• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೇಲ್ನೋಟಕ್ಕೆ ಕಾಣುವ ದೃಶ್ಯಗಳನ್ನುಆಧರಿಸಿ ವೀಡಿಯೋ ಶೇರ್ ಮಾಡುವ ಮುನ್ನಾ ಆಲೋಚಿಸಿ!

Tulunadu News Posted On April 17, 2020
0


0
Shares
  • Share On Facebook
  • Tweet It

ನಿನ್ನೆ ಅಂದರೆ ಎಪ್ರಿಲ್ 16 ನೇ ತಾರೀಕು ಮಂಗಳೂರಿನ ಲಾಲ್ ಭಾಗ್ ಸಮೀಪ ಎಂದು ಹೇಳಲಾಗುವ ಪೋಲಿಸರು ಮತ್ತು ಒಬ್ಬ ಹಿರಿಯ ವ್ಯಕ್ತಿಯ ನಡುವೆ ನಡೆದ ಮಾತುಕತೆ ವೀಡಿಯೋ ಈಗಾಗಲೇ ವೈರಲ್ ಆಗಿದೆ.ಕುತೂಹಲಕಾರಿ ವೀಡಿಯೋ ಎಂದಾಕ್ಷಣ ಪ್ರತಿಯೊಬ್ಬರು ಶೇರ್ ಮಾಡುತ್ತಾರೆ.ಆದರೆ ಆ ವೀಡಿಯೋ ದಲ್ಲಿ ಮೇಲ್ನೋಟಕ್ಕೆ ಕಾಣುವ ದೃಶ್ಯಗಳನ್ನು ಆಧರಿಸಿ ಯಾವುದು ತಪ್ಪು ಯಾವುದು ಸರಿ ಎಂಬುವ ನಿರ್ಧಾರಕ್ಕೆ ಈ ಕ್ಷಣಕ್ಕೆ ಬರುವುದು ಬೇಡ ಎಂಬುವುದು ತುಳುನಾಡಿನ ಜವಾಬ್ದಾರಿಯುತ ಮಾಧ್ಯಮವಾಗಿ ನಮ್ಮ ಕಳಕಳಿಯ ವಿನಂತಿ.

ವೀಡಿಯೋ ದ್ರಶ್ಯದಲ್ಲಿ ಏನಿದೆ? :- ಮೊಬೈಲ್ ನಲ್ಲಿ ಸೆರೆಯಾದ ವೀಡಿಯೋದಲ್ಲಿ ಲಾಕ್ ಡೌನ್ ಸಂಧರ್ಭದಲ್ಲಿ ಪಾಸ್ ರಹಿತವಾಗಿ ಚಲಿಸುತ್ತಿರುವ ಕಾರನ್ನು ತಡೆಹಿಡಿದು ಪೋಲಿಸರು ಪಾಸ್ ಕೇಳುತ್ತಾರೆ.ಆ ಹಿರಿಯ ವ್ಯಕ್ತಿ ಯಾವ ಪಾಸ್ ಅಂತ ಲಾಕ್ ಡೌನ್ ಅರಿವೇ ಇಲ್ಲದ ರೀತಿ ವರ್ತಿಸುತ್ತಾರೆ.ಮೇಲಾಗಿ ನನ್ನನ್ನು ಇಲ್ಲಿಯ ತನಕ ವಾಹನ ರೆಕಾರ್ಡ್ ಗಾಗಿ ನಿಲ್ಲಿಸಿದ್ದಾರೆ ಬಿಟ್ಟರೆ ಯಾರೊಬ್ಬರೂ ಪಾಸ್ ಗಾಗಿ ನಿಲ್ಲಿಸಲಿಲ್ಲ ಅಂತ ಗಟ್ಟಿ ಸ್ವರದಲ್ಲಿ ಅನುಚಿತವಾದ ರೀತಿಯಲ್ಲಿ ಹೇಳಿದಾಗ ಪೋಲಿಸರು ಸಿಟ್ಟುಗೊಂಡು ಕಾರ್ ಎದುರು ಬ್ಯಾರಿಕೇಡ್ ಇಡುತ್ತಾರೆ.ಇದರಿಂದ ವಿಚಲಿತರಾದ ಆ ಹಿರಿಯ ವ್ಯಕ್ತಿ ಅವಾಚ್ಯ ಶಬ್ದಗಳಲ್ಲಿ ಬೈದದ್ದು ಕಾಣಿಸುತ್ತದೆ ಮತ್ತು ಆ ವ್ಯಕ್ತಿಗೆ ಕಿವಿಯೂ ಸರಿಯಾಗಿ ಕೇಳಿಸುವುದಿಲ್ಲ, ಲಾಕ್ ಡೌನ್ ಬಗ್ಗೆ ಮಾಹಿತಿಯೇ ಇಲ್ಲವೇನೋ, ಮಾನಸಿಕ ಕಾಯಿಲೆ ಇದ್ದ ಹಾಗೆ, ದುರ್ವರ್ತನೆ, ಇವೆಲ್ಲ ವೀಡಿಯೋ ನೋಡಿದಾಗ ಮೇಲ್ನೋಟಕ್ಕೆ ತಿಳಿಯುವ ಅಂಶಗಳು.

ವೀಡಿಯೋ ಹಿನ್ನಲೆ ಏನು?:- ಜವಾಬ್ದಾರಿಯುತ ಮಾಧ್ಯಮವಾಗಿ ನಾವು ಆ ವ್ಯಕ್ತಿಯ ಪರಿವಾರವನ್ನು ಸಂಪರ್ಕಿಸಿದಾಗ ಅವರಿಗೆ Alzheimer’s disease (ಒಂದು ತರಹ ವಿಸ್ಮ್ರತಿ ರೋಗ) ಇರುವುದು ತಿಳಿಯಿತು.ಅದಲ್ಲದೇ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ವಿದೇಶದಲ್ಲಿದ್ದು ಅವರ ಹೆಂಡತಿ ಮಾತ್ರ ಇದ್ದು ದಿನದ 24 ಘಂಟೆಯೂ ಅವರ ಆರೈಕೆಯಲ್ಲಿ ತೊಡಗಿರುತ್ತಾರೆ.ನಿನ್ನೆ ಮಧ್ಯಾಹ್ನ ಒಂದು ಕ್ಷಣ ಅವರ ಹೆಂಡತಿ ನಿದ್ರೆಗೆ ಜಾರಿದ ಸಂಧರ್ಭದಲ್ಲಿ ಹೆಂಡತಿಯ ಅರಿವಿಗೆ ಬಾರದೇ ಕಾರು ಚಲಾಯಿಸಿ ಮನೆಯಿಂದ ಹೊರಟು ಬಿಟ್ಟಿದ್ದಾರೆ.ತಾನು ಎಲ್ಲಿಗೆ ಹೊರಟಿದ್ದೇನೆ ಅಂತ ಮರೆತು ಪುನಃ ಮನೆ ಕಡೆ ಬರುವಾಗ ದಾರಿಯಲ್ಲಿ ಪೋಲಿಸರು ತಡೆದಿದ್ದಾರೆ.ನಂತರ ಏನಾಯ್ತು ಎಂಬುವುದು ವೀಡಿಯೋದಲ್ಲಿ ಇದೆ.

ಹಾಗಾದರೆ ಇಲ್ಲಿ ತಪ್ಪು ಯಾರದ್ದು ಅಂತ ಹೇಳಲು ಈ ಕ್ಷಣದಲ್ಲಿ ಕಷ್ಟ. ರಾತ್ರಿ ಹಗಲು ಎನ್ನದೇ ಅವರ ಧರ್ಮಪತ್ನಿ ಅವರ ಆರೈಕೆ ಮಾಡುತ್ತಿದ್ದಾಳೆ.ಆ ವ್ಯಕ್ತಿಗೆ ಗೊತ್ತಾಗದೇ ಬರುವ ಸಿಟ್ಟು ಸಹಿಸಿಕೊಂಡಿದ್ದೂ ಪತಿ ಸೇವೆ ಮಾಡುತ್ತಿದ್ದಾಳೆ.ವೀಡಿಯೋ ವೈರಲ್ ಆಗಿ ತನ್ನನ್ನು ಅಪರಾಧಿ ಇಟ್ಟದ್ದನ್ನು ನೋಡಿ ಈಗ ಆಕೆ ತುಂಬಾ ನೊಂದು ಕೊಂಡಿದ್ದಾರೆ.ಇನ್ನೊಂದು ಕಡೆ ಪೋಲಿಸರು ಕೂಡ ಅವರಿಗೆ ನೀಡಿದ ಜವಾಬ್ದಾರಿ ಮತ್ತು ಕರ್ತವ್ಯವನ್ನು ತುಂಬಾ ನಿಷ್ಠೆಯಿಂದ ಮಾಡಿದ್ದಾರೆ.ಮತ್ತೊಂದು ಕಡೆ ನೋಡುವಾಗ ಆ ವ್ತಕ್ತಿಗೆ ಏನು ನಡೆಯುತ್ತಿದೆ ಎಂಬುವುದು ಈ ಕ್ಷಣದ ವರೆಗೂ ತಿಳಿದಿಲ್ಲ.

ಆದ್ದರಿಂದ ಒಂದು ಜವಾಬ್ದಾರಿಯುತ ಮಾಧ್ಯಮವಾಗಿ ಜವಾಬ್ದಾರಿಯುತ ನಾಗರಿಕರಲ್ಲಿ ಈ ಕ್ಷಣದಿಂದಲೇ ಆ ವೀಡಿಯೋ ಶೇರ್ ಮಾಡುವುದನ್ನು ನಿಲ್ಲಿಸಿ ಪೋಲಿಸರು ಎಲ್ಲವನ್ನೂ ಕೂಲಂಕುಷವಾಗಿ ಪರಾಮರ್ಶಿಸಿ ಒಂದು ನಿರ್ಧಾರಕ್ಕೆ ಬರುವ ತನಕ ಯಾವುದೇ ತೀರ್ಮಾನಕ್ಕೆ ಬರಬಾರದಾಗಿ ತಮ್ಮಲ್ಲಿ ಕಳಕಳಿಯ ವಿನಂತಿ.

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Tulunadu News June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Tulunadu News June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search