• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರು ಇನ್ನು ರಾಷ್ಟ್ರೀಯ ಮಾಧ್ಯಮಗಳಲ್ಲಿ ಮತ್ತೆ ಮಿಂಚುತ್ತದೆ, ನೋಡ್ತಾ ಇರಿ!!

Hanumantha Kamath Posted On December 20, 2019
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಇಬ್ಬರು ಅನಾವಶ್ಯಕವಾಗಿ ತಮ್ಮ ಪ್ರಾಣ ಕಳೆದುಕೊಂಡರು. ಅವರನ್ನು ಪ್ರತಿಭಟನೆಗೆ ಇಳಿಸಿದವರಿಗೆ ಯಾವ ನಷ್ಟವೂ ಆಗಲಿಲ್ಲ. ಸತ್ತವರ್ಯಾರು ಎಂದು ಕೂಡ ಪ್ರತಿಭಟನೆಗೆ ಕರೆ ಕೊಟ್ಟವರಿಗೆ ಗೊತ್ತಿರಲಿಕ್ಕಿಲ್ಲ. ಪ್ರತಿಭಟನೆಗೆ ಜನರನ್ನು ಸೇರಿಸಲು ಯಾರಿಗಾದರೂ ಒಬ್ಬರಿಗೆ ಗುತ್ತಿಗೆ ಕೊಡಲಾಗಿರುತ್ತದೆ. ಅವನು ಒಂದಿಷ್ಟು ಜನರಿಗೆ ಹೇಳಿರುತ್ತಾನೆ. ಅವರು ಮತ್ತಷ್ಟು ಯುವಕರನ್ನು ಕರೆದುಕೊಂಡು ಬಂದಿರುತ್ತಾರೆ. ನಾಲ್ಕು ಘೋಷಣೆಗಳನ್ನು ಕೂಗುವುದು. ಪೊಲೀಸರು ಹೆಚ್ಚೆಂದರೆ ಲಾಠಿಚಾರ್ಜ್ ಮಾಡುತ್ತಾರೆ. ನಾವು ಕಲ್ಲುಗಳನ್ನು ಬಿಸಾಡೋಣ. ಅಲ್ಲಿಗೆ ಮುಗಿಯುತ್ತದೆ. ಮನೆಗೆ ಬಂದು ಬಿಡುವುದು ಎಂದು ಹೇಳಲಾಗಿರುತ್ತದೆ. ಆದರೆ ಅದು ಅಷ್ಟಕ್ಕೆ ನಿಲ್ಲದೆ ಗಲಭೆ ಹೆಚ್ಚಾಗಿ ಏನಾದರೂ ಹೆಚ್ಚು ಕಡಿಮೆಯಾದರೆ ಏನು ಮಾಡುವುದು ಎಂದು ಇವರು ಕೇಳಿರುವುದಿಲ್ಲ. ಅವರಿಗೆ ಕೂಡ ಗೊತ್ತಿರುವುದಿಲ್ಲ. ಆದರೆ ಗ್ರಹಚಾರ ಕೆಟ್ಟು ಪೊಲೀಸರು ಫೈರಿಂಗ್ ಮಾಡಿದರೆ ಅಕಸ್ಮಾತ್ ಆ ಗುಂಡು ನಿನಗೆ ಬಿದ್ದರೆ ನಿನ್ನ ಮನೆಯವರ ಗತಿ ಏನಾಗುತ್ತದೆ ಎಂದು ಯಾರೂ ಪ್ರತಿಭಟನೆಗೆ ಹೊರಟವನಿಗೆ ಬುದ್ಧಿಮಾತು ಹೇಳಿರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಭಟನೆಗೆ ಹೊರಟವನಿಗೆ “ಎಲ್ಲಿಗೆ ಹೊರಟಿದ್ದಿಯಾ” ಎಂದು ಯಾರಾದರೂ ದಾರಿಯಲ್ಲಿ ಕೇಳಿದರೆ ಇಲ್ಲಿಯೇ ಡಿಸಿ ಆಫೀಸ್ ಬಳಿ ಎಂದು ಹೇಳಿರುತ್ತಾನೆ ವಿನ ಏನು ಪ್ರತಿಭಟನೆ ಎಂದು ಕೇಳಿದರೆ ಅದೇ ಮೋದಿ ಏನೋ ಪೌರತ್ವ ಅಂತ ತರುತ್ತಿದ್ದಾರಂತಲ್ಲ. ಅದರ ವಿರುದ್ಧ ಎಂದು ಹೇಳಿ ಬೈಕ್ ಹತ್ತಿ ಹೊರಟಿರುತ್ತಾನೆ. ಹಾಗೆ ಹೊರಟವನಿಗೆ ಪ್ರತಿಭಟನೆಯ ಕಾರಣ ಏನಂತ ಗೊತ್ತಿಲ್ಲವೋ ಹಾಗೆ ಪ್ರತಿಭಟನೆಯ ಗುಂಪಿನಲ್ಲಿ ನಮ್ಮ ಪಕ್ಕದ ರಾಜ್ಯದ ವಿಷ್ನ ಸಂತೋಷಿಗಳು ಸೇರಿ ಪ್ರತಿಭಟನೆಯನ್ನು ದೊಂಬಿಗೆ ಪರಿವರ್ತಿಸಲು ಸಂಚು ಹೂಡಿದ್ದಾರೆ ಎಂದು ಕೂಡ ಗೊತ್ತಿರುವುದಿಲ್ಲ. ಹನ್ನೆರಡು ಗಂಟೆಗೆ ಹೋಗುವುದು ಮೂರು ಗಂಟೆಗೆ ಬರುವುದು ಎಂದೇ ಅಂದುಕೊಂಡು ಪ್ರತಿಭಟನೆಗೆ ಹೊರಟಿರುತ್ತಾನೆ. ಹಾಗೆ ಹೋದವ ಹೆಣವಾಗಿ ಮನೆಗೆ ಬಂದರೆ ಏನಾಗುತ್ತದೆ?

ನಿಜಕ್ಕೂ ಪೊಲೀಸರು ಫೈರಿಂಗ್ ಮಾಡಬೇಕಿತ್ತಾ, ಬೇಡವಿತ್ತಾ ಎನ್ನುವುದು ಬೇರೆ ವಿಷಯ. ಆ ಬಗ್ಗೆ ಇಲಾಖಾವಾರು ತನಿಖೆ ನಡೆಯುತ್ತೆ. ಅದಕ್ಕಿಂತ ಮೊದಲು ಪ್ರತಿಭಟನೆಗೆ ಅನುಮತಿ ಇತ್ತಾ ಎನ್ನುವುದು ಮುಖ್ಯ ವಿಷಯ. ಒಂದು ವೇಳೆ ಪ್ರತಿಭಟನೆಗೆ ಅವಕಾಶ ಇಲ್ಲದಿದ್ದರೆ ಪೊಲೀಸರು ಹೋಗಿ ಎಂದ ಕೂಡಲೇ ಹಿಂತಿರುಗಿ ಹೋಗಬೇಕಿತ್ತು. ಹೋಗಲೇಬಾರದು ಎಂದು ಧೃಢ ನಿರ್ಧಾರ ಮಾಡಿ ಮೊನ್ನೆ ಬಲ್ಮಠದ ಬಳಿ ನಮ್ಮ ಮೇಲೆ ಆದ ಲಾಠಿಚಾರ್ಜ್ ಗೆ ಪ್ರತೀಕಾರ ತೆಗೆದುಕೊಳ್ಳಲೇಬೇಕು ಎಂದುಕೊಂಡಿದ್ದರೆ ಏನು ಮಾಡುವುದು. ನಾವು ಪ್ರತಿಭಟನೆ ಮಾಡುತ್ತಾ ಇದ್ರೆ ನೀವು ಬೇರೆ ಬೇರೆ ಕಟ್ಟಡಗಳ ಮೇಲಿನಿಂದ ಪೊಲೀಸರ ಮೇಲೆ ಕಲ್ಲು ಬಿಸಾಡಿ ಎಂದು ಮೊದಲೇ ಪ್ಲಾನ್ ಮಾಡಲಾಗಿತ್ತಾ? ಇತ್ತ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಬೇಕು, ಅತ್ತ ಕಟ್ಟಡಗಳಿಂದ ಮೇಲಿನಿಂದ ಬೀಳುತ್ತಿದ್ದ ಕಲ್ಲುಗಳಿಂದ ತಪ್ಪಿಸಿಕೊಳ್ಳಬೇಕು ಎನ್ನುವಾಗ ಗಾಯಗೊಂಡಿದ್ದಾರೆ. ಕೊನೆಗೆ ಫೈರಿಂಗ್ ಅನಿವಾರ್ಯವಾಯಿತಾ? ಈ ಬಗ್ಗೆ ತನಿಖೆ ನಡೆಯುತ್ತದೆ. ಅದು ಬೇರೆ ವಿಷಯ. ಆದರೆ ಸತ್ತ ಇಬ್ಬರು ಮನೆಯವರಿಗೆ ಮಾತ್ರ ಹೋಗಿಯೇಬಿಟ್ಟರಲ್ಲ. ಇನ್ನು ಇಂತಹ ಘಟನೆಗಳಾದಾಗ ಒಂದು ವಾರ ಅವರ ಮನೆಗೆ ಅವರ ಪಕ್ಷದ ನಾಯಕರು ಬಂದು ಕಣ್ಣೀರು ಸುರಿಸಿದ ಹಾಗೆ ನಾಟಕ ಮಾಡಿ ಏನಾದರೂ ಕೊಟ್ಟರೆ ಅಲ್ಲಿಗೆ ಮುಗಿಯಿತು. ನಂತರ ಆ ಮನೆಯವರನ್ನು ಕೇಳುವವರಿಲ್ಲ. ಸರಕಾರ ಒಂದು ವೇಳೆ ಒತ್ತಡ ಬಂದು ಏನಾದರೂ ಘೋಷಣೆ ಮಾಡಿ ಅದು ಕೈಗೆ ಸಿಕ್ಕಿದರೂ ಸಿಗದಿದ್ದರೂ ಆ ಮನೆ ಮಗ ಮತ್ತೆ ವಾಪಾಸು ಬರುತ್ತಾನಾ? ಹಾಗಂತ ಪ್ರತಿಭಟನೆಗೆ ಜನರೇ ಹೋಗಬಾರದು ಎಂದಲ್ಲ. ಪ್ರತಿಭಟನೆಯ ವಿಷಯದ ಬಗ್ಗೆ ಅರಿತುಕೊಂಡು ಅದನ್ನು ಸಾತ್ವಿಕ ರೀತಿಯಲ್ಲಿ ಪರಿಹಾರ ಕಾಣಲು ಹೊರಡಬೇಕು. ಇಲ್ಲದಿದ್ದರೆ ಯಾರೋ ಉರಿಸಿದ ಬೆಂಕಿಗೆ ಬಂದು ಬೀಳುವ ಕಥೆ ಆಗುತ್ತದೆ, ಕಟ್ಟಕಡೆಯದಾಗಿ ಉಳಿಯುವ ಪ್ರಶ್ನೆ, ಪ್ರತಿಭಟನೆಗೆ ಬಂದವರಿಗೆ ಸಿಎಎ ಎಂದರೆ ಏನಂತ ಗೊತ್ತಿತ್ತಾ !!

0
Shares
  • Share On Facebook
  • Tweet It




Trending Now
ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
Hanumantha Kamath January 3, 2026
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
Hanumantha Kamath January 3, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
  • Popular Posts

    • 1
      ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • 2
      ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • 3
      ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • 4
      ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ

  • Privacy Policy
  • Contact
© Tulunadu Infomedia.

Press enter/return to begin your search