• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಿಎಂ, ಸಭೆ ನಡೆಸುವಾಗ ಸಾಮಾಜಿಕ ಅಂತರ ಕಾಪಾಡಿ!!

Hanumantha Kamath Posted On March 28, 2020


  • Share On Facebook
  • Tweet It

ಅಂತಿಮವಾಗಿ ಏಳು ಜನರಿಗೆ ಸೊಂಕು ದೃಢವಾಗಿರುವ ಈ ಹೊತ್ತಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಖಡಕ್ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಅದೇನೆಂದರೆ ಸಂಪೂರ್ಣ ಲಾಕ್ ಡೌನ್. ಶನಿವಾರ ಎಲ್ಲಾ ವಾಣಿಜ್ಯ ವ್ಯವಹಾರಗಳು ಕೂಡ ಸಂಪೂರ್ಣ ಬಂದ್. ಇಲ್ಲದಿದ್ದರೆ ಜೀವನಾಶ್ಯಕ ವಸ್ತುಗಳ ನೆಪವೊಡ್ಡಿ ಅನೇಕರು ಹೊರಗೆ ಬರುತ್ತಿದ್ದರು. ಸೆಂಟ್ರಲ್ ಮಾರುಕಟ್ಟೆಯಲ್ಲಿ ಜನವೋ ಜನ. ಇದರಿಂದ ಉದ್ದೇಶವೇ ವ್ಯರ್ಥವಾಗುತ್ತಿತ್ತು. ತುಂಬಾ ಜನರಿಗೆ ಇನ್ನೂ ಕೂಡ ಮನೆಯಲ್ಲಿಯೇ ಏಕೆ ಕುಳಿತುಕೊಳ್ಳಬೇಕು ಎಂದು ಗೊತ್ತಾಗುತ್ತಿಲ್ಲ. ಅನೇಕರಿಗೆ ತಮಗೆ ಏನೂ ಆಗುವುದಿಲ್ಲ ಎನ್ನುವ ಅಹಂ. ಉಳಿದವರಿಗೆ ಏನಾದರೂ ಬೇಕಲ್ಲ ಎಂದು ಅಂಗಡಿಗಳಿಗೆ ಹೋಗಿ ಖರೀದಿ ಮಾಡುವ ಆತುರ, ಕೆಲವರಿಗೆ ಖಾಲಿ ಮಂಗಳೂರು ರಸ್ತೆಯನ್ನು ಹೀಗೆ ಕಣ್ತುಂಬಿಕೊಳ್ಳುವ ಅವಸರ. ಹೀಗಾಗಿ ಬೆಳಿಗ್ಗೆ ಆಗುತ್ತಲೇ ಇದರಲ್ಲಿ ದೊಡ್ಡ ಸಂಖ್ಯೆಯ ಜನ ಆರಾಮವಾಗಿ ತಿರುಗುತ್ತಿರುತ್ತಾರೆ. ಅವರಿಗೆ ಗೊತ್ತಿಲ್ಲ. ಕೊರೊನಾ ವೈರಸ್ ಬೆಳಿಗ್ಗೆ 6 ರಿಂದ 12 ರ ತನಕ ಪೊದೆಗಳ ಒಳಗೆ ಮಲಗಿ ನಂತರ ಊಟ ಮಾಡಿ ರಸ್ತೆಗೆ ಇಳಿಯುವುದಲ್ಲ. ಅದು ದಿನವೀಡಿ ರಸ್ತೆಯಲ್ಲಿಯೇ ಇರುತ್ತದೆ. ನೀವು ನಡೆಯುವಾಗ ನಿಮ್ಮ ಸುತ್ತಲೂ ತಿರುಗುತ್ತಿರುತ್ತದೆ. ಯಾವುದೋ ಒಂದು ಕ್ಷಣ ನಿಮ್ಮ ದೇಹವನ್ನು ನಿಮ್ಮ ಕೈಯ ಮೂಲಕ ಮೂಗು, ಕಿವಿ, ಕಣ್ಣಿನಿಂದ ಒಳಗೆ ಲ್ಯಾಂಡ್ ಆಗುತ್ತದೆ. ಅಲ್ಲಿ ಒಳಗೆ 14 ದಿನ ಸುತ್ತಾಡುತ್ತಾ ಇರುತ್ತದೆ. ನಿಮ್ಮ ದೇಹದ ಒಳಗೆ ಬಂದಿರುವ ಅತಿಥಿ ಯಾರೆಂದು ಗೊತ್ತಾಗುವಷ್ಟರಲ್ಲಿ ನೀವು ನೂರಾರು ಮಂದಿಗೆ ಅದನ್ನು ಹಂಚಿರುತ್ತೀರಿ. ಅದರಿಂದ ಅದು ಯಾವುದೋ ದುರ್ಬಲ ದೇಹದೊಳಗೆ ಪ್ರವೇಶಿಸಿ “ಕೊರೊನಾ ಸೊಂಕಿಗೆ ಇನ್ನೊಂದು ಬಲಿ” ಎನ್ನುವ ಹೆಡ್ಡಿಂಗ್ ನೊಂದಿಗೆ ತನ್ನ ಕೆಲಸ ಮುಗಿಸಿ ಹೊರಟು ಹೋಗಿರುತ್ತದೆ. ಕಥೆ ಇಷ್ಟೇ. ಅದಕ್ಕೆ ನಿಮಗೆ ಮನೆಯ ಒಳಗೆ ಇರಿ ಎಂದಿರುವುದು.
ಇದರಿಂದಲೇ ನಿಮಗೆ ಸಾಲಗೀಲದ ಕಂತು, ಬಡ್ಡಿ ಕಟ್ಟಲು ಆಗಲ್ಲ ಎಂದು ಸರಕಾರ ಮೂರು ತಿಂಗಳಿಗೆ ವಿನಾಯಿತಿ ಕೊಟ್ಟಿರುವುದು. 1.78 ಸಾವಿರ ಕೋಟಿ ಪ್ಯಾಕೇಜು ಘೋಷಿಸಿರುವುದು. ಅದೆಲ್ಲಕ್ಕಾಗಿ ನಾನು ಸರಕಾರಕ್ಕೆ ಸಾರ್ವಜನಿಕರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ. ನಾನು ನಮ್ಮ ಬುದ್ಧಿವಂತ ಜನರಿಗೆ ಮಾತ್ರ ಈ ವೈರಾಣುವಿನ ಪ್ರಾಮುಖ್ಯತೆ ಬಗ್ಗೆ ತಲೆಗೆ ಹೋಗುತ್ತಿಲ್ಲ ಎಂದು ಅಂದುಕೊಂಡಿದ್ದೆ. ಇದು ನೋಡಿದರೆ ನಮ್ಮ ರಾಜ್ಯವನ್ನು ನಡೆಸುವಂತಹ ನಮ್ಮ ಮಾನ್ಯ ಮುಖ್ಯಮಂತ್ರಿಯವರಿಗೂ ತಲೆಗೆ ಹೋಗಿಲ್ಲ. ಅದಕ್ಕಾಗಿ ಇವತ್ತು ಒಂದು ಫೋಟೋ ಪೋಸ್ಟ್ ಮಾಡುತ್ತಿದ್ದೇನೆ. ಅದರಲ್ಲಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಹೇಗೆ ಸಚಿವ ಸಂಪುಟ ಸಭೆ ನಡೆಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ನಾವು ಬೆಳಿಗ್ಗೆ ಎದ್ದು ರಾತ್ರಿ ಮಲಗುವ ತನಕ ನಮ್ಮ ಜನಪ್ರತಿನಿಧಿಗಳ, ವೈದ್ಯರ ಬಾಯಿಂದ ಕೇಳಿ ಬರುತ್ತಿರುವ ಒಂದು ಶಬ್ದ ಸಾಮಾಜಿಕ ಅಂತರ. ಆದರೆ ನಮ್ಮ ಮಾನ್ಯ ಮುಖ್ಯಮಂತ್ರಿಗಳು ಹೇಗೆ ಸಭೆ ನಡೆಸುತ್ತಿದ್ದಾರೆ ಎಂದರೆ ನಮ್ಮ ಕರ್ನಾಟಕದಲ್ಲಿ ಇರುವ ವಿಧಾನಸೌಧದಲ್ಲಿ ತುಂಬಾ ಜಾಗದ ಕೊರತೆ ಇದೆ. ಆದ್ದರಿಂದ ದೂರ ದೂರ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ ಎಂದು ಒಟ್ಟೊಟ್ಟಿಗೆ ಕುಳಿತುಕೊಂಡಿದ್ದಾರೆ. ಅದೇ ಇನ್ನೊಂದು ಫೋಟೋದಲ್ಲಿ ತಾವು ನೋಡಬಹುದು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಚಿವರನ್ನು ಹೇಗೆ ಕುಳ್ಳಿರಿಸಿ ಸಭೆ ನಡೆಸುತ್ತಿದ್ದಾರೆ. ಇನ್ನು ಮೊನ್ನೆ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಚಿವರನ್ನು ಸಾಕಷ್ಟು ಅಂತರದಲ್ಲಿ ಕುಳ್ಳಿರಿಸಿ ಸಭೆ ನಡೆಸಿದ್ದರು. ಕೇಂದ್ರದ ಮಾದರಿ ನಮ್ಮ ಎದುರುಗಡೆ ಇರುವಾಗಲೇ ನಮ್ಮ ಮುಖ್ಯಮಂತ್ರಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಸಭೆ ನಡೆಸಿ ಬಹಳ ಕೆಟ್ಟ ಉದಾಹರಣೆಯನ್ನು ಜನರ ಮುಂದೆ ಇಟ್ಟಿದ್ದಾರೆ. ಹೀಗೆ ಒಟ್ಟಿಗೆ ಕುಳಿತುಕೊಂಡ ಕೂಡಲೇ ಕೊರೊನಾ ಹರಡುತ್ತದೆ ಎಂದು ನಾನು ಹೇಳುತ್ತಿಲ್ಲ. ಆದರೆ ನಮ್ಮ ಜನಪ್ರತಿನಿಧಿಗಳು ನಿತ್ಯ ಹಲವಾರು ಕಡೆ ಹೋಗುತ್ತಾರೆ. ಏನೇನೋ ಕೈಯಲ್ಲಿ ಮುಟ್ಟಿರುತ್ತಾರೆ. ಅನೇಕರನ್ನು ಭೇಟಿಯಾಗಿರುತ್ತಾರೆ. ಯಾರಿಗೆ ಗೊತ್ತು. ಯಾರ ಒಳಗೆ ಕೊರೊನಾ ಬೆಚ್ಚಗೆ ಕುಳಿತು ಮುಂದಿನ ಬೇಟೆಗೆ ಅಣಿಯಾಗುತ್ತಿದೆಯೋ. ಕೊರೊನಾ ಸೊಂಕಿತರು ಕೂಡ ಹದಿನಾಲ್ಕು ದಿನ ಉಳಿದವರಂತೆನೆ ಇರುತ್ತಾರೆ. ಒಂದು ದಿನ ಗೊತ್ತಾಗುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ. ಕೊರೊನಾ ಬಂದವರೆಲ್ಲಾ ಸಾಯುತ್ತಾರೆ ಎಂದು ಹೇಳುತ್ತಿಲ್ಲ. ಅದರ ಪ್ರಮಾಣ ನೂರಕ್ಕೆ ಮೂರುವರೆ, ಹೆಚ್ಚೆಂದರೆ ನಾಲ್ಕು. ಆದರೆ ಈಗಿನ ಆಹಾರ ಪದ್ಧತಿಯಲ್ಲಿ ನಮ್ಮ ದೇಹದೊಳಗೆ ಈ ವೈರಾಣು ಹೋಗುವ ಮೊದಲೇ ಹಲವು ಕಾಯಿಲೆಗಳು ಗೂಡು ಕಟ್ಟಿಕೊಳ್ಳಲು ತಯಾರಾಗಿರುತ್ತವೆ. ಅದರೊಂದಿಗೆ ಇದು ಸೇರಿದರೆ ಒಳಗೆ ಹಬ್ಬ, ರಣಕೇಕೆ, ಸಾವಿನದ್ದು!!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search