• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಸರಕಾರದ ಕೆಲಸ ದೇವರ ಕೆಲಸ ಇರಬಹುದು, ಆದರೆ ದೇವರ ಹಣ ಸರಕಾರದ ಹಣ ಆಗಬೇಕಂತಿಲ್ಲ!

Tulunadu News Posted On August 30, 2020
0


0
Shares
  • Share On Facebook
  • Tweet It

ದೇವರೇ ನನಗೆ ಒಳ್ಳೆಯದು ಮಾಡು ಎಂದು ಬೇಡಿ ನಾವು ದೇವರ ಕಾಣಿಕೆ ಡಬ್ಬಿಯಲ್ಲಿ ಹಣ ಹಾಕುತ್ತೇವೆ. ಇನ್ನು ಕೆಲವರು ದೇವರೇ, ನಮ್ಮ ಊರನ್ನು ಚೆನ್ನಾಗಿ ಇಡು ಎಂದು ಪ್ರಾರ್ಥಿಸಿ ಗಾಂಧಿ ನೋಟುಗಳನ್ನು ಡಬ್ಬಿಗೆ ಹಾಕಬಹುದು. ಇನ್ನು ಕೆಲವರು ನಾನು ಕೇಳಿದಂತೆ ನೀನು ನನಗೆ ಇಂತಿಂತಹ ಕೆಲಸದಲ್ಲಿ ಒಳ್ಳೆಯದು ಮಾಡಿದ್ದಿ, ಅದಕ್ಕಾಗಿ ಇಷ್ಟು ಹಣವನ್ನು ನಿನಗೆ ಅರ್ಪಿಸುತ್ತಿದ್ದೇನೆ ಎಂದು ಒಂದು ಕಂತೆ ಹಣವನ್ನು ಡಬ್ಬಿಯಲ್ಲಿ ಹಾಕಬಹುದು. ಒಟ್ಟಿನಲ್ಲಿ ಎಲ್ಲರೂ ತನಗೆ, ತನ್ನವರಿಗೆ, ತನ್ನ ಊರಿಗೆ ಒಳ್ಳೆಯದು ಆಗಲಿ ಎಂದೇ ಹಣವನ್ನು ದೇವರಿಗೆ ಕೊಡುತ್ತಾರೆ. ಕೆಲವು ದೇವಸ್ಥಾನಗಳಿಗೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ಆಯಾ ದೇವಸ್ಥಾನಗಳ ಡಬ್ಬಿಗಳು ಬೇಗನೆ ತುಂಬುತ್ತವೆ. ಉದಾಹರಣೆಗೆ ಕಟೀಲು, ಕೊಲ್ಲೂರು, ಸುಬ್ರಹ್ಮಣ್ಯ ದೇವಸ್ಥಾನವನ್ನು ನಂಬುವ ಆಸ್ತಿಕರ ಸಂಖ್ಯೆ ಜಿಲ್ಲೆ, ರಾಜ್ಯ, ರಾಷ್ಟ್ರಗಳಿಂದ ಇದೆ. ಶ್ರೀಲಂಕಾದ ಪ್ರಧಾನಿಗಳೆ ಇತ್ತೀಚೆಗೆ ಕೊಲ್ಲೂರಿಗೆ ಬಂದು ಹೋದ್ರು ಎಂದರೆ ಅರ್ಥ ಮಾಡಿಕೊಳ್ಳಿ, ಅದರ ಪ್ರಖ್ಯಾತಿ ಎಷ್ಟರಮಟ್ಟಿಗೆ ಇದೆ. ಹಾಗಿರುವಾಗ ಅಂತಹ ಪ್ರಸಿದ್ಧ ದೇವಸ್ಥಾನಗಳಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಅಗತ್ಯ ಇದ್ದೆ ಇರುತ್ತದೆ. ಬಜ್ಪೆಯಿಂದ ಕಟೀಲಿನ ತನಕ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಿದರೆ ಅದರಿಂದ ಅಲ್ಲಿಗೆ ಹೋಗಿ ಬರುವ ಭಕ್ತರಿಗೆ ಅನುಕೂಲಕರವಾಗುತ್ತದೆ. ಹಾಗೆ ಗುಂಡ್ಯದಿಂದ ಸುಬ್ರಹ್ಮಣ್ಯಕ್ಕೆ, ಕುಂದಾಪುರದಿಂದ ಕೊಲ್ಲೂರಿಗೆ ಹೋಗುವ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಿದರೆ ಅದರಿಂದ ಈ ದೇವಸ್ಥಾನಗಳಿಗೆ ಬರುವ ಹೊರ ಜಿಲ್ಲೆಗಳ, ಹೊರ ರಾಜ್ಯಗಳ ಭಕ್ತಾದಿಗಳ ಮನಸ್ಸಿನಲ್ಲಿ ನಮ್ಮ ಜಿಲ್ಲೆಯ ಬಗ್ಗೆ ಹೆಮ್ಮೆ ಮೂಡುತ್ತದೆ. ಪ್ರತಿಯೊಂದನ್ನು ಸರಕಾರಗಳೆ ಮಾಡಬೇಕು ಎಂದು ನಾವು ನಿರೀಕ್ಷೆ ಮಾಡಬೇಕಾಗಿಲ್ಲ. ದೇವಸ್ಥಾನಗಳ ಆದಾಯವನ್ನು ಬಳಸಿ ಅದನ್ನು ಅಭಿವೃದ್ಧಿ ಮಾಡಬಹುದು. ಇನ್ನು ದೇವರ ಹಣ ಎಂದ ಕೂಡಲೇ ಗುತ್ತಿಗೆದಾರ ಕೂಡ ತುಂಬಾ ನಿಷ್ಟೆಯಿಂದ ಕೆಲಸ ಮಾಡುತ್ತಾನೆ. ದೇವರ ಹಣವನ್ನು ತಿಂದು ಕಳಪೆ ಕೆಲಸ ಮಾಡಿದರೆ ಜೀವನದಲ್ಲಿ ಉದ್ಧಾರ ಆಗುವುದಿಲ್ಲ ಎಂದು ಕಾಮಗಾರಿ ಕೊಡುವಾಗಲೇ ಹೇಳಿ ಕೊಟ್ಟರೆ ಅದರಿಂದ ಅವನು ತುಂಬಾ ಲಾಭ ಕೂಡ ನಿರೀಕ್ಷೆ ಮಾಡದೆ ದೇವರ ಕೆಲಸ ಮಾಡಲು ಸಿಕ್ಕಿದ್ದೇ ಅದೃಷ್ಟ ಎಂದು ಅಂದುಕೊಂಡು ಕೆಲಸ ಮಾಡುತ್ತಾನೆ. ಆದ್ದರಿಂದ ಈ ರಸ್ತೆಗಳಲ್ಲಿ ಕಳಪೆ ಎನ್ನುವ ವಿಷಯವೇ ಬರುವುದಿಲ್ಲ. ಅಷ್ಟೂ ಕಾಮಗಾರಿಯ ಹಣ ಸಮರ್ಪಕವಾಗಿ ವಿನಿಯೋಗವಾಗುತ್ತದೆ. ಗುತ್ತಿಗೆದಾರ ಹಿಂದೂ ಅಗ್ಗಿದರೆ. ಇನ್ನು ಸರಕಾರದ ಯೋಜನೆಯಂತೆ ಆತ ಈ ಹಣದಲ್ಲಿ ಯಾರಿಗೂ ಕಮಿಷನ್ ಕೊಡುವ ಅಗತ್ಯವೇ ಬರುವುದಿಲ್ಲ. ಸರಕಾರದ ಅನುದಾನ ಆದರೆ ಕೆಲವು ಜನಪ್ರತಿನಿಧಿಗಳು ಫಿಕ್ಸ್ ಮಾಡಿರುವ ಏಳೂವರೆ ಶೇಕಡಾವನ್ನು ಇದರಲ್ಲಿ ಮುಟ್ಟುವ ಧೈರ್ಯ ಯಾರಿಗೂ ಬರಲಿಕ್ಕಿಲ್ಲ. ಇನ್ನು ದೇವರ ಕೆಲಸವನ್ನು ಮಾಡುವ ಭಾಗ್ಯ ಎಂದು ಗುತ್ತಿಗೆದಾರರು ಅದನ್ನೇ ಪಬ್ಲಿಸಿಟಿ ಪಡೆದುಕೊಂಡು ಲಾಭ ಬೇಡಾ ನಮಗೆ ಕೆಲಸ ಕೊಡಿ ಎಂದು ದಮ್ಮಯ್ಯ ಹಾಕಲುಬಹುದು. ಒಟ್ಟಿನಲ್ಲಿ ದೇವರ ಹಣ ಊರಿಗೆ ಒಳ್ಳೆಯ ಹೆಸರು ತರಬಹುದು. ಹಾಗೆ ಮೊನ್ನೆ ಹೇಳಿದ ಹಾಗೆ ಮಕ್ಕಳಿಗೆ ಮಧ್ಯಾಹ್ನದ ಊಟ, ಸಮವಸ್ತ್ರ, ಪುಸ್ತಕ, ಪೀಠೋಪಕರಣಗಳು ಕೂಡ ಕಳಪೆಯಾಗದೆ ಒಳ್ಳೆಯ ರೀತಿಯಲ್ಲಿ ಮಕ್ಕಳಿಗೆ ಲಭ್ಯವಾಗಲಿದೆ. ಇನ್ನು ಅಕ್ಕಪಕ್ಕದ ದೇವಸ್ಥಾನಗಳು ಕೂಡ ಅಭಿವೃದ್ಧಿ ಹೊಂದಲು ಇದೇ ನೆರವನ್ನು ಬಳಸಬಹುದು. ಹಾಗೆ ಯೋಜನೆಗಳನ್ನು ವಿಸ್ತರಿಸಬಹುದು. ಅದು ಆಗಲಿ ಎನ್ನುವುದು ನನ್ನ ಆಶಯ. ಆಗ ಹುಂಡಿಯಲ್ಲಿ ಹಣ ಹಾಕುವ ಭಕ್ತರಿಗೆ ತಮ್ಮ ಹಣ ಯೋಗ್ಯ ಕಾರ್ಯಕ್ಕೆ ಪೂರೈಕೆಯಾಗುತ್ತದೆ ಎನ್ನುವ ಗ್ಯಾರಂಟಿ ಬರುತ್ತದೆ. ಹಾಗೆ ಮಸೀದಿ, ಚರ್ಚ್ ಗಳಿಗೆ ಬರುವ ಆದಾಯವನ್ನು ಕೂಡ ಹೀಗೆಯೇ ಬಳಸಬಹುದು. ಎಲ್ಲಾ ಧರ್ಮಗಳಲ್ಲಿಯೂ ಶ್ರೀಮಂತರು ಇದ್ದಾರೆ, ಮಧ್ಯಮ ವರ್ಗದವರು ಇದ್ದಾರೆ, ಬಡವರು ಇದ್ದಾರೆ. ಶ್ರೀಮಂತ ದಾನಿಗಳ ಹಣ ಈ ಮೂಲಕ ಎಲ್ಲರಿಗೂ ಉಪಯೋಗವಾದರೆ ಅದರಿಂದ ಸಂತೋಷ ಬೇರೆ ಇಲ್ಲ. ದೇವಸ್ಥಾನ ಇರುವ ಊರಿನ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾದರೆ ಅದು ಕೇವಲ ಹಿಂದೂಗಳಿಗೆ ಮಾತ್ರ ಉಪಕಾರವಾಗುವುದಿಲ್ಲ. ಹಾಗೆ ಶಾಲೆಗಳಲ್ಲಿ ಮಕ್ಕಳಿಗೆ ಊಟ, ಸಮವಸ್ತ್ರ ಒಳ್ಳೆಯದು ಸಿಕ್ಕಿದರೆ ಅಲ್ಲಿ ಓದುವ ಎಲ್ಲಾ ಮಕ್ಕಳಿಗೂ ಅದು ಉಪಯೋಗವಾಗಲಿದೆ. ಇಷ್ಟೆಲ್ಲ ಅನುಷ್ಟಾನಕ್ಕೆ ಬರಬೇಕಾದರೆ ಆ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳು ಸರಿಯಾಗಬೇಕು. ಅವುಗಳನ್ನು ಬದಲಾವಣೆ ಮಾಡಬೇಕು. ದೇವರ ಹುಂಡಿಯ ಹಣ ಬೇರೆ ಧರ್ಮದ ಕೆಲಸ ಕಾರ್ಯ ಗಳಿಗೆ ಖರ್ಚು ಮಾಡುತ್ತಾರೆ ಎಂದು ಬಿಜೆಪಿಯವರು ಹೇಳಿಕೆ ನೀಡುತ್ತಿದರು ಈಗ ಇವರದ್ದೆ ಸರಕಾರವಿದೆ ಹೊಸ ಅದೇಶ ಹೊರಡಿಸಲಿ.

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Tulunadu News June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Tulunadu News June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search