• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಣ್ಣಗುಡ್ಡೆ ವಾರ್ಡಿನಲ್ಲಿ ಆಂಟೋನಿಯವರು ಬರಲ್ವಾ?

Hanumantha Kamath Posted On March 11, 2020
0


0
Shares
  • Share On Facebook
  • Tweet It

ನೀವು ಇವತ್ತು ನೋಡುತ್ತಾ ಇರುವ ಸುಂದರ ಫೋಟೋಗಳು ಮಂಗಳೂರು ಮಹಾನಗರ ಪಾಲಿಕೆಯ ಅಪ್ಪಟ ನಗರದೊಳಗೆ ಬರುವ ಪ್ರಮುಖ ವಾರ್ಡ್ ಆಗಿರುವ ಮಣ್ಣಗುಡ್ಡೆಯದ್ದು. ಇದು ಮಂಗಳೂರು ನಗರ ದಕ್ಷಿಣದ ಶಾಸಕ ಡಿ ವೇದವ್ಯಾಸ ಕಾಮತ್ ಅವರ ನಿವಾಸ ಇರುವ ವಾರ್ಡ್ ಕೂಡ ಹೌದು.
ಮಣ್ಣಗುಡ್ಡೆ ವಾರ್ಡಿನ ಕಾರ್ಪೋರೇಟರ್ ಮನೆ ಹತ್ತಿರದ ಚರಂಡಿ ಮತ್ತು ರೋಡಿನ ಫೋಟೋಗಳನ್ನು ಇವತ್ತು ಪೋಸ್ಟ್ ಮಾಡುತ್ತಿದ್ದೆನೆ. ಪಾಲಿಕೆಯ ಕಮೀಷನರ್ ಅವರಿಗೆ ಕೊಡಲಾಗುವ ಬಂಗ್ಲೆ ಇರುವ ವಾರ್ಡು ಕೂಡ ಹೌದು. ಈ ವಾರ್ಡಿನ ಚರಂಡಿಯ ಫೋಟೋಗಳನ್ನು ನೋಡುವಾಗ ನಿಮಗೆ ಮಂಗಳೂರಿನಲ್ಲಿ ಪ್ರತಿ ವರ್ಷ ನೀವು ಕಟ್ಟುತ್ತಿರುವ ಕಸಕರದ ನೆನಪಾಗುತ್ತಾ ಇರಬಹುದು.
ಪಾಲಿಕೆಯ ವ್ಯಾಪ್ತಿಯನ್ನು ಸ್ವಚ್ಚವಾಗಿಟ್ಟುಕೊಳ್ಳುವ ಉದ್ದೇಶದಿಂದ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರಿಗೆ ನಮ್ಮ ನಿಮ್ಮ ತೆರಿಗೆ ಹಣದಿಂದ ಪ್ರತಿ ತಿಂಗಳು ಎರಡೂ ಕಾಲು ಕೋಟಿ ಹಣವನ್ನು ಪಾವತಿಸಲಾಗುತ್ತದೆ. ಅವರಿಗೆ ಅಷ್ಟು ಹಣ ಕೊಡಬೇಕು ಎನ್ನುವ ಕಾರಣದಿಂದ ಪಾಲಿಕೆ ಆಡಳಿತ ನೋಡಿಕೊಳ್ಳುವವರು ಪ್ರತಿ ವರ್ಷ ನಮ್ಮ ಮೇಲೆ ವಿಧಿಸುವ ಕಸಕರ ಹೆಚ್ಚು ಮಾಡುತ್ತಲೇ ಹೋಗುತ್ತಾರೆ. 100 ಚದರ ಅಡಿಗೆ 15 ರೂಪಾಯಿ ಇದ್ದದ್ದು ಈ ವರ್ಷ 50 ರೂಪಾಯಿ ಆಗಿದೆ. 500 ಚದರ ಅಡಿಗೆ 75 ರೂಪಾಯಿ ಇದ್ದದ್ದು 250 ರೂಪಾಯಿ ಆಗಿದೆ. ಅಂದರೆ ಸುಮಾರು 350% ಹೆಚ್ಚಳವಾಗಿದೆ. ಒಂದು ಕಡೆ ನಮ್ಮಿಂದ ಕಸಕರ ಜಾಸ್ತಿ ತೆಗೆದುಕೊಳ್ಳುವುದು ಯಾವ ಕಾರಣಕ್ಕೆ ಎಂದರೆ ಅಲ್ಲಿ ಆಂಟೋನಿಯವರಿಗೆ ಎರಡೂ ಕಾಲು ಕೋಟಿ ಕೊಡಲು ಇದೆ ಎನ್ನುವ ಸಬೂಬು ಪಾಲಿಕೆಯ ಅಧಿಕಾರಿಗಳ ಬಳಿ ತಯಾರಾಗಿ ಇದೆ. ಹಾಗಿದ್ದ ಮೇಲೆ ಮಂಗಳೂರು ಹೇಗೆ ಆಗಬೇಕಿತ್ತು ಎನ್ನುವ ಕಲ್ಪನೆ ಮಾಡಿಕೊಳ್ಳಿ. ನಗರ ವ್ಯಾಪ್ತಿಯ ರಸ್ತೆ, ಚರಂಡಿಗಳು ಸಿಂಗಾಪುರವನ್ನೇ ನಾಚಿಸಬೇಕಿತ್ತು. ಆದರೆ ಹಾಗೇ ಆಗಿದೆಯಾ? ಪ್ರತಿ ದಿನ ಗುಡಿಸಬೇಕಾದ ವಾರ್ಡುಗಳಲ್ಲಿಯೇ ಹೀಗೆ ಪರಿಸ್ಥಿತಿ ಇದ್ದರೆ ಉಳಿದ ವಾರ್ಡುಗಳ ಕಥೆ ಹೇಗಿರಬಹುದು ನೀವೆ ಯೋಚಿಸಿ. ಇಲ್ಲಿ ಆಗಿರುವ ಕಥೆ ಏನೆಂದರೆ ಹೆಸರಿಗೆ ತ್ಯಾಜ್ಯ ಸಂಗ್ರಹದ ಕೆಲಸ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನದ್ದು ಆಗಿದ್ದರೂ ಅದನ್ನು ಕೆಳಮಟ್ಟದಲ್ಲಿ ಅನುಷ್ಠಾನಕ್ಕೆ ತರುತ್ತಿರುವವರು ಹಿಂದಿನ ತ್ಯಾಜ್ಯ ಗುತ್ತಿಗೆದಾರರೇ ಆಗಿದ್ದಾರೆ. ಸಾಗಾಟದ ವಾಹನಗಳು ಮತ್ತು ಡ್ರೈವರ್ಸ್ ಬಿಟ್ಟರೆ ಉಳಿದದ್ದೆಲ್ಲಾ ಒಳಗುತ್ತಿಗೆ ಕೊಡಲಾಗಿದೆ. ಆಂಟೋನಿ ವೇಸ್ಟ್ ಜೊತೆಗೆ ಪಾಲಿಕೆ ಮಾಡಿಕೊಂಡ ಒಪ್ಪಂದ ಹೇಗಿತ್ತು ಎಂದರೆ ಒಳಗುತ್ತಿಗೆ ಕೊಡಲೇಬಾರದು, ಎಲ್ಲವನ್ನು ಆಂಟೋನಿಯವರೇ ನಿರ್ವಹಿಸಬೇಕಿತ್ತು ಎಂದಿತ್ತು. ಆದರೆ ಇವರು ಕಂಡೀಷನ್ ಉಲ್ಲಂಘಿಸಿ ಒಳಗುತ್ತಿಗೆ ಕೊಟ್ಟಿದ್ದಾರೆ. ಇದನ್ನು ಪಾಲಿಕೆಯ ಅಧಿಕಾರಿಗಳು ಪ್ರಶ್ನಿಸಿಲ್ಲ. ಯಾಕೆಂದರೆ ಅವರಿಗೆ ಬೇಕಾದಷ್ಟು ಸಮಥಿಂಗ್ ಸಿಗುತ್ತಿರುವುದರಿಂದ ಅವರು ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಪಾಲಿಕೆಯ ಹಿಂದಿನ ಕಮೀಷನರ್ ಅವರು ಟ್ರಾನ್ಸಫರ್ ಆಗಿ ಹೊಸ ಕಮೀಷನರ್ ಬಂದಾಗ ಅವರ ಮೇಲೆ ತುಂಬಾ ವಿಶ್ವಾಸವಿತ್ತು. ಅವರು ಏನಾದರೂ ಮಾಡಬಹುದು ಎಂದು ಅನಿಸಿತ್ತು. ಆದರೆ ಸದ್ಯ ಏನೂ ಆಗಿಲ್ಲ. ಆದರೆ ಕೇವಲ ಆಯುಕ್ತರ ಒಬ್ಬರ ಜವಾಬ್ದಾರಿ ಇದಲ್ಲ. ಅಧಿಕಾರಿಗಳು ಕೂಡ ಜನರ ತೆರಿಗೆ ಹಣದಿಂದ ಸಂಬಳ ಪಡೆಯುವಾಗ ಹೀಗೆ ಬೇಕಾಬಿಟ್ಟಿ ಕೆಲಸ ಮಾಡುವವರ ಮೇಲೆ ನಿಗಾ ಇಡದಿದ್ದರೆ ಪರಮಾತ್ಮ ಮೆಚ್ಚುತ್ತಾನಾ?
0
Shares
  • Share On Facebook
  • Tweet It




Trending Now
ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
Hanumantha Kamath January 7, 2026
ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
Hanumantha Kamath January 6, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
  • Popular Posts

    • 1
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 2
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 3
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • 4
      ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • 5
      ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ

  • Privacy Policy
  • Contact
© Tulunadu Infomedia.

Press enter/return to begin your search