• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಹೋರ್ಡಿಂಗ್ ಗೋಲ್ ಮಾಲ್ ಆಯ್ತು. ಕಟ್ಟಡ ತೆರಿಗೆ ಗೋಲ್ ಮಾಲ್

Tulunadu News Posted On September 4, 2020
0


0
Shares
  • Share On Facebook
  • Tweet It

ನಿನ್ನೆಗೆ ಹೋರ್ಡಿಂಗ್ ಗೋಲ್ ಮಾಲ್ ಈ ಸರಣಿಯ ಜಾಗೃತಿ ಲೇಖನ ಮುಗಿಯಿತು. ನಾಳೆಯಿಂದ ಹೊಸ ವಿಷಯದ ಮೇಲೆ ನಿಮ್ಮನ್ನು ಜಾಗೃತಿಗೊಳಿಸುವ ಯತ್ನ ಮಾಡುತ್ತೆನೆ. ವಾಣಿಜ್ಯ ಮಳಿಗೆಗಳು ತೆರಿಗೆ ಕಟ್ಟುವಾಗ ದಾಖಲೆಗಳಲ್ಲಿ ಕಡಿಮೆ ಜಾಗವನ್ನು ತೋರಿಸಿ ಮಂಗಳೂರು ಮಹಾನಗರ ಪಾಲಿಕೆಗೆ ಹೇಗೆ ವಂಚಿಸುತ್ತವೆ ಎನ್ನುವುದರ ಕುರಿತು.

ನಿಮಗೆ ತಿಳಿದಿರಬಹುದು.ಹಿಂದೆ ಮನಪಾದ ಹಣಕಾಸು ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ ಮಾಜಿ ಮೇಯರ್ ಹರಿನಾಥ್ ಅವರು ಅಧಿಕಾರಿಗಳೊಂದಿಗೆ ಕುಳಾಯಿಯಲ್ಲಿರುವ ಮಾರ್ಬಲ್ ಅಂಗಡಿಯೊಂದಕ್ಕೆ ದಾಳಿ ಮಾಡಿದ್ದರು. ಈ ಮೂಲಕ ತೆರಿಗೆಯನ್ನು ಕಡಿಮೆ ಕಟ್ಟಿ ಮನಪಾಗೆ ವಂಚಿಸುತ್ತಿದ್ದ ಅಂಗಡಿಯ ಮಾಲೀಕನಿಗೆ ದಂಡ ಹಾಕಿದ್ದರು. ಇಪ್ಪತ್ತು ಲಕ್ಷದಷ್ಟು ಹಣ ದಂಡದ ರೂಪದಲ್ಲಿ ಬಂದಿದೆ ಎಂದು ತಿಳಿದುಕೊಂಡಿದ್ದೇನೆ. ಅ ಸಮಯ ಪ್ರೆಸ್ ಕರೆದು ಪಾಲಿಕೆ ವ್ಯಾಪ್ತಿಯಲಿ ಈರೀತಿ ತೆರಿಗೆ ವಂಚಿಸುವ ಹಲವು ಮಳಿಗೆಗಳಿವೆ ಯಾರನ್ನು ಬಿಡುವುದಿಲ್ಲ ಎಲ್ಲರನ್ನು ಪತ್ತೆ ಹಚ್ಚಿ ಪಾಲಿಕೆಯ ಬೊಕ್ಕಸ ತುಂಬಿಸುತ್ತೆವೆ ಎಂದು ಹೇಳಿದರು.ಆ ಒಂದೇ ಒಂದು ಮಳಿಗೆಗೆ ದಾಳಿ ಮಾಡಿದ ನಂತರ ಮಾತ್ತಿನ್ನೊಂದು ಮಳಿಗೆಗೆ ಕಾಂಗ್ರೆಸ್‌ನ ಉಳಿದ ಆಡಳಿತದ ಅವಧಿಯಲ್ಲಿ ದಾಳಿಯೇ ನಡೆಯಲಿಲ್ಲ ಯಾಕೆ ಎಂದು ಕಾಂಗ್ರೆಸ್ ನವರೇ ಹೇಳಬೇಕು ಒಂದು ಮಳಿಗೆಗೆ ದಾಳಿ ಮಾಡಿ ಪ್ರೆಸ್ ಕರೆದು ಇನ್ನೂ ಇದೆ ಯಾರನ್ನೂ ಬಿಡುವುದಿಲ್ಲ ಎಂದ ಕಾಂಗ್ರೆಸ್ ಮತ್ತೆ ದಾಳಿ ಮಾಡಲಿಲ್ಲ ಎಂದು ತಿಳಿಯುವ ಹಕ್ಕು ತೆರಿಗೆ ಪಾವತಿಸುವ ಮಂಗಳೂರಿನ ನಾಗರಿಕರಿಗೆ ಇದೆಯಲ್ಲವೇ. ‌ಕೇವಲ ಅಂಗಡಿಯೊಂದರ ಕಥೆ ಅಲ್ಲವೇ ಅಲ್ಲ. ಮನಪಾ ವ್ಯಾಪ್ತಿಯಲ್ಲಿ ಇಂತಹ ಅಸಂಖ್ಯಾತ ಮಳಿಗೆಗಳಿವೆ.ನಂತರ ತೆರಿಗೆ ವಂಚಿಸುತಿರುವ ಒಂದೇ ಒಂದು ಮಳಿಗೆಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಲಿ,ಮೇಯರುಗಳಾಗಲಿ ದಾಳಿ ಮಾಡಲಿಲ್ಲ ಯಾಕೆ? ಅಂಗಡಿಗಳ ಮಾಲೀಕರು ಹೇಗೆಲ್ಲ ವಂಚಿಸುತ್ತಾರೆ ಎನ್ನುವುದರ ಬಗ್ಗೆ ನಾನು ನಿಮಗೆ ಹೇಳುತ್ತೇನೆ ಮತ್ತು ಪಾಲಿಕೆಯ ಅಧಿಕಾರಿಗಳು ಮತ್ತು ಮಾಜಿ ಸದಸ್ಯರು ಯಾಕೆ ಎಲ್ಲ ಅಂಗಡಿಗಳ ಮೇಲೆ ದಾಳಿ ಮಾಡಿಸಲಿಲ್ಲ ಈಗಿನ ಸದಸ್ಯರು ಕೂಡ ಈಗೆಯೇ ಮಾಡುತ್ತಾರ ಎಂದು ತಿಳಿಸುತ್ತೇನೆ. ಅಂದ ಹಾಗೆ ಹೋರ್ಡಿಂಗ್ ಗೋಲ್ ಮಾಲ್ ಮೂಲಕ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ವಂಚಿಸುತ್ತಿರುವ ಜಾಹೀರಾತು ಏಜೆನ್ಸಿಗಳ ಹಿಂದಿರುವ ಮುಖಗಳ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯಲ್ಲಿ ಕೇಳಿದ್ದೇನೆ. ಇನ್ನೂ ಎಲ್ಲ ಉತ್ತರ ಬಂದಿಲ್ಲ. ಒಂದು ಗೋಲ್ ಮಾಲ್ ಸರಣಿಯಿಂದ ಮತ್ತೊಂದು ಗೋಲ್ ಮಾಲ್ ಸರಣಿಗೆ ಹೋಗುವ ನಡುವೆ ಒಂದು ಚಿಕ್ಕ ಬ್ರೇಕ್.

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!

  • Privacy Policy
  • Contact
© Tulunadu Infomedia.

Press enter/return to begin your search