• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರವೀಂದ್ರ ಶೆಟ್ಟಿಯವರ ನಮ್ಮ ಮಂಗಳೂರು ಇತಿಹಾಸದ ವಾಸ್ತವವನ್ನು ಭವಿಷ್ಯಕ್ಕೆ ತಿಳಿಸುವ ಪುಸ್ತಕ!!

Hanumantha Kamath Posted On June 24, 2020
0


0
Shares
  • Share On Facebook
  • Tweet It

ನಾನು ಹಲವಾರು ವರ್ಷಗಳಿಂದ ಹತ್ತಿರದಿಂದ ನೋಡಿಕೊಂಡು ಬರುತ್ತಿರುವ ಪತ್ರಕರ್ತಮಿತ್ರ ರವೀಂದ್ರ ಶೆಟ್ಟಿಯವರು ಒಂದು ಪುಸ್ತಕ ಬರೆದಿದ್ದಾರೆ. ಅದರ ಒಂದು ಪ್ರತಿಯನ್ನು ನನಗೆ ನೀಡಿದ್ದಾರೆ. ಓದುವಾಗಲೇ ನಮ್ಮ ಊರಿನ ಬಗ್ಗೆ ಇಷ್ಟೊಂದು ಮಾಹಿತಿಗಳಿವೆಯಾ ಎನ್ನುವ ಕುತೂಹಲ ಮೂಡುತ್ತಾ ಹೋಗುತ್ತದೆ. ನಿಜಕ್ಕೂ ಒಂದು ಸಂಗ್ರಾಹ್ಯ ಯೋಗ್ಯ ಪುಸ್ತಕ. ಮಂಗಳೂರಿನ ಬಗ್ಗೆ ಸಂಪೂರ್ಣ ಜ್ಞಾನಭಂಡಾರ ಒಂದೇ ಪುಸ್ತಕದಲ್ಲಿ ನಿಮಗೆ ಬೇಕು ಎಂದು ಅನಿಸಿದರೆ ಆ ಪುಸ್ತಕವನ್ನು ಖರೀದಿಸಿ ಮನೆಯಲ್ಲಿ ಅಥವಾ ನಿಮ್ಮ ಕಚೇರಿಯಲ್ಲಿ ಇಟ್ಟುಕೊಂಡಿರಿ.

ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ಆರಂಭದ ವರ್ಷದಿಂದ ಹಿಡಿದು ಇಲ್ಲಿಯ ತನಕದ ಮೇಯರ್, ಮನಪಾ ಸದಸ್ಯರ ಪೂರ್ಣ ಮಾಹಿತಿ, ಜನಪ್ರತಿನಿಧಿಗಳ ಹೆಸರು, ಫೋಟೋ ಇರುವ ಏಕೈಕ ಪುಸ್ತಕ ಎಂದರೆ ತಪ್ಪಾಗಲಿಕ್ಕಿಲ್ಲ. ಅದರೊಂದಿಗೆ ಮಂಗಳೂರಿನ ಪ್ರವಾಸಿ ತಾಣಗಳು, ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳ ವಿವರಗಳು ಇದರಲ್ಲಿವೆ. ಒಂದು ಕಾಲದಲ್ಲಿ ಮಂಗಳೂರಿನಲ್ಲಿದ್ದ ಸಿನೆಮಾ ಥಿಯೇಟರ್ ಗಳಿಂದ ಹಿಡಿದು ಇವತ್ತು ಉಳಿದಿರುವ ಸಿನೆಮಾ ಥಿಯೇಟರ್ ಗಳ ಪೂರ್ಣ ವಿವರಗಳು ಕೂಡ ಇದರಲ್ಲಿವೆ. ಇನ್ನು ನಗರದಲ್ಲಿ ಸುತ್ತಾಡುವ ಪ್ರತಿ ಬಸ್ ಗಳ ನಂಬ್ರ, ರೂಟ್ ಗಳನ್ನು ಕೂಡ ಇದರಲ್ಲಿ ನೀಡಿರುವುದನ್ನು ಗಮನಿಸಿದಾಗ ರವೀಂದ್ರ ಶೆಟ್ಟಿಯವರು ಯಾವ ವರ್ಗವನ್ನು ಕೂಡ ಮುಟ್ಟದೆ ಬಿಟ್ಟಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಶಿಕ್ಷಣ ಸಂಸ್ಥೆಗಳು, ಮಾರುಕಟ್ಟೆಗಳು, ಪಾರ್ಕುಗಳ ಜೊತೆಜೊತೆಗೆ ಬಹಳ ಪ್ರಮುಖವಾಗಿ ನಮ್ಮ ಪಾಲಿಕೆಯಲ್ಲಿ ಯಾವ ಸೌಲಭ್ಯಗಳು ಸಿಗುತ್ತವೆ ಎನ್ನುವುದನ್ನು ಮತ್ತು ಅದನ್ನು ಹೇಗೆ ಪಡೆಯಬೇಕು ಎನ್ನುವುದರ ಕುರಿತು ಕೂಡ ರವೀಂದ್ರ ಶೆಟ್ಟಿಯವರು ಇದರಲ್ಲಿ ಸವಿಸ್ತಾರವಾಗಿ ದಾಖಲಿಸಿದ್ದಾರೆ.

ಇಂತಹ ಪುಸ್ತಕಗಳನ್ನು ರಚಿಸುವುದು ಎಂದರೆ ಒಂದು ರೀತಿಯಲ್ಲಿ ಕುರುಡರು ಆನೆಯನ್ನು ವರ್ಣನೆ ಮಾಡಿದ ಹಾಗೆ. ಇನ್ನೊಂದು ರೀತಿಯಲ್ಲಿ ಒಂದು ಕಾದಂಬರಿ ಅಥವಾ ಆತ್ಮಚರಿತ್ರೆ ಬರೆದಾಗ ಸಿಗುವಷ್ಟು ಪ್ರಚಾರ ಇದರಲ್ಲಿ ಸಿಗುವುದಿಲ್ಲ. ಏಕೆಂದರೆ ಅನೇಕ ಜನರಿಗೆ ಮಂಗಳೂರಿನ ಬಗ್ಗೆ ನಮಗೆಲ್ಲಾ ಗೊತ್ತಿದೆ ಎನ್ನುವ ಹುಂಬ ವಿಶ್ವಾಸವಿದೆ. ಆದರೆ ಈ ಪುಸ್ತಕವನ್ನು ನೋಡುತ್ತಿದ್ದಂತೆ ನಮಗೆ ಮಂಗಳೂರಿನ ಬಗ್ಗೆ ಗೊತ್ತಿರುವುದು ಕೇವಲ 10 ಶೇಕಡಾ ಎಂದು ಅನಿಸದೇ ಇರದು. ಉಳಿದ 90% ಮಾಹಿತಿಯನ್ನು ಈ ಪುಸ್ತಕ ನೀಡುತ್ತದೆ. ಅಷ್ಟು ಮಾಹಿತಿಯನ್ನು ಒಟ್ಟು ಮಾಡುವುದು ಮತ್ತು ಅದನ್ನು ತಪ್ಪಿಲ್ಲದೇ ದಾಖಲಿಸಿ ಪ್ರಿಂಟ್ ಮಾಡಿ ಜನರ ಮುಂದೆ ಇಡುವುದಕ್ಕೆ ನೂರಲ್ಲ, ಸಾವಿರ ಬಾರಿ ಯೋಚಿಸಬೇಕು. ಯಾಕೆಂದರೆ ಕಾದಂಬರಿಕಾರನೊಬ್ಬ ತಪ್ಪು ಮಾಡಿದರೆ ಅದನ್ನು ಆ ಕಾದಂಬರಿಯ ಟ್ವಿಸ್ಟ್ ಎಂದು ಪಕ್ಕಕ್ಕೆ ಇಡಬಹುದು. ಆದರೆ ಇಂತಹ ಪುಸ್ತಕ ಬರೆದು ಅದರಲ್ಲಿ ಒಂದೆರಡು ತಪ್ಪು ಇದ್ದರೆ ಅದನ್ನೇ ಕೆಲವರು ದೊಡ್ಡದು ಮಾಡುವ ವಿಷಯ ಇರುತ್ತದೆ. ಆ ರಿಸ್ಕ್ ಅನ್ನು ಮನಸ್ಸಿನಲ್ಲಿ ಇಟ್ಟು ರವೀಂದ್ರ ಶೆಟ್ಟಿಯವರು ಅಗಾಧ ಸಮುದ್ರದಲ್ಲಿ ದೋಣಿಯ ಸವಾರಿ ಮಾಡಿದ್ದಾರೆ. ಅಷ್ಟಕ್ಕೂ ಈ ಪುಸ್ತಕದಿಂದ ಅವರಿಗೆ ಲಾಭ ಆಗುವಂತದ್ದು ಏನೂ ಇರುವುದಿಲ್ಲ. ಆದರೆ ಈ ಪುಸ್ತಕ ನಿಮ್ಮ ಶೆಲ್ಫ್ ನಲ್ಲಿ ಇದ್ದರೆ ನಿಮ್ಮ ಮನೆ, ಕಚೇರಿಗೆ ಒಂದು ಚೆಂದ. ಕಥೆ, ಕಾದಂಬರಿ, ಆತ್ಮಚರಿತ್ರೆ ಒಮ್ಮೆ ಓದಿದ ಮೇಲೆ ಮತ್ತೆ ಓದುವ ಆಸಕ್ತಿ ಇರುವುದಿಲ್ಲ, ಆದರೆ ಈ ಪುಸ್ತಕ ಹಾಗೆ ಅಲ್ಲ. ಇದು ಮುಂದಿನ ಪೀಳಿಗೆಯ ಪುಸ್ತಕ. ಇದರಲ್ಲಿ ಮಾಹಿತಿ ಮಾತ್ರವಲ್ಲ, ಫೋಟೋ ಕೂಡ ಇದೆ. ಪಾಲಿಕೆ ಆರಂಭವಾಗುವಾಗ ಎಂಭತ್ತರ ಆರಂಭದ ದಶಕದಲ್ಲಿ ಈಗ ಇರುವ ಮಧ್ಯವಯಸ್ಕರು ಸಣ್ಣ ಮಕ್ಕಳಾಗಿದ್ದರು. ಅದರ ನಂತರ ಲೆಕ್ಕವಿಲ್ಲದಷ್ಟು ಜನರು ಪಾಲಿಕೆಯ ಸದಸ್ಯರಾಗಿ ಹೋಗಿದ್ದಾರೆ. ಅವರಲ್ಲಿ ಎಷ್ಟೋ ಜನ ಈಗ ರಾಜಕೀಯದಲ್ಲಿ ಇಲ್ಲ. ಅನೇಕರು ಮಂಗಳೂರಿನಲ್ಲಿ ಇಲ್ಲ. ಅನೇಕರ ಕುಟುಂಬಗಳು ಈಗ ಎಲ್ಲಿದ್ದಾರೋ ಗೊತ್ತಿಲ್ಲ. ಹಾಗಿರುವಾಗ ಈಗ ಪಾಲಿಕೆಯಲ್ಲಿ ಇರುವ ಹಿರಿಯ ಸದಸ್ಯರನ್ನು ಗುರುತಿಸಿ, ಅವರ ಮನೆಗಳಿಗೆ ಹೋಗಿ, ಅವರ ಹಿಂದಿನ ಶುಭ ಸಮಾರಂಭದ ಆಲ್ಬಂಗಳನ್ನು ಹುಡುಕಿ ತೆಗೆದು ಅದರಲ್ಲಿ ಯಾವ ಸದಸ್ಯ ಇದ್ದಾರೋ ಅವರ ಫೋಟೋ ಗುರುತಿಸಿ ಅದನ್ನು ಸ್ಕ್ಯಾನ್ ಮಾಡಿ ನಂತರ ಪುಸ್ತಕಕ್ಕೆ ಜೋಡಿಸುವಾಗ ಒಂದೊಂದು ಪೇಜ್ ವಿನ್ಯಾಸ ಮುಗಿದಾಗ ಬಹುಶ: ರವೀಂದ್ರ ಶೆಟ್ಟಿಯವರಿಗೆ ಒಂದೊಂದು ಯುದ್ಧ ಮುಗಿದಂತೆ ಆಗುತ್ತಿತ್ತೆನೊ. ಇನ್ನು ಈ ಪುಸ್ತಕದ ಹತ್ತಾರು ಪ್ರತಿ ಖರೀದಿಸಿದರೆ ನಿಮ್ಮ ಯಾವುದಾದರೂ ಕಾರ್ಯಕ್ರಮಗಳಲ್ಲಿ ಗಣ್ಯರಿಗೆ ಸ್ಮರಣಿಕೆಯನ್ನಾಗಿ ಕೂಡ ನೀಡಬಹುದು. ಬಹುಶ: ಇನ್ನೊಬ್ಬ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರ ರಾಜನೋಟದ ಬಳಿಕ ಮತ್ತೊಂದು ಉತ್ತಮ ಪ್ರಯತ್ನ ಪತ್ರಕರ್ತ ಮಿತ್ರರಿಂದ ಬಂದಿದೆ. ಅವರಿಗೆ ಶುಭವಾಗಲಿ!

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search