• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಮೆಸ್ಕಾಂ ನೆಲ ಅಗೆದದ್ದು ನೋಡದಿದ್ದರೆ ಕಾದಿದೆ ಗಂಡಾಂತರ!!

Hanumantha Kamath Posted On January 25, 2021
0


0
Shares
  • Share On Facebook
  • Tweet It

ನಿಮ್ಮ ಮನೆಯ ಒಳಗೆ ಯಾರಾದರೂ ಬಂದು ನೆಲ ಅಗೆದು ಹೋದರೆ ನೀವು ಸುಮ್ಮನೆ ಬಿಡುತ್ತೀರಾ? ನಿಮ್ಮ ಮನೆಯ ಅಂಗಳದಲ್ಲಿ ಯಾರಾದರೂ ಒಂದು ಪ್ಲಾಸ್ಟಿಕ್ ತೊಟ್ಟೆ ಬಿಸಾಡಿ ಹೋದರೆ ನೀವು ಹಾಗೆ ಚೆಂದ ನೋಡುತ್ತಾ ಕುಳಿತುಕೊಳ್ಳುವಿರಾ? ಇಲ್ಲವಲ್ಲ. ಯಾಕೆಂದರೆ ನಿಮ್ಮ ಮನೆಯ ಮೇಲೆ ನಿಮಗೆ ಹಕ್ಕು ಮಾತ್ರವಲ್ಲ, ಪ್ರೀತಿ ಕೂಡ ಇದೆ. ನಿನ್ನೆ ನಮ್ಮ ಮನೆಯ ಅಡುಗೆ ಕೋಣೆಗೆ ಯಾರೋ ಬಂದು ಅಗೆದು ಮುಚ್ಚಿ ಹೋದರು, ಯಾರು ಅಂತ ಗೊತ್ತೆ ಆಗಿಲ್ಲ. ನಾನು ಯಾರು ಎಂದು ನೋಡಿಲ್ಲ ಎಂದು ನೀವು ಹೇಳಿದ್ರೆ ಒಂದೋ ನಿಮಗೆ ತಲೆಕೆಟ್ಟಿರಬೇಕು ಅಥವಾ ನಿಮಗೆ ನಿಮ್ಮ ಮನೆಯ ಮೇಲೆ ಪ್ರೀತಿ ಇಲ್ಲ ಎಂದೇ ಅರ್ಥ. ಸದ್ಯ ಇಡೀ ಪಾಲಿಕೆ ವ್ಯಾಪ್ತಿಯನ್ನು ಒಂದು ಮನೆ ಎಂದು ತೆಗೆದುಕೊಂಡರೆ ಅದರ ಉಸಾಬರಿ ನೋಡಬೇಕಾದದ್ದು ಪಾಲಿಕೆಯ ಕಮೀಷನರ್. ಹಾಗಂತ ಅವರು ಪ್ರತಿ ರಸ್ತೆಯಲ್ಲಿ ಎಲ್ಲಿ ಅಗೆದಿದ್ದಾರೆ, ಎಲ್ಲಿ ಮುಚ್ಚಿದ್ದಾರೆ ಎಂದು ನೋಡಿ ಕುಳಿತುಕೊಳ್ಳಲು ಆಗುವುದಿಲ್ಲ. ಹಾಗಿರುವುದರಿಂದ ನೋಡಬೇಕಾಗಿರುವುದು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು. ಆದರೆ ಅವರು ನೋಡುವುದಿಲ್ಲ. ಗುತ್ತಿಗೆದಾರರು ಬೇರೆ ಬೇರೆ ಕಾಮಗಾರಿಗಳ ಹೆಸರಿನಲ್ಲಿ ಅಗೆಯುತ್ತಾರೆ, ಮುಚ್ಚುತ್ತಾರೆ, ಹೋಗುತ್ತಾರೆ. ಹಾಗಾದರೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳು ನಡೆದಾಗ ಪಾಲಿಕೆ ಕಡೆಯಿಂದ ಯಾಕೆ ಒಂದು ಕಣ್ಣು ಅದರ ಮೇಲೆ ಇಡುವುದಿಲ್ಲ ಎನ್ನುವುದಕ್ಕೆ ಉತ್ತರ ಸಿಗುವುದಿಲ್ಲ.
ಒಂದು ಕಡೆಯಲ್ಲಿ ಎಡಿಬಿ-2, ಅಮೃತ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಇನ್ನೊಂದೆಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಮತ್ತೊಂದೆಡೆ ಮೆಸ್ಕಾಂನವರು ಕೇಬಲ್ ಅಳವಡಿಸಲು ಅಂಡರ್ ಗ್ರೌಂಡ್ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮಂಗಳೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಜೋರಾಗಿ ನಡೆಯುತ್ತಿವೆ. ಆದ್ರೆ ಪಾಲಿಕೆಯವರು ಆ ಕುರಿತು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸಿದರೆ ಈ ಮಳೆಗಾಲದಲ್ಲಿ ಒಂದು ದೊಡ್ಡ ಗಂಡಾಂತರ ಮಂಗಳೂರನ್ನು ಕಾಡಲಿದೆ. ಅದೇನೆಂದರೆ ಮೆಸ್ಕಾಂ ನೆಲ ಅಗೆತ. ಅವರು ಅಗೆಯುತ್ತಾರೆ. ಕೇಬಲ್ ಅಳವಡಿಸುತ್ತಾರೆ. ಅದರ ಮೇಲೆ ಅಲ್ಲಿಯೇ ಅಗೆದಾಗ ಇದ್ದ ಮಣ್ಣನ್ನು ಹಾಕುತ್ತಾರೆ. ಕೆಲವು ಕಡೆ ಮರಳು ಕೂಡ ಹಾಕಿದ್ದಾರೆ. ಅವರು ಹಾಕಿ ಹೋದ ಬಳಿಕ ವಾಹನಗಳು ಅದರ ಮೇಲೆ ಓಡಾಡಿದಾಗ ಅದು ಸರಿಯಾಗಿ ಲೆವೆಲ್ಲಿಗೆ ಬರಲೂಬಹುದು. ಬರದೇನೂ ಇರಬಹುದು. ಕೆಲವು ಕಡೆ ಉಳಿದ ಮಣ್ಣು, ಮರಳನ್ನು ಗುತ್ತಿಗೆದಾರರು ಹಾಗೆ ಬಿಟ್ಟು ಹೋಗಿರುವುದರಿಂದ ಸಮಸ್ಯೆ ಶುರುವಾಗುತ್ತದೆ. ಒಂದನೇಯದಾಗಿ ವಾಹನಗಳ ಸರಾಗ ಓಡಾಟಕ್ಕೆ ಕಷ್ಟವಾಗುತ್ತದೆ. ಇನ್ನೊಂದೇನೆಂದರೆ ಮಣ್ಣಿನ ಮತ್ತು ಮರಳಿನ ರಾಶಿ ಹಾಗೇ ಉಳಿದರೆ ಮುಂದಿನ ಮಳೆಗಾಲಕ್ಕೆ ಸುರಿಯುವ ಮಳೆಯ ನೀರು ಆ ಮಣ್ಣಿನ ಮತ್ತು ಮರಳಿನ ರಾಶಿಯನ್ನು ತೆಗೆದುಕೊಂಡು ಸನಿಹದಲ್ಲಿಯೇ ಇರುವ ಚರಂಡಿಗೆ ಹೋಗುತ್ತದೆ. ಒಂದು ಕಡೆ ಒಂದು ಮೀಟರ್ ಅಗಲದ ಚರಂಡಿಯ ಹೂಳನ್ನು ಸರಿಯಾಗಿ ತೆಗೆಯಲಾಗದೇ ಪ್ರತಿ ಬಾರಿ ಅಲ್ಲಲ್ಲಿ ಕೃತಕ ನೆರೆ ಸಾಮಾನ್ಯವಾಗಿದೆ. ಈ ಬಾರಿ ನೂರಕ್ಕೆ ನೂರು ಹೆಚ್ಚಿನ ಕಡೆ ಕೃತಕ ನೆರೆ ಗ್ಯಾರಂಟಿಯಾಗುತ್ತದೆ. ಇದಕ್ಕೆ ಕಾರಣ ಯಾರು ಎಂದು ನೋಡಿದರೆ ಸಂಶಯವೇ ಬೇಡಾ, ಅದು ಮಹಾನಗರ ಪಾಲಿಕೆ. ಯಾಕೆಂದರೆ ಮೆಸ್ಕಾಂ ಕಡೆಯಿಂದ ನೆಲದಡಿ ಕೇಬಲ್ ಅಳವಡಿಸುವ ಗುತ್ತಿಗೆ ಸಿಕ್ಕಿರುವುದು ಬೆಂಗಳೂರಿನ ಕಂಪೆನಿಗೆ. ಅವರಿಗೆ ಮಂಗಳೂರಿನ ಭೌಗೋಳಿಕ ಕಥೆ ಗೊತ್ತಿಲ್ಲ. ಅವರಿಗೆ ಅದು ಬೇಕಾಗಿಯೂ ಇಲ್ಲ. ಅವರು ಅಗೆದರು. ಒಟ್ರಾಶಿ ಮುಚ್ಚಿದರು. ಹೋಗಿಬಿಟ್ಟರು. ನಂತರ ಅನುಭವಿಸಬೇಕಾಗಿರುವುದು ಮಂಗಳೂರು ಜನ. ತೊಂದರೆ ಆದ ನಂತರ ಪಾಲಿಕೆ ಸರಿ ಮಾಡಲು ಹೊರಟರೆ ಜನರ ತೆರಿಗೆಯ ಹಣ ಮತ್ತೆ ಪೋಲು. ಇದು ಆಗಬಾರದು ಎಂದು ಈಗಾಗಲೇ ಮೇಯರ್ ಅವರು ಇಂಜಿನಿಯರಿಂಗ್ ವಿಭಾಗಕ್ಕೆ ಸೂಚನೆ ನೀಡಿದ್ದಾರೆ. ಪಾಲಿಕೆಯ ಕಮೀಷನರ್ ಕೂಡ ಈ ಬಗ್ಗೆ ಆದೇಶ ನೀಡಿದ್ದಾರೆ. ಜಿಲ್ಲಾಧಿಕಾರಿಯರು ಈಗಾಗಲೇ ಸಭೆಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ಇಷ್ಟಿದ್ದು ವಿವಿಧ ಕಾಮಗಾರಿಗಳ ಮತ್ತು ಪಾಲಿಕೆಯ ನಡುವೆ ಸಂವಹನ ಇಲ್ಲದೆ ಹೋದರೆ ಏನು ಮಾಡುವುದು. ಆಗ ಕಾರ್ಪೋರೇಟರ್ ಗಳು ರಂಗಕ್ಕೆ ಇಳಿಯಬೇಕು. ತಮ್ಮ ವಾರ್ಡಿನಲ್ಲಿ ಅಲ್ಲಲ್ಲಿ ಅಗೆದು ಹಾಗೆ ಬಿಟ್ಟ ಕಾಮಗಾರಿಗಳು, ಮುಚ್ಚಿಟ್ಟ ನೆಲದ ಮೇಲೆ ಹಾಗೆ ಉಳಿದ ಮಣ್ಣು, ಮರಳು ತೆಗೆಸುವಂತೆ ಗುತ್ತಿಗೆದಾರರಿಗೆ ಪಾಲಿಕೆಯ ಸಂಬಂಧಿತ ಅಧಿಕಾರಿಗಳಿಂದ ಸೂಚನೆ ಹೊರಡಿಸಬೇಕು. ಹಾಗೆಂದು ಗುತ್ತಿಗೆದಾರರು ಮೆಸ್ಕಾಂ ಕೇಬಲ ಹಾಕುವಾಗ ಅಲ್ಲಿಯೇ ಕೆಳಗೆ ನೆಲದಡಿ ಇರುವ ನೀರಿನ ಪೈಪುಗಳಿಗೆ ಹಾನಿ ಮಾಡಿ ನೀರು ಪೋಲು ಆಗಲು ಆರಂಭವಾಯಿತೋ ಕುಡಿಯುವ ನೀರಿನ ಸಮಸ್ಯೆ ಶುರುವಾಯಿತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಂದು ವೇಳೆ ಕಾರ್ಪೋರೇಟರ್ ಗಳ ಮಾತುಗಳನ್ನು ಪಾಲಿಕೆಯಲ್ಲಿ ಯಾರೂ ಕಿವಿಗೆ ಹಾಕಿಕೊಳ್ಳದಿದ್ದರೆ ತಮ್ಮ ಶಾಸಕರ ಮೂಲಕ ಒತ್ತಡ ತರಲೇಬೇಕು. ಇನ್ನು ಯುವ ಉತ್ಸಾಹಿ ಮನಪಾ ಸದಸ್ಯರು ತಮ್ಮ ವಾರ್ಡಿನಲ್ಲಿ ಆಗುತ್ತಿರುವ ಅಗೆತದ ಕಾಮಗಾರಿಗಳನ್ನು ನಿಂತು ನೋಡಿದರೆ ತುಂಬಾ ಒಳ್ಳೆಯದು. ಯಾಕೆಂದರೆ ಸ್ವಲ್ಪ ಹೆಚ್ಚು ಕಡಿಮೆಯಾದರೆ ಒಂದೋ ಕೃತಕ ನೆರೆ ಅಥವಾ ನೀರಿಗೆ ಹಾಹಾಕಾರ ಉಂಟಾಗಲಿದೆ!!.
0
Shares
  • Share On Facebook
  • Tweet It




Trending Now
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
Hanumantha Kamath February 12, 2026
ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
Hanumantha Kamath February 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
  • Popular Posts

    • 1
      ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • 2
      ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 3
      'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • 4
      ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • 5
      ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್

  • Privacy Policy
  • Contact
© Tulunadu Infomedia.

Press enter/return to begin your search