• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಂಪ್ವೆಲ್ ಕಲಶ ಎತ್ತಲು ಕಾಂಗ್ರೆಸ್ಸಿಗೆ ಬೇಕಾಯಿತು ನಾಲ್ಕು ವರ್ಷ!!

Hanumantha Kamath Posted On January 2, 2020


  • Share On Facebook
  • Tweet It

ಜುಲೈ 12, 2013 ರಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹಾಗೂ ಆಗಿನ ಮಂಗಳೂರು ನಗರ ದಕ್ಷಿಣ ಶಾಸಕರು ಒಂದು ಸುದ್ದಿಗೋಷ್ಟಿಯಲ್ಲಿ ಮಂಗಳೂರಿನ ಪಂಪ್ವೆಲ್ ನಲ್ಲಿದ್ದ ಕಳಶದ ಬಗ್ಗೆ ಮಾತನಾಡುತ್ತಾರೆ. ಆಗಿನ ಶಾಸಕರು ಏನು ಹೇಳುತ್ತಾರೆ ಎಂದರೆ ” ಪಂಪ್ವೆಲ್ ಕಾಮಗಾರಿ ನಿರಾತಂಕವಾಗಿ ಮುಂದುವರೆಯಬೇಕಾದರೆ ಪಂಪ್ವೆಲ್ ನಲ್ಲಿರುವ ಕಲಶವನ್ನು ತೆಗೆದು ಸ್ಥಳಾಂತರಿಸಬೇಕು. ಅದನ್ನು ಜಿಲ್ಲಾಡಳಿತ ಮಾಡುತ್ತಿಲ್ಲ. ಜಿಲ್ಲಾಡಳಿತದ ಅಸಹಕಾರ ಹೀಗೆ ಮುಂದುವರೆದರೆ ಪಂಪ್ವೆಲ್ ಕಾಮಗಾರಿಗೆ ಅಡಚಣೆಯಾಗುತ್ತದೆ”.

ನನ್ನ ಜಾಗೃತ ಓದುಗರಲ್ಲಿ ನಾನು ಈಗ ಕೇಳುವುದಿಷ್ಟೇ. ಆವತ್ತು ಮಾತನಾಡಿದ ಆ ಶಾಸಕರು ಈಗ ಮನೆಯಲ್ಲಿದ್ದಾರೆ. ಈಗ ಮಾಜಿ ಶಾಸಕರಾಗಿರುವ ಅವರು ಮೂರು ವಿಷಯಗಳನ್ನು ಆವತ್ತು ಒಪ್ಪಿಕೊಂಡಂತೆ ಆಗಿದೆ. ಒಂದನೇಯದಾಗಿ ಕಳಶದ ಸ್ಥಳಾಂತರ 2013 ರ ತನಕ ಆಗಿಲ್ಲ( ಕಾಮಗಾರಿ ಶುರುವಾಗಿದ್ದದ್ದು 2009 ರಲ್ಲಿ). ಎರಡನೇಯದಾಗಿ ಕಳಶದ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಅಸಹಕಾರ ತೋರುತ್ತಿದೆ. ಮೂರನೇಯದಾಗಿ ಹೀಗೆ ಮುಂದುವರೆದರೆ ಕಾಮಗಾರಿಗೆ ಅಡಚಣೆಯಾಗುತ್ತದೆ. 2013 ರಲ್ಲಿ ಇವರು ಹೀಗೆ ಸುದ್ದಿಗೋಷ್ಟಿ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಕೊನೆಗೆ ಕಲಶ ಅಲ್ಲಿಂದ ಸ್ಥಳಾಂತರ ಆದದ್ದು 2016 ರಲ್ಲಿ ಅಂದರೆ ಮೂರು ವರ್ಷಗಳ ಬಳಿಕ. 2013 ರಲ್ಲಿ ಯಾರ ಸರಕಾರ ಇತ್ತು. ಕಾಂಗ್ರೆಸ್. ಜಿಲ್ಲಾ ಉಸ್ತುವಾರಿ ಸಚಿವರು ಯಾವ ಪಕ್ಷದವರಾಗಿದ್ದರು? ಕಾಂಗ್ರೆಸ್. ಆಗ ಇದ್ದ ಶಾಸಕರು ಯಾವ ಪಕ್ಷದವರು? ಕಾಂಗ್ರೆಸ್. ಪಾಲಿಕೆ ಯಾವ ಪಕ್ಷದ ಆಡಳಿತದಲ್ಲಿತ್ತು? ಕಾಂಗ್ರೆಸ್. ಎಲ್ಲವೂ ಕಾಂಗ್ರೆಸ್ ಮಯವಾಗಿದ್ದರೂ ಇವೆಲ್ಲರಿಗೆ ಸೇರಿ ಒಂದು ಕಲಶ ಎತ್ತಿ ಬೇರೆಡೆ ಇಡಲು ಮೂರ್ನಾಕು ವರ್ಷಗಳು ಬೇಕಾಯಿತು ಎಂದರೆ ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು. ಈಗ ಅದೇ ಮಾಜಿ ಶಾಸಕರು, ಮಾಜಿ ಉಸ್ತುವಾರಿಗಳು ಪಂಪ್ವೆಲ್ ಕಾಮಗಾರಿ ತಡವಾಗಲು ಸಂಸದ ನಳಿನ್ ಕುಮಾರ್ ಕಟೀಲ್ ಮೇಲೆ ಆರೋಪ ಹಾಕುತ್ತಾರೆ, ಜನರಿಗೆ ಏನೂ ಗೊತ್ತಾಗುವುದಿಲ್ಲ ಎನ್ನುವ ಭ್ರಮೆಯೊಂದಿಗೆ.

ಇಲ್ಲಿಗೆ ಕಾಂಗ್ರೆಸ್ಸಿನ ಬಂಡವಾಳ ಹೊರಗೆ ಬೀಳುತ್ತದೆ. ಈಗ ಗೂಗಲ್ ಇರುವುದರಿಂದ ಏಳು ವರ್ಷಗಳ ಹಿಂದೆ ಮಾಡಿದ ಸುದ್ದಿಗೋಷ್ಟಿ ಮತ್ತು ಆವತ್ತು ಅವರು ಮಾತನಾಡಿದ್ದೇನು ಎನ್ನುವುದು ಕೂಡ ಗೊತ್ತಾಗುತ್ತದೆ. ಮಲ್ಲಿಕಟ್ಟೆಯಲ್ಲಿ ಆಫೀಸ್ ಮಾಡಿಕೊಂಡಿದ್ದ ಮಾಜಿ ಶಾಸಕರು ಮನಸ್ಸು ಮಾಡಿದ್ದರೆ ಪಾಲಿಕೆಯಲ್ಲಿದ್ದ ಮೇಯರ್ ಗೆ ಫೋನ್ ಮಾಡಿ ಕಲಶ ಶೀಘ್ರ ವಾರದೊಳಗೆ ಬೇರೆಡೆ ಸ್ಥಳಾಂತರಿಸಬೇಕು ಎಂದು ಸೂಚನೆ ಕೊಡಬಹುದಿತ್ತು. ರಮಾನಾಥ ರೈಗಳು ಜೋರಾಗಿ ನಾಳೆಯೇ ಕಲಶ ಶೀಫ್ಟ್ ಆಗಬೇಕು, ನಾನು ಬಂಟ್ವಾಳದಿಂದ ಬೆಳಿಗ್ಗೆ ಸರ್ಕೂಟ್ ಹೌಸಿಗೆ ಬಂದು ಕುತ್ಕೊವಾಗ ಕಲಶ ಕಾಣಿಸಬಾರದು ಎಂದು ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟಿದ್ದರೆ ಆಗಿ ಹೋಗುತ್ತಿತ್ತು. ಆದರೆ ಇವರುಗಳು ಮಾಡಿಸಿಲ್ಲ. ಅಷ್ಟಕ್ಕೂ ಇವರು ಬಯಸುತ್ತಿದ್ದದ್ದೇನು? ನಳಿನ್ ಬೆಳಿಗ್ಗೆ ಬೇಗ ಏಳುತ್ತಾರೆ. ನಾಲ್ಕು ಜನ ಕೂಲಿಯವರನ್ನು ಕರೆದುಕೊಂಡು ಹೋಗಿ ಕಲಶ ಎತ್ತಿ ಆಚೆ ಇಟ್ಟು ಮತ್ತೆ ಬೇರೆ ಕೆಲಸಕ್ಕೆ ಹೋಗಲಿ ಅಂತಾನಾ. ನಾಚಿಕೆ ಆಗಲ್ವಾ ಕಾಂಗ್ರೆಸ್ಸಿಗರೇ? ಎಲ್ಲ ಅಧಿಕಾರ ನಿಮ್ಮ ಕೈಲಿದ್ದು ಒಂದು ಮಣ್ಣಿನ ಕಲಶ ನಿಮಗೆ ತೆಗೆಯಲು ಆಗಲಿಲ್ಲ ಎಂದ ಮೇಲೆ ಆಗಿನ ಉಸ್ತುವಾರಿಗಳು, ಮಾಜಿ ಕೆಎಎಸ್ ಗಳು ಮಾಡಿದ್ದೇನು? ಅಷ್ಟಕ್ಕೂ ಕಲಶವನ್ನು ಪಂಪ್ವೆಲ್ ನಿಂದ ಎತ್ತಿ ಝೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾಗುವಂತಹ ಕಷ್ಟ ಏನು ಕಾಂಗ್ರೆಸ್ ಮುಂದೆ ಇರಲಿಲ್ಲ. ಕೇವಲ ನೂರು ಮೀಟರ್ ಆಚೆ ಇಡಲು ಇವರಿಗೆ ಮೂರು ವರ್ಷ ಬೇಕಾಯಿತು ಎಂದರೆ ಅಷ್ಟು ದೊಡ್ಡ ಪ್ಲೈ ಒವರ್ ಆಗಲು ಹತ್ತು ವರ್ಷ ತಗುಲಿದ್ದರಲ್ಲಿ ನನಗೆ ಆಶ್ಚರ್ಯ ಕಾಣುತ್ತಿಲ್ಲ.

ಅದರ ಅರ್ಥ ನಳಿನ್ ಕುಮಾರ್ ಹೆಸರು ಕೆಡಿಸಲು ಶುದ್ಧ ಷಡ್ಯಂತ್ರವೊಂದು ನಡೆಯುತ್ತಲೇ ಇತ್ತು. ಕೊನೆಗೆ ಪೂಜ್ಯ ಖಾವಂದರು ಧರ್ಮಸ್ಥಳದಿಂದ ಬಂದು ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ ನಂತರ ಅದಕ್ಕೆ ಬೇರೆ ಜಾಗ ನೋಡಿ ಕಲಶ ಶಿಫ್ಟ್ ಮಾಡಿಸಿದರು. ಅದರ ನಂತರವೇ ಕಾಮಗಾರಿಗೆ ವೇಗ ಸಿಕ್ಕಿದ್ದು. ಇನ್ನು ಇಂಡಿಯನ್ ರೋಡ್ ಕಾಂಗ್ರೆಸ್ ಎನ್ನುವ ಸಂಸ್ಥೆ ಇದೆ. ಅವರಿಗೆ ಒಂದು ಪ್ಲೈ ಒವರ್ ಎಷ್ಟು ಎತ್ತರ ಇರಬೇಕು ಎನ್ನುವ ಬಗ್ಗೆ ಮಾನದಂಡಗಳೇ ಇವೆ. ಅವರ ನಿಯಮಾವಳಿಯಲ್ಲಿ ಪ್ಲೈ ಒವರ್ ಎತ್ತರ ಐದೂವರೆ ಮೀಟರ್ ಎತ್ತರ ಇರಬೇಕು. ಅವರು ಪಂಪ್ವೆಲ್ ನಲ್ಲಿ ಮಾಡಿದ್ದೆಷ್ಟು? ಅದನ್ನು ನಾಳೆ ಹೇಳುತ್ತೇನೆ.!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search