• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಐವನ್ ಉಪವಾಸ ಕುಳಿತುಕೊಂಡರೆ ಯಾರಿಗೆ ಒಳ್ಳೆಯದು!!

Hanumantha Kamath Posted On January 8, 2020


  • Share On Facebook
  • Tweet It

ಅಮಿತ್ ಶಾ ಗೋ ಬ್ಯಾಕ್ ಎಂದು ಬೊಬ್ಬೆ ಹಾಕುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ. ಅಮಿತ್ ಶಾ ಬಂದರೆ ಉಪವಾಸ ಕೂರುತ್ತೇನೆ ಎಂದು ತಿಳಿಸಿದ್ದಾರೆ. ಪಾಪ, ತಾವು ಮುಂದಿನ ಬಾರಿ ವಿಧಾನಪರಿಷತ್ ಗೆ ಹಿಂಬಾಗಿಲಿನ ಮೂಲಕ ಎಂಟ್ರಿ ಕೊಡುವುದು ಕೂಡ ಕಷ್ಟವಾಗಿರುವಾಗ ಹೇಗಾದರೂ ಮಾಡಿ ಆಕ್ಟಿವ್ ಆಗಿದ್ದೇನೆ ಎಂದು ತಿಳಿಸಲು ಐವನ್ ಡಿಸೋಜಾ ತಮ್ಮ ಇದ್ದಬದ್ದ ಕೊನೆಯ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಅಷ್ಟಕ್ಕೂ ಅಮಿತ್ ಶಾ ಮಂಗಳೂರಿಗೆ ಬರದಂತೆ ಮಾಡುವುದಕ್ಕಿಂತ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ತಾವೊಬ್ಬರೇ ಹೀರೋ ಎಂದು ತೋರಿಸಿಕೊಡುವ ಹಪಾಹಪಿ ಐವನ್ ಅವರಲ್ಲಿ ಎದ್ದು ಕಾಣುತ್ತದೆ. ಯಾಕೆಂದರೆ ಅಮಿತ್ ಶಾ ತಮ್ಮ ಕೇಂದ್ರ ಸರಕಾರದ ಕಾಯ್ದೆಯೊಂದನ್ನು ಜನರಿಗೆ ಅರ್ಥ ಮಾಡಿಸಲು ಮಂಗಳೂರಿಗೆ ಬರುತ್ತಿದ್ದಾರೆ ವಿನ: ಸಮುದಾಯಗಳ ನಡುವೆ ಬೆಂಕಿ ಕೊಡುವ ಕೆಲಸಕ್ಕೆ ಬರುತ್ತಿಲ್ಲ. ಒಂದು ವೇಳೆ ಅಮಿತ್ ಶಾ ಬದಲಿಗೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಮಂಗಳೂರಿಗೆ ಬರುತ್ತೇನೆ ಎಂದು ಹೊರಟ್ಟಿದ್ದರೆ ಇದೇ ಐವನ್ ಕೆಂಪು ಹಾಸು ಹಾಕಿ ಸ್ವಾಗತಿಸುತ್ತಿದ್ದರು. ಆದರೆ ಪಿಣರಾಯಿ ವಿಜಯನ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವುದು ಅದು ಮೋದಿ ಸರಕಾರ ಜಾರಿಗೆ ತರುತ್ತಿದೆ ಎನ್ನುವ ಕಾರಣಕ್ಕೆ ಮಾತ್ರ. ಒಂದು ವೇಳೆ ಐವನ್ ಅವರಿಗೆ ಕಾಯ್ದೆಯ ಬಗ್ಗೆ ನಿಜವಾದ ಸಂಶಯಗಳಿದ್ದರೆ ಅವರು ಅಮಿತ್ ಶಾ ಮಂಗಳೂರಿಗೆ ಬರುವಾಗ ತಮಗೋಸ್ಕರ ಒಂದರ್ಧ ಗಂಟೆ ಕೇಳಿ ಶಾ ಜೊತೆಗೆ ಕಾಯ್ದೆಯ ಬಗ್ಗೆ ಕೇಳಲಿ. ಕಾಂಗ್ರೆಸ್ಸಿಗರು ನಿಯೋಗ ತೆಗೆದುಕೊಂಡು ಹೋಗಿ ವಿಮಾನ ನಿಲ್ದಾಣದಲ್ಲಿಯೋ, ಶಾ ಉಳಿಯುವ ಹೋಟೇಲಿನಲ್ಲಿಯೋ ಹೋಗಿ ತಮ್ಮ ಆತಂಕ ನಿವಾರಿಸಲಿ. ಜಿಲ್ಲಾ ಕಾಂಗ್ರೆಸ್ ಹಾಗೆ ಬಯಸುವುದಾದರೆ ಬಹುಶ: ಅಮಿತ್ ಶಾ ಕೂಡ ಬೇಡವೆನ್ನಲಿಕ್ಕಿಲ್ಲ. ಯಾಕೆಂದರೆ ಮೋದಿ-ಶಾ ಜೋಡಿಗೆ ಈ ಕಾಯ್ದೆಯಿಂದ ದೇಶಕ್ಕೆ ಆಗುವ ಪ್ರಯೋಜನಗಳನ್ನು ಹೇಳಿ ಹೇಳಿ ಅಭ್ಯಾಸವಾಗಿ ಹೋಗಿದೆ.

ಆದರೆ ಐವನ್ ಡಿಸೋಜಾ ಅವರಿಗೆ ಇರುವ ಆತಂಕ ಕಾಯ್ದೆ ಬಗ್ಗೆ ಅಲ್ಲ. ಅವರಿಗೆ ಈ ಕಾಯ್ದೆಯನ್ನು ಜನ ಸರಿಯಾಗಿ ಅರ್ಥ ಮಾಡಿಕೊಂಡರೆ ಭವಿಷ್ಯದಲ್ಲಿ ತಮ್ಮ ಪ್ರತಿಭಟನೆಗೆ ಯಾರೂ ಬರದಿದ್ದರೆ ಏನು ಮಾಡುವುದು? ಈಗಾಗಲೇ ಹಣ, ಬಿರಿಯಾನಿ ಕೊಟ್ಟರೂ ಐವನ್ ಗೆ ಜನ ಸೇರಿಸಲು ಕಷ್ಟವಾಗುತ್ತಿದೆ. ಹಾಗಿರುವಾಗ ಇದೇ ವಿಷಯದ ಮೇಲೆ ಪ್ರತಿಭಟನೆ ಮಾಡೋಣ ಎಂದರೆ ಏನು ಮಾಡುವುದು. ಇನ್ನು ಈ ಕಾಯ್ದೆಯಿಂದ ನಿಜಕ್ಕೂ ಭಾರತದ ಯಾವುದೇ ನಾಗರಿಕನಿಗೆ ತೊಂದರೆ ಆಗುತ್ತದೆ ಎಂದು ಐವನ್ ಡಿಸೋಜಾ ಅವರಿಗೆ ಅನಿಸುತ್ತಾ ಇದೆ ಎಂದರೆ ಅದು ಅಪ್ಪಟ ಭ್ರಮೆ.

ಸರಿಯಾಗಿ ನೋಡಲು ಹೋದ್ರೆ ಈ ಕಾಯ್ದೆಯಿಂದ ಐವನ್ ಡಿಸೋಜಾ ಯಾರ ಪರ ಹೋರಾಡುತ್ತಿದ್ದೇವೆ ಎಂದು ಅಂದುಕೊಂಡು ಹೋರಾಡುತ್ತಿದ್ದಾರೋ ಅವರಿಗೆ ಭವಿಷ್ಯದಲ್ಲಿ ತೊಂದರೆಯಾಗುತ್ತದೆಯೋ ಬಿಡುತ್ತದೋ ಅದು ಬೇರೆ ವಿಷಯ. ಆದರೆ ಕಾಂಗ್ರೆಸ್ಸಿಗರ ಸುಳ್ಳು ಭಾಷಣವನ್ನು ನಂಬಿ ಇಬ್ಬರು ಪೊಲೀಸರ ಮೇಲೆ ಕಲ್ಲು ಬಿಸಾಡಲು ಹೋಗಿ ಸತ್ತು ಹೋದರಲ್ಲ, ಅದಕ್ಕೆ ಏನು ಹೇಳುವುದು. ಖಾದರ್ ಬೆಂಕಿ ಹೇಳಿಕೆಯಿಂದ ಗಲಾಟೆಯಾಗಿದೆ ವಿನ: ಅಮಿತ್ ಶಾ ಭಾಷಣದಿಂದ ಏನೂ ಆಗಲ್ಲ. ಯಾಕೆಂದರೆ ಅಮಿತ್ ಶಾ ದೇಶ ಹೊತ್ತಿ ಉರಿಯುವಂತಹ ಭಾಷಣ ಮಾಡಲು ಬರುತ್ತಿಲ್ಲ. ಅವರು ಟೀಚರ್ ತರಹ ಪಾಠ ಮಾಡಲು ಬರುತ್ತಿದ್ದಾರೆ. ಒಂದು ವೇಳೆ ಭಾಷಣಕ್ಕೆ ಅಲ್ಲಿ ಬಂದು ನೋಡಲು ಐವನ್ ಡಿಸೋಜಾ ಅವರಿಗೆ ನಾಚಿಕೆಯಾದರೆ ಸಂಘಟಕರು ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಲೈವ್ ಕೊಡಬಹುದು. ಅದನ್ನು ನೋಡಲಿ. ಈ ಕಾಯ್ದೆಯ ಬಗ್ಗೆ ಜನರಿಗೆ ಅರ್ಥ ಮಾಡಿಸುವ ಅಧಿಕಾರ ಮತ್ತು ಸಾಮರ್ತ್ಯ ಇರುವ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಅಮಿತ್ ಶಾ ಒಬ್ಬರು. ಅದೇ ಸಿದ್ಧರಾಮಯ್ಯ, ಕುಮಾರಸ್ವಾಮಿಯವರು ಬಂದು ಕೇವಲ ಬೇಜವಾಬ್ದಾರಿ ಹೇಳಿಕೆ ಕೊಡಬಹುದೇ ವಿನ: ಕಾಯ್ದೆ ಬಗ್ಗೆ ಅವರಿಗೆ ಒಂದಕ್ಷರವೂ ಗೊತ್ತಿರಲಿಕ್ಕಿಲ್ಲ. ತ್ರಿವಳಿ ತಲಾಖ್, ರಾಮಮಂದಿರ, 370 ಕಾಯ್ದೆಯ ವಿಷಯವನ್ನು ಐವನ್ ಒಂದು ವರ್ಷ ಮಾತನಾಡುತ್ತಾ ಮಾಧ್ಯಮಗಳಲ್ಲಿ ಫುಲ್ ಸ್ಕೋಪ್ ತೆಗೆದುಕೊಳ್ಳೋಣ ಎಂದು ಅಂದುಕೊಂಡಿದ್ದರು. ಆದರೆ ಜನರು ಧರ್ಮ, ಜಾತಿ ಮೀರಿ ಆ ಕಾಯ್ದೆಗಳಿಗೆ ಬೆಂಬಲ ಕೊಟ್ಟರು. ಆ ತಪ್ಪಿ ಹೋದ ಮೈಲೇಜ್ ಈಗ ಐವನ್ ಪಡೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಉಪವಾಸ ಮಾಡಿದರೆ ಒಳ್ಳೆಯದು ಐವನ್ ಅವರೇ, ನೀವು ಸರಣಿ ಉಪವಾಸ ಸತ್ಯಾಗ್ರಹಕ್ಕೆ ಬೇಕಾದರೂ ಕುಳಿತುಕೊಳ್ಳಿ. ಗ್ಯಾರಂಟಿಯಾಗಿ ಹೇಳ್ತೆನೆ, ನೀವು ಒಂದು ವಾರ ಉಪವಾಸ ಕುಳಿತುಕೊಂಡರೂ ಐವತ್ತು ಜನರಿಗಿಂತ ಹೆಚ್ಚು ಸೇರಿಸಲು ಆಗಲಿಕ್ಕಿಲ್ಲ. ಅದರೊಂದಿಗೆ ನಿಮ್ಮ ಪಕ್ಷದ ಮುಖಂಡರು ನಿಮ್ಮ ಹಿಂದೆ ಏನು ಮಾತನಾಡಲಿದ್ದಾರೆ ಎಂದು ಯೋಚಿಸಿಯೇ ಉಪವಾಸ ಕುಳಿತುಕೊಳ್ಳಿ. ಇನ್ನು ಬೆಳಿಗ್ಗೆ ಟಿಫಿನ್ ಮಾಡಿ ಉಪವಾಸಕ್ಕೆ ಕುಳಿತು ಮಧ್ಯಾಹ್ನ ಊಟದ ಹೊತ್ತಿಗೆ ನಿಲ್ಲಿಸಿದರೆ ಅದನ್ನು ಉಪವಾಸ ಎನ್ನುತ್ತಾರಾ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search