• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಆರೋಗ್ಯ

ಪ್ರಸವ ಪೂರ್ವ ಶಿಕ್ಷಣ -ಪ್ರಾಮುಖ್ಯತೆ ಮತ್ತು ಆಯಾಮಗಳು

TNN Correspondent Posted On August 3, 2017
0


0
Shares
  • Share On Facebook
  • Tweet It

ಪ್ರಸವ ಪೂರ್ವ ಶಿಕ್ಷಣ -ಪ್ರಾಮುಖ್ಯತೆ ಮತ್ತು ಆಯಾಮಗಳು

ಒಳ್ಳೆಯ ಉದ್ಯೋಗ ಸಿಗುವುದಕ್ಕೆ ಮೂಲ ಅರ್ಹತೆಯಾಗಿ ವಿಶ್ವವಿದ್ಯಾಲಯದ ಪದವಿಯನ್ನು ಪರಿಗಣಿಸಲಾಗುತ್ತದೆ.ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಗಲು ಉತ್ತಮ ಅಂಕಗಲೇ ಅರ್ಹತೆಯಾಗಿವೆ. ಎಲ್ಲದಕ್ಕೂ ಅರ್ಹತೆಗಳಿವೆ ಹಾಗಿದ್ರೆ ಒಳ್ಳೆಯ  ಪೋಷಕರಾಗೋದಕ್ಕಿರುವ ಅರ್ಹತೆಗಳೇನು?ಒಳ್ಳೆಯ ಶಾಲೆಗೆ ಕೈ ತುಂಬ ದುಡ್ಡು ನೀಡಿ ಸೇರಿಸಿ ,ಪ್ರತಿಷ್ಠಿತ ಕಾಲೇಜಿಗೆ ಸೇರಿಸಿ ಬೇಕಾದ್ದನ್ನು ಕೊಡಿಸಿ ,ಅಬ್ಬರದಿಂದ ಮದುವೆ ಮಾಡಿ ಆಸ್ತಿ ಮಾಡುವ ಹೆತ್ತವರು ಅತ್ಯುತ್ತಮ ಪೋಷಕರಾ?ಅಥವಾ ಇದೆಲ್ಲಕ್ಕಿಂತ ಮಿಗಿಲಾದ ಪೋಷಕರ ಕರ್ತವ್ಯ ಏನಾದ್ರೂ ಇದ್ಯಾ?ಇದೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗೋದು ಪ್ರಸವಪೂರ್ವ  ಸಂದರ್ಭದಲ್ಲಿ.

ಪ್ರಸವಪೂರ್ವ ತರಬೇತಿ ತಂದೆ ,ತಾಯಿ ಹಾಗೂ ಹುಟ್ಟಲಿರುವ ಮಗುವಿನ ಭಾವನಾತ್ಮಕ ,ಮಾನಸಿಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ.

ಪ್ರಸವ ಪೂರ್ವ ಶಿಕ್ಷಣ ಎಂದರೇನು?

ಗರ್ಭದೊಳಗಿರುವ ಮಗುವಿಗೆ ಮಾನವ ಜೀವನದ ಬಗ್ಗೆ ಜ್ಞಾನವನ್ನು ನೀಡುವ ತರಬೇತಿಯೇ  ಪ್ರಸವ ಪೂರ್ವ ಶಿಕ್ಷಣ.ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ವಿಜ್ಞಾನ.ಇದು ಮಗುವನ್ನು ಅತಿ ಬುದ್ಧಿವಂತನನ್ನಾಗಿಸುವ ಅಥವಾ ತೊಂದರೆಯೇ ಇಲ್ಲದ ಮಗುವನ್ನು ನೀಡುವ ತರಬೇತಿ ಅಲ್ಲ.ಬದಲಾಗಿ ಇದು ಮಗುವಿನ ಬಗ್ಗೆ ತಾಯಿ ತಂದೆಗೆ ಮತ್ತು ಜೀವನದ ಬಗ್ಗೆ ಮಗುವಿಗೆ ನೀಡಲ್ಪಡುವ ಜ್ಞಾನ.

ಗರ್ಭಧಾರಣೆ ಮಾಡಿಸುವುದು ಮಾತ್ರ ತನ್ನ ಕರ್ತವ್ಯ ,ಉಳಿದೆಲ್ಲವೂ ಪತ್ನಿಗೆ ಬಿಟ್ಟಿರುವುದು ಎಂಬ ಗಂಡಸರ ಮನಸ್ಥಿಗೆ ಪ್ರಸವಪೂರ್ವ ಶಿಕ್ಷಣ ಹೊಸ ಆಯಾಮವನ್ನು ನೀಡುತ್ತದೆ.ಮಗುವಿಗೆ ಕೇವಲ ಊಟ ,ಶಿಕ್ಷಣ,ಸೂರು ನೀಡುವುದಷ್ಟೇ ಅಲ್ಲ ಜೀವನದ ಎಲ್ಲ ಸಂದರ್ಭಗಳನ್ನು ಖುದ್ದಾಗಿ ಎದುರಿಸಲು ಶಕ್ತರಾಗುವಂತೆ ಅಪ್ಪ ಅಮ್ಮ ಬೆಂಗಾವಲಾಗಲು ಇದು ಪ್ರೇರೇಪಣೆ ನೀಡುತ್ತದೆ.

ಇದರಲ್ಲಿ ಮುಖ್ಯವಾಗಿ ಏಳು ಆಯಾಮಗಳಿವೆ.

ದೈಹಿಕ,ಭಾವನಾತ್ಮಕ,ಬೌದ್ಧಿಕ ,ಸಂವೇದನಾತ್ಮಕ ,ರಚನಾತ್ಮಕ,ಆಧ್ಯಾತ್ಹ್ಮಿಕ ಮತ್ತು ದೈವಿಕ ಆಯಾಮಗಳು.

ಈ ಏಳೂ ವಿಭಾಗಗಳನ್ನು ಉದ್ದೀಪನಗೊಳಿಸಲು ಕೆಲವು ಸರಳ ,ಮನೆಯಲ್ಲೇ ಮಾಡಬಹುದಾದ ಚಟುವಟಿಕೆಗಳು ಇವೆ.ಇದರಿಂದ ಗರ್ಭಾವಸ್ಥ ಮಗು ,ತಾಯಿ ,ತಂದೆ ಹಾಗೂ ಸಂಪೂರ್ಣ ಕುಟುಂಬ ಪೂರ್ಣ ಫಲವನ್ನು ಪಡೆಯಬಹುದಾಗಿದೆ.ಇದನ್ನು ತಜ್ಞ  ತರಬೇತಿದಾರರಿಂದ ಪಡೆಯಬಹುದು .

ನೆನೆಪಿಡಿ .ಪ್ರಸವಪೂರ್ವ ಸಂದರ್ಭ ಹುಟ್ಟುವ ಮಗುವಿಗೆ ಅಡಿಪಾಯ ಹಾಕುವ ದಿನಗಳು.ಇದನ್ನು ಪಡೆಯುವುದರಿಂದ ಮುಂದೆ ಮಗು ಜೀವನವನ್ನು ಎದುರಿಸಲು,ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಜೀವನವನ್ನು ಬಂದ ಹಾಗೆ ಯಾವುದೇ ಅಳುಕಿಲ್ಲದೆ ಸ್ವೀಕರಿಸಲು ಸಹಾಯ ಮಾಡುತ್ತದೆ.ಪೋಷಕರು ತಮ್ಮ ನಿರ್ಧಾರಗಳನ್ನು ಮಗುವಿನ ಮೇಲೆ ಹೇರದೆ ,ಕೇವಲ ಅಗತ್ಯ ಪೂರೈಸುವ ಮನುಷ್ಯರಾಗದೆ ದಾರಿ ತೋರುವ ಮಾರ್ಗದರ್ಶಿಗಳು ಆಗಲು ಈ ಶಿಕ್ಷಣ ಸಹಾಯ ಮಾಡುತ್ತದೆ.

ಸೂಪರ್ ಮಗು ಬೇಕು ಅನ್ನೋದು ಎಲ್ಲ ತಾಯಿ ತಂದೆಯರ ಕನಸು ,ಆದ್ರೆ ಅದಕ್ಕೋಸ್ಕರ ತಾವು ಸೂಪರ್ ಪೋಷಕರಾಗಬೇಕು ಅನ್ನುವ ಸತ್ಯವನ್ನು ಹಲವಾರು ಮರೆಯುತ್ತಾರೆ.ಪ್ರಸವ ಪೂರ್ವ ಶಿಕ್ಷಣ ಈ ಬಿರುಕನ್ನು ಪೂರ್ಣಗೊಳಿಸುತ್ತದೆ.

0
Shares
  • Share On Facebook
  • Tweet It


- Advertisement -


Trending Now
ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
Tulunadu News June 26, 2025
ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
Tulunadu News June 26, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
    • ನಮ್ಮ ಸರಕಾರವಿದ್ದೇ ಒಂದು ಚರಂಡಿ ಮಾಡಲು ಆಗಿಲ್ಲ - ಕಾಂಗ್ರೆಸ್ ಶಾಸಕ ಬಹಿರಂಗ ಬೇಸರ!
    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
  • Popular Posts

    • 1
      ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • 2
      ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • 3
      ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
    • 4
      ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • 5
      ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search