• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಪೊಲೀಸರ ಕೊಲೆಯತ್ನ ಮಾಡಿದವನ ಮೂಲ ಹುಡುಕಿದರೆ ತಿಮಿಂಗಲ ಸಿಗಲೂಬಹುದು!!

Hanumantha Kamath Posted On December 18, 2020
0


0
Shares
  • Share On Facebook
  • Tweet It

ಗಾಂಜಾವನ್ನು ಮೂಲದಿಂದಲೇ ಕಿತ್ತು ಬಿಸಾಡಿದ್ದರೆ ಅದು ನಾಗರಿಕ ಸಮಾಜದೊಳಗೆ ಬಂದು ಪೊಲೀಸರನ್ನೇ ಕಚ್ಚುತ್ತದೆ ಎನ್ನುವುದಕ್ಕೆ ಹಾಡುಹಗಲೇ ಒಬ್ಬ ಯುವಕನಡೆದುಕೊಂಡು ಬಂದು ಸಮವಸ್ತ್ರದಲ್ಲಿದ್ದ ಪೊಲೀಸ್ ಹೆಡ್ ಕಾನ್ಸಟೇಬಲಿಗೆ ತಲವಾರು ಬೀಸುತ್ತಾನೆ ಎನ್ನುವುದೇ ಸಾಕ್ಷಿ. ಪೊಲೀಸರು ಮತ್ತು ಸಿಸಿಬಿ ಡ್ರಗ್ಸ್ ವಿಷಯ ಉತ್ತುಂಗದಲ್ಲಿದ್ದಾಗ, ಮಾಧ್ಯಮಗಳಲ್ಲಿ ಜೋರಾಗಿ ಚರ್ಚೆಯಲ್ಲಿದ್ದಾಗ ಆಕ್ಟಿವ್ ಆಗಿ ಗಾಳಿಯಲ್ಲಿ ಲಾಠಿ ಬೀಸಿ ತಮ್ಮ ಇರುವಿಕೆಯನ್ನು ತೋರಿಸುತ್ತಾರೆ. ಅದೇ ವಿಷಯ ತಣ್ಣಗಾಗುತ್ತಿದ್ದಂತೆ ಯಾವ ಡ್ರಗ್ಸ್ ಡೀಲರ್ ಕೂಡ ಯಾರಿಗೂ ನೆನಪಿರುವುದಿಲ್ಲ. ಎಷ್ಟೋ ಸಂದರ್ಭದಲ್ಲಿ ಪೊಲೀಸರಿಗೆ ಇಂತಿಂತಹ ಅಂಗಡಿಗಳಲ್ಲಿ ಡ್ರಗ್ಸ್ ಮಾರಾಟ ಆಗುತ್ತಿದೆ ಎಂದು ಗೊತ್ತಿದ್ದೂ ಮೌನವಾಗಿರುತ್ತಾರೆ ಎನ್ನುವುದು ಕೂಡ ಪೂರ್ತಿ ಸುಳ್ಳಲ್ಲ.
ಪೊಲೀಸರು ಮನಸ್ಸು ಮಾಡಿದರೆ ಗಾಂಜಾ ಗಿರಾಕಿಗಳನ್ನು ಚಡ್ಡಿಯಲ್ಲಿ ನಿಲ್ಲಿಸಿ ಬೆಂಡೆತ್ತುವುದು ಕೂಡ ಕಷ್ಟವಲ್ಲ. ಇದೆಲ್ಲವೂ ಕಟ್ಟುನಿಟ್ಟಾಗಿ ಆಗದೇ ಇರುವುದರಿಂದ ಸೈಕಲ್ ತುಳಿಯುವ ಯುವಕರು ಪೊಲೀಸರಿಗೆ ರಕ್ತ ಬರಿಸುತ್ತಿದ್ದಾರೆ. ಯಾವುದೋ ಕುಗ್ರಾಮದಲ್ಲಿ ರಾತ್ರಿ ಪೊಲೀಸ್ ಸಿಬ್ಬಂದಿಯನ್ನು ಹೊಂಚು ಹಾಕಿ ಕಾದು ಗುಂಪಿನಲ್ಲಿ ಬಂದು ಅಟ್ಯಾಕ್ ಮಾಡುವುದು ಬೇರೆ. ಮೊನ್ನೆ ಹಳೆ ನ್ಯೂಚಿತ್ರಾ ಥಿಯೇಟರ್ ಬಳಿ ಆದದ್ದೇ ಬೇರೆ. ಸದ್ಯ ಪೊಲೀಸರು ಕುದ್ರೋಳಿ ಬಳಿ ನಿವಾಸಿ 25 ವರ್ಷದ ನವಾಜ್ ಎನ್ನುವವನನ್ನು ಬಂಧಿಸಿದ್ದಾರೆ. ಇನ್ನೊಬ್ಬನ ಬಂಧನ ಆಗಲಿದೆ. ಒಟ್ಟು ಇಬ್ಬರು ಸೇರಿ ಈ ದುಷ್ಕತ್ಯ ಮಾಡಿದ್ದಾರಾದರೂ ಇವರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಕೂಡ ಪತ್ತೆ ಹಚ್ಚಬೇಕು. ಅದರೊಂದಿಗೆ ಆ ಯುವಕ ಗಾಂಜಾ ನಶೆಯಲ್ಲಿ ಈ ಕೃತ್ಯ ಮಾಡಿರುವುದೇ ಆದರೆ ಅವನಿಗೆ ಗಾಂಜಾ ಎಲ್ಲಿಂದ ಸಿಕ್ಕಿತ್ತು. ಯಾರು ಕೊಟ್ಟರು? ಅವರು ಕೊಟ್ಟಿದ್ದು ಪೊಲೀಸರೊಬ್ಬರ ಕೊಲೆ ಮಾಡೋದಿಕ್ಕಾ? ಇದು ಕೂಡ ಪತ್ತೆ ಹಚ್ಚಿ ಬಯಲಿಗೆ ಎಳೆಯಬೇಕು. ಡಿಸೆಂಬರ್ 19 ಸಿಎಎ ಪ್ರತಿಭಟನೆಯಿಂದ ಮಂಗಳೂರಿನಲ್ಲಿ ಗೋಲಿಬಾರ್ ನಡೆದು ಭರ್ತಿ ಒಂದು ವರ್ಷ. ಅದರ ದ್ವೇಷಾಗ್ನಿ ಕೆಲವರಲ್ಲಿ ಇನ್ನೂ ಇದೆ ಎನ್ನುವುದಕ್ಕೆ ಕೆಲವು ದಿನಗಳ ಹಿಂದಿನ ಗೋಡೆಬರಹಗಳೇ ಸಾಕ್ಷಿ. ಆವತ್ತು ದೊಂಬಿಯಲ್ಲಿ ಭಾಗವಹಿಸಿ ಪೊಲೀಸರತ್ತ ಪೆಟ್ರೋಲ್ ಬಾಂಬ್ ಬಿಸಾಡಿದ ಪುಂಡರ ಗುಂಪಿನಲ್ಲಿದ್ದ ಇಬ್ಬರ ಸಾವಾಗಿತ್ತು. ಅದಕ್ಕೆ ಪ್ರತೀಕಾರವಾಗಿ ಪೊಲೀಸರ ತಲೆ ಕೂಡ ಉರುಳಿಸುವ ಸಂಚು ವಿದೇಶದಲ್ಲಿ ಆಗಿರಲೂಬಹುದು. ಅದಕ್ಕೆ ಹಣವೂ ಪೂರೈಕೆ ಆಗಿರಬಹುದು. ಆ ಹಣದಿಂದ ಕೆಲವರು ಇಂತವರನ್ನು ಬಳಸಿರಲೂಬಹುದು. ಈಗ ಬಂಧಿತನಾದವನಿಂದ ಹಲವು ಸ್ಫೋಟಕ ವಿಷಯಗಳನ್ನು ಬಯಲಿಗೆ ಎಳೆಯಬೇಕಿದೆ. ಯಾಕೆಂದರೆ ಆವತ್ತು ಬಂದರು ಪ್ರದೇಶದಲ್ಲಿ ದೊಂಬಿಯನ್ನು ಹತ್ತಿಕ್ಕಲು ಪೊಲೀಸರು ತೆಗೆದುಕೊಂಡಿದ್ದ ಕ್ರಮ ಸೂಕ್ತವಾಗಿತ್ತು. ಇಲ್ಲದಿದ್ದರೆ ಮಂಗಳೂರು ಹೊತ್ತಿ ಉರಿಯುತ್ತಿತ್ತು. ಒವೈಸಿ ಹೇಳಿದ ಹಾಗೆ, 15 ನಿಮಿಷ ಭಾರತದ ಪೊಲೀಸರು ಮೌನವಾಗಿದ್ದರೆ ನಾವು ನಮ್ಮ ಬಲ ತೋರಿಸಲಿದ್ದೇವೆ. ಇವತ್ತು ಪೊಲೀಸರು ಶಕ್ತರಾಗಿರುವುದರಿಂದ ನಾವು ಚೆನ್ನಾಗಿದ್ದೇವೆ. ಆದರೆ ಪೆಟ್ರೋಲ್ ಬಾಂಬ್ ಎಸೆಯುತ್ತಿದ್ದವರ ಮೇಲೆ ಪೊಲೀಸರು ತೆಗೆದುಕೊಂಡ ಕ್ರಮವನ್ನು ಗಾಂಜಾ ಡೀಲರ್ ಗಳ ಮೇಲೆಯೂ ತೆಗೆದುಕೊಳ್ಳಬೇಕು. ಇದು ನಿಧಾನ ವಿಷ. ಮೊನ್ನೆ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ ವ್ಯಕ್ತಿಗಳ ಮನೆಗೆ ಮತಾಂಧರು ಪೂರೈಸಬೇಕಾದ ಹಣ, ವಸ್ತು ಪೂರೈಸಿರಬಹುದು. ಆರೋಪಿಗಳ ನ್ಯಾಯಾಲಯದ ಖರ್ಚನ್ನು ಕೂಡ ನೋಡುವ ವ್ಯವಸ್ಥೆ ಈಗಾಗಲೇ ಆಗಿರಬಹುದು. ಇದನ್ನು ಯಾರು ವ್ಯವಸ್ಥೆ ನೋಡುತ್ತಿದ್ದಾರೆ ಎನ್ನುವುದರ ತನಿಖೆ ಕೂಡ ಆಗಬೇಕು. ಯಾಕೆಂದರೆ ಪೊಲೀಸರ ಮೇಲೆ ಕೊಲೆಯತ್ನ ಎನ್ನುವುದು ಚಿಕ್ಕ ವಿಷಯವೇನಲ್ಲ. ಈಗ ಸಿಕ್ಕಿಬಿದ್ದಿರುವ ಮೀನುಗಳನ್ನು ಹಿಡಿದು ತಿಮಿಂಗಲದ ಬಳಿ ಹೋಗಲು ಅವಕಾಶವಿದೆ.
ಇನ್ನು ಈ ಪ್ರಕರಣದಿಂದ ಮಂಗಳೂರು ಪೊಲೀಸರು ಕಲಿಯಬೇಕಾಗಿರುವ ಮತ್ತೊಂದು ವಿಷಯವೇನೆಂದರೆ ಅವರ ಗುಪ್ತಚರ ವಿಭಾಗ ವೀಕ್ ಆಗಿರುವುದು. ಮುಂಚೆ ಹೀಗೆ ಆಗುತ್ತಿರಲಿಲ್ಲ. ಎನ್ಟಿ ರೌಡಿ ಸ್ಕ್ಯಾಡ್ ಹಿಂದೆ ಇತ್ತು. ಪೊಲೀಸರ ಮೇಲೆ ಹಲ್ಲೆ ಮಾಡುವುದು ಬಿಡಿ ಆ ಬಗ್ಗೆ ಯೋಚಿಸುವವರಿಗೆ ಪೊಲೀಸರು ಎಲ್ಲಿಗೆ ಕಳುಹಿಸಬೇಕೊ ಅಲ್ಲಿ ಕಳುಹಿಸಿಬಿಡುತ್ತಿದ್ದರು. ಈ ವಿಷಯದಲ್ಲಿ ಅವರು ಯಾವ ಹಸ್ತಕ್ಷೇಪವನ್ನು ಸಹಿಸುತ್ತಿರಲಿಲ್ಲ. ಈಗಲೂ ಪೊಲೀಸ್ ಅಧಿಕಾರಿಗಳು ಇಂತಹ ಪ್ರಕರಣಗಳಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಕಂಡುಬಂದರೆ ಅದನ್ನು ತೀವ್ರವಾಗಿ ವಿರೋಧಿಸಬೇಕು. ಹೆಚ್ಚೆಂದರೆ ಉನ್ನತ ಪೊಲೀಸ್ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಬಹುದು. ಸರಕಾರಿ ಇಲಾಖೆಗೆ ಸೇವೆಗೆ ಸೇರುವಾಗ ಇದಕ್ಕೆಲ್ಲ ತಯಾರಿರಬೇಕು. ಅದು ಬಿಟ್ಟು ಹೊಂದಾಣಿಕೆ ಮಾಡಿಕೊಂಡು ಹೋದರೆ ತಲವಾರುಗಳು ತಮ್ಮ ಮೇಲೆ ಝಳಪಿಸಪಡಬಹುದು ಎಂದು ಗೊತ್ತಿದ್ದರೆ ಸಾಕು!
0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Hanumantha Kamath December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Hanumantha Kamath December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • 2
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 3
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 4
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 5
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ

  • Privacy Policy
  • Contact
© Tulunadu Infomedia.

Press enter/return to begin your search