• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬಂಟ್ವಾಳದ ಎರಡು ಕೊಲೆಗಳಿಂದ ಲಾಭ ಒಬ್ಬ ವ್ಯಕ್ತಿಗಾ?

TNN Correspondent Posted On August 8, 2017


  • Share On Facebook
  • Tweet It

ಶರತ್ ಮಡಿವಾಳ ಅವರ ಕೊಲೆಯ ಹಿಂದಿರುವ ಕಾಣದ “ಕೈ”ಗಳನ್ನು ಬಂಧಿಸಲು ತಡ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳೇ ಅಲ್ಲಿನ ಸ್ಥಳೀಯ ನಾಗರಿಕರು ಮಾತನಾಡುತ್ತಿರುವ ಕಥೆಯ ಹಿಂದಿನ ಮರ್ಮವನ್ನು ಅರಿತುಕೊಂಡರೆ ಸತ್ಯ ಹೊರಗೆ ಬರಬಹುದು. ಅಷ್ಟಕ್ಕೂ ಆ ಕಥೆ ಏನು?

ಮೊದಲಿಗೆ ನಡೆದ ಕೊಲೆ ಎಸ್ ಡಿಪಿಐ ಮುಖಂಡ ಅಶ್ರಫ್ ಕಲಾಯಿ ಅವರದ್ದು. ಅವರ ಕೊಲೆಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆ ಪ್ರಕರಣದ ಪ್ರಮುಖ ಆರೋಪಿ ಭರತ್ ಕುಮ್ಡೇಲು. ಆತನೊಂದಿಗೆ ಇತರ ಆರೋಪಿಗಳನ್ನು ಕೂಡ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಅಷ್ಟಕ್ಕೂ ಅಶ್ರಫ್ ಕಲಾಯಿ ಕೊಲೆ ಯಾಕಾಯಿತು. ಅಶ್ರಫ್ ಇವತ್ತಲ್ಲ ನಾಳೆ ಜಾತ್ಯಾತೀತ ಪಕ್ಷಗಳಿಗೆ ಗೆಲ್ಲಲು ಸಂಕಟ ತರಬಲ್ಲ ನಾಯಕನಾಗಿ ಬೆಳೆಯುತ್ತಿದ್ದರು. ಒಂದು ಕಡೆ ಅಶ್ರಫ್ ಜನಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಎಲ್ಲರ ಕಷ್ಟನೋವುಗಳಿಗೆ ಸ್ಪಂದಿಸುತ್ತಿದ್ದರು. ಕಳೆದ ಚುನಾವಣೆಯಲ್ಲಿ ತಮ್ಮ ಏರಿಯಾದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಅಭ್ಯರ್ಥಿ ಒದಗಿಸಿಕೊಟ್ಟವರು ಇದೇ ಅಶ್ರಫ್. ಅಶ್ರಫ್ ಜೀವಂತವಾಗಿ ಇದ್ದರೆ ಯಾರದ್ದಾದರೂ ರಾಜಕೀಯ ಜೀವನ ಅಂತ್ಯಗೊಳ್ಳುವ ಸಾಧ್ಯತೆ ಇತ್ತು. ಅದಕ್ಕಾಗಿ ಅವರು ಸೆಟ್ ಮಾಡಿದ್ದು ಬಜರಂಗದಳದ ಸ್ಥಳೀಯ ಮುಖಂಡರನ್ನು. ಭರತ್ ಕುಮ್ಡೇಲು ಮತ್ತು ಟೀಮ್ ಸೇರಿ ಅಶ್ರಫ್ ಕಲಾಯಿಯನ್ನು ಮುಗಿಸಿದ್ರು ಎನ್ನುವುದು ಪೊಲೀಸರ ಸದ್ಯದ ತನಿಖೆಯಿಂದ ಹೊರ ಬಂದಿರುವ ಸಂಗತಿ.

ಅಷ್ಟಕ್ಕೂ ಭರತ್ ಮತ್ತು ಅವನ ಸ್ನೇಹಿತರಿಗೆ ಅಶ್ರಫ್ ಒಬ್ಬ ಮುಸ್ಲಿಂ ಎನ್ನುವ ಕಾರಣಕ್ಕೆ ಎದುರಾಳಿ ಆಗಿರಬಹುದೇ ವಿನ: ಬೇರೆ ಯಾವ ಕಾರಣವೂ ಅಲ್ಲಿ ಕಾಣುವುದಿಲ್ಲ. ಅಶ್ರಫ್ ಹಾಗೂ ಭರತ್ ಅಜನ್ಮ ಶತ್ರುಗಳಲ್ಲ. ಒಬ್ಬರನ್ನು ಒಬ್ಬರು ಕೊಂದು ಹಾಕಬೇಕೆನ್ನುವಷ್ಟು ದ್ವೇಷ ಇರಲಿಲ್ಲ. ಆದರೂ ಭರತ್ ಮತ್ತು ಇತರ ಆರೋಪಿಗಳು ಈ ಅಶ್ರಫ್ ಅವರನ್ನು ಕೊಂದು ಹಾಕುತ್ತಾರೆ ಎಂದರೆ ಅವರಿಗೆ ಧರ್ಮ ಕ್ಕಿಂತ ದೊಡ್ಡ ಮಟ್ಟದ ಹಣ “ಕೈ” ಬದಲಾವಣೆ ಆಗಿದೆ ಎಂದು ಅರ್ಥ ಎನ್ನುವುದನ್ನು ಪೊಲೀಸರು ತನಿಖೆ ಮಾಡಬೇಕು. ಇಲ್ಲಿ ಅಶ್ರಫ್ ಬಿಜೆಪಿಯವರೊಂದಿಗೂ ಚೆನ್ನಾಗಿಯೇ ಇದ್ದ ಕಾರಣ ಅವರನ್ನು ಕೊಲ್ಲಬೇಕೆನ್ನುವ ದ್ವೇಷ ಯಾರಿಗೆ ಎನ್ನುವುದನ್ನು ಪೊಲೀಸರು ತನಿಖೆ ಮಾಡಬೇಕು.

ಅದಕ್ಕೆ ಕೆಲವು ದಿನಗಳ ನಂತರ ಶರತ್ ಮಡಿವಾಳ ಅವರ ಹತ್ಯೆಯಾಗುತ್ತದೆ. ಮೇಲ್ನೋಟಕ್ಕೆ ಇದು ಅಶ್ರಫ್ ಕೊಲೆಗೆ ಪ್ರತೀಕಾರ ಎನ್ನಲಾಗುತ್ತದೆ. ಆದರೆ ಅದು ಅಪ್ಪಟ ಸುಳ್ಳು ಎಂದು ಸರಿಯಾಗಿ ತನಿಖೆ ನಡೆದರೆ ಗೊತ್ತಾಗಬಹುದು. ಶರತ್ ದಕ್ಷಿಣ ಕನ್ನಡ ಜಿಲ್ಲೆಯ ಮರಳು ಮಾಫಿಯಾದ ವಿರುದ್ಧ ಯುದ್ಧ ಸಾರಿದ್ದರು. ನಂದಾವರದಲ್ಲಿ ಖಾಲಿ ಜಮೀನಿನಲ್ಲಿ ಮರಳು ಹೇರಳವಾಗಿ ರಾಶಿ ಬಂದು ಬೀಳುತ್ತಿದ್ದದ್ದು ಅವರ ಗಮನಕ್ಕೆ ಬರುತ್ತಿತ್ತು. ಆ ಪ್ರದೇಶದಿಂದ ಮರಳು ಬೇರೆಡೆ ಅವ್ಯಾಹತವಾಗಿ ಸರಬರಾಜು ಆಗುತ್ತಿತ್ತು. ಶರತ್ ಆ ಪ್ರದೇಶದ ಬಗ್ಗೆ ಪರೀಕ್ಷಿಸಿದಾಗ ಆ ಮರಳು ಬಂದು ಸ್ಟಾಕ್ ಆಗುತ್ತಿದ್ದ ಜಾಗ ಮಾಜಿ ಶಾಸಕ ಯೋಗೀಶ್ ಭಟ್ ಅವರದ್ದು ಎಂದು ಗೊತ್ತಾಯಿತು. ಅದನ್ನು ಯೋಗೀಶ್ ಭಟ್ಟರ ಗಮನಕ್ಕೆ ತಂದ ಶರತ್ ಆ ಜಾಗಕ್ಕೆ ಸುತ್ತಲೂ ಬೇಲಿ ಹಾಕಿಸಿ ಅದಕ್ಕೆ ಗೇಟ್ ಎಲ್ಲಾ ಮಾಡಿಸಿ ಅಲ್ಲಿ ಮರಳು ಸ್ಟಾಕ್ ಆಗದಂತೆ ನೋಡಿಕೊಂಡರು. ಇದು ಮರಳು ಮಾಫಿಯಾದವರನ್ನು ಕೆರಳಿಸಿತು. ಅವರಿಗೆ ದೊಡ್ಡ ತಲೆನೋವಾಯಿತು. ತಾವು ಏನು ಮಾಡಿದರೂ ಅಡ್ಡಗಾಲು ಹಾಕಲು ಒಬ್ಬ ಇದ್ದಾನೆ ಎಂದು ಅವರಿಗೆ ತಿಳಿಯಿತು. ಅವರು ಸಮಯ ಕಾಯುತ್ತಿದ್ದರು. ಯಾವಾಗ ಅಶ್ರಫ್ ಕೊಲೆಯಾಯಿತೊ ಅದರ ಕೆಲವು ದಿನಗಳ ನಂತರ ಮತ್ತೊಂದು ಹೆಣ ಬೀಳಿಸಲಾಯಿತು. ಮುಸ್ಲಿಂ ಕೊಲೆಗೆ ಪ್ರತೀಕಾರ ಎಂದು ಸುದ್ದಿ ಹಬ್ಬಿಸಲಾಯಿತು. ಯಾರಿಗೂ ಮರಳಿನ ವಿಷಯ ಹೊಳೆಯಲೇ ಇಲ್ಲ.ಈಗ ಪೊಲೀಸರು ಅಲ್ಲಿ ಮರಳು ಸ್ಟಾಕ್ ಮಾಡುತ್ತಿದ್ದವರು ಯಾರು ಎಂದು ನೋಡಿದರೆ ವಿಷಯ ಬಯಲಿಗೆ ಬರುತ್ತದೆ. ಯಾರೋ ಒಬ್ಬನೇ ವ್ಯಕ್ತಿಗೆ ಈ ಎರಡೂ ಕೊಲೆಗಳಿಂದ ಲಾಭ ಆಗಿರಬಹುದಾ? ಪ್ರಶ್ನೆ ಹಾಗೆ ಉಳಿದಿದೆ. ಉತ್ತರ ಹುಡುಕುವ ಧೈರ್ಯ ಪೊಲೀಸರು ಮಾಡುವುದು ಯಾವಾಗ

  • Share On Facebook
  • Tweet It


- Advertisement -


Trending Now
ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
Tulunadu News March 26, 2023
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
Tulunadu News March 25, 2023
Leave A Reply

  • Recent Posts

    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
  • Popular Posts

    • 1
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 2
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 3
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 4
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 5
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search