• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಆರೋಗ್ಯ

ಸವೆಯದಿರಲಿ ಮೂಳೆ ,ಭದ್ರವಾಗಿರಲಿ ನಿಮ್ಮ ನಾಳೆ.

TNN Correspondent Posted On August 9, 2017
0


0
Shares
  • Share On Facebook
  • Tweet It

ಯೌವನ ಪ್ರಾಯದಲ್ಲಿಯೇ ಮೂಳೆಗಳ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ  ವಹಿಸಿದರೆ ವಯಸ್ಸಾದಾಗ ಮೂಳೆ ಸಂಬಂಧಿತ ಕಾಯಿಲೆಯಿಂದ  ನರಳುವ  ಸಂಭವ  ಕಡಿಮೆಯಾಗುತ್ತದೆ .ಮೂಳೆಗಳು ಗಟ್ಟಿಯಾಗಿದ್ದರೆ ದೇಹ ಗಟ್ಟಿಯಾಗಿರುತ್ತದೆ .ಇದಕ್ಕಾಗಿ ಕ್ಯಾಲ್ಸಿಯಂ ಬಹಳ  ಅವಶ್ಯವಾಗಿದೆ  .ಇದೆ  ಕಾರಣದಿಂದ  ಹುಟ್ಟುವ   ಮಗುವಿಗೂ  ಗರ್ಭವಾಸ್ಥೆಯಲ್ಲಿ  ಕ್ಯಾಲ್ಸಿಯಂ ನ  ಪೂರೈಕೆ ಹೆಚ್ಚು  ಇರಬೇಕೆಂದು  ವೈದ್ಯರು  ಸಲಹೆ  ನೀಡುತ್ತಾರೆ .ಕೇವಲ ಔಷಧಿಗಳಿಂದ ಮಾತ್ರ ಮೂಳೆಗಳನ್ನು ಸ್ವಸ್ಥವಾಗಿಡಲು  ಸಾಧ್ಯವಿಲ್ಲ ಇದಕ್ಕೆ   ನಿಯಮಿತ ವ್ಯಾಯಾಮ ಮತ್ತು ಕ್ಯಾಲ್ಸಿಯಂ ಹಾಗೂ ವಿಟಮಿನ್  ಡಿ ಹೊಂದಿರುವ ಪೌಷ್ಟಿಕ   ಅಹಾರ ಸೇವನೆಯಿಂದ ಮೂಳೆಗಳನ್ನು ಗಟ್ಟಿಗೊಳಿಸಬಹುದು  .ಹಾಗಿದ್ದರೆ  ಯಾವ  ಯಾವ  ಆಹಾರಗಳನ್ನು   ಸೇವಿಸಬಹುದು   ,ಬನ್ನಿ  ನೋಡೋಣ.

ಹಾಲು -ಇದು  ಸಂಪೂರ್ಣ  ಅಹಾರ ಎಂದೇ ಪರಿಗಣಿಸಲಾಗಿದೆ  .ಇದರಲ್ಲಿ  ಕ್ಯಾಲ್ಸಿಯಂ ಹೆಚ್ಚಿನ  ಪ್ರಮಾಣದಲ್ಲಿದೆ .ಆದ್ದರಿಂದ ದಿನಾಲೂ ಒಂದು ಲೋಟ ಹಾಲು ಕುಡಿಯುವುದು ಆರೋಗ್ಯಕರ.ಗರ್ಭಿಣಿ ಮಹಿಳೆಯು ಎರಡು ಲೋಟ ಹಾಲು ಕುಡಿಯುವುದೊಳ್ಳೆಯದು ಯಾಕೆಂದರೆ ಆಕೆ ಇಬ್ಬರ ಅಹಾರ ಸೇವಿಸಬೇಕು .ಹಾಲನ್ನು ಚೆನ್ನಾಗಿ ಕುಡಿಸಿ ಕುಡಿಯಬೇಕು ,ಆದಷ್ಟೂ ಹಾಲು ತಾಜಾವಾಗಿರಲಿ .

ಕಿತ್ತಳೆ ಹಣ್ಣಿನ ರಸ.

ಕಿತ್ತಳೆ ಹಣ್ಣು ಒಳ್ಳೆಯದು  .ಇದನ್ನು ಹಾಗೆಯೆ ತಿನ್ನಬಹುದು ,ಇದರ ನಾರಿನಂಶ ಇಷ್ಟ ಪಡದವರು ರಸ ತೆಗೆದು ಕುಡಿಯಬಹುದು.ರಸ ತೆಗೆಯುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು .ಇದಕ್ಕೆ ಸಕ್ಕರೆಯನ್ನು ಬೆರೆಸದಿರಿ ,ತಾಜಾ ಜೇನು ತುಪ್ಪವನ್ನು ಬಳಸಿ .ಪ್ಯಾಕ್ ಆಗಿರುವ ಕಿತ್ತಳೆ ರಸ ಕುಡಿಯಬೇಡಿ ,ಇದರಲ್ಲಿ ರಸ ಹಾಳಾಗದಂತೆ  ರಾಸಾಯನಿಕಗಳನ್ನು ಸೇರಿಸಿರಬಹುದು ಆದರೂ ಅನಿವಾರ್ಯ ಸಂದರ್ಭದಲ್ಲಿ ಇದನ್ನು ಸೇವಿಸಬಹುದು .

ಬಾದಾಮಿ ಬೀಜಗಳು

ಬಾದಾಮಿ ಒಂದು ಅತುತ್ತಮ ಒಣ ಹಣ್ಣು .ಇದು ಬಹೂಪಯೋಗಿ .ಇದು ಕ್ಯಾಲ್ಸಿಯಂ ನ್ನು ಸಹ ಪೂರೈಸುತ್ತದೆ .ಇದನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದು ತಿನ್ನಬೇಕು .ಇದರ ಹಾಲು ಸಹ ಕುಡಿಯಬಹುದು .ದಿನಕ್ಕೆ ನಾಲ್ಕು ಇಲ್ಲವೇ ಐದು ಬಾದಾಮಿಯನ್ನು ಸೇವಿಸಬಹುದು ,ಇದು ನಿಮ್ಮ ದಿನ ನಿತ್ಯದ  ಆಹಾರಗಳಲ್ಲಿ ಒಂದಾಗಲಿ .

ಫಿಗ್  ಹಣ್ಣು

ಇದು ಕೂಡ ಅತ್ಯುತ್ತಮ ಕ್ಯಾಲ್ಸಿಯಂ ಪೂರೈಸುವ ಆಹಾರಗಳಲ್ಲಿ ಒಂದಾಗಿದೆ .ವಾರದಲ್ಲೊಮ್ಮೆ ಇದರ ಸೇವನೆ ಕೂಡ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ  ನ್ನು ಪೂರೈಸುತ್ತದೆ .ಆದ್ದರಿಂದ ಎಲುಬಿನ  ತೊಂದರೆಯಿಂದ  ದೂರವಿರಬಹುದು .

ಮೊಸರು

ಇದೊಂದು ಅದ್ಭುತ್ಥ ಅಹಾರ ,.ಬೆಳ್ಳಗೆ.ನುಣುಪಾಗಿ ಇರುವ ಇದು ಅಮೃತವೇ ಸರಿ .ಬ್ಯಾಕ್ಟೀರಿಯಾಗಳು ಇರುವ ಕರಣ ಇದು ಆರೋಗ್ಯಕರ .ಇದರಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಸಿಗುತ್ತದೆ .ಇದನ್ನು ಸ್ವಲ್ಪ ಉಪ್ಪು ಸೇರಿಸಿ ಇಲ್ಲವೇ ಸಕ್ಕರೆ ಸೇರಿಸಿ ತಿನ್ನಬಹುದು .ಇದರಿಂದ  ತಂಬುಳಿ ,ಮೊಸರು ಬಜ್ಜಿ ,ಹುಳಿ ಕೂಡ ತಯಾರಿಸಿ ತಿನ್ನಬಹುದು .ಇದು ತಂಪು ,ಹಿತಕರ ರುಚಿಕರ ,ನಿಮ್ಮ ಎಲುಬಿನ ರಕ್ಷಕ .

ಕ್ಯಾಲ್ಸಿಯಂ ದೇಹಕ್ಕೆ ಅತಿ ಅಗತ್ಯ .ಇದರಿಂದ ಎಲುಬಿನ ಬೆಳವಣಿಗೆ ಚೆನ್ನಾಗಿ ಆಗಿ ಎಲುಬು ಸವೆತ ತಪ್ಪುತ್ತದೆ .ವಯಸ್ಸಾದ ಮೇಲೆ ಈ ನೋವಿಗೆ  ಈಡಾಗುವ ಮುನ್ನ ಎಚ್ಚರಿಕೆ ವಹಿಸಿ

 

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Tulunadu News December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search