• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಣ್ಣಗುಡ್ಡೆ ವಾರ್ಡಿನಲ್ಲಿ ಆಂಟೋನಿಯವರು ಬರಲ್ವಾ?

Hanumantha Kamath Posted On March 11, 2020


  • Share On Facebook
  • Tweet It

ನೀವು ಇವತ್ತು ನೋಡುತ್ತಾ ಇರುವ ಸುಂದರ ಫೋಟೋಗಳು ಮಂಗಳೂರು ಮಹಾನಗರ ಪಾಲಿಕೆಯ ಅಪ್ಪಟ ನಗರದೊಳಗೆ ಬರುವ ಪ್ರಮುಖ ವಾರ್ಡ್ ಆಗಿರುವ ಮಣ್ಣಗುಡ್ಡೆಯದ್ದು. ಇದು ಮಂಗಳೂರು ನಗರ ದಕ್ಷಿಣದ ಶಾಸಕ ಡಿ ವೇದವ್ಯಾಸ ಕಾಮತ್ ಅವರ ನಿವಾಸ ಇರುವ ವಾರ್ಡ್ ಕೂಡ ಹೌದು.
ಮಣ್ಣಗುಡ್ಡೆ ವಾರ್ಡಿನ ಕಾರ್ಪೋರೇಟರ್ ಮನೆ ಹತ್ತಿರದ ಚರಂಡಿ ಮತ್ತು ರೋಡಿನ ಫೋಟೋಗಳನ್ನು ಇವತ್ತು ಪೋಸ್ಟ್ ಮಾಡುತ್ತಿದ್ದೆನೆ. ಪಾಲಿಕೆಯ ಕಮೀಷನರ್ ಅವರಿಗೆ ಕೊಡಲಾಗುವ ಬಂಗ್ಲೆ ಇರುವ ವಾರ್ಡು ಕೂಡ ಹೌದು. ಈ ವಾರ್ಡಿನ ಚರಂಡಿಯ ಫೋಟೋಗಳನ್ನು ನೋಡುವಾಗ ನಿಮಗೆ ಮಂಗಳೂರಿನಲ್ಲಿ ಪ್ರತಿ ವರ್ಷ ನೀವು ಕಟ್ಟುತ್ತಿರುವ ಕಸಕರದ ನೆನಪಾಗುತ್ತಾ ಇರಬಹುದು.
ಪಾಲಿಕೆಯ ವ್ಯಾಪ್ತಿಯನ್ನು ಸ್ವಚ್ಚವಾಗಿಟ್ಟುಕೊಳ್ಳುವ ಉದ್ದೇಶದಿಂದ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರಿಗೆ ನಮ್ಮ ನಿಮ್ಮ ತೆರಿಗೆ ಹಣದಿಂದ ಪ್ರತಿ ತಿಂಗಳು ಎರಡೂ ಕಾಲು ಕೋಟಿ ಹಣವನ್ನು ಪಾವತಿಸಲಾಗುತ್ತದೆ. ಅವರಿಗೆ ಅಷ್ಟು ಹಣ ಕೊಡಬೇಕು ಎನ್ನುವ ಕಾರಣದಿಂದ ಪಾಲಿಕೆ ಆಡಳಿತ ನೋಡಿಕೊಳ್ಳುವವರು ಪ್ರತಿ ವರ್ಷ ನಮ್ಮ ಮೇಲೆ ವಿಧಿಸುವ ಕಸಕರ ಹೆಚ್ಚು ಮಾಡುತ್ತಲೇ ಹೋಗುತ್ತಾರೆ. 100 ಚದರ ಅಡಿಗೆ 15 ರೂಪಾಯಿ ಇದ್ದದ್ದು ಈ ವರ್ಷ 50 ರೂಪಾಯಿ ಆಗಿದೆ. 500 ಚದರ ಅಡಿಗೆ 75 ರೂಪಾಯಿ ಇದ್ದದ್ದು 250 ರೂಪಾಯಿ ಆಗಿದೆ. ಅಂದರೆ ಸುಮಾರು 350% ಹೆಚ್ಚಳವಾಗಿದೆ. ಒಂದು ಕಡೆ ನಮ್ಮಿಂದ ಕಸಕರ ಜಾಸ್ತಿ ತೆಗೆದುಕೊಳ್ಳುವುದು ಯಾವ ಕಾರಣಕ್ಕೆ ಎಂದರೆ ಅಲ್ಲಿ ಆಂಟೋನಿಯವರಿಗೆ ಎರಡೂ ಕಾಲು ಕೋಟಿ ಕೊಡಲು ಇದೆ ಎನ್ನುವ ಸಬೂಬು ಪಾಲಿಕೆಯ ಅಧಿಕಾರಿಗಳ ಬಳಿ ತಯಾರಾಗಿ ಇದೆ. ಹಾಗಿದ್ದ ಮೇಲೆ ಮಂಗಳೂರು ಹೇಗೆ ಆಗಬೇಕಿತ್ತು ಎನ್ನುವ ಕಲ್ಪನೆ ಮಾಡಿಕೊಳ್ಳಿ. ನಗರ ವ್ಯಾಪ್ತಿಯ ರಸ್ತೆ, ಚರಂಡಿಗಳು ಸಿಂಗಾಪುರವನ್ನೇ ನಾಚಿಸಬೇಕಿತ್ತು. ಆದರೆ ಹಾಗೇ ಆಗಿದೆಯಾ? ಪ್ರತಿ ದಿನ ಗುಡಿಸಬೇಕಾದ ವಾರ್ಡುಗಳಲ್ಲಿಯೇ ಹೀಗೆ ಪರಿಸ್ಥಿತಿ ಇದ್ದರೆ ಉಳಿದ ವಾರ್ಡುಗಳ ಕಥೆ ಹೇಗಿರಬಹುದು ನೀವೆ ಯೋಚಿಸಿ. ಇಲ್ಲಿ ಆಗಿರುವ ಕಥೆ ಏನೆಂದರೆ ಹೆಸರಿಗೆ ತ್ಯಾಜ್ಯ ಸಂಗ್ರಹದ ಕೆಲಸ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನದ್ದು ಆಗಿದ್ದರೂ ಅದನ್ನು ಕೆಳಮಟ್ಟದಲ್ಲಿ ಅನುಷ್ಠಾನಕ್ಕೆ ತರುತ್ತಿರುವವರು ಹಿಂದಿನ ತ್ಯಾಜ್ಯ ಗುತ್ತಿಗೆದಾರರೇ ಆಗಿದ್ದಾರೆ. ಸಾಗಾಟದ ವಾಹನಗಳು ಮತ್ತು ಡ್ರೈವರ್ಸ್ ಬಿಟ್ಟರೆ ಉಳಿದದ್ದೆಲ್ಲಾ ಒಳಗುತ್ತಿಗೆ ಕೊಡಲಾಗಿದೆ. ಆಂಟೋನಿ ವೇಸ್ಟ್ ಜೊತೆಗೆ ಪಾಲಿಕೆ ಮಾಡಿಕೊಂಡ ಒಪ್ಪಂದ ಹೇಗಿತ್ತು ಎಂದರೆ ಒಳಗುತ್ತಿಗೆ ಕೊಡಲೇಬಾರದು, ಎಲ್ಲವನ್ನು ಆಂಟೋನಿಯವರೇ ನಿರ್ವಹಿಸಬೇಕಿತ್ತು ಎಂದಿತ್ತು. ಆದರೆ ಇವರು ಕಂಡೀಷನ್ ಉಲ್ಲಂಘಿಸಿ ಒಳಗುತ್ತಿಗೆ ಕೊಟ್ಟಿದ್ದಾರೆ. ಇದನ್ನು ಪಾಲಿಕೆಯ ಅಧಿಕಾರಿಗಳು ಪ್ರಶ್ನಿಸಿಲ್ಲ. ಯಾಕೆಂದರೆ ಅವರಿಗೆ ಬೇಕಾದಷ್ಟು ಸಮಥಿಂಗ್ ಸಿಗುತ್ತಿರುವುದರಿಂದ ಅವರು ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಪಾಲಿಕೆಯ ಹಿಂದಿನ ಕಮೀಷನರ್ ಅವರು ಟ್ರಾನ್ಸಫರ್ ಆಗಿ ಹೊಸ ಕಮೀಷನರ್ ಬಂದಾಗ ಅವರ ಮೇಲೆ ತುಂಬಾ ವಿಶ್ವಾಸವಿತ್ತು. ಅವರು ಏನಾದರೂ ಮಾಡಬಹುದು ಎಂದು ಅನಿಸಿತ್ತು. ಆದರೆ ಸದ್ಯ ಏನೂ ಆಗಿಲ್ಲ. ಆದರೆ ಕೇವಲ ಆಯುಕ್ತರ ಒಬ್ಬರ ಜವಾಬ್ದಾರಿ ಇದಲ್ಲ. ಅಧಿಕಾರಿಗಳು ಕೂಡ ಜನರ ತೆರಿಗೆ ಹಣದಿಂದ ಸಂಬಳ ಪಡೆಯುವಾಗ ಹೀಗೆ ಬೇಕಾಬಿಟ್ಟಿ ಕೆಲಸ ಮಾಡುವವರ ಮೇಲೆ ನಿಗಾ ಇಡದಿದ್ದರೆ ಪರಮಾತ್ಮ ಮೆಚ್ಚುತ್ತಾನಾ?
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search