, ಇಡಿಯನ್ನು ಕೇಂದ್ರ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದೆ ಎನ್ನುತ್ತೀರಿ, ಇದೇ ಜನಾರ್ಧನ ರೆಡ್ಡಿಯವರ ಮೇಲೆ ದಾಳಿ ಆಗಿತ್ತಲ್ಲ, ಆಗ ಯುಪಿಎ ಹಾಗೆ ಮಾಡಿತ್ತಾ? ಯುಪಿಎ ಮಾಡಿದರೆ ನ್ಯಾಯಕ್ಕೆ ಸಂದ ಜಯ, ಅದೇ ಎನ್ ಡಿಎ ಮಾಡಿದರೆ ಅಧಿಕಾರ ದುರ್ಬಳಕೆ ಹೇಗೆ ಆಗುತ್ತೆ ಪೂಜಾರಿಯವರೇ.

ಇನ್ನು ನೀವು ಅಧಿಕಾರದಲ್ಲಿದ್ದಾಗ ಅಧಿಕಾರ ದುರ್ಬಳಕೆ ಮಾಡಿ ರೇಡ್ ಯಾವತ್ತೂ ಮಾಡಿಸಿಲ್ಲ ಎನ್ನುತ್ತೀರಿ. ಇದರಲ್ಲಿ ಎರಡು ಅರ್ಥ ಇದೆ. ಒಂದೊ ನೀವು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದವರ ಬಗ್ಗೆ ಗೊತ್ತಿದ್ದರೂ ಸುಮ್ಮನೆ ಕೂತು ನಿಮಗೆ ಕೊಟ್ಟ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ಲಕ್ಷಿಸಿದ್ದಿರಿ. ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ನೀವು ತಪ್ಪು ಮಾಡಿದವರ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ ಎಂದರೆ ಅದು ಒಳ್ಳೆಯತನ ಅಲ್ಲ ಪೂಜಾರಿಯವರೇ. ಅದು ಜಾಣ ಕುರುಡಾಗುತ್ತದೆ.

ಇನ್ನು ಕೇಂದ್ರಿಯ ಭದ್ರತಾ ಪಡೆಯ ಸಿಬ್ಬಂದಿಗಳನ್ನು ಇದಕ್ಕೆ ಬಳಸಲಾಗಿದೆ ಎಂದು ಆರೋಪ ಮಾಡಿದ್ದಿರಿ. ನಿಮಗೆ ಗೊತ್ತಿರಬಹುದು, ಐಟಿ ಅಧಿಕಾರಿಗಳು ಹೊಕ್ಕಿದ್ದು ಇಲಿಯ ಬಿಲ ಅಲ್ಲ, ದೇಶದ ಎರಡನೇ ಶ್ರೀಮಂತ ಸಚಿವರ ಮನೆ, ಕಚೇರಿಗೆ. ಅದರೊಂದಿಗೆ ರಾಜ್ಯ ಕಂಡ ಪ್ರಭಾವಿ ರಾಜಕಾರಣಿಯ ಅಭೇದ್ಯ ಕೋಟೆಯ ಒಳಗೆ. ಒಳಗೆ ಶೋಧ ನಡೆಯುತ್ತಿದ್ದರೆ ಹೊರಗೆ ನಿಮ್ಮವರು ಹೇಗೆ ಪ್ರತಿಭಟನೆ ಮಾಡುತ್ತಿದ್ದರು ಎಂದು ನಿಮಗೆ ಗೊತ್ತಿರಬಹುದು. ರಾಜ್ಯದ ಪೊಲೀಸರಿಗೆ ಒಂದು ಸಣ್ಣ ಸುಳಿವು ಸಿಗದಂತೆ ಈ ಶೋಧದ ಕೊನೆಯ ಘಳಿಗೆಯ ತನಕ ರಹಸ್ಯ ಕಾಪಾಡಿಕೊಂಡು ಬಂದಿರುವುದರ ಹಿಂದೆ ಐಟಿ ಅಧಿಕಾರಿಗಳ ಉದ್ದೇಶ ಏನಾದರೂ ಇರಬಹುದು. ಪೂಜಾರಿಯವರೇ, ನಿಮಗೆ ಸುದ್ದಿಗೋಷ್ಟಿ ಮಾಡುವ ಹಕ್ಕು ಮತ್ತು ಸ್ವಾತಂತ್ರ್ಯ ಎರಡೂ ಇದೆ. ಆದರೆ ಈ ಸುದ್ದಿಗೋಷ್ಟಿಯನ್ನು ನೀವು ಅವಸರದಲ್ಲಿ ಮಾಡಿ ಎನು ಸಾಧಿಸಿದಂತೆ ಆಯಿತು ಎನ್ನುವುದು ಸದ್ಯದ ಪ್ರಶ್ನೆ.

0
Shares
  • Share On Facebook
  • Tweet It




Trending Now
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
Tulunadu News January 12, 2026
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
Tulunadu News January 10, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
  • Popular Posts

    • 1
      ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • 2
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!

  • Privacy Policy
  • Contact
© Tulunadu Infomedia.

Press enter/return to begin your search