• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಆರೋಗ್ಯ

ಸವೆಯದಿರಲಿ ಮೂಳೆ ,ಭದ್ರವಾಗಿರಲಿ ನಿಮ್ಮ ನಾಳೆ.

TNN Correspondent Posted On August 9, 2017
0


0
Shares
  • Share On Facebook
  • Tweet It

ಯೌವನ ಪ್ರಾಯದಲ್ಲಿಯೇ ಮೂಳೆಗಳ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ  ವಹಿಸಿದರೆ ವಯಸ್ಸಾದಾಗ ಮೂಳೆ ಸಂಬಂಧಿತ ಕಾಯಿಲೆಯಿಂದ  ನರಳುವ  ಸಂಭವ  ಕಡಿಮೆಯಾಗುತ್ತದೆ .ಮೂಳೆಗಳು ಗಟ್ಟಿಯಾಗಿದ್ದರೆ ದೇಹ ಗಟ್ಟಿಯಾಗಿರುತ್ತದೆ .ಇದಕ್ಕಾಗಿ ಕ್ಯಾಲ್ಸಿಯಂ ಬಹಳ  ಅವಶ್ಯವಾಗಿದೆ  .ಇದೆ  ಕಾರಣದಿಂದ  ಹುಟ್ಟುವ   ಮಗುವಿಗೂ  ಗರ್ಭವಾಸ್ಥೆಯಲ್ಲಿ  ಕ್ಯಾಲ್ಸಿಯಂ ನ  ಪೂರೈಕೆ ಹೆಚ್ಚು  ಇರಬೇಕೆಂದು  ವೈದ್ಯರು  ಸಲಹೆ  ನೀಡುತ್ತಾರೆ .ಕೇವಲ ಔಷಧಿಗಳಿಂದ ಮಾತ್ರ ಮೂಳೆಗಳನ್ನು ಸ್ವಸ್ಥವಾಗಿಡಲು  ಸಾಧ್ಯವಿಲ್ಲ ಇದಕ್ಕೆ   ನಿಯಮಿತ ವ್ಯಾಯಾಮ ಮತ್ತು ಕ್ಯಾಲ್ಸಿಯಂ ಹಾಗೂ ವಿಟಮಿನ್  ಡಿ ಹೊಂದಿರುವ ಪೌಷ್ಟಿಕ   ಅಹಾರ ಸೇವನೆಯಿಂದ ಮೂಳೆಗಳನ್ನು ಗಟ್ಟಿಗೊಳಿಸಬಹುದು  .ಹಾಗಿದ್ದರೆ  ಯಾವ  ಯಾವ  ಆಹಾರಗಳನ್ನು   ಸೇವಿಸಬಹುದು   ,ಬನ್ನಿ  ನೋಡೋಣ.

ಹಾಲು -ಇದು  ಸಂಪೂರ್ಣ  ಅಹಾರ ಎಂದೇ ಪರಿಗಣಿಸಲಾಗಿದೆ  .ಇದರಲ್ಲಿ  ಕ್ಯಾಲ್ಸಿಯಂ ಹೆಚ್ಚಿನ  ಪ್ರಮಾಣದಲ್ಲಿದೆ .ಆದ್ದರಿಂದ ದಿನಾಲೂ ಒಂದು ಲೋಟ ಹಾಲು ಕುಡಿಯುವುದು ಆರೋಗ್ಯಕರ.ಗರ್ಭಿಣಿ ಮಹಿಳೆಯು ಎರಡು ಲೋಟ ಹಾಲು ಕುಡಿಯುವುದೊಳ್ಳೆಯದು ಯಾಕೆಂದರೆ ಆಕೆ ಇಬ್ಬರ ಅಹಾರ ಸೇವಿಸಬೇಕು .ಹಾಲನ್ನು ಚೆನ್ನಾಗಿ ಕುಡಿಸಿ ಕುಡಿಯಬೇಕು ,ಆದಷ್ಟೂ ಹಾಲು ತಾಜಾವಾಗಿರಲಿ .

ಕಿತ್ತಳೆ ಹಣ್ಣಿನ ರಸ.

ಕಿತ್ತಳೆ ಹಣ್ಣು ಒಳ್ಳೆಯದು  .ಇದನ್ನು ಹಾಗೆಯೆ ತಿನ್ನಬಹುದು ,ಇದರ ನಾರಿನಂಶ ಇಷ್ಟ ಪಡದವರು ರಸ ತೆಗೆದು ಕುಡಿಯಬಹುದು.ರಸ ತೆಗೆಯುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು .ಇದಕ್ಕೆ ಸಕ್ಕರೆಯನ್ನು ಬೆರೆಸದಿರಿ ,ತಾಜಾ ಜೇನು ತುಪ್ಪವನ್ನು ಬಳಸಿ .ಪ್ಯಾಕ್ ಆಗಿರುವ ಕಿತ್ತಳೆ ರಸ ಕುಡಿಯಬೇಡಿ ,ಇದರಲ್ಲಿ ರಸ ಹಾಳಾಗದಂತೆ  ರಾಸಾಯನಿಕಗಳನ್ನು ಸೇರಿಸಿರಬಹುದು ಆದರೂ ಅನಿವಾರ್ಯ ಸಂದರ್ಭದಲ್ಲಿ ಇದನ್ನು ಸೇವಿಸಬಹುದು .

ಬಾದಾಮಿ ಬೀಜಗಳು

ಬಾದಾಮಿ ಒಂದು ಅತುತ್ತಮ ಒಣ ಹಣ್ಣು .ಇದು ಬಹೂಪಯೋಗಿ .ಇದು ಕ್ಯಾಲ್ಸಿಯಂ ನ್ನು ಸಹ ಪೂರೈಸುತ್ತದೆ .ಇದನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದು ತಿನ್ನಬೇಕು .ಇದರ ಹಾಲು ಸಹ ಕುಡಿಯಬಹುದು .ದಿನಕ್ಕೆ ನಾಲ್ಕು ಇಲ್ಲವೇ ಐದು ಬಾದಾಮಿಯನ್ನು ಸೇವಿಸಬಹುದು ,ಇದು ನಿಮ್ಮ ದಿನ ನಿತ್ಯದ  ಆಹಾರಗಳಲ್ಲಿ ಒಂದಾಗಲಿ .

ಫಿಗ್  ಹಣ್ಣು

ಇದು ಕೂಡ ಅತ್ಯುತ್ತಮ ಕ್ಯಾಲ್ಸಿಯಂ ಪೂರೈಸುವ ಆಹಾರಗಳಲ್ಲಿ ಒಂದಾಗಿದೆ .ವಾರದಲ್ಲೊಮ್ಮೆ ಇದರ ಸೇವನೆ ಕೂಡ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ  ನ್ನು ಪೂರೈಸುತ್ತದೆ .ಆದ್ದರಿಂದ ಎಲುಬಿನ  ತೊಂದರೆಯಿಂದ  ದೂರವಿರಬಹುದು .

ಮೊಸರು

ಇದೊಂದು ಅದ್ಭುತ್ಥ ಅಹಾರ ,.ಬೆಳ್ಳಗೆ.ನುಣುಪಾಗಿ ಇರುವ ಇದು ಅಮೃತವೇ ಸರಿ .ಬ್ಯಾಕ್ಟೀರಿಯಾಗಳು ಇರುವ ಕರಣ ಇದು ಆರೋಗ್ಯಕರ .ಇದರಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಸಿಗುತ್ತದೆ .ಇದನ್ನು ಸ್ವಲ್ಪ ಉಪ್ಪು ಸೇರಿಸಿ ಇಲ್ಲವೇ ಸಕ್ಕರೆ ಸೇರಿಸಿ ತಿನ್ನಬಹುದು .ಇದರಿಂದ  ತಂಬುಳಿ ,ಮೊಸರು ಬಜ್ಜಿ ,ಹುಳಿ ಕೂಡ ತಯಾರಿಸಿ ತಿನ್ನಬಹುದು .ಇದು ತಂಪು ,ಹಿತಕರ ರುಚಿಕರ ,ನಿಮ್ಮ ಎಲುಬಿನ ರಕ್ಷಕ .

ಕ್ಯಾಲ್ಸಿಯಂ ದೇಹಕ್ಕೆ ಅತಿ ಅಗತ್ಯ .ಇದರಿಂದ ಎಲುಬಿನ ಬೆಳವಣಿಗೆ ಚೆನ್ನಾಗಿ ಆಗಿ ಎಲುಬು ಸವೆತ ತಪ್ಪುತ್ತದೆ .ವಯಸ್ಸಾದ ಮೇಲೆ ಈ ನೋವಿಗೆ  ಈಡಾಗುವ ಮುನ್ನ ಎಚ್ಚರಿಕೆ ವಹಿಸಿ

 

0
Shares
  • Share On Facebook
  • Tweet It




Trending Now
ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
Tulunadu News March 5, 2026
ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
Tulunadu News March 3, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
  • Popular Posts

    • 1
      ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • 2
      ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • 3
      ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • 4
      ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ

  • Privacy Policy
  • Contact
© Tulunadu Infomedia.

Press enter/return to begin your search