• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ನೀರಿನ ಬಾಕಿ ವಸೂಲಿ ಕೇವಲ ಘೋಷಣೆಯಾಗಿಯೇ ಉಳಿಯಿತು!

Hanumantha Kamath Posted On November 27, 2020
0


0
Shares
  • Share On Facebook
  • Tweet It

ಕವಿತಾ ಸನಿಲ್ ಅವರು ತಾನು ಮೇಯರ್‌ ಅದ ಕೊಡಲೇ ತಾನು ಜನರು ಬಾಕಿ ಇಟ್ಟಿರುವ ನೀರಿನ ಬಿಲ್ ಸುಮಾರು 20 ಕೋಟಿಯಷ್ಟನ್ನು ವಸೂಲಿ ಮಾಡುತ್ತೇವೆ ಎಂದು ಮೆಯರ್ ಕವಿತಾ ಸನಿಲ್ ಅವರು ಘೋಷಿಸಿದ್ದರು.ಅಷ್ಟಕ್ಕೂ ಜನರು ಹತ್ತು ಸಾವಿರಕ್ಕಿಂತಲೂ ಹೆಚ್ಚು ಬಾಕಿ ಇಟ್ಟಿರುವ ನೀರಿನ ಬಿಲ್ 20 ಕೋಟಿಯನ್ನು ವಸೂಲು ಮಾಡಲು ನಾವು ಕ್ರಮ ಕೈಗೊಳ್ಳುತ್ತೆವೆ ಎಂದು ಹೇಳಿದ್ದು ಕವಿತಾ ಸನಿಲ್ ಅವರು ಪ್ರಥಮರೇನಲ್ಲ ಅಥವಾ ಪಾಲಿಕೆಯನ್ನು ಎರಡೂ ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಹತ್ತಿರದಿಂದ ನೋಡಿಕೊಂಡು ಬರುತ್ತಿರುವುದರಿಂದ ಅವರು ಕೊನೆಯವರೂ ಆಗುವ ಸಾಧ್ಯತೆ ಇಲ್ಲ.ಅದಕ್ಕಿಂತ ಮೊದಲು ಹರಿನಾಥ್ ಅವರು ಮೇಯರ್ ಆಗಿದ್ದಾಗಲೂ ಇದೇ ಮಾತನ್ನು ಹೇಳಿದ್ದರು. ಅವರ ಕಾಲದಲ್ಲಿ 10 ಕೋಟಿ ನೀರಿನ ಬಿಲ್ ಬಾಕಿ ಇತ್ತು. ಎಇಇ ನೇತೃತ್ವದಲ್ಲಿ ಐದು ಟೀಮ್ ಆಗಿತ್ತು. ದಿನಕ್ಕೆ ಇಷ್ಟು ಹಣ ವಸೂಲಿ ಮಾಡುವ ಗುರಿ ನಿಗದಿಪಡಿಸಲಾಗಿತ್ತು. ಮೊದಲ ತಿಂಗಳಲ್ಲಿ ಒಂದೂವರೆ ಕೋಟಿ, ಎರಡನೇಯ ತಿಂಗಳಲ್ಲಿ 50 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಮೂರನೇ ತಿಂಗಳಲ್ಲಿ ಕೇವಲ ಹತ್ತು ಲಕ್ಷ ವಸೂಲಿಯಾಗಿತ್ತು.
ಅವರ ಮೊದಲು ಜೆಸಿಂತಾ ಮೇಯರ್ ಆಗಿದ್ದಾಗಲೂ ಇದೇ ಮಾತನ್ನು ಹೇಳಿದ್ದಾರೆ. ಮುಂದೆ ಯಾರಾದರೂ ಬೇರೆ ಮೇಯರ್ ಬಂದರೂ ಬಾಕಿ ಇರುವ ಇಂತಿಂಷ್ಟು ಕೋಟಿಯನ್ನು ವಸೂಲಿ ಮಾಡಿಯೇ ಮಾಡುತ್ತೇವೆ ಎಂದು ಮೇಯರ್ ಅದ ಕೂಡಲೇ ರ್ಘೋಷಣೆ ಮಾಡಿದರೆ ಅದರಲ್ಲಿ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ. ಇದೊಂದು ಸಂಪ್ರದಾಯವಾಗಿ ಜಾರಿಯಲ್ಲಿದೆ ಎನ್ನುವುದು ಮಾತ್ರ ಬೇಸರದ ವಿಷಯ. ಬಹುಶ: ಕವಿತಾ ಸನಿಲ್ ಹೋಗುವ ಸ್ಪೀಡ್ ನೋಡಿದ್ರೆ ಇಪ್ಪತ್ತು ಕೋಟಿಯಲ್ಲಿ ಹತ್ತು ಕೋಟಿ ವಸೂಲಿ ಮಾಡಿದರೂ ಅದು ಒಂದಷ್ಟರ ಮಟ್ಟಿಗೆ ಸಾಧನೆಯಾಗ ಬಹುದೆಂದು ನಾನು ಸಂತೋಷ ಪಟ್ಟೆ ಇಲ್ಲದಿದ್ದರೆ ಏನಾಗುತ್ತೆ ಎಂದರೆ ಮೇಯರ್ ಅವರು ಘೋಷಣೆ ಮಾಡಿ ಹೋಗುತ್ತಾರೆ. ಘೋಷಣೆ ಆದ ಒಂದೆರಡು ತಿಂಗಳು ಈ ಅಧಿಕಾರಿಗಳು ಹೇಗೆ ಫೀಲ್ಡಿಗೆ ಹೊರಡುತ್ತಾರೆ ಎಂದರೆ ಬಾಕಿ ಇರುವವರ ಕಾಲರ್ ಪಟ್ಟಿ ಹಿಡಿದೇ ವಸೂಲಿ ಮಾಡುತ್ತಾರೋ ಎನ್ನುವ ಜೋಶ್ ಇರುತ್ತದೆ. ಇಪ್ಪತ್ತು ಕೋಟಿಯಲ್ಲಿ ಒಂದಿಷ್ಟು ಲಕ್ಷ ಸಂಗ್ರಹ ಆದ ಕೂಡಲೇ ಮೇಯರ್ ಸ್ಥಾನದಲ್ಲಿ ಇದ್ದವರು ಮತ್ತೊಮ್ಮೆ ಸುದ್ದಿಗೋಷ್ಟಿ ಮಾಡುತ್ತಾರೆ. ನಾವು ಒಂದು ಕೋಟಿ ಬಾಕಿಯನ್ನು ಒಂದು ತಿಂಗಳಲ್ಲಿ ಸಂಗ್ರಹ ಮಾಡಿದ್ದೇವೆ ಎಂದು ಘೋಷಿಸುತ್ತಾರೆ. ಅಕ್ಕಪಕ್ಕದಲ್ಲಿ ಕುಳಿತ ಉಪಮೇಯರ್, ಸಚೇತಕರು, ಹಿರಿಯ ಸದಸ್ಯರು ಪಾಲಿಕೆಗೆ ಚಿನ್ನದ ಬಾಗಿಲು ಬಂತೇನೋ ಎನಿಸುವ ಮಟ್ಟಿಗೆ ಫೋಸ್ ಕೊಡುತ್ತಾರೆ. ಒಂದು ತಿಂಗಳಿಗೆ ಒಂದೂವರೆ ಕೋಟಿ ಸಂಗ್ರಹ ಎಂದರೆ ತನ್ನ ಅಧಿಕಾರಾವಧಿಯ ಒಳಗೆ ಎಲ್ಲವೂ ವಸೂಲಿ ಆಗಿಯೇ ಆಗುತ್ತದೆ ಎಂದು ಒಂದು ಭ್ರಮೆಯನ್ನು ವರದಿಗಾರರ ಮನಸ್ಸಿನಲ್ಲಿ ಮೂಡಿಸಲಾಗುತ್ತದೆ. ಅದು ಮಾರನೇ ದಿನ ಹೈಲೈಟ್ ಆಗುತ್ತದೆ. ಬಾಕಿ ಇಟ್ಟಿರುವ ಶ್ರೀಮಂತರು ಒಳಗೊಳಗೆ ಮುಸಿ ಮುಸಿ ನಗುತ್ತಾರೆ. ಆ ಕಥೆ ಏನು? ಯಾಕೆ ಇವರಿಗೆ ಎಲ್ಲಾ ಬಾಕಿಯನ್ನು ಸಂಗ್ರಹ ಮಾಡಲು ಆಗುವುದಿಲ್ಲ, ಅದು ಪ್ರತ್ಯೇಕ ಕಥೆ. ಕರೆಂಟ್ ಬಿಲ್ ಅನ್ನು ಕರೆಕ್ಟಾಗಿ ಕಟ್ಟುವ ಜನ ನೀರಿನ ಬಿಲ್ ಬಂದಾಗ ಯಾಕೆ ಸೋಮಾರಿ ಆಗುತ್ತಾರೆ. ಒಂದೊಂದು ಲಕ್ಷ ನೀರಿನ ಬಿಲ್ ಬಾಕಿ ಇಟ್ಟವರು, ಸಾವಿರಾರು ರೂಪಾಯಿ ಬಾಕಿ ಇಟ್ಟವರು ಯಾಕೆ ಆರಾಮವಾಗಿರುತ್ತಾರೆ.ಎಲ್ಲಾ ಪಾಲಿಕೆ ಸದಸ್ಯರ ಮತ್ತು ನೀರಿನ ವಿಭಾಗದ ಅಧಿಕಾರಿಗಳ Understanding
0
Shares
  • Share On Facebook
  • Tweet It




Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Hanumantha Kamath January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Hanumantha Kamath January 28, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search