• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಮೂಲ್ಯಾ ಲಿಯೋನಾ ಗಾಳಿ ತಾಗಿ ಜಿಎಸ್ ಬಿ ಹೆಣ್ಣುಮಕ್ಕಳು ಹಾಳಾಗುವುದು ತಪ್ಪಿದೆ!!

Hanumantha Kamath Posted On February 6, 2020


  • Share On Facebook
  • Tweet It

ಅಮೂಲ್ಯ ಲಿಯೋನ್ ಬಹಳ ಹೆಮ್ಮೆಯಿಂದ ತಾನು ಜಿಎಸ್ ಬಿಯಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದೇನೆ ಎಂದು ಹೇಳಿದ್ದಾಳೆ. ತನ್ನ ಮುತ್ತಾತ್ತನ ತಂದೆ ಅಯ್ಯೋ ಬೇಡಪ್ಪ ಎಂದುಕೊಂಡು ಮತಾಂತರ ಆದರು ಎನ್ನುತ್ತಾಳೆ. ಬಹುಶ: ಅಮೂಲ್ಯ ಲಿಯೋನಾಳಿಗೆ ಅವಳ ಈಗಿನ ಸರ್ ನೇಮ್ ಬಗ್ಗೆ ಹೆಮ್ಮೆ ಇರಬಹುದು. ಯಾಕೆಂದರೆ ಅದೇ ಸರ್ ನೇಮ್ ನಂತೆ ಕಾಣುವ ಇನ್ನೊಂದು ಸರ್ ನೇಮ್ ಇಟ್ಟುಕೊಂಡಿರುವ ಇನ್ನೊಬ್ಬಳು ಸಾಕಷ್ಟು ಸಾಧನೆ ಮಾಡಿ ಆಕೆಯ ದೇಶದಿಂದ ಭಾರತಕ್ಕೆ ಬಂದು ಇಲ್ಲಿ ಸಿಕ್ಕಿರುವ ಉತ್ತಂಗದಿಂದ ರೋಮಾಂಚನಗೊಂಡಿರುವುದು ಪಡ್ಡೆಗಳಿಗೆ ಖುಷಿ ಕೊಟ್ಟಿದೆ.

ಬಹುಶ: ಅಮೂಲ್ಯ ಲಿಯೋನಾ ಕೂಡ ಹಾಗೆ ದೊಡ್ಡ ಸಾಧನೆ ಮಾಡುವುದಕ್ಕೆ ಹೊರಟಿರಬಹುದು. ಅದಕ್ಕೆ ಅವಳಿಗೆ ತನ್ನ ಮುತ್ತಾತನ ಸರ್ ನೇಮ್ ಬಗ್ಗೆ ಅಸಹ್ಯ ಇರಬಹುದು. ತಾನು ಕಾಮತ್ ಇಟ್ಟುಕೊಂಡಿದ್ದರೆ ಈ “ಸನ್ನಿ” ವೇಶದಲ್ಲಿ “ಲಿಯೋನ್” ಸರ್ ನೇಮ್ ಇಟ್ಟುಕೊಂಡವರಂತೆ ಫೇಮಸ್ ಆಗಲ್ಲ ಎಂದು ಅವಳಿಗೆ ಈಗ ಅನಿಸುತ್ತಾ ಇರಬಹುದು. ಅಮೂಲ್ಯ ನಿನಗೆ ಗೊತ್ತಿರಲಿಕ್ಕಿಲ್ಲ. ನಿನ್ನಂತೆಯೇ ಸರ್ ನೇಮ್ ಇರುವ ಒಬ್ಬ ಹೆಂಗಸು ಇಡೀ ಪ್ರಪಂಚದಲ್ಲಿ ಹೆಸರು ಮಾಡಿದ್ದರೆ ಕಾಮತ್ ಸರ್ ನೇಮ್ ಇರುವ ಜನರು ನಮ್ಮ ದೇಶದ ಅರ್ಥ ವ್ಯವಸ್ಥೆಯಿಂದ ಹಿಡಿದು ಆಡಳಿತ ಹುದ್ದೆಗಳನ್ನು ಸೇರಿಸಿ ಪ್ರತಿ ಕ್ಷೇತ್ರದಲ್ಲಿ ಒಳ್ಳೆಯ, ಗೌರವದ ಹೆಸರು ಮಾಡಿದ್ದಾರೆ. ಅಮೂಲ್ಯಾ ನೀನು ಸರ್ ನೇಮ್ ಮಾತ್ರವಲ್ಲ ಧರ್ಮವನ್ನೇ ಬದಲಾಯಿಸಿದ ತಕ್ಷಣ ಜಿಎಸ್ ಬಿ ಸಮುದಾಯಕ್ಕೆ ನಷ್ಟವೂ ಇಲ್ಲ, ಲಾಭವೂ ಇಲ್ಲ. ಯಾಕೆಂದರೆ ಇಂತಹ ಹುಡುಗಿಯರು ಜಿಎಸ್ ಬಿಯಲ್ಲಿದ್ದರೆ ಅದು ನಮಗೆ ಕಂಟಕ. ಒಂದು ವೇಳೆ ಅಮೂಲ್ಯ ಜ್ಞಾನೋದಯಗೊಂಡು ಜಿಎಸ್ ಬಿಗೆ ಬರುತ್ತೇನೆ ಎಂದುಕೊಂಡರೂ ಅವಳಿಗೆ ಇಲ್ಲಿ ಬಾಗಿಲು ತೆರೆದಿಲ್ಲ. ಅಷ್ಟಕ್ಕೂ ಅಮೂಲ್ಯ ಲಿಯೋನಾ ಮಾಡುತ್ತಿರುವ ಆಟೋಪಗಳನ್ನು ನೋಡಿದರೆ ಅವಳಿಗೆ ತಾನು ಈಗಿರುವ ಧರ್ಮಕ್ಕೆ ಫಿಟ್ ಎಂದು ಅನಿಸುತ್ತಿರಬಹುದು. ಅಲ್ಲಿ ಅವಳಿಗೆ ಹುಡುಗಿಯರು ಹೇಗೆ ಬೇಕಾದರೂ ಇರಲು ಸ್ವಾತಂತ್ರ್ಯ ಕೊಟ್ಟಿರುವ ಧರ್ಮ ಎನ್ನುವ ಭ್ರಮೆ ಇರಬಹುದು. ಜಿಎಸ್ ಬಿಗಳಲ್ಲಿ ಹೆಣ್ಣನ್ನು ಶಾಂತ ಸ್ವರೂಪಿಯಾಗಿ, ಪ್ರಜ್ಞಾವಂತೆಯಾಗಿ, ನೋಡಿದಾಗ ಗೌರವದಿಂದ ಕೈಮುಗಿಯುವಂತೆ ಬೆಳೆಸುತ್ತಾರೆ.
ಲಿಯೋನಾ ಈಗಿರುವ ಧರ್ಮ ಸರಿಯಲ್ಲ ಎಂದು ನಾನು ಹೇಳುತ್ತಿಲ್ಲ. ಅಲ್ಲಿಯೂ ಹೆಣ್ಣುಮಕ್ಕಳನ್ನು ಅವರ ದೇವರ, ಧರ್ಮದ ಬಗ್ಗೆ ಗೌರವ ಇಟ್ಟುಕೊಳ್ಳುವಂತೆ ಬೆಳೆಸುತ್ತಾರೆ. ಆದರೆ ಅಮೂಲ್ಯ ಲಿಯೋನಾನಂತವರು ಯಾವ ಧರ್ಮದಲ್ಲಿ ಇದ್ದರೂ ಆ ಧರ್ಮಕ್ಕೆ ಅದು ಕಪ್ಪು ಚುಕ್ಕೆ. ಯಾಕೆಂದರೆ ಇಂತವರಿಗೆ ಯಾವುದೇ ಒಂದು ಧರ್ಮದ ಬಗ್ಗೆ ಗೌರವ ಇರುವುದಿಲ್ಲ. ಇವತ್ತು ಕ್ರಿಶ್ಚಿಯನ್ ಮಿಶನರಿಗಳು ಹಣ ಕೊಟ್ಟರು ಎಂದ ಕೂಡಲೇ ಹಿಂದೂ ಧರ್ಮದ ಜಿಎಸ್ ಬಿಗಳ ಬಗ್ಗೆ ಕೇವಲವಾಗಿ ಮಾತನಾಡುವ ಇಂತವರು ನಾಳೆ ಅರಬ್ ರಾಷ್ಟ್ರದಿಂದ ಬಿಸ್ಕಿಟ್ ಬಿಸಾಡಿದರೆ ಕ್ರೈಸ್ತರ ಬಗ್ಗೆನೂ ಹೀಯಾಳಿಸಿ ಮಾತನಾಡುತ್ತಾರೆ. ಅಂತಿಮವಾಗಿ ಇವಳ ರಕ್ತವನ್ನು ಡಿಎನ್ ಎ ಪರೀಕ್ಷೆ ಮಾಡಿದರೆ ಅದರಲ್ಲಿ ಯಾರ್ಯಾರ ರಕ್ತ ಕ್ರಾಸ್ ಆಗಿ ಈಕೆ ಹುಟ್ಟಿದ್ದಾಳೆ ಎನ್ನುವುದರ ಬಗ್ಗೆ ವೈದ್ಯರಿಗೂ ಗೊಂದಲ ಆಗಬಹುದು. ಈಕೆಯ ಮುತ್ತಾತನ ತಂದೆ ಜಿಎಸ್ ಬಿ ಆಗಿದ್ದರೆ ಈಕೆಯ ರಕ್ತದಲ್ಲಿಯೂ ಜಿಎಸ್ ಬಿ ಇರಬೇಕಿತ್ತು. ಆದರೆ ಹಾಗೆ ಕಾಣಿಸುತ್ತಿಲ್ಲ. ಯಾಕೆಂದರೆ ಜಿಎಸ್ ಬಿಗಳು ಸತ್ಯದ ಮಾರ್ಗದಲ್ಲಿ ನಡೆಯುವವರು. ಅಮೂಲ್ಯಾ ಲಿಯೋನಾ ಯಾರು ಈಕೆಯನ್ನು ಮಿಂಚಲು ಹಣದ ಪೂರೈಕೆ ಮಾಡುತ್ತಾರೋ ಅವರ ಮಾರ್ಗದಲ್ಲಿ ನಡೆಯುವವಳು. ಇವಳ ಖರ್ಚಿಗೆ ಹಣ ಕೊಡುವುದು ತನಗೆ ಕಾರ್ಯಕ್ರಮಕ್ಕೆ ಕರೆಯುವ ಆಯೋಜಕರು ಎನ್ನುತ್ತಾರೆ. ಹಾಗಾದರೆ ಈಕೆ ಬಾಡಿಗೆ ಭಾಷಣಕಾರ್ತಿ ಆಗಲ್ವಾ? ಹಾಗಾದರೆ ಅಲ್ಲಿ ಬೇರೆ ಧರ್ಮವನ್ನು ಟೀಕಿಸುವ ಅಗತ್ಯ ಅವಳಿಗಿಂತ ಅವಳಿಗೆ ಹಣ ಕೊಟ್ಟು ಕರೆಸುವವರಿಗೆ ಇರುತ್ತದೆಯಲ್ವಾ? ಇಂತಹ ಗಂಜಿ ಗಿರಾಕಿಗಳಿಗೆ ಇತ್ತೀಚೆಗೆ ಆರು ವರ್ಷಗಳಿಂದ ಅಂಗಡಿ ಬಂದ್ ಆಗಿ ಆದಾಯ ಕಡಿಮೆಯಾಗಿದೆ. ಯಾರನ್ನಾದರೂ ಖುಷಿ ಮಾಡಲಿಕ್ಕೆ ಇವರು ಏನು ಮಾಡಲು ರೆಡಿ. ಜಿಎಸ್ ಬಿ ಜಾತಿಯಲ್ಲಿ ಜನಸಂಖ್ಯೆ ಕಡಿಮೆ ಇರಬಹುದು. ಆದರೆ ನಿನ್ನ ಹಾಗೆ ಬೇರೆ ಜಾತಿಯನ್ನು ಹೀಯಾಳಿಸುವ ಸಣ್ಣ ಮನಸ್ಸು ಹೊಂದಿಲ್ಲ. ಅಮೂಲ್ಯ ನಾವು ಕಷ್ಟಪಟ್ಟು ದುಡಿದು ಧರ್ಮ ರಕ್ಷಿಸುವವರು. ನೀನು ಹಣಕ್ಕಾಗಿ ಭಾಷಣ ಮಾಡಿ ಚಪ್ಪಾಳೆಗಾಗಿ ಬೇರೆ ಧರ್ಮವನ್ನು ಟೀಕಿಸುವವಳು. ಕೊನೆಯದಾಗಿ ಒಂದು ಹೇಳುತ್ತೇನೆ, ಅಮೂಲ್ಯಾ ನೀವು ಜಿಎಸ್ ಬಿ ಧರ್ಮದಿಂದ ಮತಾಂತರ ಆಗಿರುವುದೇ ಒಳ್ಳೆಯದು. ಇಲ್ಲದಿದ್ದರೆ ನಮ್ಮ ಹೆಣ್ಣುಮಕ್ಕಳು ನಿನ್ನ ಗಾಳಿ ತಾಗಿ ಹಾಳಾಗುತ್ತಿದ್ದರು!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search