• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ತಾಯಿ ಹೃದಯದ ರೈತ ಪೊಲೀಸರ ಮೇಲೆ ತಲವಾರು ಬೀಸಲು ಸಾಧ್ಯವೇ ಇಲ್ಲ!!

Hanumantha Kamath Posted On January 27, 2021


  • Share On Facebook
  • Tweet It

10 ರಿಂದ 12 ಸಭೆಗಳು ನಡೆದವು. ಆದರೂ ಒಂದು ಮಧ್ಯಂತರ ನಿರ್ಣಯಕ್ಕೆ ಬರಲು ರೈತರಿಗೂ, ಸರಕಾರಕ್ಕೂ ಸಾಧ್ಯವಾಗಿಲ್ಲ. ಅದಕ್ಕೆ ಮುಖ್ಯ ಕಾರಣ ಏನು ಅಂದರೆ ರೈತ ಮುಖಂಡರು ಸಭೆಗೆ ಮುಕ್ತ ಮನಸ್ಸಿನಿಂದ ಬರಲೇ ಇಲ್ಲ. ತಮಗೆ ಯಾವ ವಿಷಯದಲ್ಲಿ ಸಂಶಯಗಳು ಇದ್ದಾವೆಯೋ ಆ ವಿಷಯದಲ್ಲಿ ಸೃಷ್ಟೀಕರಣ ಕೇಳಿದ್ದರೆ, ಅದು ಕೂಡ ಲಿಖಿತವಾಗಿ ಕೇಳಿ ತೃಪ್ತಿಗೊಂಡರೆ ಅಲ್ಲಿಗೆ ಸಮಸ್ಯೆ ಎರಡು ತಿಂಗಳ ಮೊದಲೇ ಪರಿಹಾರವಾಗುತ್ತಿತ್ತು. ಆದರೆ ಆಗಿರುವುದೇನು? ಸಭೆಗೆ ಬಂದ ರೈತ ಮುಖಂಡರು ಕಿವಿ ಮುಚ್ಚಿಕೊಳ್ಳುತ್ತಿದ್ದರು. ಕೇವಲ ಸಮಯ ಕೊಲ್ಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಅದು ನಿಜವೋ, ಸುಳ್ಳೊ ಎನ್ನುವುದು ಸಭೆಯಲ್ಲಿ ಭಾಗವಹಿಸಿದ ಕೇಂದ್ರ ಮಂತ್ರಿಗಳು ಹೇಳಬೇಕು. ಆದರೆ ರೈತರು ತಮ್ಮ ಹೋರಾಟದ ಅಂತಿಮ ಸುತ್ತಿನಲ್ಲಿ ಮಾತ್ರ ಕಣ್ಣು, ಕಿವಿ, ಮೂಗು ಎಲ್ಲವನ್ನು ತೆರೆದಿಡಬೇಕಾಗಿತ್ತು. ಹಾಗೆ ಮಾಡದೇ ಇದ್ದ ಪರಿಣಾಮ ಅವರ ಗುಂಪಿನೊಳಗೆ ತೋಳಗಳು ನುಗ್ಗಿದ್ದವು. ಅವು ಕೈಗೆ ಖಲಿಸ್ತಾನ ಎಂದು ಬರೆದ ಕಡಗವನ್ನು ಧರಿಸಿದ್ದವು. ತಲವಾರು ತೆಗೆದುಕೊಂಡೇ ಬಂದಿದ್ದವು. ಕುದುರೆಗಳು ಒಳಗೆ ಬಂದಿದ್ದವು. ಲಾಠಿ, ಆಯುಧಗಳ ನಡುವೆ ಗಲಾಟೆ ಪರಾಕಾಷ್ಟೆ ತಲುಪಿತ್ತು. ಅಂತಿಮವಾಗಿ ನಮಗೆ ಹೊಡೆಯಬೇಡಿ ಎಂದು ಪೊಲೀಸರು ಕೈ ಮುಗಿದು ಬೇಡಿಕೊಳ್ಳುವಂತಾಯಿತು. ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜಕ್ಕೆ ಸಮಾನವಾಗಿ ಸಿಖ್ ಧರ್ಮದ ಧ್ವಜ ಹಾಗೂ ರೈತರ ಯೂನಿಯನ್ ಧ್ವಜ ಹಾಕಲಾಯಿತು. ಇದೆಲ್ಲ ನೋಡುವಾಗ ರೈತರ ಹೋರಾಟ ದಾರಿ ತಪ್ಪಿತಾ ಎನಿಸದೇ ಇರುವುದಿಲ್ಲ. ಒಂದು ಹೋರಾಟಕ್ಕೆ ಕ್ರಾಂತಿಕಾರಿ ತಿರುವು ಸಿಗುವುದು ಹೊಸತೇನಲ್ಲ. ಆದರೆ ಹೋರಾಟಗಳನ್ನು ಯಾರೋ ಹೈಜಾಕ್ ಮಾಡಿ ಮೂಲ ಉದ್ದೇಶಕ್ಕೆ ಹಾನಿ ಮಾಡಿ ತಮ್ಮ ಮೇಲುಗೈ ಸ್ಥಾಪಿಸುವುದು ಇದೆಯಲ್ಲ, ಅದೇ ಅಸಹ್ಯ. ಇಲ್ಲಿ ರೈತರ ಹೋರಾಟ ಇದ್ದದ್ದು ಕೇಂದ್ರ ಸರಕಾರ ಜಾರಿಗೆ ತರಲು ತಯಾರಾಗಿರುವ ಮೂರು ಕಾಯ್ದೆಗಳ ಬಗ್ಗೆ. ಯಾವುದೇ ಕಾಯ್ದೆ ತರುವ ಯಾವುದೇ ಸರಕಾರ ನೂರಕ್ಕೆ ನೂರಕ್ಕೆ ಸರಿಯಾಗಿರುತ್ತೆ ಎಂದು ನಾನು ಹೇಳುವುದಿಲ್ಲ. ಎಸಿ ರೂಂನಲ್ಲಿ ಕುಳಿತು ಕಾಗದದ ಮೇಲೆ ಬುದ್ಧಿಮತ್ತೆ ಪ್ರದರ್ಶಿಸುವ ಅಧಿಕಾರಿಗಳು ಗ್ರೌಂಡ್ ರಿಯಾಲಿಟಿ ಬಗ್ಗೆ ಯೋಚಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಹೀಗೆ ಒತ್ತಡ ಹಾಕಿ ಎರಡೂ ಕಡೆಯವರಿಗೆ ತೊಂದರೆ ಆಗದೆ ಕಾಯ್ದೆ ರೂಪಿಸಬೇಕಾಗಿರುವುದು ಅತ್ಯಗತ್ಯ. ಆದರೆ ಹೋರಾಟದಲ್ಲಿರುವವರು ತಮ್ಮ ಬಿಗಿ ನಿಲುವಿಗೆ ಅಂಟಿಕೊಂಡು ಕುಳಿತರೆ ಕಷ್ಟ. ಹಾಗಂತ ಸರಕಾರದ ಮೇಲೆ ದ್ವೇಷ ಕಾರಲು ಆ ಮೂಲಕ ಉದ್ವೀಗ್ನತೆ ಸೃಷ್ಟಿ ಮಾಡಲು ಸಮಾಜ ಘಾತುಕ ಶಕ್ತಿಗಳನ್ನು ತಮ್ಮ ಹೋರಾಟದಲ್ಲಿ ಸೇರಿಸಿಕೊಂಡರೆ ಅದು ನಿಜಕ್ಕೂ ದೇಶದ್ರೋಹ. ನಮಗೆಲ್ಲ ಗೊತ್ತಿರುವಂತೆ ಖಲಿಸ್ತಾನ ಚಳುವಳಿಯೇ ಒಂದು ದೇಶದ್ರೋಹಿ ಹೋರಾಟ. ದೇಶದ ಒಳಗೆ ಪ್ರತ್ಯೇಕ ರಾಷ್ಟ್ರವನ್ನು ಬಯಸುವುದು ನಿಜಕ್ಕೂ ಅಪ್ಪಟ ದೇಶದ್ರೋಹಿ ಕೃತ್ಯ. ಅದನ್ನು ಹತ್ತಿಕ್ಕಲು ಹೋದ ಇಂದಿರಾ ಗಾಂಧಿಯೇ ಪ್ರಾಣ ಕಳೆದುಕೊಳ್ಳಬೇಕಾಯಿತು. ವ್ಯವಸ್ಥಿತವಾಗಿ ಸಂಚು ರೂಪಿಸಿ ಪ್ರಧಾನಿ ಇಂದಿರಾ ಗಾಂಧಿಯನ್ನು ಹತ್ಯೆ ಮಾಡಲಾಗಿತ್ತು. ಈಗ ಮೋದಿಯವರ ಮೇಲೆ ಸಿಖ್ ಕೋಪ ತಿರುಗಿದಂತೆ ಕಾಣುತ್ತಿದೆ. ಇಲ್ಲಿ ಹೋರಾಟ ಮಾಡುವವರು ತಾವು ರಾಷ್ಟ್ರದ ಸ್ವತುಗಳಿಗೆ ಹಾನಿ ಮಾಡಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟ ನಂತರವೂ ಪಾನಮತ್ತರಾಗಿ, ಖಡ್ಗ ಝಳಪಿಸಿ ಪೊಲೀಸರ ಮೇಲೆ ಮುಗಿ ಬೀಳುತ್ತಾರೆ ಎಂದರೆ ಅವರು ರೈತರಾಗಲು ಸಾಧ್ಯವಲ್ಲ. ಹಾಗಂತ ರೈತರಿಗೆ ಕೋಪ ಬರಬಾರದು ಎಂದೆನಿಲ್ಲ. ಆದರೆ ಈ ಮಣ್ಣಿನಲ್ಲಿ ಬೆಳೆ ಬೆಳೆಯುವ ರೈತ ಯಾವಾಗಲೂ ಹಿಂಸೆಗೆ ತೊಡಗುವುದಿಲ್ಲ. ಯಾಕೆಂದರೆ ಅವನದ್ದು ತಾಯಿ ಹೃದಯ. ಆದರೆ ದೆಹಲಿಯಲ್ಲಿ ಗೂಂಡಾಗಳಂತೆ ವರ್ತಿಸಿದವರು ರೈತರಾ ಎನ್ನುವ ಅನುಮಾನ ಮೂಡುತ್ತದೆ. ಅದರೊಂದಿಗೆ ಆಶ್ಚರ್ಯವಾಗುವುದು ದೆಹಲಿಯಲ್ಲಿ ಇಂತಹ ಗಲಭೆ ನಡೆಯಬಹುದು ಎಂದು ಗುಪ್ತಚರ ಇಲಾಖೆಗೆ ಗೊತ್ತೆ ಆಗಿಲ್ವಾ? ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವುದು ಕೇಂದ್ರ ಸರಕಾರ. ಬೇರೆ ರಾಜ್ಯದಲ್ಲಿ ಆದರೆ ಸರಕಾರ ಬೇರೆ ಇತ್ತು. ಅವರೇ ಕುಮ್ಮಕ್ಕು ಕೊಟ್ಟಿರಬಹುದು ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದರೇನೋ. ಆದರೆ ದೆಹಲಿಯಲ್ಲಿ ಸರಕಾರ ಬೇರೆ ಪಕ್ಷದ್ದೇ ಇದ್ದರೂ ಒಬ್ಬ ಪೊಲೀಸ್ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಬೇಕಾದರೂ ಕೇಂದ್ರದ ಗೃಹ ಇಲಾಖೆ ಹೇಳಬೇಕು. ಮಿಲಿಟರಿ ಅವರ ಕೈಯಲ್ಲಿಯೇ ಇದೆ. ಮೂಗಿನ ಕೆಳಗೆ ಸಿಂಬಳ ಬರುವ ಸಂದರ್ಭದಲ್ಲಿ ಮೂಗಿಗೆ ವಿಷಯ ಗೊತ್ತಾಗಿಲ್ಲ ಎಂದರೆ ಏನು ಅರ್ಥ. ಇನ್ನು ಕೆಲವರಿಗೆ ಇಲ್ಲಿ ಕೇಂದ್ರ ಸರಕಾರ ಫೈರಿಂಗ್ ಮಾಡಲಿ, ಒಂದಿಷ್ಟು ಹೆಣಗಳು ಬೀಳಲಿ. ಈ ಮೂಲಕ ರೈತರ ಮೇಲೆ ಗುಂಡಿಕ್ಕಿದ ಕೇಂದ್ರ ಸರಕಾರ, ಮೋದಿಯಿಂದ ರೈತರ ಕೊಲೆ ಎನ್ನುವ ಹೇಳಿಕೆ ಬರಬೇಕು ಎಂದು ಕೆಲವರು ಕಾಯುತ್ತಿದ್ದರೇನೊ. ನಾವು ಅನಿವಾರ್ಯವಾಗಿ ಫೈರಿಂಗ್ ಮಾಡಬೇಕಾಗಿದೆ ಎಂದು ಅರೆ ಸೇನಾಪಡೆಯ ಯೋಧರೊಬ್ಬರು ವಾಯರ್ ಲೆಸ್ ನಲ್ಲಿ ಗೋಗರೆಯುತ್ತಿದ್ದರೂ ಕೇಂದ್ರ ಈ ಬಗ್ಗೆ ಯಾಕೆ ಅಂತಹ ನಿರ್ಧಾರ ಇಟ್ಟಿಲ್ಲ ಎಂದರೆ ಕೆಲವರು ಇದನ್ನೇ ಕಾಯುತ್ತಿದ್ದರು. ಅವರಿಗೆ ಮೋದಿ ತಮ್ಮ ಆಡಳಿತದ ಒಂದು ಐತಿಹಾಸಿಕ ತಪ್ಪು ಮಾಡಲೇಬೇಕಿತ್ತು. ಮೋದಿ ಮಾಡಿಲ್ಲ ಎನ್ನುವುದೇ ಅವರಿಗೆ ಈಗ ತಲೆನೋವಾಗಿರುವ ಸಂಗತಿ!
  • Share On Facebook
  • Tweet It


- Advertisement -


Trending Now
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
Hanumantha Kamath July 2, 2022
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Hanumantha Kamath July 1, 2022
Leave A Reply

  • Recent Posts

    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
  • Popular Posts

    • 1
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 2
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 3
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 4
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 5
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search