• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಒಂದು ದಿನ ಮನೆಯ ಒಳಗೆ ಇದ್ದರೆ ಏನಾಗುತ್ತೆ ಅಲ್ವಾ ಖಾದರ್!!

Tulunadu News Posted On March 22, 2020
0


0
Shares
  • Share On Facebook
  • Tweet It

ಒಂದು ದಿನ ಮನೆಯಿಂದ ಹೊರಗೆ ಬರದೇ ಇದ್ರೆ ಏನು ಆಗುತ್ತೆ? ಕೋರೋನಾ ಹೊರಟು ಹೋಗುತ್ತಾ? ಈ ಮಾತನ್ನು ಯಾರು ಹೇಳಿದರು ಎನ್ನುವ ಪ್ರಶ್ನೆಯನ್ನು ಯಾರಾದರೂ ಬೇರೆ ರಾಜ್ಯದವರಿಗೆ ನಾವು ಕೇಳಿದರೆ ಅವರು ಅದ್ಯಾವುದೋ ಹಳ್ಳಿಯ ಅನಕ್ಷರಸ್ಥ ಯಾರಾದರೂ ಹೇಳಿರಬಹುದು ಎನ್ನುವ ಉತ್ತರ ಬರುತ್ತದೆ. ಇನ್ನು ಕೆಲವರು ಯಾವುದಾದರೂ ಮಕ್ಕಳು ತಮ್ಮ ಅಪ್ಪ, ಅಮ್ಮನಿಗೆ ಕೇಳಿರಬಹುದು ಎಂದು ಹೇಳಬಹುದು. ಇನ್ನು ಕೆಲವರು ಯಾವುದಾದರೂ ಎರಡನೇ ತರಗತಿಯ ಮಗು ತನ್ನ ಟೀಚರಿಗೆ ಕೇಳಿರಬಹುದು ಎಂದು ಹೇಳಬಹುದು. ಇನ್ನು ಕೆಲವರು ಮರಣಶಯ್ಯೆಯಲ್ಲಿರುವ ರೋಗಿ ತನ್ನ ವೈದ್ಯರಿಗೆ ಕೇಳಿರಬಹುದು ಎಂದು ಹೇಳಬಹುದು. ಇಲ್ಲ, ಈ ಎಲ್ಲಾ ಉತ್ತರಗಳು ತಪ್ಪು. ಈ ಪ್ರಶ್ನೆಯನ್ನು ಒಂದು ವಿಧಾನಸಭಾ ಕ್ಷೇತ್ರದ ಶಾಸಕ ವ್ಯಂಗ್ಯ ರೀತಿಯಲ್ಲಿ ಮಾಧ್ಯಮದವರ ಮುಂದೆ ಹೇಳಿದ್ದು ಎಂದು ಗೊತ್ತಾದರೆ ನಿಮ್ಮಲ್ಲಿ ಅರ್ಧದಷ್ಟು ಜನ ಛೀ ಎಂದು ತೆಗಳಬಹುದು. ಇನ್ನು ಕೆಲವರು ಶಾಸಕರಾದರೇನಂತೆ, ಇತ್ತೀಚೆಗೆ ಕೆಲವು ವಿದ್ಯಾವಂತರಲ್ಲದವರು ಕೂಡ ಶಾಸಕರಾಗುತ್ತಾರೆ. ಅಂತವರಲ್ಲಿ ಒಬ್ಬರು ಕೇಳಿರಬಹುದು ಎಂದು ಹೇಳಬಹುದು. ಆದರೆ ಅಂತವರಿಗೆ ಆಶ್ಚರ್ಯ ಉಂಟಾಗಲಿದೆ ಏನೆಂದರೆ ಈ ಪ್ರಶ್ನೆಯನ್ನು ಕೇಳಿದ ಶಾಸಕರದ್ದು ಕಾನೂನಿನಲ್ಲಿ ಪದವಿ ಬೇರೆ ಇದೆ. ಇನ್ನು ಕೊನೆಯ ಹತ್ತು ಶೇಕಡಾ ಜನರು “ಪಾಪ, ಎಲ್ ಎಲ್ ಬಿ ಆದರೆ ಕಾಯಿಲೆಗಳ ಬಗ್ಗೆ ಗೊತ್ತಿರಬೇಕಾ?” ಎಂದು ಕೂಡ ಕೇಳಬಹುದು. ಅಂತವರಿಗೂ ನನ್ನ ಬಳಿ ಉತ್ತರ ಇದೆ. ಅದೇನೆಂದರೆ ಹೀಗೆ ಪ್ರಶ್ನೆ ಕೇಳಿದ ಮನುಷ್ಯ ಒಂದು ಕಾಲದಲ್ಲಿ ರಾಜ್ಯದ ಆರೋಗ್ಯ ಸಚಿವರಾಗಿದ್ದವರು. ಮಾಜಿ ಆರೋಗ್ಯ ಸಚಿವ, ಕಾನೂನು ಪದವೀಧರ ಮತ್ತು ಕಳೆದ ಹನ್ನೆರಡು ವರ್ಷಗಳಿಂದ ಶಾಸಕರಾಗಿರುವ ಮಹಾನುಭಾವರೊಬ್ಬರು ಹೀಗೆ ಪ್ರಶ್ನೆ ಕೇಳಿ ಅವರ ಹಿಂದೆ ಮಾಧ್ಯಮಗಳಲ್ಲಿ ಮುಖ ಕಾಣಲು ನಿಲ್ಲುತ್ತಾರಲ್ಲ ಅವರ ಎದುರು “ಶಹಬ್ಬಾಸ್ ಖಾದರ್ ಭಾಯ್” ಎಂದು ಹೊಗಳಿಕೆ ಪಡೆದುಕೊಂಡಿರಬಹುದು. ಆದರೆ ರಾಜ್ಯದ ಜನರ ಎದುರು ನಗೆಪಾಟಲಿಗೆ ಈಡಾಗಿದ್ದಾರೆ. ಈಗಲಾದರೂ ಆ ಘನವೆತ್ತ ಶಾಸಕರು ಯಾರೆಂದು ಗೊತ್ತಾಯಿತಾ? ಅವರೇ ಸನ್ಮಾನ್ಯ ಯು.ಟಿ.ಖಾದರ್.

ಖಾದರ್ ಅವರು ಕಾಂಗ್ರೆಸ್ಸಿನ ಮಟ್ಟಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರು. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸುತ್ತುವುದು ಇವರ ಸುತ್ತಲು. ಉಳಿದವರಲ್ಲಿ ಐವನ್ ಡಿಸೋಜಾ ಅವರನ್ನು ಜನಪ್ರತಿನಿಧಿ ಎನ್ನಲು ಕಾಂಗ್ರೆಸ್ ಕಚೇರಿಯ ಸಿಬ್ಬಂದಿಗಳೇ ಒಪ್ಪುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ಸದ್ಯ ಖಾದರ್ ಅವರು ಮೋದಿ ವಿರುದ್ಧ ಏನಾದರೂ ಹೇಳಿಕೆ ಕೊಟ್ಟು ಮಾಧ್ಯಮಗಳಲ್ಲಿ ಮಿಂಚದಿದ್ದರೆ ಈಗ ಅವರಿಗೆ ಬಂದಿರುವ ಏಕೈಕ ಸುಲ್ತಾನ್ ಅವಕಾಶ ಮತ್ತೆ ಸಿಗುತ್ತದೆ ಎನ್ನುವ ವಿಶ್ವಾಸ ಇಲ್ಲ. ನಾವೆಲ್ಲ ಸೋತು ಆ ಖಾದರ್ ಗೆದ್ದಿರುವುದು ಹೇಗೆ ಎಂದು ಉಳಿದ ಏಳು ಜನ ಸೋತ ಶಾಸಕರು ನಿಂತ ಕಡೆ ಮನೆಯಲ್ಲಿಯೇ ಅಳಬೇಕು ಎನ್ನುವ ಹಟಕ್ಕೋ ಏನೋ ಖಾದರ್ ಸುಮ್ಮಸುಮ್ಮನೆ ಕಾರಣವಿಲ್ಲದೇ ಹೇಳಿಕೆ ಕೊಡುತ್ತಾರೆ. ಅಂತಹ ಒಂದು ಹೇಳಿಕೆಯೇ ಇದು.
ಕೋರೋನಾ ವೈರಸ್ ಸರಾಸರಿ ಹನ್ನೆರಡು ಗಂಟೆ ಒಂದು ಸ್ಥಳದಲ್ಲಿ ಜೀವಂತವಿರುತ್ತದೆ. ಅಷ್ಟರ ಒಳಗೆ ಯಾವುದೇ ದೇಹದೊಳಗೆ ಸೇರದಿದ್ದರೆ ಆ ವೈರಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಅದನ್ನು ಗಮನದಲ್ಲಿಟ್ಟು ಪ್ರಧಾನಮಂತ್ರಿಯವರು ನಿರಂತರ ಹದಿನಾಲ್ಕು ಗಂಟೆ ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದು ವಿನಂತಿಸಿದ್ದಾರೆ. ಇದರಿಂದ ಕೋರೋನಾ ವೈರಸ್ ಚಕ್ರ ಮುರಿದು ಬೀಳುತ್ತದೆ. ಇದು ಮೋದಿಯವರು ತಮ್ಮ ಕಿಸೆಯಿಂದ ಹೊರಗೆ ತೆಗೆದ ಲಾಜಿಕ್ ಅಲ್ಲ. ಇದು ವೈದ್ಯಲೋಕದ ಉನ್ನತ ರತ್ನಗಳು ಮೋದಿಯವರಿಗೆ ನೀಡಿರುವ ಸಲಹೆ. ಹೀಗೊಂದು ಮಾಡಿ ನೋಡಿ. ನಾವು ಅರ್ಧ ಯುದ್ಧ ಗೆದ್ದ ಹಾಗೆ ಎನ್ನುವ ಸಲಹೆ ಸ್ವೀಕರಿಸಿದ ಮೋದಿಯವರು ಅದನ್ನು ಅನುಷ್ಟಾನಗೊಳಿಸಲು ರಾಷ್ಟ್ರದ ಜನರ ಸಹಕಾರ ಕೇಳಿದ್ದಾರೆ. ಪಾಲಿಸುವುದು ಬಿಡುವುದು ನಮಗೆ ಬಿಟ್ಟಿದ್ದು. ಒಂದು ವೇಳೆ ಈ ಉಪಾಯ ಕೆಲಸ ಮಾಡಿ ನಮಗೆ ಉಪಕಾರ ಆದರೆ ಮೋದಿಯವರಿಗೆ ಏನು ಲಾಭ? ರಾಷ್ಟ್ರದ ಜನರು ಸುರಕ್ಷಿತವಾಗಿದ್ದಾರೆ ಎನ್ನುವ ಖುಷಿ ಮಾತ್ರ. ಈಗಾಗಲೇ ಅಲ್ಲಿ ಇಟಲಿ ಪ್ರಧಾನಿ ತಮ್ಮಿಂದ ಆಗಲ್ಲ ಎಂದು ಕೈ ಎತ್ತಿ ಆಗಿದೆ. ಖಾದರ್ ಅಂತವರು ಮೋದಿಯವರನ್ನು ಹೀಗೆ ಟೀಕಿಸಿ ನಾಲ್ಕು ಜನರಿಂದ ಚಪ್ಪಾಳೆ ಗಿಟ್ಟಿಸಬಹುದು. ಆದರೆ ಪರಿಸ್ಥಿತಿ ಕೈ ಮೀರಿ ಹೋದರೆ ಯಾವ ಖಾದರ್ ಕೂಡ ಜವಾಬ್ದಾರಿ ಹೊರಲ್ಲ, ನೆನಪಿರಲಿ. ರಾಜಕೀಯ ಕೆಲವು ದಿನ ಮನೆಯಲ್ಲಿರಲಿ, ಪ್ರಯತ್ನ ಜಾರಿಯಲ್ಲಿರಲಿ!
0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
Tulunadu News January 10, 2026
ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
Tulunadu News January 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
  • Popular Posts

    • 1
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • 2
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 3
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 4
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?

  • Privacy Policy
  • Contact
© Tulunadu Infomedia.

Press enter/return to begin your search