• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸವೆಯದಿರಲಿ ಮೂಳೆ ,ಭದ್ರವಾಗಿರಲಿ ನಿಮ್ಮ ನಾಳೆ.

TNN Correspondent Posted On August 9, 2017


  • Share On Facebook
  • Tweet It

ಯೌವನ ಪ್ರಾಯದಲ್ಲಿಯೇ ಮೂಳೆಗಳ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ  ವಹಿಸಿದರೆ ವಯಸ್ಸಾದಾಗ ಮೂಳೆ ಸಂಬಂಧಿತ ಕಾಯಿಲೆಯಿಂದ  ನರಳುವ  ಸಂಭವ  ಕಡಿಮೆಯಾಗುತ್ತದೆ .ಮೂಳೆಗಳು ಗಟ್ಟಿಯಾಗಿದ್ದರೆ ದೇಹ ಗಟ್ಟಿಯಾಗಿರುತ್ತದೆ .ಇದಕ್ಕಾಗಿ ಕ್ಯಾಲ್ಸಿಯಂ ಬಹಳ  ಅವಶ್ಯವಾಗಿದೆ  .ಇದೆ  ಕಾರಣದಿಂದ  ಹುಟ್ಟುವ   ಮಗುವಿಗೂ  ಗರ್ಭವಾಸ್ಥೆಯಲ್ಲಿ  ಕ್ಯಾಲ್ಸಿಯಂ ನ  ಪೂರೈಕೆ ಹೆಚ್ಚು  ಇರಬೇಕೆಂದು  ವೈದ್ಯರು  ಸಲಹೆ  ನೀಡುತ್ತಾರೆ .ಕೇವಲ ಔಷಧಿಗಳಿಂದ ಮಾತ್ರ ಮೂಳೆಗಳನ್ನು ಸ್ವಸ್ಥವಾಗಿಡಲು  ಸಾಧ್ಯವಿಲ್ಲ ಇದಕ್ಕೆ   ನಿಯಮಿತ ವ್ಯಾಯಾಮ ಮತ್ತು ಕ್ಯಾಲ್ಸಿಯಂ ಹಾಗೂ ವಿಟಮಿನ್  ಡಿ ಹೊಂದಿರುವ ಪೌಷ್ಟಿಕ   ಅಹಾರ ಸೇವನೆಯಿಂದ ಮೂಳೆಗಳನ್ನು ಗಟ್ಟಿಗೊಳಿಸಬಹುದು  .ಹಾಗಿದ್ದರೆ  ಯಾವ  ಯಾವ  ಆಹಾರಗಳನ್ನು   ಸೇವಿಸಬಹುದು   ,ಬನ್ನಿ  ನೋಡೋಣ.

ಹಾಲು -ಇದು  ಸಂಪೂರ್ಣ  ಅಹಾರ ಎಂದೇ ಪರಿಗಣಿಸಲಾಗಿದೆ  .ಇದರಲ್ಲಿ  ಕ್ಯಾಲ್ಸಿಯಂ ಹೆಚ್ಚಿನ  ಪ್ರಮಾಣದಲ್ಲಿದೆ .ಆದ್ದರಿಂದ ದಿನಾಲೂ ಒಂದು ಲೋಟ ಹಾಲು ಕುಡಿಯುವುದು ಆರೋಗ್ಯಕರ.ಗರ್ಭಿಣಿ ಮಹಿಳೆಯು ಎರಡು ಲೋಟ ಹಾಲು ಕುಡಿಯುವುದೊಳ್ಳೆಯದು ಯಾಕೆಂದರೆ ಆಕೆ ಇಬ್ಬರ ಅಹಾರ ಸೇವಿಸಬೇಕು .ಹಾಲನ್ನು ಚೆನ್ನಾಗಿ ಕುಡಿಸಿ ಕುಡಿಯಬೇಕು ,ಆದಷ್ಟೂ ಹಾಲು ತಾಜಾವಾಗಿರಲಿ .

ಕಿತ್ತಳೆ ಹಣ್ಣಿನ ರಸ.

ಕಿತ್ತಳೆ ಹಣ್ಣು ಒಳ್ಳೆಯದು  .ಇದನ್ನು ಹಾಗೆಯೆ ತಿನ್ನಬಹುದು ,ಇದರ ನಾರಿನಂಶ ಇಷ್ಟ ಪಡದವರು ರಸ ತೆಗೆದು ಕುಡಿಯಬಹುದು.ರಸ ತೆಗೆಯುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು .ಇದಕ್ಕೆ ಸಕ್ಕರೆಯನ್ನು ಬೆರೆಸದಿರಿ ,ತಾಜಾ ಜೇನು ತುಪ್ಪವನ್ನು ಬಳಸಿ .ಪ್ಯಾಕ್ ಆಗಿರುವ ಕಿತ್ತಳೆ ರಸ ಕುಡಿಯಬೇಡಿ ,ಇದರಲ್ಲಿ ರಸ ಹಾಳಾಗದಂತೆ  ರಾಸಾಯನಿಕಗಳನ್ನು ಸೇರಿಸಿರಬಹುದು ಆದರೂ ಅನಿವಾರ್ಯ ಸಂದರ್ಭದಲ್ಲಿ ಇದನ್ನು ಸೇವಿಸಬಹುದು .

ಬಾದಾಮಿ ಬೀಜಗಳು

ಬಾದಾಮಿ ಒಂದು ಅತುತ್ತಮ ಒಣ ಹಣ್ಣು .ಇದು ಬಹೂಪಯೋಗಿ .ಇದು ಕ್ಯಾಲ್ಸಿಯಂ ನ್ನು ಸಹ ಪೂರೈಸುತ್ತದೆ .ಇದನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದು ತಿನ್ನಬೇಕು .ಇದರ ಹಾಲು ಸಹ ಕುಡಿಯಬಹುದು .ದಿನಕ್ಕೆ ನಾಲ್ಕು ಇಲ್ಲವೇ ಐದು ಬಾದಾಮಿಯನ್ನು ಸೇವಿಸಬಹುದು ,ಇದು ನಿಮ್ಮ ದಿನ ನಿತ್ಯದ  ಆಹಾರಗಳಲ್ಲಿ ಒಂದಾಗಲಿ .

ಫಿಗ್  ಹಣ್ಣು

ಇದು ಕೂಡ ಅತ್ಯುತ್ತಮ ಕ್ಯಾಲ್ಸಿಯಂ ಪೂರೈಸುವ ಆಹಾರಗಳಲ್ಲಿ ಒಂದಾಗಿದೆ .ವಾರದಲ್ಲೊಮ್ಮೆ ಇದರ ಸೇವನೆ ಕೂಡ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ  ನ್ನು ಪೂರೈಸುತ್ತದೆ .ಆದ್ದರಿಂದ ಎಲುಬಿನ  ತೊಂದರೆಯಿಂದ  ದೂರವಿರಬಹುದು .

ಮೊಸರು

ಇದೊಂದು ಅದ್ಭುತ್ಥ ಅಹಾರ ,.ಬೆಳ್ಳಗೆ.ನುಣುಪಾಗಿ ಇರುವ ಇದು ಅಮೃತವೇ ಸರಿ .ಬ್ಯಾಕ್ಟೀರಿಯಾಗಳು ಇರುವ ಕರಣ ಇದು ಆರೋಗ್ಯಕರ .ಇದರಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಸಿಗುತ್ತದೆ .ಇದನ್ನು ಸ್ವಲ್ಪ ಉಪ್ಪು ಸೇರಿಸಿ ಇಲ್ಲವೇ ಸಕ್ಕರೆ ಸೇರಿಸಿ ತಿನ್ನಬಹುದು .ಇದರಿಂದ  ತಂಬುಳಿ ,ಮೊಸರು ಬಜ್ಜಿ ,ಹುಳಿ ಕೂಡ ತಯಾರಿಸಿ ತಿನ್ನಬಹುದು .ಇದು ತಂಪು ,ಹಿತಕರ ರುಚಿಕರ ,ನಿಮ್ಮ ಎಲುಬಿನ ರಕ್ಷಕ .

ಕ್ಯಾಲ್ಸಿಯಂ ದೇಹಕ್ಕೆ ಅತಿ ಅಗತ್ಯ .ಇದರಿಂದ ಎಲುಬಿನ ಬೆಳವಣಿಗೆ ಚೆನ್ನಾಗಿ ಆಗಿ ಎಲುಬು ಸವೆತ ತಪ್ಪುತ್ತದೆ .ವಯಸ್ಸಾದ ಮೇಲೆ ಈ ನೋವಿಗೆ  ಈಡಾಗುವ ಮುನ್ನ ಎಚ್ಚರಿಕೆ ವಹಿಸಿ

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search