• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಮುಂಬೈ ಟು ತಿರುವನಂತಪುರಂ: ಸುಶಾಂತ್ ಟು ಬಿನಿಶ್ ಬಾಲಕೃಷ್ಣ!!

Hanumantha Kamath Posted On September 3, 2020
0


0
Shares
  • Share On Facebook
  • Tweet It

ಒಬ್ಬ ಸಿನೆಮಾ ನಟನ ಸಂಶಯಾಸ್ಪದ ಸಾವು ಅವನ ಆಪ್ತ ಗೆಳತಿಯಿಂದ ಹಿಡಿದು ಮುಂಬೈ ಗಡಿಯನ್ನು ದಾಟಿ ಬೆಂಗಳೂರಿನಿಂದ ಪಾಸಾಗಿ ತಿರುವನಂತಪುರಂ ತನಕ ಬಂದು ಬಿಡುತ್ತದೆ ಎಂದು ಆವತ್ತಿಗೆ ಅನಿಸಲೇ ಇಲ್ಲ. ಒಬ್ಬ ಡಿಫ್ರೆಶನ್ ಗೆ ಒಳಗಾದ ನಾಯಕ ನಟ ಅದನ್ನು ಭರಿಸಲಾಗದೇ ಮೃತಪಟ್ಟ ಪ್ರಕರಣ ಕೇರಳದ ಅತೀ ದೊಡ್ಡ ರಾಜಕೀಯ ನಾಯಕನ ಮನೆಬಾಗಿಲಿಗೆ ತಂದು ನಿಲ್ಲಿಸುತ್ತದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಎಲ್ಲಿಯ ಮುಂಬೈ ಮತ್ತು ಎಲ್ಲಿಯ ತಿರುವನಂತಪುರಂ. ನೇರ ವಿಮಾನ, ರೈಲು ಇದೆ ಎನ್ನುವುದು ಬಿಟ್ಟರೆ ಮಲಯಾಳಿಗಳು ಚಂದ್ರಲೋಕ ಬಿಟ್ಟು ಎಲ್ಲಾ ಕಡೆ ಇರುತ್ತಾರೆ ಎಂದುಕೊಂಡರೂ ಯಾವ ಪರಸ್ಪರ ಒಂದೇ ರಾಜಕೀಯ ಸ್ಪರ್ಶ, ಬಣ್ಣವೂ ಈ ಎರಡೂ ಮಹಾನಗರಗಳಿಗೆ ಇಲ್ಲ. ಆದರೂ ಕೋಡಿಯೇರಿ ಬಾಲಕೃಷ್ಣನ್ ಅವರ ಮಗನಿಗೆ ಈ ಮುಂಬೈ, ಬೆಂಗಳೂರು ಡ್ರಗ್ಸ್ ಡೀಲರ್ ಗಳೊಂದಿಗೆ ಸಂಬಂಧ ಇದೆ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಕೋಡಿಯೇರಿ ಬಾಲಕೃಷ್ಣನ್ ಕೇರಳ ರಾಜಕೀಯದಲ್ಲಿ ದೊಡ್ಡ ಹೆಸರು. ಸಿಪಿಐ(ಎಂ) ನಲ್ಲಿ ರಾಜ್ಯ ಕಾರ್ಯದರ್ಶಿ ಎಂದರೆ ಮುಖ್ಯಮಂತ್ರಿ ಸಮಾನವಾದ ಹುದ್ದೆ. ಅವರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಎಂದು ಇರುವುದಿಲ್ಲ. ಕಾರ್ಯದರ್ಶಿ ಎಂದರೆ ಅದಕ್ಕೆ ಎಲ್ಲಕ್ಕಿಂತ ದೊಡ್ಡ ಜವಾಬ್ದಾರಿ. ಒಂದು ರಾಜ್ಯದ ಕಾರ್ಯದರ್ಶಿ ಎಂದರೆ ಅವರ ಪಕ್ಷದ ರಾಷ್ಟ್ರೀಯ ನಾಯಕರಾದ ಸೀತಾರಾಂ ಯೆಚೂರಿ, ವೃಂದಾ ಕಾರಟ್ ಅಂತವರು ಕೂಡ ಇವರ ಮಾತುಗಳನ್ನು ಆಲಿಸುತ್ತಾರೆ. ಬಿಜೆಪಿಯಲ್ಲಾದರೆ ಕಾರ್ಯದರ್ಶಿ ಎಂದ್ರೆ ಊಟಕ್ಕೆ ಉಪ್ಪಿನಕಾಯಿ ಇದ್ದಂತೆ.

ಅಂತಹ ಕೋಡಿಯೇರಿ ಬಾಲಕೃಷ್ಣನ್ ಅವರಿಗೆ ಇತ್ತೀಚೆಗೆ ಆರೋಗ್ಯ ಸರಿಯಿಲ್ಲದೆ ಅಮೇರಿಕಾದಲ್ಲಿ ಕೆಲವು ಸಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಬಂದವರೇ ಮೋದಿ ಸರಕಾರದ ವಿರುದ್ಧ ತಿರುಗಿಬಿದ್ದಿದ್ದರು. ಈಗ ಅಂತವರ ಮಗ ಬಿನಿಶ್ ಬಾಲಕೃಷ್ಣನ್ ಡ್ರಗ್ಸ್ ಸರಬರಾಜುದಾರ ಅನೂಬ್ ನಿಗೆ ಹಣ ಕೊಟ್ಟಿದ್ದಾನೆ ಎಂದು ಕೇರಳದ ಮುಸ್ಲಿಂ ಲೀಗ್ ಯುವ ಘಟಕ ಯೂತ್ ಲೀಗ್ ಆರೋಪ ಮಾಡಿದೆ. ಅದಕ್ಕೆ ಸರಿಯಾಗಿ ಕೇಂದ್ರ ತನಿಖಾದಳ ಬಿನಿಶ್ ನನ್ನು ತನಿಖೆಗೆ ಕರೆದಿದೆ. ಆದರೆ ಬಿನಿಶ್ ಪ್ರಕಾರ ಅನೂಬ್ ಆತನ ಸ್ನೇಹಿತ ಅಷ್ಟೇ. ಹಿಂದೆ ಟಿಶರ್ಟ್ ಬ್ಯುಸಿನೆಸ್ ಮಾಡುತ್ತಿದ್ದ. ನಂತರ ಹೋಟೇಲ್ ಉದ್ಯಮಕ್ಕೆ ಇಳಿದ. ಆಗ ಹೋಟೇಲಿಗೆ ಪ್ರಾರಂಭಿಸಲು ನಾವು ಹಲವಾರು ಸ್ನೇಹಿತರು ಹಣ ಕೊಟ್ಟಿದ್ದೇವೆ. ತಾನು ಬೆಂಗಳೂರಿಗೆ ಬಂದಾಗ ಹೋಟೇಲ್ ರೂಂ ಬುಕ್ ಮಾಡಿ ಇಡುತ್ತಿದ್ದ. ಅದು ಬಿಟ್ಟರೆ ಬೇರೆ ಸಂಬಂಧಗಳಿಲ್ಲ ಎನ್ನುತ್ತಾನೆ ಬಿನಿಶ್ ಬಾಲಕೃಷ್ಣ. ಈಗ ಅದೇ ತನಿಖೆ ಆಗಬೇಕಿದೆ.
ಅಂದ ಹಾಗೆ ಈಗ ಕಾರ್ಮಿಕ ಸಂಘಟನೆಯ ಮುಂದುವರೆದ ರಾಜಕೀಯ ಪಕ್ಷವಾಗಿರುವ ಸಿಪಿಐ(ಎಂ) ಕಾರ್ಮಿಕರ ಪರವಾಗಿ ಮಾತನಾಡುತ್ತಲೇ ಅಧಿಕಾರಕ್ಕೆ ಬಂದ ಬಳಿಕ ಹಣದ ಮುಖ ಕೂಡ ನೋಡಿದೆ. ಅವರಲ್ಲಿ ಅನೇಕ ಪದಾಧಿಕಾರಿಗಳಿಗೆ ವೇತನ ಕೂಡ ಇದೆ ಎಂದು ಹೇಳಲಾಗುತ್ತದೆ. ಅವರ ಕಾರ್ಯದರ್ಶಿಯೊಬ್ಬರಿಗೆ ಅಮೇರಿಕಾದಲ್ಲಿ ಚಿಕಿತ್ಸೆ ಕೂಡ ನೀಡುವಷ್ಟು ಆ ಪಕ್ಷ ಬೆಳೆದಿದೆ. ಕೇರಳದಲ್ಲಿ ಬಿನಿಶ್ ಜೀವನಶೈಲಿ ಕೂಡ ಕಡಿಮೆ ಏನಲ್ಲ. ಒಂದು ವೇಳೆ ಈ ಡ್ರಗ್ಸ್ ಪ್ರಕರಣವನ್ನು ಕೇಂದ್ರ ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡಿದರೆ ಕೇರಳದ ಎಡಪಕ್ಷ ಸರಕಾರ ಮೊಣಕಾಲಿನಲ್ಲಿ ನಿಂತು ನಂತರ ತೆವಳಬೇಕಾಗಬಹುದು. ಮೊದಲೇ ಬಂಗಾರದ ಕೋಟ್ಯಾಂತರ ಸ್ಮಂಗ್ಲಿಂಗ್ ಡೀಲ್ ನಲ್ಲಿ ಸಿಲುಕಿ ಹಾಕಿಕೊಂಡಿರುವ ಪಿಣರಾಯಿಯೊಂದಿಗೆ ಡ್ರಗ್ಸ್ ನೊಂದಿಗೆ ಕೋಡಿಯೇರಿ ಕೂಡ ಸಿಲುಕಿಕೊಂಡರೆ ನಂತರ ಅಲ್ಲಿ ಸರಕಾರವನ್ನು ಯಾರೂ ಉಳಿಸಲಾರರು. ಅಷ್ಟಕ್ಕೂ ಅಗರ್ಭ ಪ್ರಭಾವಿ ರಾಜಕೀಯ ನಾಯಕರ ಮಕ್ಕಳು ಯಾಕೆ ಡ್ರಗ್ಸ್ ಜಾಲದಲ್ಲಿ ಬೆಸೆದುಕೊಂಡಿರುತ್ತಾರೆ ಎನ್ನುವುದಕ್ಕೆ ಬಿನಿಶ್ ಪ್ರಕರಣ ಸಾಕ್ಷಿಯಾಗಬಹುದು. ಯಾಕೆಂದರೆ ಅವರಿಗೆ ಗೊತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೋಟ್ಯಾಂತರ ಬೆಲೆಬಾಳುವ ಬಂಗಾರದ ಸ್ಮಂಗ್ಲಿಂಗ್ ಆದಾಗಲೂ ನಮ್ಮ ಪಕ್ಷ ದಕ್ಕಿಸಿಕೊಂಡಿರುವಾಗ ಇದೇನೂ ಮಹಾ ಎಂದು ಅನಿಸಿರಲಿಕ್ಕೂ ಸಾಕು.

ಒಬ್ಬ ಅನೂಪ್ ನ ಸರಿಯಾದ ವಿಚಾರಣೆ ನಡೆದರೆ ಅವನಿಂದ ಇನ್ನಷ್ಟು ರಾಜಕಾರಣಿಗಳ ಮಕ್ಕಳ ಹೆಸರು ಬರಬಹುದು. ಅನೇಕ ಪೊಲಿಟಿಶಿಯನ್ ಗಳಲ್ಲಿ ಕೆಲವರು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ರಾಜಕೀಯದಲ್ಲಿಯೇ ಬ್ಯುಸಿ ಆದ ಕಾರಣ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಹೋಗಲೇ ಇಲ್ಲ. ತಾಯಿಯ ಮಾತನ್ನು ಮಕ್ಕಳ ಕೇಳದೇ ಇದ್ದಾಗ ಹಣ ಕೊಟ್ಟು ಸಾಗ ಹಾಕಿದ ಪರಿಣಾಮ ಸುಲಭವಾಗಿ ಸಿಕ್ಕಿದ ಹಣದಿಂದ ಮೊದಲು ಸಿಗರೇಟ್, ನಂತರ ಬಿಯರ್, ಕೊನೆಗೆ ವಿಸ್ಕಿ. ಆ ಕಿಕ್ ಸಾಕಾಗುವುದಿಲ್ಲವೆಂದು ಮೊದಲಿಗೆ ಗಾಂಜಾ, ನಂತರ ಇನ್ನೊಂದು, ಮತ್ತೊಂದು ಎಂದು ಹೋಗಿ ಈಗ ಜೈಲಿನ ಸಲಾಕೆಗಳ ಹತ್ತಿರ ಬಂದು ತಲುಪಿದ್ದಾರೆ. ಈಗ ಬಾಲಕೃಷ್ಣನ್ ಮುಂದೆ ಇರುವುದು ಒಂದೇ ಪ್ರಶ್ನೆ. ಮಗ ತಪ್ಪಿತಸ್ಥ ಎಂದಾದರೆ ತನಿಖೆಯನ್ನು ಅದರ ಪಾಡಿಗೆ ಬಿಟ್ಟು ಆದರ್ಶ ರಾಜಕಾರಣಿ ಎನಿಸಿಕೊಳ್ಳುತ್ತಾರಾ ಅಥವಾ ಮಗನನ್ನು ಹೇಗಾದರೂ ಮಾಡಿ ಉಳಿಸುವ ಒಳ್ಳೆಯ ತಂದೆ ಅನಿಸಿಕೊಳ್ಳುತ್ತಾರಾ !!

0
Shares
  • Share On Facebook
  • Tweet It


- Advertisement -


Trending Now
ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
Hanumantha Kamath May 31, 2025
ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
Hanumantha Kamath May 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
    • ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
    • ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!
    • ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!
    • ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..
    • ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search