• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸಾವರ್ಕರ್ ಹೆಸರು ಮೇಲ್ಸೆತುವೆ ಇಡಲು ಹೆದರಿದ ಯಡಿಯೂರಪ್ಪ!!

Hanumantha Kamath Posted On May 28, 2020
0


0
Shares
  • Share On Facebook
  • Tweet It

ವೀರ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು ಹೌದಾ ಅಲ್ವಾ ಎನ್ನುವ ಅನುಮಾನ ನಮ್ಮ ರಾಜ್ಯದಲ್ಲಿ ಇರುವುದು ಇಬ್ಬರಿಗೆ ಮಾತ್ರ. ಅದರಲ್ಲಿ ಒಬ್ಬರು ಸಿದ್ಧರಾಮಯ್ಯ ಮತ್ತೊಬ್ಬರು ಕುಮಾರಸ್ವಾಮಿ. ಇದೇ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತುಮಕೂರಿನಲ್ಲಿ ಒಂದು ಉದ್ಯಾನವನ್ನು ಅಲ್ಲಿನ ಪಾಲಿಕೆ ನಿರ್ಮಿಸಿತ್ತು. ಅದಕ್ಕೆ ಹೆಸರು ಸ್ವಾತಂತ್ರ್ಯ ವೀರ ವಿ.ದಾ.ಸಾವರ್ಕರ್. ಅದನ್ನು ಆಗಿನ ಕಾಂಗ್ರೆಸ್ ಸರಕಾರದ ಘಟಾನುಘಟಿ ನಾಯಕರೇ ಉದ್ಘಾಟನೆ ಮಾಡಿದ್ರು. ಪರಮೇಶ್ವರ್, ಟಿಬಿ.ಜಯಚಂದ್ರ, ರೋಶನ್ ಬೇಗ್ ಸಮ್ಮುಖದಲ್ಲಿಯೇ ಅದು ಉದ್ಘಾಟನೆಗೊಂಡಿತ್ತು. ಆಗ ಯಾವ ಕಾಂಗ್ರೆಸ್ಸಿನ ಮಂತ್ರಿಯವರು ಇದನ್ನು ವಿರೋಧಿಸಿಲ್ಲ. ಇದು ಬಿಡಿ, ಸಣ್ಣಪುಟ್ಟ ನಾಯಕರ ವಿಷಯ. ಸಿದ್ಧರಾಮಯ್ಯ ಈಗ ಯಾವ ಪಕ್ಷದಲ್ಲಿ ಇದ್ದಾರೋ ಆ ಪಕ್ಷದ ಅಧಿನಾಯಕಿ ಇಂದಿರಾಗಾಂಧಿಯವರೇ ಸಾವರ್ಕರ್ ಅವರನ್ನು ಸ್ವಾತಂತ್ರ್ಯಯೋಧ ಎಂದು ಹೇಳಿದ್ದರು. ಹೇಳಿದ್ದು ಅಂದರೆ ನೀವು ದಾಖಲೆ ಕೇಳಬಹುದು, ಅವರು ಸ್ವತ: ಅದನ್ನು ಬರೆದಿದ್ದಾರೆ. ಅದಕ್ಕೆ ತಮ್ಮ ಸಹಿ ಹಾಕಿದ್ದಾರೆ. ಅದರ ಪ್ರತಿಯನ್ನು ಇವತ್ತು ಪೋಸ್ಟ್ ಮಾಡುತ್ತಿದ್ದೇನೆ. ಇದು ಸಿದ್ಧರಾಮಯ್ಯನವರಿಗೆ ಗೊತ್ತಿಲ್ಲದಿದ್ದರೆ ತಮ್ಮ ಒರಗೆಯ ಬುದ್ಧಿಜೀವಿಗಳನ್ನು ಕರೆದು ಕೇಳುವುದು ಒಳ್ಳೆಯದು. ಇನ್ನು ಕುಮಾರಸ್ವಾಮಿಯವರಿಗೆ ಸದ್ಯ ಪ್ರಚಾರದಲ್ಲಿರಲು ವಿಷಯವೇನಿಲ್ಲ. ಅದಕ್ಕಾಗಿ ಅವರ ಬಗ್ಗೆ ಬರೆಯುವುದು ವೇಸ್ಟ್. ಇನ್ನು ಕಾಂಗ್ರೆಸ್ ಪಕ್ಷದವರ ಮಟ್ಟಿಗೆ ಸ್ವಾತಂತ್ರ್ಯಯೋಧರೆಂದರೆ ಅದು ನೆಹರೂ ಮಾತ್ರ. ಅವರಿಗೆ ಬೇರೆಯವರ ಬಗ್ಗೆ ಅಷ್ಟು ಪರಿಚಯ ಇಲ್ಲ. ಸ್ವಾತಂತ್ರ್ಯ ಸಂಗ್ರಾಮ ಎಂದರೆ ಬ್ರಿಟಿಷರೊಂದಿಗೆ ಕಚೇರಿಯೊಳಗೆ ಕುಳಿತು ಸಿಗಾರ್ ಸೇದುತ್ತಾ ಹರಟೆ ಹೊಡೆಯುವುದು ಎಂದು ಸಿದ್ಧರಾಮಯ್ಯ ಅಂದುಕೊಂಡಿರಬಹುದು. ಆದರೆ ಸಾವರ್ಕರ್ ನಿಜವಾದ ದೃಷ್ಟಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಅವರಿಗೆ ಕಾಲಾಪಾನಿ ಶಿಕ್ಷೆಯಾಗಿತ್ತು. ಅದು ಕೂಡ ಎರಡೆರಡು ಬಾರಿ. ನೀವು ಅಂಡಮಾನ್ ನ ಕಾಲಾಪಾನಿ ಜೈಲ್ ನೋಡಿಬಂದರೆ ಅದರ ವಿಕಾರತೆ ಗೊತ್ತಾಗುತ್ತದೆ. ಸಿದ್ಧರಾಮಯ್ಯ ಹೋಗಿರಲಿಕ್ಕಿಲ್ಲ. ಸಾವರ್ಕರ್ ಇದ್ದ ಜೈಲಿನ ಕೊಠಡಿಯಿಂದ ಹೊರಗೆ ನೋಡಿದರೆ ವಾರಕ್ಕೊಮ್ಮೆ ಸ್ವಾತಂತ್ರ್ಯಯೋಧರನ್ನು ಬಟಾಬಯಲಿನಲ್ಲಿ ಗಲ್ಲಿಗೇರಿಸುತ್ತಿದ್ದ ದೃಶ್ಯಗಳು ಕಾಣಿಸುತ್ತಿತ್ತಂತೆ. ನಿಮ್ಮ ಕಣ್ಣೇದುರೆ ವಾರಕ್ಕೆ ಮೂರ್ನಾಕು ಜನ ಗಲ್ಲಿಗೇರುವ ದೃಶ್ಯ ನೋಡುವುದು ಎಂದರೆ ಗುಂಡಿಗೆ ಗಟ್ಟಿ ಇದ್ದರೆ ಮಾತ್ರ ಸಾಧ್ಯ.

ಇನ್ನು ಯಲಹಂಕ ಮೇಲ್ಸೆತುವೆಗೆ ಸಾವರ್ಕರ್ ಹೆಸರಿಡಲು ವಿರೋಧಿಸುವ ಸಿದ್ದು, ಕುಮಾರಸ್ವಾಮಿಯವರೇ ನೀವು ನುಂಗಿ ನೀರು ಕುಡಿದ ಇಂದಿರಾ ಕ್ಯಾಂಟೀನ್ ಗೆ ನಿಮ್ಮ ಪಕ್ಷದ ನಾಯಕಿಯ ಹೆಸರಿಡುವಾಗ ಬಿಜೆಪಿಯವರು ವಿರೋಧಿಸಿಲ್ಲವಲ್ಲ. ಬಿಜೆಪಿಯ ಮುಖಂಡರೇ ಉದ್ಘಾಟನೆಗೆ ಹೋಗಿದ್ರು. ಜೆಡಿಎಸ್ ಮುಖಂಡರು ಕೂಡ ಬಾಯಿಗೆ ಇಡ್ಲಿ ತುರುಕಿ ಬಂದಿದ್ದರೆ ವಿನ: ಇಂದಿರಾ ಯಾವ ಸೀಮೆ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಕೇಳಿದ್ರಾ? ಇಲ್ವಲ್ಲಾ. ಇನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದರೆ ಕರ್ನಾಟಕದವರು, ಮಹಾರಾಷ್ಟ್ರದವರು ಎಂದು ಇರಲ್ಲ. ಸ್ವಾತಂತ್ರ ಯೋಧರು, ಪ್ರಧಾನಿ, ರಾಷ್ಟ್ರಪತಿ ಗಡಿ ಮೀರಿದವರು. ಅವರನ್ನು ಒಂದು ರಾಜ್ಯದ ಗಡಿಯೊಳಗೆ ತರಲೇಬಾರದು. ಇಂದಿರಾ ಕ್ಯಾಂಟೀನ್ ಮಾಡುವಾಗ ಯಾವುದೇ ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಬಹುದಿತ್ತಲ್ಲ, ಸಿದ್ದುಜಿ.
ಇನ್ನು ಯಡಿಯೂರಪ್ಪನವರ ವಿಷಯಕ್ಕೆ ಬರೋಣ. ಯಡಿಯೂರಪ್ಪನವರೇ, ನೀವು ಮುಂದಿನ ಮೂರು ವರ್ಷ ಮತ್ತು ಅದರ ನಂತರ ಮತ್ತೆ ಮುಖ್ಯಮಂತ್ರಿಯಾಗಿ ಒಟ್ಟು 8 ವರ್ಷದ ಸ್ಕೀಮ್ ಹಾಕಿ ಕುಳಿತಿರುವ ತರಹ ಕಾಣುತ್ತಿದೆ. ಅದಕ್ಕಾಗಿ ಕಾಂಗ್ರೆಸ್ಸಿನವರು ಏನು ಹೇಳಿದ್ರು ಸರಿ, ಹೌದು ಎಂದು ತಲೆ ಆಡಿಸುವ ಲೆವೆಲ್ಲಿಗೆ ಬಂದಿದ್ದಿರಿ. ಇವತ್ತು ಸಾವರ್ಕರ್ ಜನ್ಮದಿನ. ಇವತ್ತು ಆ ಮೇಲ್ ಸೇತುವೆಗೆ ಸಾವರ್ಕರ್ ಹೆಸರಿಟ್ಟು ಉದ್ಘಾಟನೆ ಮಾಡಿದಿದ್ದರೆ ನಿಮಗೆ ಗೆಲ್ಲಿಸಿದ್ದಕ್ಕೂ ನಿಮ್ಮ ಮತದಾರರಿಗೆ ಖುಷಿಯಾಗುತ್ತಿತ್ತು. ಆದರೆ ನೀವು ಹೆದರುತ್ತಿದ್ದಿರಿ. ನಿಮ್ಮನ್ನು ಜೈಲಿಗೆ ಕಳುಹಿಸಲು ಸಂಚು ಹೂಡಿದ್ದವರ ಮುಂದೆ ನೀವು ಎದೆಯುಬ್ಬಿಸಿ ನಡೆಯಬೇಕಿತ್ತು. ಆದರೆ ನಿಮಗೆ ಒಳಗೊಳಗೆ ಆತಂಕವಿದೆ. ನೀವು ಈ ಟರ್ಮ್ ಮುಗಿಯುವಷ್ಟರಲ್ಲಿ ನಿಮ್ಮ ಜೊತೆ ಬಿಜೆಪಿಯ ಸಿದ್ಧಾಂತವನ್ನು ಕೂಡ ಕಾವೇರಿಯಲ್ಲಿ ಮುಳುಗಿಸಿ ಹೋಗುವಂತೆ ಕಾಣುತ್ತಿದೆ!
0
Shares
  • Share On Facebook
  • Tweet It




Trending Now
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Hanumantha Kamath January 28, 2026
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
Hanumantha Kamath January 23, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
  • Popular Posts

    • 1
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search